Dhruva Sarja
ಧ್ರುವ ಸರ್ಜಾ ಅವರು 1988ರ ಅಕ್ಟೋಬರ್ 6ರಂದು ಜನಿಸಿದರು. ಕನ್ನಡ ಚಿತ್ರರಂಗದಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಪ್ರಸಿದ್ಧ ಚಲನಚಿತ್ರ ಕುಟುಂಬದಿಂದ ಬಂದವರು. ಜನಪ್ರಿಯ ನಟ-ನಿರ್ದೇಶಕ ಅರ್ಜುನ್ ಸರ್ಜಾ ಅವರ ಸೋದರಳಿಯ ಧ್ರುವ. ಅವರ ಅಣ್ಣ ಚಿರಂಜೀವಿ ಸರ್ಜಾ ನಿಧನ ಹೊಂದಿದ್ದಾರೆ. ಸಿನಿಮೀಯ ಪರಂಪರೆ ಚಿಕ್ಕ ವಯಸ್ಸಿನಿಂದಲೇ ಅವರ ಮೇಲೆ ಪ್ರಭಾವ ಬೀರಿತು. 2012ರ ‘ಅದ್ದೂರಿ’ ಅವರ ಮೊದಲ ಸಿನಿಮಾ. ಆ ಬಳಿಕ ಬಹದ್ದೂರ್ (2014), ಭರ್ಜರಿ (2017) ರೀತಿಯ ಸಿನಿಮಾಗಳನ್ನು ನೀಡಿದರು. 2021ರಲ್ಲಿ ಸಹೋದರ ಚಿರಂಜೀವಿಯನ್ನು ಕಳೆದುಕೊಂಡರು. ಧ್ರುವ ಅವರು ತುಂಬಾನೇ ನಿಧಾನಕ್ಕೆ ಸಿನಿಮಾ ಮಾಡುತ್ತಾರೆ. 13 ವರ್ಷಗಳಲ್ಲಿ ಅವರು ಮಾಡಿರೋದು ಕೇವಲ ಐದು ಸಿನಿಮಾ. 2019ರಲ್ಲಿ ಅವರು ಬಾಲ್ಯದ ಗೆಳತಿ ಪ್ರೇರಣಾನ ವಿವಾಹ ಆದರು.
ಇನ್ನೂ ಹೆಚ್ಚು ಓದಿ
ಧ್ರುವ ಸರ್ಜಾ ಸಿನಿಮಾದಿಂದ ಹೊರ ಬರುವ ದೃಢನಿರ್ಧಾರ ಮಾಡಿದ ನಿರ್ದೇಶಕ ಸೂರಿ
ಧ್ರುವ ಸರ್ಜಾ ಹಾಗೂ ನಿರ್ದೇಶಕ 'ದುನಿಯಾ' ಸೂರಿ ಕಾಂಬಿನೇಷನ್ನ ಬಹುನಿರೀಕ್ಷಿತ ಸಿನಿಮಾ ಸದ್ಯಕ್ಕೆ ನಿಂತುಹೋಗಿದೆ. ಸತತವಾಗಿ ಮುಂದೂಡಲ್ಪಡುತ್ತಿದ್ದ ಈ ಪ್ರಾಜೆಕ್ಟ್ನಿಂದ ಹೊರಬರುವ ದೃಢನಿರ್ಧಾರವನ್ನು ಸೂರಿ ತಗೆದುಕೊಂಡಿದ್ದಾರೆ. ಧ್ರುವ ಸರ್ಜಾ ಅವರ ಕಾಲ್ಶೀಟ್ ಡೇಟ್ಸ್ ಗೊಂದಲ ಹಾಗೂ ಸಮಯದ ಅಭಾವವೇ ಸೂರಿ ಈ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವಾಗಿದೆ.
- Rajesh Duggumane
- Updated on: Jul 22, 2026
- 2:52 pm
ಧ್ರುವ, ಪುನೀತ್, ಪ್ರೇಮ್ ಬಗ್ಗೆ ಅಸಭ್ಯವಾಗಿ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್
ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ವಿಡಿಯೋ ವೈರಲ್ ಆಗಿತ್ತು. ಅದಕ್ಕೆ ಈಗ ಅವರು ಸ್ಪಷ್ಟನೆ ನೀಡಿದ್ದಾರೆ. ಮಾತಿನ ಭರದಲ್ಲಿ ನೀಡಿದ ಹೇಳಿಕೆಗೆ ಅವರು ಈಗ ಕ್ಷಮೆ ಕೇಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಎದುರಲ್ಲಿ ಶ್ರೀನಿವಾಸ್ ಅವರು ಕ್ಷಮೆ ಕೇಳಿದ್ದಾರೆ.
- Madan Kumar
- Updated on: Feb 18, 2026
- 8:36 pm
ಪುನೀತ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಕೈ ಮುಗಿದು ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್
ಬಾಯಿಗೆ ಬಂದಂತೆ ಮಾತನಾಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಈಗ ಕ್ಷಮೆ ಕೇಳಿದ್ದಾರೆ. ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ ಮುಂತಾದವರ ಬಗ್ಗೆ ತಾವು ಮಾತಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಇನ್ನೂ ಹಲವು ವರ್ಷಗಳ ಕಾಲ ತಾವು ಚಿತ್ರರಂಗದಲ್ಲಿ ಇರಬೇಕು ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
- Madan Kumar
- Updated on: Feb 18, 2026
- 6:01 pm
‘ಕೆಡಿ’ ರಿಲೀಸ್ ದಿನಾಂಕ ಘೋಷಣೆ ಮಾಡಿದ ಪ್ರೇಮ್? ಯಾರ ಜೊತೆ ಕ್ಲ್ಯಾಶ್?
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗಿದೆ. 2026ರ ಏಪ್ರಿಲ್ನಲ್ಲಿ ಈ ಚಿತ್ರ ತೆರೆ ಕಾಣಲಿದೆ. 'ಅಣ್ತಮ್ಮ ಜೋಡೆತ್ತು ಕಣೋ' ಎಂಬ ಹೊಸ ಹಾಡನ್ನು ಸಹ ಬಿಡುಗಡೆ ಮಾಡಲಾಗಿದ್ದು, ಇದು ಧ್ರುವ, ರಮೇಶ್ ಅರವಿಂದ್, ಸಂಜಯ್ ದತ್ ಅವರ ರೆಟ್ರೋ ಲುಕ್ನಲ್ಲಿ ಸ್ನೇಹದ ಕುರಿತು ಮೂಡಿಬಂದಿದೆ.
- Rajesh Duggumane
- Updated on: Dec 26, 2025
- 3:01 pm
ಧ್ರುವ ಚಿತ್ರಕ್ಕೆ ‘ಕ್ರಿಮಿನಲ್’ ಟೈಟಲ್; ಉತ್ತರ ಕರ್ನಾಟಕ ಸೊಗಡಿನ ಸಿನಿಮಾಗೆ ರಚಿತಾ ನಾಯಕಿ
ಧ್ರುವ ಸರ್ಜಾ ಅವರ 7ನೇ ಸಿನಿಮಾ 'ಕ್ರಿಮಿನಲ್' ಟೈಟಲ್ ಅನಾವರಣಗೊಂಡಿದೆ. ರಚಿತಾ ರಾಮ್ ನಾಯಕಿಯಾಗಿ ಧ್ರುವ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ನೈಜ ಘಟನೆ ಆಧರಿಸಿದೆ ಅನ್ನೋದು ವಿಶೇಷ. ಧ್ರುವ 'ಹೋರಿ ಶಿವ' ಪಾತ್ರದಲ್ಲಿ ನಟಿಸಲಿದ್ದಾರೆ.
- Rajesh Duggumane
- Updated on: Nov 19, 2025
- 12:59 pm