AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ. ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​ ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ […]

ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?
KUSHAL V
| Edited By: |

Updated on: Aug 18, 2020 | 2:57 PM

Share

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ.

ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​ ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ ಆಗಿರುವ ಈ ಧೋನಿ ಅಭಿಮಾನಿಗೆ ಅವರ ನೆಚ್ಚಿನ ಆಟಗಾರ ನಿವೃತ್ತಿಯಾಗಿದ್ದು ತೀವ್ರ ನೋವುಂಟು ಮಾಡಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಬಷೀರ್​ ಮತ್ತೆಂದೂ ಇಂಡಿಯಾ- ಪಾಕಿಸ್ತಾನ ನಡುವಿನ ಪಂದ್ಯಾವಳಿಗಳನ್ನು ನೋಡುವುದಿಲ್ಲವಂತೆ. ಹಾಗಂತ ತಾವೂ ಮ್ಯಾಚ್ ನೋಡೋದಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಜೊತೆಗೆ, ಆ ಮ್ಯಾಚ್​ಗಳನ್ನ ನೋಡಲು ವಿದೇಶಕ್ಕೆ ಸಹ ಹೋಗುವುದಿಲ್ಲವಂತೆ. ಅದರ ಬದಲಾಗಿ, ಈ 65 ವರ್ಷದ ಧೋನಿ ಅಭಿಮಾನಿ, ತನ್ನ ಫೇವರೇಟ್​ ಆಟಗಾರನನ್ನ ಕೊನೇ ಬಾರಿ ಧೋನಿಯ ತವರೂರಾದ ರಾಂಚಿಯಲ್ಲಿ ಭೇಟಿ ಮಾಡಲು ಬಯಸಿದ್ದಾರೆ.

ಅಮೆರಿಕಾದ ಶಿಕಾಗೋನಲ್ಲಿ ರೆಸ್ಟೋರೆಂಟ್​ ನಡೆಸುವ ಪಾಕ್​ ಸಂಜಾತ ಬಷೀರ್​ಗೂ ಕ್ಯಾಪ್ಟನ್​ ಕೂಲ್​ ನಡುವಿನ ಬಾಂಧವ್ಯ ಶುರುವಾಗಿದ್ದು ಮೊಹಾಲಿಯಲ್ಲಿ ನಡೆದ 2011ರ ವಿಶ್ವ ಕಪ್​ನ ಇಂಡಿಯಾ-ಪಾಕಿಸ್ತಾನ ನಡುವಿನ ಸೆಮಿಫೈನಲ್​ ಮ್ಯಾಚ್​ ವೇಳೆ.

ಪಂದ್ಯ ನೋಡಲು ಟಿಕೆಟ್​ಗಾಗಿ ಹಂಬಲಿಸುತ್ತಿದ್ದ ಬಷೀರ್​ಗೆ ಧೋನಿ ಅಂದು ಮ್ಯಾಚ್​ನ ಟಿಕೆಟ್​ ಕೊಡಿಸಿದ್ದರಂತೆ. ಅಂದಿನಿಂದ ಶುರುವಾದ ಧೋನಿ ಮೇಲಿನ ಅಗಾಧ ಅಭಿಮಾನವನ್ನ ಬಷೀರ್​ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

ಪಾಕ್​ ಛೀಮಾರಿಗೂ ಬಷೀರ್​ ಡೋಂಟ್​ ಕೇರ್​ ಧೋನಿಯ ಮೇಲಿನ ಈ ಹುಚ್ಚು ಅಭಿಮಾನದಿಂದ ಬಷೀರ್​ ಇತರೆ ಪಾಕಿಸ್ತಾನದ ಫ್ಯಾನ್ಸ್​ ಹಲವಾರು ಬಾರಿ ಛೀಮಾರಿ ಹಾಕಿದ್ದಾರಂತೆ. ಬಷೀರ್​ನ ದೇಶದ್ರೋಹಿ ಅಂತಾ ಕರೆದಿದ್ದು ಉಂಡು. ಆದರೆ, ಇದ್ಯಾವುದಕ್ಕೂ ಬಷೀರ್​ ಡೋಂಟ್​ ಕೇರ್​. ನನಗೆ ಎರಡೂ ದೇಶಗಳಂದರೆ ಪ್ರೀತಿ. ಆದರೆ, ಅದಕ್ಕಿಂತ ಮಿಗಿಲಾದದ್ದು ಮಾನವ ಕುಲ ಎಂದು ಹೇಳಿದ್ದಾರೆ.

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ