AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: 63 ವರ್ಷದ ಈ ಉದ್ಯಮಿಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ! ಆದರೆ ಷರತ್ತುಗಳು ಅನ್ವಯ

Harsh Goenka: ಅವರ ಟ್ವೀಟ್​ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಗಳೂ ಒಂದಕ್ಕಿಂತ ಒಂದು  ಮಜ ಮಜಾ ಆಗಿವೆ. ಅವರ ಟ್ವೀಟ್​ನಲ್ಲಿನ ಚಿತ್ರದಲ್ಲಿ ಸಮುದ್ರ ಕಾಣಿಸುತ್ತದೆ. ನೀವು ಹೊಡೆದ ಬಾಲ್ ಆ ಸಮುದ್ರಕ್ಕೆ ಹೋದರೆ ಹೆಕ್ಕಿ ತರುವವರು ಯಾರು ಎಂದು ಓರ್ವರು ಟ್ವೀಟ್ ಮಾಡಿದ್ದಾರೆ!

IPL 2021: 63 ವರ್ಷದ ಈ ಉದ್ಯಮಿಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ! ಆದರೆ ಷರತ್ತುಗಳು ಅನ್ವಯ
ಹರ್ಷ ಗೋಯೆಂಕಾಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ!
guruganesh bhat
| Edited By: |

Updated on: Apr 13, 2021 | 5:01 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ ಮತ್ತೊಮ್ಮೆ ವಿಶ್ವದ ಕ್ರೀಡಾಪ್ರೇಮಿಗಳ ಪಾಲಿಗೆ ಹಬ್ಬದ ಔತಣ ಮಾಡಿಸುತ್ತಿದೆ. ಎಷ್ಟೋ ಆಟಗಾರರಿಗೆ ಐಪಿಎಲ್​ ಎಂದರೆ ಅದೊಂದು ಅವಕಾಶಗಳ ಹೆಬ್ಬಾಗಿಲು. ಕ್ರಿಕೆಟ್ ಎಂಬೋ ಮಹಾಸಾಗರದಲ್ಲಿ ಧುಮುಕಲು ಐಪಿಎಲ್ ಅತಿ ದೊಡ್ಡ ದಾರಿ. ಐಪಿಎಲ್​ನಲ್ಲಿ ಮಿಂಚಿದ ಎಷ್ಟೋ ಕ್ರಿಕೆಟಿಗರು ಮುಂದೆ ಅಂತರಾಷ್ಟ್ರೀಯ ದರ್ಜೆಯ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ್ದಾರೆ. ಅಂತಹ ಉದಾಹರಣೆಗಳು ಪುಷ್ಕಳವಾಗಿ ದೊರೆಯುತ್ತದೆ. ಮುಂಚೆ ರಣಜಿ ಪಂದ್ಯಾವಳಿಗಳ ಮೂಲಕ ಹೇಗೆ ರಾಷ್ಟ್ರೀಯ ಕ್ರಿಕೆಟ್ ತಂಡ್ಕಕೆ ಸೇರುತ್ತಿದ್ದರೋ ಹಾಗೇ ಇಂದು ಐಪಿಎಲ್​ಗೆ ಕಾಲಿಟ್ಟು ಮಿಂಚಲು ಪ್ರಯತ್ನಿಸುತ್ತಾರೆ. ಅಲ್ಲಿ ಮಿಂಚಿದರೆ ಮುಂದೆ ಭವಿಷ್ಯ ಪ್ರಜ್ವಲವಾದಂತೆಯೇ ಎಂಬ ಮನೋಭಾವ ಎಲ್ಲರಲ್ಲಿದೆ.

ಇಷ್ಟೆಲ್ಲ ಇರುವಾಗ ಭಾರತೀಯ ಉದ್ಯಮಿಯೋರ್ವರಿಗೂ ಐಪಿಎಲ್​ನಲ್ಲಿ ಆಡುವ ಮನಸಾಗಿದೆ. ಯಾರು ಅಂತೀರಾ? ಅವರೇ ಆರ್​ಪಿಜಿ ಸಮೂಹ ಸಂಸ್ಥೆಗಳ ಒಡೆಯ ಹರ್ಷ ಗೋಯೆಂಕಾ. ಟ್ವಿಟರ್​ನಲ್ಲಿ ಸಕ್ರಿಯರಾಗಿರುವ ಅವರ ಟ್ವೀಟ್​ಗಳು ಬಹಳ ಕುತೂಹಲಕರ ಮತ್ತು ಸ್ವಾರಸ್ಯಕರ. ಈ ಬಾರಿ ಸಂಚಲನ ಮೂಡಿಸಿರುವ ಐಪಿಎಲ್​ನಲ್ಲಿ ಆಡುವ ಅಪೇಕ್ಷೆಯನ್ನು 63 ವರ್ಷದ ಹರ್ಷ ಗೋಯೆಂಕಾ ವ್ಯಕ್ತಪಡಿಸಿದ್ದಾರೆ.

ನನ್ನ ಹೊಸ ಜೀವನವೇ, ನಿನಗೆ ಧನ್ಯವಾದಗಳು. ಪ್ರತಿದಿನ ಸಂಜೆ ನಾನು ಕ್ರಿಕೆಟ್ ಆಡುತ್ತೇನೆ. ಕೊನೆಗೂ ಆಟದಲ್ಲಿ ಒಂದು ಫಾರ್ಮ್​ ಸಾಧಿಸಿದ್ದೇನೆ. ಐಪಿಎಲ್​ ತಂಡಗಳ ಒಡೆತನ ಹೊಂದಿರುವ ಮಾಲೀಕರೇ ಗಮನಿಸಿ. ನಾನು ನಿಮಗಾಗಿ ಉಚಿತವಾಗಿ ಆಡಲು ಸಿದ್ಧನಿದ್ದೇನೆ. ಆದರೆ ನಾನು ಆಡಬೇಕೆಂದಿದ್ದರೆ ಎರಡೇ ಎರಡು ಮನವಿಗಳಿಗೆ ನೀವು ಒಪ್ಪಬೇಕಾಗುತ್ತದೆ ಎಂದು ಅವರ ಟ್ವೀಟ್​ನ ಮೊದಲಾರ್ಧದಲ್ಲಿ ಬರೆದಿದ್ದಾರೆ.

ಹಾಗಾದರೆ ಅವರು ಐಪಿಎಲ್​ನಲ್ಲಿ ಆಡಲು ಕೋರಿರುವ ಮನವಿಗಳೇನು ಎಂದು ನಿಮಗೂ ಕುತೂಹಲವಾಯಿತು ಅಲ್ಲವೇ? ಅದನ್ನು ತಿಳಿಯಲು ಟ್ವೀಟ್​ನ ಮುಂದಿನ ಭಾಗವನ್ನು ಓದಲೇಬೇಕು. ಹರ್ಷ ಗೋಯೆಂಕಾ ಕ್ರಿಕೆಟ್ ಆಡಬೇಕೆಂದರೆ ಆಡಲು ಟೆನಿಸ್ ಬಾಲ್​ ಬಳಸಬೇಕು. ಮತ್ತು 50 ರನ್​ಗಳ ನಂತರ ರನ್ನರ್ ಒಬ್ಬನನ್ನು ಅವರಿಗೆ ಒದಗಿಸಬೇಕು’ ಎಂದು ಅವರು ಕೇಳಿಕೊಂಡಿದ್ದಾರೆ.

ಅವರ ಟ್ವೀಟ್​ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಗಳೂ ಒಂದಕ್ಕಿಂತ ಒಂದು  ಮಜ ಮಜಾ ಆಗಿವೆ. ಅವರ ಟ್ವೀಟ್​ನಲ್ಲಿನ ಚಿತ್ರದಲ್ಲಿ ಸಮುದ್ರ ಕಾಣಿಸುತ್ತದೆ. ನೀವು ಹೊಡೆದ ಬಾಲ್ ಆ ಸಮುದ್ರಕ್ಕೆ ಹೋದರೆ ಹೆಕ್ಕಿ ತರುವವರು ಯಾರು ಎಂದು ಓರ್ವರು ಟ್ವೀಟ್ ಮಾಡಿದ್ದಾರೆ!

ಇದನ್ನೂ ಓದಿ: Petrol Price Today: ಏಪ್ರಿಲ್ 13ನೇ ತಾರೀಕು ವಿವಿಧ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್ ದರ!

ಕೊರೊನಾ ಕಡಿಮೆ ಮಾಡಲು ಕೆಂಪಿರುವೆಯ ಚಟ್ನಿ; ಅರ್ಜಿ ತಿರಸ್ಕರಿಸಿದ ಒಡಿಶಾ ಹೈಕೋರ್ಟ್

(Harsh Goenka wants to play IPL 2021 for free but have 2 conditions)

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ