AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲೆಂಡ್​ನಲ್ಲಿ 10 ಪಾಕ್ ಆಟಗಾರರು ಕೊವಿಡ್-19 ಪಾಸಿಟಿವ್, ತನಿಖೆ ಶುರುಮಾಡಿದ ಪಿಸಿಬಿ

ತನ್ನ ಹಲವಾರು ಆಟಗಾರರು ಕೊವಿಡ್-19ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿದ್ದರೂ, ಅವರನ್ನು ನ್ಯೂಜಿಲೆಂಡ್ ಪ್ರವಾಸಕ್ಕೆ ಕಳಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕ್ರಮವನ್ನು ತೀವ್ರವಾಗಿ ಖಂಡಿಸಲಾಗಿದೆ. ಹಾಗೆ ಮಾಡಿರುವುದು ಬೇಜವಾಬ್ದಾರಿತನದ ಪರಮಾವಧಿ ಎಂಬ ಟೀಕೆಗಳು ಕೇಳಿಬಂದ ನಂತರ ಪಿಸಿಬಿ ತನಿಖೆಯನ್ನು ಶುರಮಾಡಿದೆ.

ನ್ಯೂಜಿಲೆಂಡ್​ನಲ್ಲಿ 10 ಪಾಕ್ ಆಟಗಾರರು ಕೊವಿಡ್-19 ಪಾಸಿಟಿವ್, ತನಿಖೆ ಶುರುಮಾಡಿದ ಪಿಸಿಬಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿ
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2020 | 4:20 PM

Share

ಫಕರ್ ಜಮಾನ್

ಕೊವಿಡ್-19 ನಂಥ ಭಯಾನಕ ಸಾಂಕ್ರಾಮಿಕ ರೋಗವನ್ನು ಅಸಡ್ಡೆ ಮಾಡಿ ತನ್ನ ಹಲವಾರು ಆಟಗಾರರು, ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದರೂ ನ್ಯೂಜಿಲೆಂಡ್ ಪ್ರವಾಸಕ್ಕೆ ಕಳಿಸಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವ್ಯಾಪಕ ಟೀಕೆಗೆ ಗುರಿಯಾಗಿದೆ. ನ್ಯೂಜಿಲೆಂಡ್​ನಲ್ಲಿ ಲ್ಯಾಂಡ್​ ಆಗಿರುವ ಪಾಕಿಸ್ತಾನದ ಆಟಗಾರರ ಪೈಕಿ 10 ಜನ ಸೋಂಕಿನಿಂದ ಬಳಲುತ್ತಿರುವುದು ದೃಢಪಟ್ಟಿದೆ. ಈ ಬೆಳವಣಿಗೆಯ ನಂತರ ಪಿಸಿಬಿ ತನಿಖೆ ಶರುವಿಟ್ಟುಕೊಂಡರೆ ಕ್ರೈಸ್ಟ್​ಚರ್ಚ್​ನ ಸ್ಥಳೀಯ ಅಧಿಕಾರಿಗಳು ಇಡೀ ಪಾಕಿಸ್ತಾನದ ಟೀಮನ್ನು ಕ್ವಾರಂಟೈನ್​ಗೆ ಒಳಪಡಿಸಿದ್ದಾರೆ.

ಪಿಸಿಬಿಯ ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯುವ ಕೈದ್-ಎ-ಆಜಮ್ ಕ್ರಿಕೆಟ್​ ಟೂರ್ನಿಯಲ್ಲಿ ಭಾಗವಹಿಸಿದ್ದ ಒಂದು ನಿರ್ದಿಷ್ಟ ಪ್ರಾಂತ್ಯಕ್ಕೆ ಸೇರಿದ ಎರಡು ಟೀಮಿಗಳ ಕೆಲವು ಆಟಗಾರರು ನ್ಯೂಜಿಲೆಂಡ್​ಗೆ ತೆರಳುವ ಮೊದಲು ಜ್ವರ, ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಅವರು ವೈರಲ್ ಸೋಂಕಿನಿಂದ ನರಳುತ್ತಿದ್ದಿದ್ದು ಗೊತ್ತಾಗಿತ್ತು. ಲಾಹೋರ್​ನಲ್ಲಿ ಅವರನ್ನು ಕೊವಿಡ್​-19 ಟೆಸ್ಟ್​ಗೆ ಒಳಪಡಿಸಿದಾಗ ರಿಸಲ್ಟ್ ನೆಗೆಟಿವ್ ಬಂದಿತ್ತು. ಆದರೆ ಕ್ರೈಸ್ಟ್​ಚರ್ಚ್​ನಲ್ಲಿ ಅದೇ ಆಟಗಾರರ ಕೊರೊನಾ ಟೆಸ್ಟ್​ಗಳ ಫಲಿತಾಂಶಗಳು ಪಾಸಿಟಿವ್ ಬಂದಿವೆ. ಅವರ ಕೊರೊನಾ ರಿಸಲ್ಟ್​ಗಳು ದೊರೆತ ನಂತರವೇ ಪೂರ್ತಿ ಪಾಕಿಸ್ತಾನದ ಟೀಮನ್ನು ಒಂದ ಪ್ರತ್ಯೇಕವಾದ ಸ್ಥಳದಲ್ಲಿ ಕ್ವಾರೈಂಟೈನ್ ಮಾಡಲಾಗಿದೆಯೆಂದು ಮೂಲಗಳು ತಿಳಿಸಿವೆ.

ಇಲ್ಲಿ ಗಮನಿಸಬೇಕಿರುವ ಸಂಗತಿಯೇನೆಂದರೆ, ಆ ನಿರ್ದಿಷ್ಟ ಪ್ರಾಂತ್ಯದ ಎರಡು ತಂಡಗಳ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್​ನಲ್ಲೂ ಆಡಿದ್ದರು ಮತ್ತು ಅವರೆಲ್ಲ ಪಿಎಸ್​ಎಲ್​ನಲ್ಲಿ ಒಂದು ನಿರ್ದಿಷ್ಟವಾದ ಫ್ರಾಂಚೈಸಿಯ ಪರ ಆಡಿದ್ದರು! ಒಬ್ಬ ವಿದೇಶೀ ಮೂಲದ ಆಟಗಾರ ಸಹ ಇದೇ ಫ್ರಾಂಚೈಸಿಗೆ ಆಡಿದ್ದ ಮತ್ತು ಸ್ವದೇಶಕ್ಕೆ ಹಿಂತಿರುಗಿದ ನಂತರ ಅವನ ಕೊವಿಡ್-19 ಟೆಸ್ಟ್ ಮಾಡಿದಾಗ ಅದು ಪಾಸಿಟಿವ್ ಬಂದಿದೆ.

ಪಾಕಿಸ್ತಾನ ಟೀಮಿಗೆ ಆಯ್ಕೆಯಾಗದ ವೇಗದ ಬೌಲರ್ ಸೊಹೇಲ್ ತನ್ವೀರ್ ಸಹ ಪಿಎಸ್ಎಲ್​ನಲ್ಲಿ ಆಡಿದ್ದರು. ಆಮೇಲೆ ಅವರು ಲಂಕಾ ಪ್ರಿಮೀಯರ್ ಲೀಗ್​ನಲ್ಲಿ ಕ್ಯಾಂಡಿ ಪರ ಆಡಲು ಕೊಲೊಂಬೊ ತಲುಪಿದಾಗ ಅಲ್ಲಿ ನಡೆದ ಕೊವಿಡ್-19 ಪರೀಕ್ಷಣೆಯಲ್ಲಿ ಅವರ ರಿಸಲ್ಟ್ ಪಾಸಿಟಿವ್ ಬಂದಿದೆ. ಸೊಹೇಲ್​ರನ್ನು ಆಡಿಸುವುದು ಅಪಾಯಕ್ಕೆ ಮೂಲ ಎಂದರಿತ ಕ್ಯಾಂಡಿ ಫ್ರಾಂಚೈಸಿ ಮತ್ತು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ಸು ಕಳಿಸಿತು.

ಪಾಕಿಸ್ತಾನದ ಕ್ರಿಕೆಟ್ ಆಟಗಾರರು, ಅಲ್ಲಿನ ಮಂಡಳಿ ಮತ್ತು ಜನ ಅಂತರರಾಷ್ಟ್ರೀಯ ಕ್ರಿಕೆಟ್​ಗಾಗಿ ತವಕಿಸುತ್ತಿದ್ದಾರೆ. ಕ್ರಿಕೆಟಿಂಗ್ ದೇಶಗಳು ಪಾಕಿಸ್ತಾನಕ್ಕೆ ಪ್ರವಾಸ ಹೋಗುವುದನ್ನು ನಿಲ್ಲಿಸಿಬಿಟ್ಟಿವೆ. ಪಾಕಿಸ್ತಾನದ ಸ್ವದೇಶದ ಸರಣಿಗಳನ್ನು ಅಬು ಧಾಬಿ, ದುಬೈ ಮತ್ತು ಶಾರ್ಜಾದಲ್ಲಿ ಆಯೋಜಿಸಲಾಗುತ್ತಿದೆ. ಪಾಕಿಸ್ತಾನದ ಜನರಲ್ಲಿ ಲೈವ್ ಅಂತರರಾಷ್ಟ್ರೀಯ ಕ್ರಿಕೆಟ್​ಗಾಗಿ ಇರುವ ತಹತಹಿಕೆ ಅರ್ಥಮಾಡಿಕೊಳ್ಳುವಂಥದ್ದು, ಅದನ್ನು ಅಂಗೀಕರಿಸಬಹುದು. ಹಾಗಂತ, ಕೊರೊನಾ ಪಾಸಿಟಿವ್ ಇರುವ ಅಥವಾ ಸೋಂಕಿನ ಲಕ್ಷಣಗಳನ್ನು ತೋರಿರುವ ಆಟಗಾರರನ್ನು ಬೇರೆ ದೇಶದ ಪ್ರವಾಸಕ್ಕೆ ಕಳಿಸಿರುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ.

ಸೊಹೇಲ್ ತನ್ವೀರ್

ಪಿಸಿಬಿ ತನ್ನ ಸೀನಿಯರ್ ಟೀಮು ಮತ್ತು ಎ ಟೀಮಿನ 35 ಆಟಗಾರರು ಮತ್ತು 18 ಅಧಿಕಾರಿ ವರ್ಗದ ಸದಸ್ಯರನ್ನೊಳಗೊಂಡ ಒಂದು ದೊಡ್ಡ ದಂಡನ್ನೇ ನ್ಯೂಜಿಲೆಂಡ್​ಗೆ ಕಳಿಸಿದೆ. ಸೀನಿಯರ್ ಟೀಮಿನ ಆರಂಭ ಆಟಗಾರ ಫಕರ್ ಜಮಾನ್ ಟೀಮ್ ಪ್ರವಾಸಕ್ಕೆ ತೆರಳುವ ಮುನ್ನ ಕೊವಿಡ್-19ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿದ್ದರಿಂದ ಅವರನ್ನು ಪಾಕಿಸ್ತಾನದಲ್ಲೇ ಉಳಿಸಿಕೊಳ್ಳಲಾಯಿತು. ಆದರೆ ಎರಡನೇ ಬಾರಿ ನಡೆದ ಪರೀಕ್ಷಣೆಯಲ್ಲಿ ರಿಪೋರ್ಟ್ ನೆಗೆಟಿವ್ ಬಂತು. ಅವರನ್ನು  ನ್ಯೂಜಿಲೆಂಡ್​ಗೆ ಕಳಿಸಬೇಕೋ ಅಥವಾ ಇಲ್ಲವೋ ಅಂತ ಪಿಸಿಬಿ ಇನ್ನೂ ನಿರ್ಧರಿಸಿಲ್ಲ.

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ