AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿಗೆ ಸಿಎಸ್​ಕೆಯ ಹಳದಿ ಜರ್ಸಿ ನೀಡಿ ಎಡವಟ್ಟು; ಟ್ವಿಟರ್​ನಲ್ಲಿ ಫುಲ್​ ಟ್ರೋಲ್​

ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ. ಸಿಎಸ್​ಕೆಗೆ ಧೋನಿ. ಧೋನಿ ಅಭಿಮಾನಿಗಳು ಎಂದಿಗೂ ಕೊಹ್ಲಿಯನ್ನು ಒಪ್ಪಿಕೊಂಡಿಲ್ಲ. ಕೊಹ್ಲಿ ಅಭಿಮಾನಿಗಳು ಕೂಡ ಅದೇ ರೀತಿ.

ಆರ್​ಸಿಬಿಗೆ ಸಿಎಸ್​ಕೆಯ ಹಳದಿ ಜರ್ಸಿ ನೀಡಿ ಎಡವಟ್ಟು; ಟ್ವಿಟರ್​ನಲ್ಲಿ ಫುಲ್​ ಟ್ರೋಲ್​
ಆರ್​ಸಿಬಿಗೆ ಹಳದಿ ಎಮೋಜಿ ನೀಡಿರುವುದು
ರಾಜೇಶ್ ದುಗ್ಗುಮನೆ
|

Updated on:Apr 03, 2021 | 11:17 PM

Share

ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಮ್ಯಾಚ್​ ಎಂದರೆ ತುಂಬಾನೇ ಹೈ ವೋಲ್ಟೇಜ್​ನಿಂದ ಕೂಡಿರುತ್ತದೆ. ಇದಕ್ಕೆ ನಾನಾ ಕಾರಣಗಳಿವೆ. ಸಿಎಸ್​ಕೆ ಹಾಗೂ ಆರ್​​​​​​​​​​​​​​ಸಿಬಿ ಅಭಿಮಾನಿಗಳ ನಡುವೆ ಹೊಂದಾಣಿಕೆ ಆದ ದಾಖಲೆಯೇ ಇಲ್ಲ. ಹೀಗಿರುವಾಗಲೇ ಒಂದು ಎಡವಟ್ಟು ನಡೆದು ಹೋಗಿದೆ! ಆರ್​ಸಿಬಿಯವರಿಗೆ ಹಳದಿ ಬಣ್ಣದ ಜರ್ಸಿ ನೀಡಲಾಗಿದೆ. ಸದ್ಯ ಈ ವಿಚಾರ ಸಾಕಷ್ಟು ಟ್ರೋಲ್​ ಆಗಿದೆ. ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ. ಸಿಎಸ್​ಕೆಗೆ ಧೋನಿ. ಧೋನಿ ಅಭಿಮಾನಿಗಳು ಎಂದಿಗೂ ಕೊಹ್ಲಿಯನ್ನು ಒಪ್ಪಿಕೊಂಡಿಲ್ಲ. ಕೊಹ್ಲಿ ಅಭಿಮಾನಿಗಳು ಕೂಡ ಅದೇ ರೀತಿ. ಇದಕ್ಕಾಗಿಯೇ ಎರಡೂ ತಂಡಗಳ ನಡುವಿನ ಮ್ಯಾಚ್​ ಹೈ ವೋಲ್ಟೇಜ್​ ಎನಿಸಿಕೊಳ್ಳುತ್ತದೆ. ಆದರೆ, ಈಗ ಟ್ವಿಟರ್ ಮಾಡಿದ ತಪ್ಪೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಏಪ್ರಿಲ್​ 9ರಿಂದ ಐಪಿಎಲ್​ ಮ್ಯಾಚ್​ ಆರಂಭವಾಗಲಿದೆ. ಪ್ರತಿ ಬಾರಿ ಐಪಿಎಲ್​ ನಡೆಯುವುದಕ್ಕೂ ಮೊದಲು ಟ್ವಿಟರ್​ ಪ್ರತಿ ತಂಡದ ಹ್ಯಾಶ್​ಟ್ಯಾಗ್ ಎದುರು ಆಯಾ ತಂಡದ ಟೀಶರ್ಟ್​ ಎಮೋಜಿ ನೀಡುತ್ತದೆ. ಈ ಬಾರಿ ಆರ್​ಸಿಬಿಗೆ ಕೆಂಪು ಬಣ್ಣದ ಟೀ ಶರ್ಟ್​ ನೀಡುವ ಬದಲು ಹಳದಿ ಬಣ್ಣದ ಟಿ-ಶರ್ಟ್​ ಎಮೋಜಿ ನೀಡಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಈ ಬಗ್ಗೆ ಚೆನ್ನೈ ಸೂಪರ್​ ಕಿಂಗ್ಸ್ ಕೂಡ ಟ್ವೀಟ್​ ಮಾಡಿದೆ. ರಜನಿಕಾಂತ್​ ಹಳೆಯ ಸಿನಿಮಾವೊಂದರ ಫೋಟೋ ಪೋಸ್ಟ್​ ಮಾಡಿದ್ದು, ಅದರಲ್ಲಿ ರಜನಿಕಾಂತ್ ಕೆಂಪು ಬಣ್ಣದ ಸೀರೆ ಮೇಲೆ ಹಳದಿ ಬಣ್ಣ ಚಲ್ಲುತ್ತಿದ್ದಾರೆ.

ಆರ್​ಸಿಬಿ ಕೂಡ ಈ ಬಗ್ಗೆ ಅಸಮಾಧಾನ ಹೊರ ಹಾಕಿದೆ.

ಇದನ್ನೂ ಓದಿ: IPL 2021: ಕೊರೊನಾ ಕಪಿಮುಷ್ಠಿಯಲ್ಲಿ ಐಪಿಎಲ್​.. ಕೊಲ್ಕತ್ತಾ, ಡೆಲ್ಲಿ ನಂತರ ಚೆನ್ನೈ ಮೇಲೆ ದಾಳಿ ನಡೆಸಿದ ಮಹಾಮಾರಿ!

Published On - 11:12 pm, Sat, 3 April 21

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು