AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: ಕೊಹ್ಲಿಯ ಈ 5 ತಪ್ಪು ನಿರ್ಣಯಗಳೇ ಪಂದ್ಯದ ಸೋಲಿಗೆ ಕಾರಣವಾಯ್ತ?

ಲೀಗ್ ಹಂತದ ಕೊನೆಯ ನಾಲ್ಕು ಪಂದ್ಯಗಳನ್ನ ಸೋತ್ರೂ ಆರ್​ಸಿಬಿ ಅದೃಷ್ಟದಿಂದಾಗಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿತ್ತು. ಆದ್ರೆ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದೆ. ಆರ್​ಸಿಬಿ ಟೂರ್ನಿಯಿಂದ ಹೊರ ಬೀಳೋದಕ್ಕೆ ನಾಯಕ ಕೊಹ್ಲಿಯ ಐದು ತಪ್ಪು ನಿರ್ಧಾರಗಳೇ ಕಾರಣವಾಯ್ತು. ಕೊಹ್ಲಿ ತಪ್ಪು ನಿರ್ಧಾರ ನಂ.5 ಶಹಬಾಜ್ ಅಹ್ಮದ್​ನನ್ನ ಕೈ ಬಿಟ್ಟ ವಿರಾಟ್ ಲೀಗ್​ನ ಕೊನೆ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 2 ವಿಕೆಟ್ ಪಡೆದು ಮಿಂಚಿದ್ದ ಶಹಬಾಜ್ ಅಹ್ಮದ್​ನನ್ನ ಕೊಹ್ಲಿ ಏಕಾಏಕಿ ಕೈ ಬಿಟ್ರು. ಆರ್​ಸಿಬಿ […]

IPL 2020: ಕೊಹ್ಲಿಯ ಈ 5 ತಪ್ಪು ನಿರ್ಣಯಗಳೇ ಪಂದ್ಯದ ಸೋಲಿಗೆ ಕಾರಣವಾಯ್ತ?
Follow us
ಪೃಥ್ವಿಶಂಕರ
|

Updated on:Nov 07, 2020 | 9:08 AM

ಲೀಗ್ ಹಂತದ ಕೊನೆಯ ನಾಲ್ಕು ಪಂದ್ಯಗಳನ್ನ ಸೋತ್ರೂ ಆರ್​ಸಿಬಿ ಅದೃಷ್ಟದಿಂದಾಗಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿತ್ತು. ಆದ್ರೆ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದೆ. ಆರ್​ಸಿಬಿ ಟೂರ್ನಿಯಿಂದ ಹೊರ ಬೀಳೋದಕ್ಕೆ ನಾಯಕ ಕೊಹ್ಲಿಯ ಐದು ತಪ್ಪು ನಿರ್ಧಾರಗಳೇ ಕಾರಣವಾಯ್ತು.

ಕೊಹ್ಲಿ ತಪ್ಪು ನಿರ್ಧಾರ ನಂ.5 ಶಹಬಾಜ್ ಅಹ್ಮದ್​ನನ್ನ ಕೈ ಬಿಟ್ಟ ವಿರಾಟ್ ಲೀಗ್​ನ ಕೊನೆ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 2 ವಿಕೆಟ್ ಪಡೆದು ಮಿಂಚಿದ್ದ ಶಹಬಾಜ್ ಅಹ್ಮದ್​ನನ್ನ ಕೊಹ್ಲಿ ಏಕಾಏಕಿ ಕೈ ಬಿಟ್ರು. ಆರ್​ಸಿಬಿ ಪರ ಸ್ಟಾರ್ ಸ್ಪಿನ್ನರ್​ಗಳಾದ ಚಹಲ್ ಮತ್ತು ಜಂಪಾ ಒಂದೊಂದು ವಿಕೆಟ್ ಪಡೆದ್ರು. ಒಂದು ವೇಳೆ ಅಹ್ಮದ್ ತಂಡದಲ್ಲಿ ಇದ್ದಿದ್ರೆ, ಪಂದ್ಯದ ಗತಿ ಬದಲಾಗೋ ಸಾಧ್ಯತೆಯಿತ್ತು.

ಕೊಹ್ಲಿ ತಪ್ಪು ನಿರ್ಧಾರ ನಂ4 ಅಲಿ, ದುಬೆಯನ್ನ ಬಳಸಿಕೊಳ್ಳಲು ಕೊಹ್ಲಿ ಫೇಲ್ ಆಲ್​ರೌಂಡರ್​ಗಳಾದ ಮೊಯಿನ್ ಅಲಿ ಮತ್ತು ಶಿವಂ ದುಬೆಗೆ ಅವಕಾಶ ನೀಡಿದ ಕೊಹ್ಲಿ ಇವರಿಬ್ಬರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಇಬ್ಬರಿಗೂ ಕೊಹ್ಲಿ ಒಂದೊಂದೇ ಓವರ್ ನೀಡಿದ್ರು. ಒಂದು ವೇಳೆ ಇವರಿಬ್ಬರನ್ನ ಸರಿಯಾಗಿ ಬಳಸಿಕೊಂಡಿದ್ರೆ, ಈ ಜೋಡಿ ಪಂದ್ಯಕ್ಕೆ ಬ್ರೇಕ್ ಥ್ರೂ ಕೊಡದೇ ಇರುತ್ತಿರಲಿಲ್ಲ.

ಕೊಹ್ಲಿ ತಪ್ಪು ನಿರ್ಧಾರ ನಂ.3 ವೇಗಿಗಳನ್ನ ಅತಿಯಾಗಿ ನಂಬಿದ ಕೊಹ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ವೇಗಿಗಳನ್ನ ಅತಿಯಾಗಿ ನಂಬಿದ್ದ ನಿರ್ಧಾರವು ಮುಳುವಾಯ್ತು. 15 ಓವರ್​ಗಳ ಬಳಿಕ ವಿರಾಟ್ ಸ್ಪಿನ್ನರ್​ಗಳನ್ನ ಬಳಸಿಕೊಳ್ಳಲೇ ಇಲ್ಲ. ಸುಂದರ್, ಅಲಿ ಕೋಟಾದಲ್ಲಿ ಇನ್ನು ಓವರ್​ಗಳಿದ್ರೂ ಅವಕಾಶ ನೀಡಲಿಲ್ಲ.

ಕೊಹ್ಲಿ ತಪ್ಪು ನಿರ್ಧಾರ ನಂ.2 ಆರಂಭಿಕನಾಗಿ ಬಂದು ಎಡವಟ್ಟು ಮಾಡಿದ ಕೊಹ್ಲಿ ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣವಾದದ್ದೇ ಇದು. ಆರಂಭಿಕನಾಗಿ ಬಂದ ವಿರಾಟ್ ಬೇಗನೇ ವಿಕೆಟ್ ಒಪ್ಪಿಸಿದ್ರು. ಅಲ್ಲಿಗೆ ಮೊದಲ ಪ್ರಯತ್ನದಲ್ಲೇ ಕೊಹ್ಲಿ ವಿಕೆಟ್ ಪಡೆದ ಹೈದರಾಬಾದ್ ಪಂದ್ಯದ ಮೇಲೆ ಹಿಡಿತ ಸಾಧಿಸೋದಕ್ಕೆ ಕಾರಣವಾಯ್ತು.

ಕೊಹ್ಲಿ ತಪ್ಪು ನಿರ್ಧಾರ ನಂ.1 ಫಿಂಚ್​ನನ್ನ ವಂಡೌನ್​ನಲ್ಲಿ ಕಳಿಸಿದ್ರು. ಕೊಹ್ಲಿಯ ಮತ್ತೊಂದು ತಪ್ಪು ನಿರ್ಧಾರ ಆರೋನ್ ಫಿಂಚ್​ನನ್ನ ವಂಡೌನ್​ನಲ್ಲಿ ಕಣಕ್ಕಿಳಿಸಿದ್ದು. ವಂಡೌನ್​ನಲ್ಲಿ ಕಣಕ್ಕಿಳಿದ ಫಿಂಚ್ ಸಾಲಿಡ್ ಬ್ಯಾಟಿಂಗ್ ಮಾಡಿದ್ರು. ಅದೇ ಫಿಂಚ್ ಆರಂಭಿಕನಾಗಿ ಬಂದಿದ್ರೆ, ಹೈದರಾಬಾದ್ ಮೇಲೆ ಸುಲಭವಾಗಿ ಒತ್ತಡ ಹೇರಬಹುದಾಗಿತ್ತು.

ಕ್ರೂಶಿಯಲ್ ಪಂದ್ಯದಲ್ಲೇ ಕೊಹ್ಲಿಯ ಈ ಐದು ತಪ್ಪು ನಿರ್ಧಾರಗಳು, ಆರ್​ಸಿಬಿ ಸೋಲಿಗೆ ಕಾರಣವಾಯ್ತು. ಎಲ್ಲಕ್ಕಿಂತ ಹೆಚ್ಚಾಗಿ ಲೀಗ್​ನ ಕೊನೆ ನಾಲ್ಕು ಪಂದ್ಯಗಳನ್ನ ಸೋತು ಪ್ಲೇ ಆಫ್​ಗೆ ಬಂದಿದ್ದ ಕೊಹ್ಲಿ ಪಡೆ, ಹಳೆ ತಪ್ಪುಗಳನ್ನ ತಿದ್ದಿಕೊಳ್ಳದೇ ಇದ್ದಿದ್ದಕ್ಕೆ ಭಾರಿ ದಂಡ ತೆರಬೇಕಾಯ್ತು.

Published On - 9:06 am, Sat, 7 November 20

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ