AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI Impact Summit: ಭಾರತಕ್ಕೆ ಎಐ ಬಗ್ಗೆ ಭಯ ಇಲ್ಲ, ಭಾಗ್ಯ ಕಾಣುತ್ತೆ, ಭವಿಷ್ಯ ಕಾಣುತ್ತೆ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ, ಭಾರತಕ್ಕೆ AI ಭಯವಲ್ಲ, ಅದೊಂದು ಭಾಗ್ಯ ಮತ್ತು ಭವಿಷ್ಯ ಎಂದಿದ್ದಾರೆ. ಮೂರು ಭಾರತೀಯ ಕಂಪನಿಗಳು AI ಮಾಡೆಲ್​ಗಳನ್ನು ಬಿಡುಗಡೆ ಮಾಡಿವೆ. AI ಬಳಕೆ ಜವಾಬ್ದಾರಿಯಿಂದ ಕೂಡಿರಬೇಕು, ಪಾರದರ್ಶಕತೆ ಮತ್ತು ದೃಢೀಕರಣ (ವಾಟರ್‌ಮಾರ್ಕ್‌) ಅತ್ಯಗತ್ಯ ಎಂದು ಪ್ರತಿಪಾದಿಸಿದರು. AI ಸಕಾರಾತ್ಮಕ ಶಕ್ತಿಯಾಗಿ ಬೆಳೆಯಲು ನಮ್ಮ ಇಂದಿನ ಕ್ರಮಗಳು ನಿರ್ಣಾಯಕ.

AI Impact Summit: ಭಾರತಕ್ಕೆ ಎಐ ಬಗ್ಗೆ ಭಯ ಇಲ್ಲ, ಭಾಗ್ಯ ಕಾಣುತ್ತೆ, ಭವಿಷ್ಯ ಕಾಣುತ್ತೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
ನಯನಾ ರಾಜೀವ್
|

Updated on:Feb 19, 2026 | 11:19 AM

Share

ನವದೆಹಲಿ, ಫೆಬ್ರವರಿ 19: ಎಐ ಎಂದರೆ ಕೆಲವರಿಗೆ ಭಯ ಕೆಲವರು ಅದು ನಮ್ಮ ಭಾಗ್ಯವೆಂದು ಪರಿಗಣಿಸುತ್ತಾರೆ. ನಾನು ಕೂಡ ಗರ್ವದಿಂದ ಹೇಳುತ್ತೇನೆ, ನಮಗೆ ಎಐ ಎಂದರೆ ಭಯ ಇಲ್ಲ, ಭಾಗ್ಯ ಕಾಣುತ್ತೆ, ಭಾರತದ ಭವಿಷ್ಯ ಕಾಣುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಇಂದು ನವದೆಹಲಿಯ ಭಾರತ್ ಮಂಪಟದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್​ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ.

ಮೂರು ಭಾರತೀಯ ಕಂಪನಿಗಳು ಎಐ ಮಾಡೆಲ್ ಆ್ಯಪ್ ಲಾಂಚ್ ಮಾಡಿದ್ದಾರೆ. ಈ ಮಾಡೆಲ್​ಗಳು ಯುವಕರ ಟ್ಯಾಲೆಂಟ್ ಏನಿದೆ ಎಂಬುದನ್ನು ತೋರಿಸುತ್ತದೆ. ಕೆಲವರು ಎಐ ಮುಂದಿಟ್ಟುಕೊಂಡು ಜಗತ್ತನ್ನೇ ಆಳುವ ಮನಸ್ಥಿತಿಯಲ್ಲಿದ್ದಾರೆ. ಆದರೆ ಭಾರತ ಅದನ್ನು ಭವಿಷ್ಯವೆಂದಷ್ಟೇ ಪರಿಗಣಿಸುತ್ತಿದೆ ಎಂದರು.

ಯಂತ್ರ ಕಲಿಕೆಯಿಂದ ಕಲಿಕೆ ಯಂತ್ರದವರೆಗೆ, ಅಂದರೆ ಯಂತ್ರವನ್ನು ಮನುಷ್ಯನೇ ನಡೆಸಬೇಕು. ನಾವು ದೊಡ್ಡ ದೃಷ್ಟಿಕೋನವನ್ನು ಹೊಂದಿರಬೇಕು ಮತ್ತು ಅಷ್ಟೇ ದೊಡ್ಡ ಜವಾಬ್ದಾರಿಯನ್ನು ಹೊರಬೇಕು. ಭವಿಷ್ಯದ ಪೀಳಿಗೆಗೆ ನಾವು ಯಾವ ರೀತಿಯ AI ಅನ್ನು ಬಿಟ್ಟುಬಿಡುತ್ತೇವೆ ಎಂಬುದರ ಬಗ್ಗೆಯೂ ನಾವು ಕಾಳಜಿ ವಹಿಸಬೇಕಾಗಿದೆ.

ಮತ್ತಷ್ಟು ಓದಿ: AI Impact Summit: ಎಐ ಪ್ರಯೋಜನ ಪಡೆಯುವುದರ ಜತೆ ಅದರಿಂದಾಗುವ ಅಪಾಯಗಳ ತಗ್ಗಿಸುವ ಉಪಾಯ ಕಂಡುಕೊಳ್ಳಬೇಕು: ಅಶ್ವಿನಿ ವೈಷ್ಣವ್

ಆದ್ದರಿಂದ, ಇಂದಿನ ನಿಜವಾದ ಪ್ರಶ್ನೆಯೆಂದರೆ ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಏನು ಮಾಡಬಹುದು ಎಂಬುದು ಅಲ್ಲ, ಆದರೆ ವರ್ತಮಾನದಲ್ಲಿ ನಾವು ಅದನ್ನು ಬಳಸಿಕೊಂಡು ಏನು ಮಾಡುತ್ತೇವೆ ಎಂಬುದು ನಿಜವಾದ ಪ್ರಶ್ನೆ. ಅತ್ಯಂತ ಶಕ್ತಿಶಾಲಿ ಉದಾಹರಣೆಯೆಂದರೆ ಪರಮಾಣು ಶಕ್ತಿ. ಅದರ ವಿನಾಶ ಮತ್ತು ಅದರ ಸಕಾರಾತ್ಮಕ ಕೊಡುಗೆಯನ್ನು ನಾವು ನೋಡಿದ್ದೇವೆ. ಎಐ ಕೂಡ ಒಂದು ಪರಿವರ್ತಕ ಶಕ್ತಿಯಾಗಿದೆ.

ಪಾರದರ್ಶಕತೆ ಮುಖ್ಯ

ಎಐಯಲ್ಲಿ ಅಥೆಂಟಿಸಿಟಿ ಹಾಗೂ ಪಾರದರ್ಶಕತೆ ಎಂಬುದು ಮುಖ್ಯ, ಯಾವುದು ಎಐ ವಿಡಿಯೋ ಯಾವುದು ಬೇರೆ ವಿಡಿಯೋ ಎಂದು ತಿಳಿಯಲು ವಾಟರ್​ ಮಾರ್ಕ್​ ಇರುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

ಎಐ ಯಂತ್ರಗಳನ್ನು ಚುರುಕುಗೊಳಿಸುತ್ತಿದೆ, ಆದರೆ ಅದಕ್ಕಿಂತ ಹೆಚ್ಚಾಗಿ, ಇದು ಮಾನವ ಸಾಮರ್ಥ್ಯಗಳನ್ನು ಹಲವು ಪಟ್ಟು ಹೆಚ್ಚಿಸುತ್ತಿದೆ.ಒಂದೇ ವ್ಯತ್ಯಾಸವೆಂದರೆ ಈ ಬಾರಿ ವೇಗ ಅಭೂತಪೂರ್ವವಾಗಿದೆ ಮತ್ತು ಪ್ರಮಾಣವು ಅನಿರೀಕ್ಷಿತವಾಗಿದೆ. ಹಿಂದೆ, ತಂತ್ರಜ್ಞಾನದ ಪ್ರಭಾವವನ್ನು ನೋಡಲು ದಶಕಗಳೇ ಬೇಕಾಗುತ್ತಿತ್ತು.ಇಂದು, ಯಂತ್ರ ಕಲಿಕೆಯಿಂದ ಕಲಿಕೆಯ ಯಂತ್ರಗಳವರೆಗಿನ ಪ್ರಯಾಣವು ವೇಗವಾಗಿದೆ ಮತ್ತು ವಿಸ್ತಾರವಾಗಿದೆ. ನಾವು ದೃಷ್ಟಿಯನ್ನು ದೊಡ್ಡದಾಗಿ ಇಟ್ಟುಕೊಳ್ಳಬೇಕು ಮತ್ತು ಜವಾಬ್ದಾರಿಯನ್ನು ಸಮಾನವಾಗಿ ಹೊರಬೇಕು.

AI ಒಂದು ಪರಿವರ್ತನಾ ಶಕ್ತಿ, ನಿರ್ದೇಶನವಿಲ್ಲದೆ, ಅದು ಅಡಚಣೆಯಾಗುತ್ತದೆ. ಸರಿಯಾದ ನಿರ್ದೇಶನ ನೀಡಿದರೆ, ಅದು ಪರಿಹಾರವಾಗುತ್ತದೆ. ಜಗತ್ತಿಗೆ ಸಾಮಾನ್ಯ ಒಳಿತಿಗಾಗಿ ಎಐ ಅನ್ನು ಅಭಿವೃದ್ಧಿಪಡಿಸಲು ನಾವು ಪ್ರತಿಜ್ಞೆ ಮಾಡೋಣ. ಜಾಗತಿಕ ಮಾನದಂಡಗಳನ್ನು ರಚಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ವಿಶ್ವಾಸಾರ್ಹತೆಯ ಲೇಬಲ್ ಮುಖ್ಯ

ಡಿಜಿಟಲ್ ಜಗತ್ತಿನಲ್ಲಿ, ವಿಷಯವು ವಿಶ್ವಾಸಾರ್ಹತೆಯ ಲೇಬಲ್‌ಗಳನ್ನು ಹೊಂದಿರಬೇಕು, ಇದರಿಂದ ಜನರು ನೈಜವಾದದ್ದು ಮತ್ತು AI ನಿಂದ ರಚಿಸಲ್ಪಟ್ಟದ್ದನ್ನು ಪ್ರತ್ಯೇಕಿಸಬಹುದು.ಆರಂಭದಿಂದಲೇ ತಂತ್ರಜ್ಞಾನದಲ್ಲಿ ನಂಬಿಕೆಯನ್ನು ಬೆಳೆಸುವುದು ಬಹಳ ಮುಖ್ಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:10 am, Thu, 19 February 26

ಎಐನಿಂದಾಗುವ ಅಪಾಯಗಳ ತಗ್ಗಿಸುವ ಉಪಾಯ ಕಂಡುಕೊಳ್ಳಬೇಕು: ಅಶ್ವಿನಿ ವೈಷ್ಣವ್
ಎಐನಿಂದಾಗುವ ಅಪಾಯಗಳ ತಗ್ಗಿಸುವ ಉಪಾಯ ಕಂಡುಕೊಳ್ಳಬೇಕು: ಅಶ್ವಿನಿ ವೈಷ್ಣವ್
ಬೆಂಗಳೂರಿನಲ್ಲಿ ಕಸದ ಸಮಸ್ಯೆ: ನಿಂತಲ್ಲೇ ನಿಂತ ತ್ಯಾಜ್ಯ ಸಂಗ್ರಹಣೆ ವಾಹನಗಳು
ಬೆಂಗಳೂರಿನಲ್ಲಿ ಕಸದ ಸಮಸ್ಯೆ: ನಿಂತಲ್ಲೇ ನಿಂತ ತ್ಯಾಜ್ಯ ಸಂಗ್ರಹಣೆ ವಾಹನಗಳು
KSRTC ಬಸ್​​ನ ಟಿಕೆಟ್ ಮೆಷಿನ್​​ನನ್ನೇ ಕದ್ದೊಯ್ದ ಕಳ್ಳ!
KSRTC ಬಸ್​​ನ ಟಿಕೆಟ್ ಮೆಷಿನ್​​ನನ್ನೇ ಕದ್ದೊಯ್ದ ಕಳ್ಳ!
ಮೆಜೆಸ್ಟಿಕ್ ರೈಲ್ವೆ ಪಾರ್ಕಿಂಗ್ ಲಾಟ್‌ನಲ್ಲಿ ಕಾರಿಗೆ ಬೆಂಕಿ
ಮೆಜೆಸ್ಟಿಕ್ ರೈಲ್ವೆ ಪಾರ್ಕಿಂಗ್ ಲಾಟ್‌ನಲ್ಲಿ ಕಾರಿಗೆ ಬೆಂಕಿ
‘ಯಾವನು ಕೇಳಿದ ನಿಮ್ಮ ಕಮೆಂಟ್?’; ರವಿಚಂದ್ರನ್ ಗರಂ ಆಗಿದ್ದು ಯಾರ ಬಗ್ಗೆ?
‘ಯಾವನು ಕೇಳಿದ ನಿಮ್ಮ ಕಮೆಂಟ್?’; ರವಿಚಂದ್ರನ್ ಗರಂ ಆಗಿದ್ದು ಯಾರ ಬಗ್ಗೆ?
ಮಕ್ಕಳು ಮಾತನಾಡುವಾಗ ತೊದಲುತ್ತಿದ್ರೆ ಜ್ಯೋತಿಷ್ಯ ಪ್ರಕಾರ ಇದೇ ಕಾರಣ
ಮಕ್ಕಳು ಮಾತನಾಡುವಾಗ ತೊದಲುತ್ತಿದ್ರೆ ಜ್ಯೋತಿಷ್ಯ ಪ್ರಕಾರ ಇದೇ ಕಾರಣ
ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು
ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು
ಇಂದು ರಾಶಿಯವರಿಗೆಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ
ಇಂದು ರಾಶಿಯವರಿಗೆಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ
IIT ಬಾಂಬೆ ತರಗತಿಯ ಟೇಬಲ್ ಮೇಲೆ ಹತ್ತಿ ನಿಂತ ನಾಯಿ; ವಿಡಿಯೋ ವೈರಲ್
IIT ಬಾಂಬೆ ತರಗತಿಯ ಟೇಬಲ್ ಮೇಲೆ ಹತ್ತಿ ನಿಂತ ನಾಯಿ; ವಿಡಿಯೋ ವೈರಲ್
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು