Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸಿಸ್ ಸರಣಿ ವಿಜಯ ಎಫೆಕ್ಟ್​: ಮತ್ತೆ ಸುದ್ದಿಯಾದ ನಾಯಕತ್ವ ಬದಲಾವಣೆ, ರಹಾನೆಯೇ ಬೆಸ್ಟ್​ ಅಂತಿವೆ ಅಂಕಿ-ಅಂಶಗಳು..!

ರಹಾನೆ ಬೌಲರ್​ಗಳನ್ನ ಕೊಹ್ಲಿಗಿಂತ ಹೆಚ್ಚು ನಂಬುತ್ತಾರೆ. ಅಲ್ಲದೇ, ಎದುರಾಳಿ ತಂಡ ಎಷ್ಟೇ ದೊಡ್ಡ ಮೊತ್ತ ಕಲೆಹಾಕಿದ್ರೂ ತಾಳ್ಮೆ ಕಳೆದುಕೊಳ್ಳದೇ, ರಹಾನೆ ಬೌಲರ್​ಗಳಿಗೆ ಟಿಪ್ಸ್ ನೀಡಿ ಹುರಿದುಂಬಿಸುತ್ತಾರೆ.

ಆಸಿಸ್ ಸರಣಿ ವಿಜಯ ಎಫೆಕ್ಟ್​: ಮತ್ತೆ ಸುದ್ದಿಯಾದ ನಾಯಕತ್ವ ಬದಲಾವಣೆ, ರಹಾನೆಯೇ ಬೆಸ್ಟ್​ ಅಂತಿವೆ ಅಂಕಿ-ಅಂಶಗಳು..!
ಅಜಿಂಕ್ಯಾ ರಹಾನೆ ಮತ್ತು ವಿರಾಟ್​ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Jan 24, 2021 | 1:17 PM

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವದ ಚರ್ಚೆ ಮತ್ತೆ ಶುರುವಾಗಿದೆ. ಆಸಿಸ್ ಸರಣಿ ಗೆದ್ದ ಬೆನ್ನಲ್ಲೆ, ರಹಾನೆಗೆ ಟೆಸ್ಟ್ ತಂಡದ ನಾಯಕತ್ವ ನೀಡಿ ಎನ್ನುವ ಕೂಗು ಕೇಳಿಬಂದಿದೆ.

ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಬೆನ್ನಲ್ಲೇ, ಈಗ ಟೀಂ ಇಂಡಿಯಾ ನಾಯಕತ್ವದ  ಚರ್ಚೆ ಶುರುವಾಗಿದೆ. ನಾಯಕ ಅಜಿಂಕ್ಯಾ ರಹಾನೆ ನೇತೃತ್ವದಲ್ಲಿ ಭಾರತದ ಯುವ ಆಟಗಾರರ ತಂಡ, ಸರಣಿ ಗೆದ್ದು ಇತಿಹಾಸವನ್ನ ಬರೆದಿತ್ತು. ಹೀಗಾಗಿ ರಹಾನೆ ಕೂಡ, ಯಶಸ್ಸಿನ ಪಾಲುದಾರರಾಗಿದ್ದಾರೆ. ಅಲ್ಲದೆ, ರಹಾನೆ ಸೋಲಿಲ್ಲದ ನಾಯಕನಾಗಿದ್ದಾರೆ.

ಮೊದಲ ಟೆಸ್ಟ್ ಪಂದ್ಯದ ನಂತರ ವಿರಾಟ್, ಪಿತೃತ್ವ ರಜೆಯ ಹಿನ್ನಲೆ ಭಾರತಕ್ಕೆ ವಾಪಸ್ ಆಗಿದ್ದರು. ಈ ವೇಳೆ ಅಜಿಂಕ್ಯಾ ರಹಾನೆ ಉಳಿದ ಮೂರು ಪಂದ್ಯಗಳಲ್ಲಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. ಅಲ್ಲದೇ, ಸರಣಿ ಗೆಲ್ಲುವಹಾಗೇ ಮಾಡಿದ್ದರು. ಇದೆ ಈಗ ಭಾರತೀಯ ಕ್ರಿಕೆಟ್ ತಂಡದಲ್ಲಿ ನಾಯಕತ್ವದ ಚರ್ಚೆ ಹುಟ್ಟುಹಾಕಿದೆ.

ವಿರಾಟ್ ಕೊಹ್ಲಿಯ ಅಗ್ರೆಸ್ಸಿವ್ ಕ್ಯಾಪ್ಟನ್ಸಿ ತಂಡಕ್ಕೆ ಸಕ್ಸಸ್ ತಂದುಕೊಟ್ಟಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಅದ್ರಲ್ಲೂ ಈಗಿರುವ ತಂಡದ ಎಲ್ಲಾ ಆಟಗಾರರು ವಿರಾಟ್ ನಾಯಕತ್ವದಲ್ಲಿ ಬೆಳೆದಿದ್ದಾರೆ. ಇದ್ರ ನಡುವೆಯೇ, ಶಾಂತಸ್ವಭಾವ ರಹಾನೆ ನಾಯಕನಾಗಲಿ ಅನ್ನೋ ಮಾತುಗಳು ಕೇಳಿಬರುತ್ತಿದೆ. ಅಡಿಲೇಡ್ ಟೆಸ್ಟ್​ನಲ್ಲಿ ಕೇವಲ 36ರನ್​ಗೆ ಟೀಂ ಇಂಡಿಯಾ ಆಲೌಟ್ ಆಗಿದ್ದಾಗ, ಯುವ ಆಟಗಾರರಲ್ಲಿ ಸ್ಫೂರ್ತಿ ತುಂಬಿ, ತಂಡವನ್ನ ಯಶಸ್ಸಿನತ್ತ ಕೊಂಡೊಯ್ದದದ್ದು, ಮುಂಬೈಕರ್ ರಹಾನೆ. ಹೀಗಾಗಿ, ವಿರಾಟ್​ಗೆ ಏಕದಿನ, ಟಿ-ಟ್ವೆಂಟಿ ಮಾದರಿಯ ನಾಯಕತ್ವವನ್ನ ಕೊಟ್ಟು, ರಹಾನೆಯನ್ನ ಟೆಸ್ಟ್ ತಂಡದ ಸಾರಥಿಯನ್ನಾಗಿ ಮಾಡಲಿ ಅನ್ನೂ ಕೂಗು ಕೇಳಿಬರ್ತಿದೆ.

ವಿರಾಟ್ vs ರಹಾನೆ ಟೆಸ್ಟ್ ನಾಯಕನಾಗಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ ಸಾಧನೆ ನೋಡೋದಾದ್ರೆ, ವಿರಾಟ್ ಕೊಹ್ಲಿ 56ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ 33ಗೆಲುವು, 13ಸೋಲು, 10ಡ್ರಾ ಸಾಧಿಸಿರೋ ಭಾರತ 58.92ಸರಾಸರಿಯಲ್ಲಿ ಪಂದ್ಯಗಳನ್ನ ಗೆದ್ದಿದೆ. ಇನ್ನೂ ಅಜಿಂಕ್ಯಾ ರಹಾನೆ 5ಪಂದ್ಯಗಳನ್ನ ತಂಡವನ್ನ ಮುನ್ನಡೆಸಿದ್ದು 4ಗೆಲುವು ಸಾಧಿಸಿದೆ. ಹೀಗಾಗಿ ಶೇ.80ರ ಸರಾಸರಿಯಲ್ಲಿ ರಹಾನೆ ಕ್ಯಾಪ್ಟನ್ಸಿಯಲ್ಲಿ ಭಾರತ ಗೆದ್ದಿದೆ.

ಇನ್ನೂ ಟೆಸ್ಟ್ ತಂಡಕ್ಕೆ ರಹಾನೆ ಯಾಕೆ ಉತ್ತಮ ನಾಯಕ ಅನ್ನೋದನ್ನ ಇಶಾಂತ್ ಶರ್ಮಾ ಕೂಡ ಈ ಹಿಂದೆ ತಿಳಿಸಿದರು. ರಹಾನೆ ಬೌಲರ್​ಗಳ ನಾಯಕ. ರಹಾನೆ ಬೌಲರ್​ಗಳನ್ನ ಕೊಹ್ಲಿಗಿಂತ ಹೆಚ್ಚು ನಂಬುತ್ತಾರೆ. ಅಲ್ಲದೇ, ಎದುರಾಳಿ ತಂಡ ಎಷ್ಟೇ ದೊಡ್ಡ ಮೊತ್ತ ಕಲೆಹಾಕಿದ್ರೂ ತಾಳ್ಮೆ ಕಳೆದುಕೊಳ್ಳದೇ, ರಹಾನೆ ಬೌಲರ್​ಗಳಿಗೆ ಟಿಪ್ಸ್ ನೀಡಿ ಹುರಿದುಂಬಿಸ್ತಾರೆ. ಆದ್ರೆ, ಕೊಹ್ಲಿ ಬೌಲರ್​ಗಳಿಗೆ ಟಿಪ್ಸ್ ನೀಡದೇ, ಸೈಲೆಂಟ್ ಆಗಿ ಬಿಡುತ್ತಾರೆ.

ಒಟ್ಟನಲ್ಲಿ ಈಗಾಗಲೇ ಇಂಗ್ಲೆಂಡ್ ಸರಣಿಗೆ ತಂಡವನ್ನ ಪ್ರಕಟಿಸಲಾಗಿದ್ದು, ಕೊಹ್ಲಿ ನಾಯಕ, ರಹಾನೆ ಉಪನಾಯಕನಾಗಿದ್ದಾರೆ. ಆದ್ರೆ, ಕೊಹ್ಲಿ ಹಾಗೂ ರಹಾನೆ ನಡುವಿನ ನಾಯಕತ್ವದ ಚರ್ಚೆ ಈಗ ಅಪ್ರಸ್ತುತ ಅನ್ನಿಸೋದ್ರಲ್ಲಿ ಅತಿಶಯೋಕ್ತಿಯಲ್ಲ.

ರವಿ ಶಾಸ್ತ್ರಿ ಹೇಳಿದ ಗುಟ್ಟನ್ನು ಕೊನೆಗೂ ಬಿಟ್ಟುಕೊಡಲೇ ಇಲ್ಲ ಠಾಕೂರ್​: 3 ನೇ ಟೆಸ್ಟ್​ ಡ್ರಾ ಆಗಲು ಕಾರಣವಾಗಿದ್ದು ಇದೇನಾ?

Published On - 12:54 pm, Sun, 24 January 21

ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?