AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics; ಪದಕದ ನಿರೀಕ್ಷೆಯಲ್ಲಿದ್ದ ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್​ಗೆ ಕೈತಪ್ಪಿದ ಒಲಿಂಪಿಕ್ಸ್ ಟಿಕೆಟ್

Tokyo Olympics; ಸಿಂಗಾಪುರದಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯದ ಕೊನೆಯ ಪಂದ್ಯಾವಳಿ ರದ್ದುಗೊಂಡಾಗ ಮಾಜಿ ವಿಶ್ವ ನಂಬರ್ ಒನ್ ಶ್ರೀಕಾಂತ್ ಮತ್ತು ಸೈನಾ ಅವರ ನಿರೀಕ್ಷೆಗಳು ಚೂರುಚೂರಾದವು.

Tokyo Olympics; ಪದಕದ ನಿರೀಕ್ಷೆಯಲ್ಲಿದ್ದ ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್​ಗೆ ಕೈತಪ್ಪಿದ ಒಲಿಂಪಿಕ್ಸ್ ಟಿಕೆಟ್
ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್
ಪೃಥ್ವಿಶಂಕರ
|

Updated on: May 28, 2021 | 5:27 PM

Share

ಇದೇ ವರ್ಷ ಜಪಾನ್​ನ ರಾಜಧಾನಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ (Tokyo Olympics) ಕ್ರೀಡಾಕೂಟಕ್ಕೂ ಮೊದಲು ಭಾರತ ದೊಡ್ಡ ಹಿನ್ನಡೆ ಅನುಭವಿಸಿದೆ. 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಈ ವರ್ಷ ಒಲಿಂಪಿಕ್ಸ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಸೈನಾ ಮಾತ್ರವಲ್ಲ, ಪುರುಷ ಆಟಗಾರ ಕಿಡಂಬಿ ಶ್ರೀಕಾಂತ್ ಕೂಡ ಈ ವರ್ಷ ಟೋಕಿಯೋ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಇದನ್ನು ದೃಢಪಡಿಸಿದೆ. ಅರ್ಹತಾ ಅವಧಿಯೊಳಗೆ ಹೆಚ್ಚಿನ ಪಂದ್ಯಾವಳಿಗಳು ಇರುವುದಿಲ್ಲ ಮತ್ತು ಪ್ರಸ್ತುತ ಶ್ರೇಯಾಂಕ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ಬಿಡಬ್ಲ್ಯೂಎಫ್ ಸ್ಪಷ್ಟಪಡಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಿಂಗಾಪುರದಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯದ ಕೊನೆಯ ಪಂದ್ಯಾವಳಿ ರದ್ದುಗೊಂಡಾಗ ಮಾಜಿ ವಿಶ್ವ ನಂಬರ್ ಒನ್ ಶ್ರೀಕಾಂತ್ ಮತ್ತು ಸೈನಾ ಅವರ ನಿರೀಕ್ಷೆಗಳು ಚೂರುಚೂರಾದವು. ಆ ಸಮಯದಲ್ಲಿ, BWF, ಟೋಕಿಯೊ ಒಲಿಂಪಿಕ್ ಅರ್ಹತೆಗೆ ಸಂಬಂಧಿಸಿದಂತೆ ಮತ್ತೊಂದು ಹೇಳಿಕೆಯನ್ನು ನೀಡುವುದಾಗಿ ಹೇಳಿತ್ತು. ಆದರೆ ಈಗ ಈ ಎಲ್ಲಾ ನಿರೀಕ್ಷೆಗಳಿಗು ತೆರೆ ಎಳೆದಿದೆ.

ಹೆಚ್ಚಿನ ಪಂದ್ಯಾವಳಿಗಳು ಇಲ್ಲ ಟೋಕಿಯೋ 2020 ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಸಮಯದೊಳಗೆ ಹೆಚ್ಚಿನ ಪಂದ್ಯಾವಳಿಗಳನ್ನು ಆಡಲಾಗುವುದಿಲ್ಲ ಎಂದು ಬಿಡಬ್ಲ್ಯೂಎಫ್ ಖಚಿತಪಡಿಸಿದೆ. ಟೋಕಿಯೊ ಕ್ರೀಡಾಕೂಟದ ಅರ್ಹತಾ ಅವಧಿ 2021 ರ ಜೂನ್ 15 ರಂದು ಅಧಿಕೃತವಾಗಿ ಕೊನೆಗೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಸ್ತುತ ರೇಸ್ ಟು ಟೋಕಿಯೊ ಶ್ರೇಯಾಂಕ ಪಟ್ಟಿಯು ಬದಲಾಗುವುದಿಲ್ಲ ಎಂದು ಹೇಳಿಕೆಯಲ್ಲಿ ಪ್ರಕಟಿಸಲಾಗಿದೆ.

ಪ್ರಸ್ತುತ ಆರೋಗ್ಯ ಬಿಕ್ಕಟ್ಟಿನಿಂದಾಗಿ, ಮೂರು ಪ್ರಮುಖ ಪಂದ್ಯಾವಳಿಗಳನ್ನು ಮುಂದೂಡಿದ ನಂತರ ಅರ್ಹತಾ ಅವಧಿಯನ್ನು ಸುಮಾರು ಎರಡು ತಿಂಗಳವರೆಗೆ ಜೂನ್ 15 ಕ್ಕೆ ವಿಸ್ತರಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ಶ್ರೀಕಾಂತ್ ಮತ್ತು ಸೈನಾ ಅವರಿಗೆ ಅರ್ಹತೆ ಪಡೆಯಲು ಅವಕಾಶವಿದ್ದ ಇಂಡಿಯಾ ಓಪನ್, ಮಲೇಷ್ಯಾ ಓಪನ್ ಮತ್ತು ಸಿಂಗಾಪುರ್ ಓಪನ್ ನಡೆಸಲು ಸಾಧ್ಯವಾಗಲಿಲ್ಲ.

ಅರ್ಹತಾ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ ಆಟಗಾರರಿಗೆ ಅಂಕಗಳನ್ನು ಗಳಿಸಲು ಹೆಚ್ಚುವರಿ ಅವಕಾಶಗಳಿಲ್ಲದ ಕಾರಣ ಒಲಿಂಪಿಕ್ ಅರ್ಹತಾ ಪ್ರಕ್ರಿಯೆಯು ಪರಿಣಾಮಕಾರಿಯಾಗಿ ಮುಕ್ತಾಯಗೊಂಡಿದೆ ಎಂದು ಬಿಡಬ್ಲ್ಯೂಎಫ್ ಪ್ರಧಾನ ಕಾರ್ಯದರ್ಶಿ ಥಾಮಸ್ ಲುಂಡ್ ಹೇಳಿದ್ದಾರೆ. ಭಾರತ ಪರ, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧು, ಪುರುಷರ ಸಿಂಗಲ್ಸ್‌ನಲ್ಲಿ ಬಿ ಸಾಯಿ ಪ್ರಣೀತ್ ಮತ್ತು ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸತ್ವಿಕ್ಸೈರಾಜ್ ರಾಂಕಿರೆಡ್ಡಿ ಅರ್ಹತೆ ಪಡೆದಿದ್ದಾರೆ.