AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ. ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​ ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ […]

ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?
KUSHAL V
| Edited By: ಸಾಧು ಶ್ರೀನಾಥ್​|

Updated on: Aug 18, 2020 | 2:57 PM

Share

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ.

ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​ ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ ಆಗಿರುವ ಈ ಧೋನಿ ಅಭಿಮಾನಿಗೆ ಅವರ ನೆಚ್ಚಿನ ಆಟಗಾರ ನಿವೃತ್ತಿಯಾಗಿದ್ದು ತೀವ್ರ ನೋವುಂಟು ಮಾಡಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಬಷೀರ್​ ಮತ್ತೆಂದೂ ಇಂಡಿಯಾ- ಪಾಕಿಸ್ತಾನ ನಡುವಿನ ಪಂದ್ಯಾವಳಿಗಳನ್ನು ನೋಡುವುದಿಲ್ಲವಂತೆ. ಹಾಗಂತ ತಾವೂ ಮ್ಯಾಚ್ ನೋಡೋದಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಜೊತೆಗೆ, ಆ ಮ್ಯಾಚ್​ಗಳನ್ನ ನೋಡಲು ವಿದೇಶಕ್ಕೆ ಸಹ ಹೋಗುವುದಿಲ್ಲವಂತೆ. ಅದರ ಬದಲಾಗಿ, ಈ 65 ವರ್ಷದ ಧೋನಿ ಅಭಿಮಾನಿ, ತನ್ನ ಫೇವರೇಟ್​ ಆಟಗಾರನನ್ನ ಕೊನೇ ಬಾರಿ ಧೋನಿಯ ತವರೂರಾದ ರಾಂಚಿಯಲ್ಲಿ ಭೇಟಿ ಮಾಡಲು ಬಯಸಿದ್ದಾರೆ.

ಅಮೆರಿಕಾದ ಶಿಕಾಗೋನಲ್ಲಿ ರೆಸ್ಟೋರೆಂಟ್​ ನಡೆಸುವ ಪಾಕ್​ ಸಂಜಾತ ಬಷೀರ್​ಗೂ ಕ್ಯಾಪ್ಟನ್​ ಕೂಲ್​ ನಡುವಿನ ಬಾಂಧವ್ಯ ಶುರುವಾಗಿದ್ದು ಮೊಹಾಲಿಯಲ್ಲಿ ನಡೆದ 2011ರ ವಿಶ್ವ ಕಪ್​ನ ಇಂಡಿಯಾ-ಪಾಕಿಸ್ತಾನ ನಡುವಿನ ಸೆಮಿಫೈನಲ್​ ಮ್ಯಾಚ್​ ವೇಳೆ.

ಪಂದ್ಯ ನೋಡಲು ಟಿಕೆಟ್​ಗಾಗಿ ಹಂಬಲಿಸುತ್ತಿದ್ದ ಬಷೀರ್​ಗೆ ಧೋನಿ ಅಂದು ಮ್ಯಾಚ್​ನ ಟಿಕೆಟ್​ ಕೊಡಿಸಿದ್ದರಂತೆ. ಅಂದಿನಿಂದ ಶುರುವಾದ ಧೋನಿ ಮೇಲಿನ ಅಗಾಧ ಅಭಿಮಾನವನ್ನ ಬಷೀರ್​ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

ಪಾಕ್​ ಛೀಮಾರಿಗೂ ಬಷೀರ್​ ಡೋಂಟ್​ ಕೇರ್​ ಧೋನಿಯ ಮೇಲಿನ ಈ ಹುಚ್ಚು ಅಭಿಮಾನದಿಂದ ಬಷೀರ್​ ಇತರೆ ಪಾಕಿಸ್ತಾನದ ಫ್ಯಾನ್ಸ್​ ಹಲವಾರು ಬಾರಿ ಛೀಮಾರಿ ಹಾಕಿದ್ದಾರಂತೆ. ಬಷೀರ್​ನ ದೇಶದ್ರೋಹಿ ಅಂತಾ ಕರೆದಿದ್ದು ಉಂಡು. ಆದರೆ, ಇದ್ಯಾವುದಕ್ಕೂ ಬಷೀರ್​ ಡೋಂಟ್​ ಕೇರ್​. ನನಗೆ ಎರಡೂ ದೇಶಗಳಂದರೆ ಪ್ರೀತಿ. ಆದರೆ, ಅದಕ್ಕಿಂತ ಮಿಗಿಲಾದದ್ದು ಮಾನವ ಕುಲ ಎಂದು ಹೇಳಿದ್ದಾರೆ.

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ