AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ. ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​ ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ […]

ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?
KUSHAL V
| Edited By: ಸಾಧು ಶ್ರೀನಾಥ್​|

Updated on: Aug 18, 2020 | 2:57 PM

Share

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ.

ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​ ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ ಆಗಿರುವ ಈ ಧೋನಿ ಅಭಿಮಾನಿಗೆ ಅವರ ನೆಚ್ಚಿನ ಆಟಗಾರ ನಿವೃತ್ತಿಯಾಗಿದ್ದು ತೀವ್ರ ನೋವುಂಟು ಮಾಡಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಬಷೀರ್​ ಮತ್ತೆಂದೂ ಇಂಡಿಯಾ- ಪಾಕಿಸ್ತಾನ ನಡುವಿನ ಪಂದ್ಯಾವಳಿಗಳನ್ನು ನೋಡುವುದಿಲ್ಲವಂತೆ. ಹಾಗಂತ ತಾವೂ ಮ್ಯಾಚ್ ನೋಡೋದಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಜೊತೆಗೆ, ಆ ಮ್ಯಾಚ್​ಗಳನ್ನ ನೋಡಲು ವಿದೇಶಕ್ಕೆ ಸಹ ಹೋಗುವುದಿಲ್ಲವಂತೆ. ಅದರ ಬದಲಾಗಿ, ಈ 65 ವರ್ಷದ ಧೋನಿ ಅಭಿಮಾನಿ, ತನ್ನ ಫೇವರೇಟ್​ ಆಟಗಾರನನ್ನ ಕೊನೇ ಬಾರಿ ಧೋನಿಯ ತವರೂರಾದ ರಾಂಚಿಯಲ್ಲಿ ಭೇಟಿ ಮಾಡಲು ಬಯಸಿದ್ದಾರೆ.

ಅಮೆರಿಕಾದ ಶಿಕಾಗೋನಲ್ಲಿ ರೆಸ್ಟೋರೆಂಟ್​ ನಡೆಸುವ ಪಾಕ್​ ಸಂಜಾತ ಬಷೀರ್​ಗೂ ಕ್ಯಾಪ್ಟನ್​ ಕೂಲ್​ ನಡುವಿನ ಬಾಂಧವ್ಯ ಶುರುವಾಗಿದ್ದು ಮೊಹಾಲಿಯಲ್ಲಿ ನಡೆದ 2011ರ ವಿಶ್ವ ಕಪ್​ನ ಇಂಡಿಯಾ-ಪಾಕಿಸ್ತಾನ ನಡುವಿನ ಸೆಮಿಫೈನಲ್​ ಮ್ಯಾಚ್​ ವೇಳೆ.

ಪಂದ್ಯ ನೋಡಲು ಟಿಕೆಟ್​ಗಾಗಿ ಹಂಬಲಿಸುತ್ತಿದ್ದ ಬಷೀರ್​ಗೆ ಧೋನಿ ಅಂದು ಮ್ಯಾಚ್​ನ ಟಿಕೆಟ್​ ಕೊಡಿಸಿದ್ದರಂತೆ. ಅಂದಿನಿಂದ ಶುರುವಾದ ಧೋನಿ ಮೇಲಿನ ಅಗಾಧ ಅಭಿಮಾನವನ್ನ ಬಷೀರ್​ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

ಪಾಕ್​ ಛೀಮಾರಿಗೂ ಬಷೀರ್​ ಡೋಂಟ್​ ಕೇರ್​ ಧೋನಿಯ ಮೇಲಿನ ಈ ಹುಚ್ಚು ಅಭಿಮಾನದಿಂದ ಬಷೀರ್​ ಇತರೆ ಪಾಕಿಸ್ತಾನದ ಫ್ಯಾನ್ಸ್​ ಹಲವಾರು ಬಾರಿ ಛೀಮಾರಿ ಹಾಕಿದ್ದಾರಂತೆ. ಬಷೀರ್​ನ ದೇಶದ್ರೋಹಿ ಅಂತಾ ಕರೆದಿದ್ದು ಉಂಡು. ಆದರೆ, ಇದ್ಯಾವುದಕ್ಕೂ ಬಷೀರ್​ ಡೋಂಟ್​ ಕೇರ್​. ನನಗೆ ಎರಡೂ ದೇಶಗಳಂದರೆ ಪ್ರೀತಿ. ಆದರೆ, ಅದಕ್ಕಿಂತ ಮಿಗಿಲಾದದ್ದು ಮಾನವ ಕುಲ ಎಂದು ಹೇಳಿದ್ದಾರೆ.

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್