AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: 63 ವರ್ಷದ ಈ ಉದ್ಯಮಿಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ! ಆದರೆ ಷರತ್ತುಗಳು ಅನ್ವಯ

Harsh Goenka: ಅವರ ಟ್ವೀಟ್​ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಗಳೂ ಒಂದಕ್ಕಿಂತ ಒಂದು  ಮಜ ಮಜಾ ಆಗಿವೆ. ಅವರ ಟ್ವೀಟ್​ನಲ್ಲಿನ ಚಿತ್ರದಲ್ಲಿ ಸಮುದ್ರ ಕಾಣಿಸುತ್ತದೆ. ನೀವು ಹೊಡೆದ ಬಾಲ್ ಆ ಸಮುದ್ರಕ್ಕೆ ಹೋದರೆ ಹೆಕ್ಕಿ ತರುವವರು ಯಾರು ಎಂದು ಓರ್ವರು ಟ್ವೀಟ್ ಮಾಡಿದ್ದಾರೆ!

IPL 2021: 63 ವರ್ಷದ ಈ ಉದ್ಯಮಿಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ! ಆದರೆ ಷರತ್ತುಗಳು ಅನ್ವಯ
ಹರ್ಷ ಗೋಯೆಂಕಾಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ!
guruganesh bhat
| Updated By: Digi Tech Desk|

Updated on: Apr 13, 2021 | 5:01 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ ಮತ್ತೊಮ್ಮೆ ವಿಶ್ವದ ಕ್ರೀಡಾಪ್ರೇಮಿಗಳ ಪಾಲಿಗೆ ಹಬ್ಬದ ಔತಣ ಮಾಡಿಸುತ್ತಿದೆ. ಎಷ್ಟೋ ಆಟಗಾರರಿಗೆ ಐಪಿಎಲ್​ ಎಂದರೆ ಅದೊಂದು ಅವಕಾಶಗಳ ಹೆಬ್ಬಾಗಿಲು. ಕ್ರಿಕೆಟ್ ಎಂಬೋ ಮಹಾಸಾಗರದಲ್ಲಿ ಧುಮುಕಲು ಐಪಿಎಲ್ ಅತಿ ದೊಡ್ಡ ದಾರಿ. ಐಪಿಎಲ್​ನಲ್ಲಿ ಮಿಂಚಿದ ಎಷ್ಟೋ ಕ್ರಿಕೆಟಿಗರು ಮುಂದೆ ಅಂತರಾಷ್ಟ್ರೀಯ ದರ್ಜೆಯ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ್ದಾರೆ. ಅಂತಹ ಉದಾಹರಣೆಗಳು ಪುಷ್ಕಳವಾಗಿ ದೊರೆಯುತ್ತದೆ. ಮುಂಚೆ ರಣಜಿ ಪಂದ್ಯಾವಳಿಗಳ ಮೂಲಕ ಹೇಗೆ ರಾಷ್ಟ್ರೀಯ ಕ್ರಿಕೆಟ್ ತಂಡ್ಕಕೆ ಸೇರುತ್ತಿದ್ದರೋ ಹಾಗೇ ಇಂದು ಐಪಿಎಲ್​ಗೆ ಕಾಲಿಟ್ಟು ಮಿಂಚಲು ಪ್ರಯತ್ನಿಸುತ್ತಾರೆ. ಅಲ್ಲಿ ಮಿಂಚಿದರೆ ಮುಂದೆ ಭವಿಷ್ಯ ಪ್ರಜ್ವಲವಾದಂತೆಯೇ ಎಂಬ ಮನೋಭಾವ ಎಲ್ಲರಲ್ಲಿದೆ.

ಇಷ್ಟೆಲ್ಲ ಇರುವಾಗ ಭಾರತೀಯ ಉದ್ಯಮಿಯೋರ್ವರಿಗೂ ಐಪಿಎಲ್​ನಲ್ಲಿ ಆಡುವ ಮನಸಾಗಿದೆ. ಯಾರು ಅಂತೀರಾ? ಅವರೇ ಆರ್​ಪಿಜಿ ಸಮೂಹ ಸಂಸ್ಥೆಗಳ ಒಡೆಯ ಹರ್ಷ ಗೋಯೆಂಕಾ. ಟ್ವಿಟರ್​ನಲ್ಲಿ ಸಕ್ರಿಯರಾಗಿರುವ ಅವರ ಟ್ವೀಟ್​ಗಳು ಬಹಳ ಕುತೂಹಲಕರ ಮತ್ತು ಸ್ವಾರಸ್ಯಕರ. ಈ ಬಾರಿ ಸಂಚಲನ ಮೂಡಿಸಿರುವ ಐಪಿಎಲ್​ನಲ್ಲಿ ಆಡುವ ಅಪೇಕ್ಷೆಯನ್ನು 63 ವರ್ಷದ ಹರ್ಷ ಗೋಯೆಂಕಾ ವ್ಯಕ್ತಪಡಿಸಿದ್ದಾರೆ.

ನನ್ನ ಹೊಸ ಜೀವನವೇ, ನಿನಗೆ ಧನ್ಯವಾದಗಳು. ಪ್ರತಿದಿನ ಸಂಜೆ ನಾನು ಕ್ರಿಕೆಟ್ ಆಡುತ್ತೇನೆ. ಕೊನೆಗೂ ಆಟದಲ್ಲಿ ಒಂದು ಫಾರ್ಮ್​ ಸಾಧಿಸಿದ್ದೇನೆ. ಐಪಿಎಲ್​ ತಂಡಗಳ ಒಡೆತನ ಹೊಂದಿರುವ ಮಾಲೀಕರೇ ಗಮನಿಸಿ. ನಾನು ನಿಮಗಾಗಿ ಉಚಿತವಾಗಿ ಆಡಲು ಸಿದ್ಧನಿದ್ದೇನೆ. ಆದರೆ ನಾನು ಆಡಬೇಕೆಂದಿದ್ದರೆ ಎರಡೇ ಎರಡು ಮನವಿಗಳಿಗೆ ನೀವು ಒಪ್ಪಬೇಕಾಗುತ್ತದೆ ಎಂದು ಅವರ ಟ್ವೀಟ್​ನ ಮೊದಲಾರ್ಧದಲ್ಲಿ ಬರೆದಿದ್ದಾರೆ.

ಹಾಗಾದರೆ ಅವರು ಐಪಿಎಲ್​ನಲ್ಲಿ ಆಡಲು ಕೋರಿರುವ ಮನವಿಗಳೇನು ಎಂದು ನಿಮಗೂ ಕುತೂಹಲವಾಯಿತು ಅಲ್ಲವೇ? ಅದನ್ನು ತಿಳಿಯಲು ಟ್ವೀಟ್​ನ ಮುಂದಿನ ಭಾಗವನ್ನು ಓದಲೇಬೇಕು. ಹರ್ಷ ಗೋಯೆಂಕಾ ಕ್ರಿಕೆಟ್ ಆಡಬೇಕೆಂದರೆ ಆಡಲು ಟೆನಿಸ್ ಬಾಲ್​ ಬಳಸಬೇಕು. ಮತ್ತು 50 ರನ್​ಗಳ ನಂತರ ರನ್ನರ್ ಒಬ್ಬನನ್ನು ಅವರಿಗೆ ಒದಗಿಸಬೇಕು’ ಎಂದು ಅವರು ಕೇಳಿಕೊಂಡಿದ್ದಾರೆ.

ಅವರ ಟ್ವೀಟ್​ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಗಳೂ ಒಂದಕ್ಕಿಂತ ಒಂದು  ಮಜ ಮಜಾ ಆಗಿವೆ. ಅವರ ಟ್ವೀಟ್​ನಲ್ಲಿನ ಚಿತ್ರದಲ್ಲಿ ಸಮುದ್ರ ಕಾಣಿಸುತ್ತದೆ. ನೀವು ಹೊಡೆದ ಬಾಲ್ ಆ ಸಮುದ್ರಕ್ಕೆ ಹೋದರೆ ಹೆಕ್ಕಿ ತರುವವರು ಯಾರು ಎಂದು ಓರ್ವರು ಟ್ವೀಟ್ ಮಾಡಿದ್ದಾರೆ!

ಇದನ್ನೂ ಓದಿ: Petrol Price Today: ಏಪ್ರಿಲ್ 13ನೇ ತಾರೀಕು ವಿವಿಧ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್ ದರ!

ಕೊರೊನಾ ಕಡಿಮೆ ಮಾಡಲು ಕೆಂಪಿರುವೆಯ ಚಟ್ನಿ; ಅರ್ಜಿ ತಿರಸ್ಕರಿಸಿದ ಒಡಿಶಾ ಹೈಕೋರ್ಟ್

(Harsh Goenka wants to play IPL 2021 for free but have 2 conditions)

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ