AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mi Fan Festival 2022: ಶವೋಮಿಯಿಂದ ಎಂಐ ಫ್ಯಾನ್ ಫೆಸ್ಟಿವಲ್ 2022: ಆಫರ್, ಡಿಸ್ಕೌಂಟ್ ಬಗ್ಗೆ ಇಲ್ಲಿದೆ ಮಾಹಿತಿ

ಇದೇ ಏಪ್ರಿಲ್ 6 ರಂದು ಎಂಐ ಫ್ಯಾನ್ ಫೆಸ್ಟಿವಲ್ 2022 ಶುರುವಾಗಿದ್ದು ಏಪ್ರಿಲ್ 18ರ ವರೆಗೆ ಈ ಅದ್ಧೂರಿ ಮೇಳ ನಡೆಯಲಿದೆ. ಈ ಸೇಲ್ ನಲ್ಲಿ ರೆಡ್ಮಿ ಫೋನ್ (Redmi Phone) ಸೇರಿದಂತೆ ಇತರೆ ಪ್ರೊಡಕ್ಟ್ ಗಳು ಕಡಿಮೆ ಬೆಲೆಯಲ್ಲಿ ಸಿಗಲಿದೆ.

Mi Fan Festival 2022: ಶವೋಮಿಯಿಂದ ಎಂಐ ಫ್ಯಾನ್ ಫೆಸ್ಟಿವಲ್ 2022: ಆಫರ್, ಡಿಸ್ಕೌಂಟ್ ಬಗ್ಗೆ ಇಲ್ಲಿದೆ ಮಾಹಿತಿ
Xiaomi Mi Fan Festival 2022
TV9 Web
| Updated By: Vinay Bhat|

Updated on:Apr 09, 2022 | 2:54 PM

Share

ಶವೋಮಿಯ ಎಂಐ ಫ್ಯಾನ್ ಫೆಸ್ಟಿವಲ್ 2022 (Mi Fan Festival 2022) ಆರಂಭವಾಗಿದೆ. ಇದೇ ಏಪ್ರಿಲ್ 6 ರಂದು ಶುರುವಾಗಿದ್ದು ಏಪ್ರಿಲ್ 18ರ ವರೆಗೆ ಈ ಅದ್ಧೂರಿ ಮೇಳ ನಡೆಯಲಿದೆ. ಈ ಸೇಲ್ ನಲ್ಲಿ ರೆಡ್ಮಿ ಫೋನ್ (Redmi Phone) ಸೇರಿದಂತೆ ಇತರೆ ಪ್ರೊಡಕ್ಟ್ ಗಳು ಕಡಿಮೆ ಬೆಲೆಯಲ್ಲಿ ಸಿಗಲಿದೆ. ಶವೋಮಿ (Xiaomi) ತನ್ನ ಪ್ರೊಡಕ್ಟ್ ಗಳನ್ನು ಕೇವಲ ಒಂದು ರುಪಾಯಿ ಬೆಲೆಗೆ ಮಾರಾಟ ಮಾಡುವ ಫ್ಲ್ಯಾಶ್ ಸೇಲ್ ಮತ್ತು ಹೊಸ ಮಿಸ್ಟ್ರಿ ಬಾಕ್ಸ್ ಸೇಲ್ ಗಳನ್ನು ಕೂಡ ಈ ಸಮಯದಲ್ಲಿ ನಡೆಸಲಿದೆ. ಎಂಐ.ಕಾಮ್ ಮತ್ತು ಅದರ ಸಹಯೋಗದ ಎಂಐ ಹೋಮ್, ಎಂಐ ಸ್ಟೋರ್ ಮತ್ತು ಪಾರ್ಟ್ನರ್ ಆಫ್ ಲೈನ್ ಸ್ಟೋರ್ ಗಳಲ್ಲಿ ಇದು ನಡೆಯಲಿದೆ. ಎರಡು ವಾರಗಳವರೆಗೆ ಈ ಮಾರಾಟ ಉತ್ಸವ ನಡೆಯುತ್ತಿದ್ದು, ಗ್ರಾಹಕರು 45 ಲಕ್ಷ ರೂಪಾಯಿಗಳವರೆಗಿನ ಉಡುಗೊರೆಗಳು ಮತ್ತು ಕೂಪನ್‌ಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ ಎಂದು ಸಂಸ್ಥೆ ತಿಳಿಸಿದೆ.

ಇನ್ನು ಈ ಸೇಲ್ ಲೈವ್ ನಡೆಯುವ ಸಂದರ್ಭದಲ್ಲಿ ಎಂಐ ಸ್ಟೋರ್ ಮತ್ತು ಅಪ್ಲಿಕೇಶನ್‌ಗೆ ಭೇಟಿ ನೀಡುವ ಮತ್ತು ಶಾಪಿಂಗ್ ಮಾಡುವವರು 15,000 ರೂ. ವರೆಗಿನ ಕೂಪನ್‌ಗಳು, ಎರಡು ಚಿನ್ನದ ನಾಣ್ಯಗಳು (2 ಗ್ರಾಂ), 80,000 ರೂ.ವರೆಗಿನ ಗಿಫ್ಟ್ ಹ್ಯಾಂಪರ್‌ಗಳು, ರೆಡ್ ಮಿ X42 ಟಿವಿ ಮತ್ತು 100 ಪ್ರತಿಶತ ಕ್ಯಾಶ್‌ಬ್ಯಾಕ್ ಅನ್ನು ಸಹ ಗೆಲ್ಲುವ ಅವಕಾಶ ಹೊಂದಿದ್ದಾರೆಂದು ಸಂಸ್ಥೆ ತಿಳಿಸಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ, ಗ್ರಾಹಕರು ತಮ್ಮ ಅದೃಷ್ಟವನ್ನು ಜಾಕ್‌ಬಾಟ್ ಡೀಲ್‌ಗಳ ಮೂಲಕ ಪ್ರಯತ್ನಿಸಬಹುದು, ಅಲ್ಲಿ ಅವರು ಬೊಂಬಾಟ್ ಸ್ಮಾರ್ಟ್​ಫೋನ್ ಆದ ಶವೋಮಿ 11i ಹೈಪರ್‌ಚಾರ್ಜ್ 5G ಅನ್ನು ಕೇವಲ 8,999 ರೂ. ಗಳಲ್ಲಿ, ರೆಡ್ಮಿ ಸ್ಮಾರ್ಟ್ ಟಿವಿಯನ್ನು 6,999 ರೂ. ಗಳಲ್ಲಿ, Mi ರೋಬೋಟ್ ವ್ಯಾಕ್ಯೂಮ್ – ಮಾಪ್ P ಅನ್ನು 9,999 ರೂ. ಗಳ ವಿಶೇಷ ಬೆಲೆಗಳಿಗೆ ಖರೀದಿಸಬಹುದಾಗಿದೆ.

ಅಲ್ಲದೆ ಶವೋಮಿ 11i 5G ಮಾರುಕಟ್ಟೆ ಬೆಲೆ 29,999 ರೂ. ನೀವು ಇದನ್ನು ಫ್ಲಿಪ್​ಕಾರ್ಟ್​ನಿಂದ ಖರೀದಿಸಿದರೆ, ಈ ಸ್ಮಾರ್ಟ್​ಫೋನ್ ಅನ್ನು 16% ರಿಯಾಯಿತಿಯ ನಂತರ ರೂ 24,999 ಗೆ ಪಡೆಯುತ್ತೀರಿ. ಇದನ್ನು ಖರೀದಿಸುವಾಗ, ಅದನ್ನು ಐಸಿಐಸಿಐ ಬ್ಯಾಂಕ್​ನ  ಕ್ರೆಡಿಟ್ ಕಾರ್ಡ್​ನೊಂದಿಗೆ ಪಾವತಿಸಿದರೆ, ಎರಡು ಸಾವಿರ ರೂಪಾಯಿಗಳ ತ್ವರಿತ ರಿಯಾಯಿತಿ ಸಿಗುತ್ತದೆ. ಒಟ್ಟಾರೆ 22,999 ರೂ.ಗೆ ಖರೀದಿಸಬಹುದಾಗಿದೆ. ಎಕ್ಸ್​ಚೇಂಜ್ ಆಫರ್ ಅನ್ನು ಸಹ ನೀಡಲಾಗುತ್ತಿದ್ದು, ನಿಮ್ಮ ಹಳೆಯ ಸ್ಮಾರ್ಟ್​ಫೋನ್​ಗೆ ಬದಲಾಗಿ ಈ 5G ಫೋನ್ ಅನ್ನು ಖರೀದಿಸುವ ಮೂಲಕ 13 ಸಾವಿರ ರೂಪಾಯಿಗಳವರೆಗೆ ಉಳಿಸಬಹುದು. ಈ ಎಕ್ಸ್​ಚೇಂಜ್ ಆಫರ್​ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ, ನೀವು ಈ ಸ್ಮಾರ್ಟ್ಫೋನ್ ಅನ್ನು ರೂ 22,999 ಬದಲಿಗೆ ಕೇವಲ 9,999 ರೂಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.

ಪ್ರತಿದಿನ ರಾತ್ರಿ 8 ಗಂಟೆಗೆ, ಗ್ರಾಹಕರು ತಮಗಾಗಿ ವೈಯಕ್ತೀಕರಿಸಬಹುದಾದ ಒಂದಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಹೆಚ್ಚುವರಿ ರಿಯಾಯಿತಿ ದರಗಳಲ್ಲಿ ಪಡೆಯಲು ‘ಪಿಕ್ ಎನ್’ ಚೂಸ್’ ಅನ್ನು ಬಳಸಬಹುದು. ಈ ಉತ್ಸವದ ಸಂದರ್ಭದಲ್ಲಿ ದಿನದ ವಿವಿಧ ಸಮಯಗಳನ್ನು ವಿಶೇಷ ಕೊಡುಗೆಗಳಡಿಯಲ್ಲಿ ವಿಭಾಗಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಆಡಿಯೋ ಉತ್ಪನ್ನಗಳು, ಪವರ್ ಬ್ಯಾಂಕ್‌ಗಳು, ಟ್ರಿಮ್ಮರ್‌ಗಳು ಮತ್ತು ಇತರ ಉತ್ಪನ್ನಗಳ ಮೇಲೆ ದೈನಂದಿನ ಆಶ್ಚರ್ಯಕರ ದರಗಳು ಇರುತ್ತವೆ.

WhatsApp: ಆಂಡ್ರಾಯ್ಡ್ ಮತ್ತು ಐಒಎಸ್​​ನಲ್ಲಿ ವಾಟ್ಸ್​ಆ್ಯಪ್ ಲಾಕ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ

Published On - 2:52 pm, Sat, 9 April 22

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ