AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ನಿದ್ದೆ ಬರುತ್ತಿರಲಿಲ್ಲ, 24 ವರ್ಷಗಳ ಕ್ರಿಕೆಟ್​ನಲ್ಲಿ ಭಾಗಶಃ ಜೀವನವನ್ನು ಒತ್ತಡದಲ್ಲೇ ಕಳೆದೆ: ಸಚಿನ್ ತೆಂಡೂಲ್ಕರ್

Sachin Tendulkar: ನಾನು 10-12 ವರ್ಷಗಳ ಕಾಲ ಒತ್ತಡಕ್ಕೊಳಗಾಗಿದ್ದೆ, ರಾತ್ರಿಯಲ್ಲಿ ನಿದ್ದೆ ಬರುತ್ತಿರಲಿಲ್ಲ. ನಂತರ ಇದು ನನ್ನ ತಯಾರಿಕೆಯ ಭಾಗ ಎಂದು ಒಪ್ಪಿಕೊಳ್ಳಲು ಪ್ರಾರಂಭಿಸಿದೆ: ಸಚಿನ್ ತೆಂಡೂಲ್ಕರ್

ರಾತ್ರಿ ನಿದ್ದೆ ಬರುತ್ತಿರಲಿಲ್ಲ, 24 ವರ್ಷಗಳ ಕ್ರಿಕೆಟ್​ನಲ್ಲಿ ಭಾಗಶಃ ಜೀವನವನ್ನು ಒತ್ತಡದಲ್ಲೇ ಕಳೆದೆ: ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
ಪೃಥ್ವಿಶಂಕರ
| Edited By: |

Updated on:May 17, 2021 | 9:55 AM

Share

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ವೃತ್ತಿಜೀವನದ ಪ್ರಮುಖ ಭಾಗವನ್ನು ಒತ್ತಡದಲ್ಲಿ ಕಳೆದಿದ್ದೆ ಎಂದು ಹೇಳಿದ್ದಾರೆ. ಪಂದ್ಯದ ಮುಂಚಿನ ಉದ್ವಿಗ್ನತೆಯು ಆಟದ ಸಿದ್ಧತೆಯ ಪ್ರಮುಖ ಭಾಗವಾಗಿದೆ ಎಂದು ನಾನು ನಂತರ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದರು. ಕೊವಿಡ್ -19 ರ ಸಮಯದಲ್ಲಿ ಬಯೋ-ಬಬಲ್‌ನಲ್ಲಿ ಹೆಚ್ಚು ಸಮಯ ಕಳೆಯುವ ಮೂಲಕ ಆಟಗಾರರ ಮಾನಸಿಕ ಆರೋಗ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಮಾತನಾಡಿದ ಮಾಸ್ಟರ್ ಬ್ಲಾಸ್ಟರ್, ಅದನ್ನು ಎದುರಿಸಲು ಅದರ ಸ್ವೀಕಾರ ಅಗತ್ಯ ಎಂದು ಹೇಳಿದರು. ಅಕಾಡೆಮಿ ಆಯೋಜಿಸಿದ್ದ ಚರ್ಚೆಯಲ್ಲಿ ಸಚಿನ್, ಆಟಕ್ಕೆ ದೈಹಿಕವಾಗಿ ತಯಾರಿ ಮಾಡುವುದರ ಜೊತೆಗೆ, ನೀವು ಮಾನಸಿಕವಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಕಾಲಾನಂತರದಲ್ಲಿ ನಾನು ಅರಿತುಕೊಂಡೆ. ನನ್ನ ಮನಸ್ಸಿನಲ್ಲಿ, ನಾನು ಮೈದಾನಕ್ಕೆ ಪ್ರವೇಶಿಸುವ ಮೊದಲೇ ಪಂದ್ಯವು ಪ್ರಾರಂಭವಾಗುತ್ತಿತ್ತು. ಒತ್ತಡದ ಮಟ್ಟ ತುಂಬಾ ಹೆಚ್ಚಿತ್ತು ಎಂದು ಸಚಿನ್ ಹೇಳಿಕೊಂಡಿದ್ದಾರೆ.

ರಾತ್ರಿಯಲ್ಲಿ ನಿದ್ದೆ ಬರುತ್ತಿರಲಿಲ್ಲ ನಾನು 10-12 ವರ್ಷಗಳ ಕಾಲ ಒತ್ತಡಕ್ಕೊಳಗಾಗಿದ್ದೆ, ರಾತ್ರಿಯಲ್ಲಿ ನಿದ್ದೆ ಬರುತ್ತಿರಲಿಲ್ಲ. ನಂತರ ಇದು ನನ್ನ ತಯಾರಿಕೆಯ ಭಾಗ ಎಂದು ಒಪ್ಪಿಕೊಳ್ಳಲು ಪ್ರಾರಂಭಿಸಿದೆ. ರಾತ್ರಿಯಲ್ಲಿ ನಿದ್ದೆ ಮಾಡಲು ನನಗೆ ತೊಂದರೆ ಇದೆ ಎಂದು ನಾನು ಕಾಲಾನಂತರದಲ್ಲಿ ಒಪ್ಪಿಕೊಂಡೆ. ನನ್ನ ಮನಸ್ಸನ್ನು ಹಾಯಾಗಿಡಲು ನಾನು ಏನಾದರೂ ಮಾಡುತ್ತಿದ್ದೆ. ಅವುಗಳಲ್ಲಿ ಬ್ಯಾಟಿಂಗ್ ಅಭ್ಯಾಸ, ಟಿವಿ ನೋಡುವುದು ಮತ್ತು ವಿಡಿಯೋ ಗೇಮ್‌ಗಳನ್ನು ಆಡುವುದರ ಜೊತೆಗೆ ಬೆಳಿಗ್ಗೆ ಚಹಾವನ್ನು ತಯಾರಿಸುವುದು ಕೂಡ ಸೇರಿತ್ತು ಎಂದು ಸಚಿನ್ ಹೇಳಿಕೊಂಡಿದ್ದಾರೆ.

ನಾನು ಕೂಡ ಚಹಾ ತಯಾರಿಸುವುದು, ಪಂದ್ಯದ ಮೊದಲು ಬಟ್ಟೆಗಳನ್ನು ಇಸ್ತ್ರಿ ಮಾಡುವುದು ಮುಂತಾದ ಕೆಲಸಗಳನ್ನು ಮಾಡುವ ಮೂಲಕ ಆಟಕ್ಕೆ ಸಿದ್ಧನಾಗುತ್ತಿದ್ದೆ. ನನ್ನ ಸಹೋದರ ನನಗೆ ಇದೆಲ್ಲವನ್ನೂ ಕಲಿಸಿದನು, ಪಂದ್ಯಕ್ಕೆ ಒಂದು ದಿನ ಮೊದಲು ನಾನು ನನ್ನ ಬ್ಯಾಗನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೆ. ದಿನಕಳೆದಂತೆ ಇದು ನನಗೆ ಅಭ್ಯಾಸವಾಯಿತು. ಭಾರತಕ್ಕಾಗಿ ನಾನು ಕೊನೆಯ ಪಂದ್ಯವನ್ನು ಆಡುವ ದಿನದಲ್ಲೂ ನಾನು ಇದೇ ಕೆಲಸ ಮಾಡಿದ್ದೆ ಎಂದರು.

ದೋಸೆ ತಂದ ವ್ಯಕ್ತಿ ಅದ್ಭುತ ಸಲಹೆ ನೀಡಿದರು ಮುಂದುವರೆದು ಮಾತಾನಾಡಿದ ಸಚಿನ್, ಆಟಗಾರನು ಕಷ್ಟದ ಸಮಯಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಪರಿಸ್ಥಿತಿಗಳು ಕೆಟ್ಟದಾಗಿದ್ದಾಗಲೂ ಅದನ್ನು ಒಪ್ಪಿಕೊಳ್ಳುವುದು ಮುಖ್ಯ ಎಂದು ಹೇಳಿದರು. ನೀವು ಗಾಯಗೊಂಡಾಗ, ವೈದ್ಯರು ನಿಮಗೆ ಚಿಕಿತ್ಸೆ ನೀಡುತ್ತಾರೆ. ಮಾನಸಿಕ ಆರೋಗ್ಯದ ವಿಷಯದಲ್ಲೂ ಇದು ಒಂದೇ ಆಗಿರುತ್ತದೆ. ಪ್ರತಿಯೊಬ್ಬರು ಒಳ್ಳೆಯ ಮತ್ತು ಕೆಟ್ಟ ಸಮಯವನ್ನು ಎದುರಿಸುವುದು ಸಾಮಾನ್ಯ. ಇದಕ್ಕಾಗಿ, ನೀವು ಎಲ್ಲಾ ಸಂದರ್ಭಗಳನ್ನು ಒಪ್ಪಿಕೊಳ್ಳಬೇಕು. ಇದು ಆಟಗಾರರಿಗೆ ಮಾತ್ರವಲ್ಲ, ಅವರೊಂದಿಗೆ ಇರುವ ಯಾರಿಗಾದರೂ ಅನ್ವಯಿಸುತ್ತದೆ. ನೀವು ಅದನ್ನು ಸ್ವೀಕರಿಸಿದಾಗ, ನೀವು ಅದಕ್ಕೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೀರಿ ಎಂದರು.

ನಾನು ಕ್ರಿಕೆಟ್ ಆಡುವ ದಿನಗಳಲ್ಲಿ ಚೆನ್ನೈನ ತಾಜ್ ಕೋರಮಂಡಲ್ ಹೋಟೆಲ್​ನ ಸಿಬ್ಬಂದಿ ನೀಡಿದ ಚಿಕ್ಕ ಸಲಹೆಯಿಂದ ತಮ್ಮ ಎಲ್ಬೋ ಗಾರ್ಡ್ ​ಅನ್ನು ಮರುವಿನ್ಯಾಸ ಮಾಡಿದ್ದೆ ಎಂದು ಅಂದು ನಡೆದಿದ್ದ ಸಂಪೂರ್ಣ ಘಟನೆಯನ್ನು ಸಚಿನ್ ನೆನಪಿಸಿಕೊಂಡರು. ಟೆಸ್ಟ್ ಸರಣಿಯ ವೇಳೆ ತಾಜ್ ಕೋರಮಂಡಲ್​ನ ಸಿಬ್ಬಂದಿಯ ಜತೆ ನನ್ನ ಎಲ್ಬೋ ಗಾರ್ಡ್​ನ ಕುರಿತಾಗಿ ಚರ್ಚೆ ಮಾಡಿದ್ದೆ. ಆತ ನೀಡಿದ ಸಲಹೆ ಬಳಿಕ ನನ್ನ ಎಲ್ಬೋ ಗಾರ್ಡ್ ವಿನ್ಯಾಸ ಬದಲಿಸಿದ್ದೆ. ಎಲ್ಬೋ ಗಾರ್ಡ್ ಹಾಕಿ ಆಡುವಾಗ ಬ್ಯಾಟ್ ತೀರಾ ಸರಳವಾಗಿ ಚಲನೆ ಆಗುತ್ತಿರಲಿಲ್ಲ ಎಂದು ಆತ ನನ್ನ ಗಮನಕ್ಕೆ ತಂದ್ದ. ಆತ ನೀಡಿದ್ದ ಸಲಹೆ ಸರಿಯಾಗಿತ್ತು. ಆತನ ಸಲಹೆಯಂತೆ ನಾನು ಅದನ್ನು ಬದಲಿಸಿಕೊಂಡೆ ಎಂದು ಸಚಿನ್ ಹೇಳಿದ್ದರು.

ಇದನ್ನೂ ಓದಿ: ಟೆಸ್ಟ್​ ಕ್ರಿಕೆಟ್​ ಆಡಲು ಭುವಿಗೆ ಮನಸ್ಸಿಲ್ಲ! ಇಂಗ್ಲೆಂಡ್ ಪ್ರವಾಸಕ್ಕೆ ಭುವನೇಶ್ವರ್​ ಆಯ್ಕೆಯಾಗದಿರಲು ಕಾರಣ ಇಲ್ಲಿದೆ

Published On - 9:54 am, Mon, 17 May 21

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು