AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Hazare Trophy: ಕನ್ನಡಿಗ ಮಾಯಾಂಕ್ ಅಗರವಾಲ್ ದಾಖಲೆ ಮುರಿದ ಪೃಥ್ವಿ ಶಾ

ಕಳೆದ ವಾರ ಶಾ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಮೊತ್ತವೊಂದನ್ನು ಚೇಸ್​ ಮಾಡುವಾಗ ಭಾರತೀಯ ಆಟಗಾರರರು ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರಿನ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು. ಸೌರಾಷ್ಟ್ರ ವಿರುದ್ಧ ಅಢಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 123 ಎಸೆತಗಳಲ್ಲಿ 185 ರನ್​ ಬಾರಿಸಿ ಮುಂಬೈ ಟೀಮನ್ನು ಸೆಮಿಫೈನಲ್​ಗೆ ಮುನ್ನಡೆಸಿದ್ದರು.

Vijay Hazare Trophy:  ಕನ್ನಡಿಗ ಮಾಯಾಂಕ್ ಅಗರವಾಲ್ ದಾಖಲೆ ಮುರಿದ ಪೃಥ್ವಿ ಶಾ
ಪೃಥ್ವಿ ಶಾ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Mar 11, 2021 | 7:58 PM

Share

ದೆಹಲಿ:  ಮುಂಬೈ ತಂಡದ ಆರಂಭ ಆಟಗಾರ ಪೃಥ್ವಿ ಶಾ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿಗೆ ತಲೆನೋವು ನೀಡುವುದನ್ನು ಮುಂದುವರೆಸಿದ್ದಾರೆ. ವಿಜಯ ಹಜಾರೆ ಟ್ರೋಫಿ ಟೂರ್ನಮೆಂಟ್​ನ ಸೆಮಿಫೈನಲ್​ನಲ್ಲಿ ಇಂದು (ಗುರುವಾರ) ಮತ್ತೊಂದು ಶಕತ ಬಾರಿಸಿದ ಶಾ ಈ ಟೂರ್ನಿಯ ಸೀಸನೊಂದರಲ್ಲಿ ಅತಿಹೆಚ್ಚು ರನ್ ಗಳಿಸಿರುವ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಸೆಮಿಫೈನಲ್ ಹಂತದವರೆಗೆ ಅವರು 754 ರನ್ ಗಳಿಸಿ ಕರ್ನಾಟಕದ ಮಾಯಾಂಕ್ ಅಗರ್​ವಾಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2018 ರ ಆವೃತ್ತಿಯಲ್ಲಿ ಮಾಯಾಂಕ್ 723 ರನ್​ ಗಳಿಸಿದ್ದರು.

ಹಾಗೆ ನೋಡಿದರೆ, ಮಾಯಾಂಕ್ ಅವರ ದಾಖಲೆಯನ್ನು ಇಂದು ಅವರ ರಾಜ್ಯದವರೇ ಆಗಿರುವ ದೇವದತ್ ಪಡಿಕ್ಕಲ್ ಸಹ ಉತ್ತಮ ಪಡಿಸಿದರು. ಈ ಸಾಲಿನಲ್ಲಿ ಪಡಿಕ್ಕಲ್ 4 ಶತಕಗಳೂ ಸೇರಿದಂತೆ 737 ರನ್ ಗಳಿಸಿದ್ದಾರೆ. ಕರ್ನಾಟಕ ಮತ್ತು ಮುಂಬೈ ವಿಜಯ ಹಜಾರೆ ಟ್ರೋಫಿಗಾಗಿ ಸೆಮಿಫೈನಲ್ ಪಂದ್ಯವನ್ನು ದೆಹಲಿಯಲ್ಲಿ ಆಡಿದ್ದು ಶಾ ಅವರ ತಂಡ 88 ರನ್​ಗಳ ಸುಲಭ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಮುಂಬೈ, ನಾಯಕ ಶಾ ಅವರ ಬಿರುಗಾಳಿ ವೇಗದ ಶತಕದ (165, 122 ಎಸೆತ, 17 ಬೌಂಡರಿ, 7 ಸಿಕ್ಸ್) ನೆರವಿನಿಂದ 50ನೇ ಓವರ್​ನಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು 322 ರನ್ ಗಳಿಸಿತು. ಶಾ ಅವರಂತೆ ಪ್ರಸಕ್ತ ಸಾಲಿನ ವಿಜಯ ಹಜಾರೆ ಟ್ರೋಫಿಯಲ್ಲಿ ರನ್ ಹೊಳೆ ಹರಿಸಿರುವ ಪಡಿಕ್ಕಲ್ 64 ರನ್ ಗಳಿಸಿ ಔಟಾದರು.

Devdutt Padikkal

ದೇವದತ್ ಪಡಿಕ್ಕಲ್ ಇಂದು 64 ರನ್​ ಗಳಿಸಿ ಔಟಾದರು

ಗುರುವಾರದಂದು ಶಾ ಕೇವಲ 79 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಟೂರ್ನಮೆಂಟಿನ 3 ಪಂದ್ಯಗಳಲ್ಲಿ ಶಾ ಟೀಮಿನ ನಾಯಕತ್ವ ವಹಿಸಿದ್ದು ಆ ಮೂರು ಪಂದ್ಯಗಳಲ್ಲಿ ಒಂದು ದ್ವಿಶತಕ ಮತ್ತು ಎರಡು ಶತಕಗಳನ್ನುಬಾರಿಸಿದ್ದಾರೆ. ಅವರ 754 ರನ್​ಗಳು 188.5ರ ಸರಾಸರಿಯಲ್ಲಿ ಬಂದಿವೆ.

ಕಳೆದ ವಾರ ಶಾ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಮೊತ್ತವೊಂದನ್ನು ಚೇಸ್​ ಮಾಡುವಾಗ ಭಾರತೀಯ ಆಟಗಾರರರು ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರಿನ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು. ಸೌರಾಷ್ಟ್ರ ವಿರುದ್ಧ ಅಢಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 123 ಎಸೆತಗಳಲ್ಲಿ 185 ರನ್​ ಬಾರಿಸಿ ಮುಂಬೈ ಟೀಮನ್ನು ಸೆಮಿಫೈನಲ್​ಗೆ ಮುನ್ನಡೆಸಿದ್ದರು.

ಇದಕ್ಕೆ ಮೊದಲು ಈ ದಾಖಲೆ ಭಾರತದ ಮಾಜಿ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಮತ್ತು ಪ್ರಸಕ್ತ ನಾಯಕ ವಿರಾಟ್​ ಕೊಹ್ಲಿ ಅವರ ಹೆಸರಲ್ಲಿತ್ತು.

ಧೋನಿ 2005ರಲ್ಲಿ ಶ್ರೀಲಂಕಾ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಅಜೇಯ 183 ರನ್ ಬಾರಿಸಿದ್ದರು. ಢಾಕಾದಲ್ಲಿ ನಡೆದ 2012 ರ ಏಷ್ಯಾ ಕಪ್ ಪಂದ್ಯವೊಂದರಲ್ಲಿ ಕೊಹ್ಲಿ ಭಾರತದ ಕಟ್ಟಾ ವೈರಿ ಪಾಕಿಸ್ತಾನದ ವಿರುದ್ಧ 183 ರನ್ ಬಾರಿಸಿ ಭಾರತಕ್ಕೆ 6 ವಿಕೆಟ್​ ಜಯ ಕೊಡಿಸಿದ್ದರು.

ಇದನ್ನೂ ಓದಿ: Vijay Hazare Trophy: ಬಿಸಿಸಿಐನಿಂದ ಅವಕೃಪೆಗೊಳಗಾಗಿರುವ ಪೃಥ್ವಿ ಶಾ; ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಯ ಡಬಲ್ ಸೆಂಚುರಿ!

Published On - 5:11 pm, Thu, 11 March 21

Follow Us
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ