AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Cricket 2020 | ಚುಟುಕು ಸಮರದಲ್ಲಿ ರನ್ ಮಳೆ ಹರಿಸಿದ್ದ ರಾಹುಲ್​ಗಿಲ್ಲ ಸ್ಥಾನ

ವಿರಾಟ್ ಕೊಹ್ಲಿಗೆ ಪರ್ಯಾಯವಾಗಿ ಕೆ.ಎಲ್. ರಾಹುಲ್​ರನ್ನು ಕಣಕ್ಕಿಳಿಸಬಹುದೆಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದರು. ಹನುಮಾ ವಿಹಾರಿ ಬದಲಿಗೆ ರಾಹುಲ್‌ಗೆ ಅವಕಾಶ ಸಿಗಬಹುದೆಂಬ ಊಹಾಪೋಹಗಳು ಇದ್ದವು.

India vs Australia Test Cricket 2020 | ಚುಟುಕು ಸಮರದಲ್ಲಿ ರನ್ ಮಳೆ ಹರಿಸಿದ್ದ ರಾಹುಲ್​ಗಿಲ್ಲ ಸ್ಥಾನ
ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಆಡುತ್ತಿರುವ ಆಟಗಾರ ಶೀಘ್ರದಲ್ಲೇ ಟೆಸ್ಟ್‌ನಲ್ಲಿ ಸ್ಥಾನ ಪಡೆಯುವ ಭರವಸೆಯಲ್ಲಿದ್ದಾರೆ. ರಾಹುಲ್ ಪ್ರಸ್ತುತ ಟಿ 20 ಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಪೃಥ್ವಿಶಂಕರ
|

Updated on:Dec 25, 2020 | 5:47 PM

Share

ಮೆಲ್ಬೋರ್ನ್ ಟೆಸ್ಟ್​ಗಾಗಿ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ಅಡಿಲೇಡ್‌ನಲ್ಲಿ ಆಡಿದ ಮೊದಲ ಟೆಸ್ಟ್‌ಗೆ ಹೋಲಿಸಿದರೆ ಈ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಭಾರತ ತಂಡದ ಆಡಳಿತ ಮಂಡಳಿ 4 ಬದಲಾವಣೆಗಳನ್ನು ಮಾಡಿದೆ.

ಆದರೆ, ಕ್ರಿಕೆಟ್ ಅಭಿಮಾನಿಗಳು ಹೆಚ್ಚು ನಿರೀಕ್ಷಿಸುತ್ತಿದ್ದ ಆಟಗಾರನಿಗೆ ಮಂಡಳಿ ಮಣೆ ಹಾಕಿಲ್ಲ. ವಿರಾಟ್ ಕೊಹ್ಲಿಗೆ ಪರ್ಯಾಯವಾಗಿ ಕೆ.ಎಲ್. ರಾಹುಲ್​ರನ್ನು ಕಣಕ್ಕಿಳಿಸಬಹುದೆಂದು ಕ್ರಿಕೆಟ್ ಪಂಡಿತರು ಉಲ್ಲೇಖಿಸುತ್ತಿದ್ದರು. ಜೊತೆಗೆ ಹನುಮಾ ವಿಹಾರಿ ಬದಲಿಗೆ ರಾಹುಲ್‌ಗೆ ಅವಕಾಶ ಸಿಗಬಹುದೆಂಬ ಊಹಾಪೋಹಗಳು ಇದ್ದವು. ಅದು ಮಾತ್ರವಲ್ಲದೇ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ರಾಹುಲ್​ ಉತ್ತಮ ಆಯ್ಕೆ ಎನ್ನಲಾಗಿತ್ತು. ಆದರೆ ಭಾರತ ತಂಡದ ಆಯ್ಕೆ ಮಂಡಳಿಯ ಚಿಂತನೆ ಕ್ರಿಕೆಟ್​ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಶುಭಮನ್​ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ ಮತ್ತು ಸಿರಾಜ್ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ರಾಹುಲ್ ಇನ್ನೂ ಸ್ವಲ್ಪ ದಿನ ಬೆಂಚ್ ಕಾಯಲೇಬೇಕಾಗಿದೆ. ಸದ್ಯಕ್ಕೆ ಆಡಳಿತ ಮಂಡಳಿ ಹನುಮಾ ವಿಹಾರಿಯನ್ನು ಆಡುವ ಹನ್ನೊಂದರಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಿರುವುದೇ ರಾಹುಲ್​ ಆಯ್ಕೆಗೆ ಮುಳುವಾಗಿದೆ.

ಶಾರ್ಟ್ ಫಾರ್ಮ್ಯಾಟ್‌ನಲ್ಲಿ ಹೆಚ್ಚು ರನ್ ಗಳಿಸುತ್ತಿರುವ ಕೆ.ಎಲ್.ರಾಹುಲ್, ಟೆಸ್ಟ್ ಕ್ರಿಕೆಟ್​ನಲ್ಲಿ 26 ಪಂದ್ಯಗಳನ್ನಾಡಿದ್ದು, 34.58 ರ ಸರಾಸರಿಯಲ್ಲಿ 2006 ರನ್ ಗಳಿಸಿದ್ದಾರೆ. ಅದರಲ್ಲಿ 5 ಶತಕಗಳು ಮತ್ತು 11 ಅರ್ಧಶತಕಗಳು ಸೇರಿವೆ. ಆಶ್ಚರ್ಯಕರ ಸಂಗತಿಯೆಂದರೆ, ರಾಹುಲ್​ ಬ್ಯಾಟ್‌ನಿಂದ ಹೊರಬಂದ 5 ಟೆಸ್ಟ್ ಶತಕಗಳಲ್ಲಿ, 3 ಶತಕಗಳು ವಿದೇಶಿ ನೆಲದಲ್ಲೇ ಸಿಡಿದಿವೆ.

ರಾಹುಲ್ ಆಯ್ಕೆಗೆ ಮುಳುವು ಇಂತಹ ಅದ್ಭುತ ಪ್ರದರ್ಶನದ ಹೊರತಾಗಿಯೂ ರಾಹುಲ್ ನಿಯಮಿತವಾಗಿ ಟೀಮ್ ಇಂಡಿಯಾದ ಟೆಸ್ಟ್ ತಂಡದ ಭಾಗವಾಗಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಹುಡುಕುತ್ತಾ ಹೊರಟರೆ ಎರಡು ಪ್ರಮುಖ ಕಾರಣಗಳು ಸಿಗುತ್ತವೆ. ರಾಹುಲ್​ ಹೆಚ್ಚು ರನ್​ಗಳಿಸಿರುವುದು ಆರಂಭಿಕ ಆಟಗಾರನಾಗಿ. ಆದರೆ ಈಗಾಗಲೇ ಓಪನರ್​ ಸ್ಥಾನ ಭರ್ತಿಯಾಗಿದೆ. ಎರಡನೆಯದಾಗಿ, ರಾಹುಲ್​ ಏಕದಿನ ಮತ್ತು ಟೆಸ್ಟ್​ ಪಂದ್ಯಗಳನ್ನ ಹೆಚ್ಚಾಗಿ ಆಡಿಲ್ಲ.

ರಾಹುಲ್ 2020 ರಲ್ಲಿ ಭಾರತಕ್ಕಾಗಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸಹ ಆಡಲಿಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ವರ್ಷ ಮಾರ್ಚ್‌ನಲ್ಲಿ ಬಂಗಾಳದ ವಿರುದ್ಧ ಕೇವಲ ಒಂದು ಪಂದ್ಯವನ್ನು ಆಡಿರುವ ರಾಹುಲ್ ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಿಂದ ಕೇವಲ 26 ರನ್ ಗಳಿಸಿದ್ದಾರೆ. ಈ ವರ್ಷ ಚುಟುಕು ಕ್ರಿಕೆಟ್​ನಲ್ಲಿ ರಾಹುಲ್ ಸಾಕಷ್ಟು ರನ್ ಗಳಿಸಿದ್ದಾರೆ. ಈ ಚುಟುಕು ಕ್ರಿಕೆಟ್​ ಪ್ರದರ್ಶನ ಆಯ್ಕೆ ಮಂಡಳಿಯ ಹೃದಯ ಗೆಲ್ಲುವಲ್ಲಿ ವಿಫಲವಾಗಿದೆ.

India vs Australia Test Cricket 2020 | ಬಾಕ್ಸಿಂಗ್ ಡೇ ಟೆಸ್ಟ್‌; ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲ್ಲಿದೆ ಭಾರತ

Published On - 5:40 pm, Fri, 25 December 20

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..