AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿಗೆ ಸಿಎಸ್​ಕೆಯ ಹಳದಿ ಜರ್ಸಿ ನೀಡಿ ಎಡವಟ್ಟು; ಟ್ವಿಟರ್​ನಲ್ಲಿ ಫುಲ್​ ಟ್ರೋಲ್​

ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ. ಸಿಎಸ್​ಕೆಗೆ ಧೋನಿ. ಧೋನಿ ಅಭಿಮಾನಿಗಳು ಎಂದಿಗೂ ಕೊಹ್ಲಿಯನ್ನು ಒಪ್ಪಿಕೊಂಡಿಲ್ಲ. ಕೊಹ್ಲಿ ಅಭಿಮಾನಿಗಳು ಕೂಡ ಅದೇ ರೀತಿ.

ಆರ್​ಸಿಬಿಗೆ ಸಿಎಸ್​ಕೆಯ ಹಳದಿ ಜರ್ಸಿ ನೀಡಿ ಎಡವಟ್ಟು; ಟ್ವಿಟರ್​ನಲ್ಲಿ ಫುಲ್​ ಟ್ರೋಲ್​
ಆರ್​ಸಿಬಿಗೆ ಹಳದಿ ಎಮೋಜಿ ನೀಡಿರುವುದು
ರಾಜೇಶ್ ದುಗ್ಗುಮನೆ
|

Updated on:Apr 03, 2021 | 11:17 PM

Share

ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಮ್ಯಾಚ್​ ಎಂದರೆ ತುಂಬಾನೇ ಹೈ ವೋಲ್ಟೇಜ್​ನಿಂದ ಕೂಡಿರುತ್ತದೆ. ಇದಕ್ಕೆ ನಾನಾ ಕಾರಣಗಳಿವೆ. ಸಿಎಸ್​ಕೆ ಹಾಗೂ ಆರ್​​​​​​​​​​​​​​ಸಿಬಿ ಅಭಿಮಾನಿಗಳ ನಡುವೆ ಹೊಂದಾಣಿಕೆ ಆದ ದಾಖಲೆಯೇ ಇಲ್ಲ. ಹೀಗಿರುವಾಗಲೇ ಒಂದು ಎಡವಟ್ಟು ನಡೆದು ಹೋಗಿದೆ! ಆರ್​ಸಿಬಿಯವರಿಗೆ ಹಳದಿ ಬಣ್ಣದ ಜರ್ಸಿ ನೀಡಲಾಗಿದೆ. ಸದ್ಯ ಈ ವಿಚಾರ ಸಾಕಷ್ಟು ಟ್ರೋಲ್​ ಆಗಿದೆ. ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ. ಸಿಎಸ್​ಕೆಗೆ ಧೋನಿ. ಧೋನಿ ಅಭಿಮಾನಿಗಳು ಎಂದಿಗೂ ಕೊಹ್ಲಿಯನ್ನು ಒಪ್ಪಿಕೊಂಡಿಲ್ಲ. ಕೊಹ್ಲಿ ಅಭಿಮಾನಿಗಳು ಕೂಡ ಅದೇ ರೀತಿ. ಇದಕ್ಕಾಗಿಯೇ ಎರಡೂ ತಂಡಗಳ ನಡುವಿನ ಮ್ಯಾಚ್​ ಹೈ ವೋಲ್ಟೇಜ್​ ಎನಿಸಿಕೊಳ್ಳುತ್ತದೆ. ಆದರೆ, ಈಗ ಟ್ವಿಟರ್ ಮಾಡಿದ ತಪ್ಪೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಏಪ್ರಿಲ್​ 9ರಿಂದ ಐಪಿಎಲ್​ ಮ್ಯಾಚ್​ ಆರಂಭವಾಗಲಿದೆ. ಪ್ರತಿ ಬಾರಿ ಐಪಿಎಲ್​ ನಡೆಯುವುದಕ್ಕೂ ಮೊದಲು ಟ್ವಿಟರ್​ ಪ್ರತಿ ತಂಡದ ಹ್ಯಾಶ್​ಟ್ಯಾಗ್ ಎದುರು ಆಯಾ ತಂಡದ ಟೀಶರ್ಟ್​ ಎಮೋಜಿ ನೀಡುತ್ತದೆ. ಈ ಬಾರಿ ಆರ್​ಸಿಬಿಗೆ ಕೆಂಪು ಬಣ್ಣದ ಟೀ ಶರ್ಟ್​ ನೀಡುವ ಬದಲು ಹಳದಿ ಬಣ್ಣದ ಟಿ-ಶರ್ಟ್​ ಎಮೋಜಿ ನೀಡಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಈ ಬಗ್ಗೆ ಚೆನ್ನೈ ಸೂಪರ್​ ಕಿಂಗ್ಸ್ ಕೂಡ ಟ್ವೀಟ್​ ಮಾಡಿದೆ. ರಜನಿಕಾಂತ್​ ಹಳೆಯ ಸಿನಿಮಾವೊಂದರ ಫೋಟೋ ಪೋಸ್ಟ್​ ಮಾಡಿದ್ದು, ಅದರಲ್ಲಿ ರಜನಿಕಾಂತ್ ಕೆಂಪು ಬಣ್ಣದ ಸೀರೆ ಮೇಲೆ ಹಳದಿ ಬಣ್ಣ ಚಲ್ಲುತ್ತಿದ್ದಾರೆ.

ಆರ್​ಸಿಬಿ ಕೂಡ ಈ ಬಗ್ಗೆ ಅಸಮಾಧಾನ ಹೊರ ಹಾಕಿದೆ.

ಇದನ್ನೂ ಓದಿ: IPL 2021: ಕೊರೊನಾ ಕಪಿಮುಷ್ಠಿಯಲ್ಲಿ ಐಪಿಎಲ್​.. ಕೊಲ್ಕತ್ತಾ, ಡೆಲ್ಲಿ ನಂತರ ಚೆನ್ನೈ ಮೇಲೆ ದಾಳಿ ನಡೆಸಿದ ಮಹಾಮಾರಿ!

Published On - 11:12 pm, Sat, 3 April 21

Follow Us
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
‘ಓಂ’ ನನ್ನ ಮೆಚ್ಚಿನ ಸಿನಿಮಾ ಎಂದ ತೆಲುಗು ನಟ ಸುನಿಲ್
‘ಓಂ’ ನನ್ನ ಮೆಚ್ಚಿನ ಸಿನಿಮಾ ಎಂದ ತೆಲುಗು ನಟ ಸುನಿಲ್
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ