AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ಮಹಿಳೆಯರು ಪುರುಷರಿಗೆ ಸಮಾನರಾಗಲು ಬಯಸುತ್ತಿದ್ದಾರೆ; ತನ್ನ ದೇಶದ ಮಹಿಳಾ ಕ್ರಿಕೆಟರ್ ಬಗ್ಗೆ ನಾಲಿಗೆ ಹರಿಬಿಟ್ಟ ಅಬ್ದುಲ್ ರಜಾಕ್

ಮಹಿಳಾ ಕ್ರಿಕೆಟಿಗರು ಪುರುಷರಿಗೆ ಸಮನಾಗಿರಲು ಬಯಸುತ್ತಾರೆ ಇದರಿಂದ ಅವರಲ್ಲಿ ಮದುವೆಯ ಭಾವನೆ ಮಾಯವಾಗುತ್ತದೆ ಎಂದು ರಜಾಕ್ ಹೇಳಿದರು.

ವಿಡಿಯೋ: ಮಹಿಳೆಯರು ಪುರುಷರಿಗೆ ಸಮಾನರಾಗಲು ಬಯಸುತ್ತಿದ್ದಾರೆ; ತನ್ನ ದೇಶದ ಮಹಿಳಾ ಕ್ರಿಕೆಟರ್ ಬಗ್ಗೆ ನಾಲಿಗೆ ಹರಿಬಿಟ್ಟ ಅಬ್ದುಲ್ ರಜಾಕ್
ಅಬ್ದುಲ್ ರಜಾಕ್, ಶಾಹಿದ್ ಅಫ್ರಿದಿ
Follow us
TV9 Web
| Updated By: ಪೃಥ್ವಿಶಂಕರ

Updated on:Jul 16, 2021 | 6:32 PM

ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುತ್ತಾರೆ. ಇದು ತಮ್ಮದೇ ತಂಡದ ಆಟಗಾರರ ವಿರುದ್ಧ ಆರೋಪ ಮಾಡುವ ವಿಷಯವಾಗಲಿ ಅಥವಾ ಕೆಲವೊಮ್ಮೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಗ್ಗೆ ಹೇಳಿಕೆ ನೀಡಲಿ, ಪಾಕಿಸ್ತಾನದ ಕ್ರಿಕೆಟಿಗರು ವಿವಾದಗಳಿಗೆ ಆಹಾರವಾಗುತ್ತಾರೆ. ಅಂತಹ ಒಬ್ಬ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್. ಮಾಜಿ ಆಲ್‌ರೌಂಡರ್ ರಜಾಕ್ ಕೂಡ ತಮ್ಮ ಉಲ್-ಜಲುಲ್ ಹೇಳಿಕೆಗಳೊಂದಿಗೆ ವಿವಾದಗಳನ್ನು ಆಹ್ವಾನಿಸುತ್ತಲೇ ಇರುತ್ತಾರೆ. ಈ ಬಾರಿ ರಜಾಕ್ ಬಹಳ ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಅನುಭವಿ ತಮ್ಮ ದೇಶದ ಹಿರಿಯ ಮಹಿಳಾ ಕ್ರಿಕೆಟಿಗರ ಬಗ್ಗೆ ಕೆಟ್ಟದ್ದಾಗಿ ಹೇಳಿಕೆ ನೀಡಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಎಲ್ಲೆಡೆ ನಿಂದಿಸಲು ಪ್ರಾರಂಭಿಸಲಾಗಿದೆ.

ಇತ್ತೀಚೆಗೆ, ಮಹಿಳಾ ಕ್ರಿಕೆಟಿಗರಿಗೆ ಸಂಬಂಧಿಸಿದಂತೆ ಅಬ್ದುಲ್ ರಜಾಕ್ ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಈ ವೀಡಿಯೊ ದೂರದರ್ಶನ ಟಾಕ್ ಶೋನಿಂದ ಬಂದಿದ್ದು, ಇದರಲ್ಲಿ ರಜಾಕ್ ಮತ್ತು ಪಾಕಿಸ್ತಾನ ಮಹಿಳಾ ತಂಡದ ಹಿರಿಯ ಆಲ್‌ರೌಂಡರ್ ನಿಡಾ ದಾರ್ ಕೂಡ ಉಪಸ್ಥಿತರಿದ್ದರು. ಏತನ್ಮಧ್ಯೆ, ಕ್ರಿಕೆಟ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಚರ್ಚೆ ನಡೆದಿದ್ದು, ಇದರಲ್ಲಿ ಹುಡುಗಿಯರು ಕ್ರಿಕೆಟ್‌ನ್ನು ವೃತ್ತಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮದುವೆಗೆ ಮೊದಲು ಹೆಚ್ಚು ಹೆಚ್ಚು ಆಡಲು ಬಯಸುತ್ತಾರೆ ಎಂದು ದಾರ್ ಹೇಳಿದ್ದಾರೆ.

ಪುರುಷರಿಗೆ ಸಮಾನರಾಗಲು ಬಯಸುತ್ತಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿದ ರಜಾಕ್ ತಮ್ಮ ನೀಚ ಹೇಳಿಕೆಯನ್ನು ಪ್ರಾರಂಭಿಸಿದರು. ಮಹಿಳಾ ಕ್ರಿಕೆಟಿಗರು ಪುರುಷರಿಗೆ ಸಮನಾಗಿರಲು ಬಯಸುತ್ತಾರೆ ಇದರಿಂದ ಅವರಲ್ಲಿ ಮದುವೆಯ ಭಾವನೆ ಮಾಯವಾಗುತ್ತದೆ ಎಂದು ರಜಾಕ್ ಹೇಳಿದರು. ಮಹಿಳೆಯರು ಕ್ರಿಕೆಟರ್ ಆದರೆ ಅವರು ಪುರುಷರ ತಂಡದ ಮಟ್ಟವನ್ನು ತಲುಪಲು ಬಯಸುತ್ತಾರೆ. ಇದರಿಂದ ಅವರಲ್ಲಿ ಈ ಕೆಲಸವನ್ನು ಪುರುಷರು ಮಾತ್ರವಲ್ಲ, ನಾವು ಕೂಡ ಮಾಡಬಹುದು ಎಂಬ ಭಾವನೆ ಬಂದುಬಿಡುತ್ತದೆ. ಆದ್ದರಿಂದ ಅವರಲ್ಲಿ ಮದುವೆಯಾಗಬೇಕೆಂಬ ಭಾವನೆ ಇಲ್ಲದಾಗುತ್ತದೆ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಈ ನೀಚ ಹೇಳಿಕೆಯ ಇನ್ನಷ್ಟು ಮುಜುಗರದ ಅಂಶವೆಂದರೆ, ರಜಾಕ್ ಅವರು ಇದನ್ನು ಹೇಳಿದ ತಕ್ಷಣ ಅದನ್ನು ಧಿಕ್ಕರಿಸುವ ಬದಲು, ಅಲ್ಲಿದ್ದ ಇತರ ಅತಿಥಿಗಳು ಮತ್ತು ಪ್ರೇಕ್ಷಕರು ಇದನ್ನು ನೋಡಿ ನಗಲು ಪ್ರಾರಂಭಿಸಿದರು. ಆದರೆ, ಮಹಿಳಾ ಕ್ರಿಕೆಟಿಗರು ತಮ್ಮ ವೃತ್ತಿಯಿಂದಾಗಿ ಜಿಮ್, ಬ್ಯಾಟಿಂಗ್-ಬೌಲಿಂಗ್ ಮತ್ತು ಅಭ್ಯಾಸವನ್ನು ಮಾಡಬೇಕಾಗಿದೆ, ಇದರಿಂದ ದೇಹವು ಸದೃಢವಾಗಿರುತ್ತದೆ ಎಂದು ನಿಡಾ ದಾರ್ ಹಿಂಜರಿಕೆಯಿಲ್ಲದೆ ರಜಾಕ್‌ಗೆ ಪ್ರತಿಕ್ರಿಯಿಸಿದರು.

ಟಿ 20 ಯಲ್ಲಿ ಪಾಕಿಸ್ತಾನ ಪರ ಹೆಚ್ಚಿನ ವಿಕೆಟ್ ಈ ವೀಡಿಯೊ ಕಳೆದ ತಿಂಗಳು ನಡೆದ ಘಟನೆಯಾಗಿದೆ. ನಿಡಾ ಪ್ರಸ್ತುತ ಪಾಕಿಸ್ತಾನ ತಂಡದೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಅಲ್ಲಿ ಉಭಯ ತಂಡಗಳ ನಡುವೆ ಟಿ 20 ಸರಣಿ ನಡೆಯುತ್ತಿದೆ. 34 ವರ್ಷದ ನಿಡಾ 2010 ರಲ್ಲಿ ಪಾಕಿಸ್ತಾನ ಪರ ಚೊಚ್ಚಲ ಪಂದ್ಯವನ್ನಾಡಿದರು ಮತ್ತು ಅಂದಿನಿಂದ 108 ಟಿ 20 ಪಂದ್ಯಗಳಲ್ಲಿ ತಮ್ಮ ದೇಶಕ್ಕೆ 103 ವಿಕೆಟ್ ಕಬಳಿಸಿದ್ದಾರೆ. ಅದೇ ಸಮಯದಲ್ಲಿ ಅವರು 81 ಏಕದಿನ ಪಂದ್ಯಗಳಲ್ಲಿ 72 ವಿಕೆಟ್ ಪಡೆದಿದ್ದಾರೆ. ನಾವು ಬ್ಯಾಟಿಂಗ್ ಬಗ್ಗೆ ಮಾತನಾಡಿದರೆ, ಅವರು ಟಿ 20 ಯಲ್ಲಿ 1207 ರನ್ ಮತ್ತು ಏಕದಿನ ಪಂದ್ಯಗಳಲ್ಲಿ 1179 ರನ್ ಗಳಿಸಿದ್ದಾರೆ.

Published On - 6:29 pm, Fri, 16 July 21

ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ