AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ

ರಾಜಸ್ಥಾನ್ ಪರ ಘಟಾನುಘಟಿ ದಾಂಡಿಗರು ಕೂಡ ಸಂಜುಗೆ ಸೂಕ್ತ ಜೊತೆಯಾಟ ನೀಡಲು ವಿಫಲವಾದಾಗ, ಸಂಜು ಸ್ಯಾಮ್ಸನ್ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ, ಕೊನೆಗೂ ರಾಜಸ್ಥಾನ್​ಗೆ ಗೆಲುವು ಸಿಗಲಿಲ್ಲ.

RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ
ಸಂಜು ಸ್ಯಾಮ್ಸನ್
TV9 Web
| Updated By: ganapathi bhat|

Updated on:Apr 05, 2022 | 12:39 PM

Share

ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯಾಟದಲ್ಲಿ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ನಡೆಸಿ ಮಿಂಚಿದರು. ಅದ್ಭುತ ಪ್ರದರ್ಶನ ತೋರಿದ ಸಂಜು ಶತಕದ ಆಟವಾಡಿ ತಂಡವನ್ನು ಗೆಲ್ಲಿಸುವ ಶತಪ್ರಯತ್ನ ಮಾಡಿದರು. 63 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 119 ರನ್ ದಾಖಲಿಸಿದರು. ಆದರೂ ಪಂಜಾಬ್ ಕಿಂಗ್ಸ್ ನೀಡಿದ್ದ 222 ರನ್​ಗಳ ಬೃಹತ್ ಟಾರ್ಗೆಟ್ ಗುರಿ ತಲುಪುವಲ್ಲಿ 4 ರನ್​ಗಳಿಂದ ಹಿಂದೆ ಬಿದ್ದರು.

ರಾಜಸ್ಥಾನ್ ಪರ ಘಟಾನುಘಟಿ ದಾಂಡಿಗರು ಕೂಡ ಸಂಜುಗೆ ಸೂಕ್ತ ಜೊತೆಯಾಟ ನೀಡಲು ವಿಫಲವಾದಾಗ, ಸಂಜು ಸ್ಯಾಮ್ಸನ್ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ, ಕೊನೆಗೂ ರಾಜಸ್ಥಾನ್​ಗೆ ಗೆಲುವು ಸಿಗಲಿಲ್ಲ. ಅರ್ಶ್​ದೀಪ್ ಎಸೆದ ಕೊನೆಯ ಓವರ್​ನಲ್ಲಿ 3 ಬಾಲ್​ಗೆ 11 ರನ್ ಆಗಬೇಕಿತ್ತು. ಈ ವೇಳೆ ಸಂಜು ಸ್ಯಾಮ್ಸನ್ ಒಂದು ಸಿಕ್ಸ್ ಬಾರಿಸಿ, 2 ಬಾಲ್​ಗೆ 5 ರನ್ ಬೇಕು ಎಂಬಲ್ಲಿಗೆ ಪಂದ್ಯವನ್ನು ತಂದು ನಿಲ್ಲಿಸಿದರು.

2 ಬಾಲ್​ಗೆ 5 ರನ್ ಬೇಕಾದ ರೋಚಕ ಹಂತಕ್ಕೆ ಆಟ ತಲುಪಿ ನಿಂತಿತ್ತು. ಮುಂದಿನ ಬಾಲ್​ಗೆ ಸಂಜು ಸ್ಯಾಮ್ಸನ್ ಎಕ್ಸ್ಟ್ರಾ ಕವರ್​ನತ್ತ ಬಾರಿಸಿದರು. ಆದರೆ, ಸಿಂಗಲ್ ಓಟವನ್ನು ಓಡಿ, ಕ್ರಿಸ್ ಮಾರಿಸ್​ಗೆ ಕ್ರೀಸ್ ಬಿಟ್ಟುಕೊಡುವುದನ್ನು ಸ್ಯಾಮ್ಸನ್ ನಿರಾಕರಿಸಿದರು. ಸ್ಯಾಮ್ಸನ್ ಸ್ವತಃ ಸ್ಟ್ರೈಕ್ ಉಳಿಸಿಕೊಂಡು, 1 ಬಾಲ್​ಗೆ 5 ರನ್ ಗುರಿ ಪಡೆದುಕೊಂಡರು. ಒಂದುವೇಳೆ ಸಿಂಗಲ್ ಓಡಿದ್ದರೆ, ಮತ್ತೊಂದು ಬೌಂಡರಿ ಬಾರಿಸುವುದು ಮಾರಿಸ್​ಗೆ ಕಷ್ಟವಾಗುತ್ತಿರಲಿಲ್ಲ. ಸಿಂಗಲ್ ಓಡಬೇಕಿತ್ತು. ಸಂಜು ಸ್ಯಾಮ್ಸನ್ ಓವರ್ ಕಾನ್ಫಿಡೆನ್ಸ್ ತೋರಿದರು ಎಂಬ ಮಾತು ಕೇಳಿಬಂತು. ಆದರೆ, ಕೆಲವರು ಸಂಜು ನಿರ್ಧಾರವನ್ನು ಸಮರ್ಥಿಸಿಕೊಂಡರು.

ಸಿಕ್ಸರ್, ಫೋರ್ ಸಿಡಿಸಿ ಫಾರ್ಮ್​ನಲ್ಲಿದ್ದ ಸ್ಯಾಮ್ಸನ್ ಆಡುವುದು, ಆಗಷ್ಟೇ ಕ್ರಿಸ್​ಗೆ ಬಂದ ಮಾರಿಸ್ ಆಡುವುದಕ್ಕಿಂತ ಒಳ್ಳೆಯ ನಿರ್ಧಾರವಾಗಿತ್ತು. ಹಾಗಾಗಿ, ಸ್ಯಾಮ್ಸನ್ ತೆಗೆದುಕೊಂಡ ನಿರ್ಧಾರವೇ ಸರಿ ಅಥವಾ ಅದು ತಪ್ಪಲ್ಲ ಎಂದು ಹಲವು ಆಟಗಾರರು, ಕ್ರಿಕೆಟ್ ಪಂಡಿತರು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: RR vs PBKS, IPL 2021: ಬೌಂಡರಿ ಬಳಿ ರಾಹುಲ್ ತೆವಾಟಿಯಾ ಅದ್ಭುತ ಕ್ಯಾಚ್; ವಿಡಿಯೋ ನೋಡಿ

ಇದನ್ನೂ ಓದಿ: RR vs PBKS, IPL 2021 Match 4 Result: ರೋಚಕ ಪಂದ್ಯದಲ್ಲಿ ಗೆದ್ದ ಪಂಜಾಬ್ ಕಿಂಗ್ಸ್; ಸಂಜು ಸ್ಯಾಮ್ಸನ್ ಶತಕ ವ್ಯರ್ಥ!

(RR vs PBKS IPL 2021 Sanju Samson denies to take single in last over here is how others reacted to it)

Published On - 2:49 pm, Tue, 13 April 21

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..