Mumbai Indians
Mumbai Indians
IPL 2026 Trade: ಒಂದೇ ದಿನ ಇಬ್ಬರು ಸ್ಟಾರ್ ಆಟಗಾರರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್
IPL 2026 Trade: ಐಪಿಎಲ್ 2026 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಟ್ರೇಡಿಂಗ್ ವಿಂಡೋ ಮೂಲಕ ದೊಡ್ಡ ಮಟ್ಟದ ಸಿದ್ಧತೆ ನಡೆಸಿದೆ. ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಅವರನ್ನು ನಗದು ಒಪ್ಪಂದದ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಯಾವುದೇ ಆಟಗಾರರನ್ನು ಬಿಡುಗಡೆ ಮಾಡದೆ ಈ ಪ್ರಮುಖ ಆಲ್ರೌಂಡರ್ಗಳನ್ನು ಪಡೆದಿರುವುದು ಮುಂಬೈಗೆ ಬಲ ತುಂಬಿದೆ. ಇದು ಮುಂಬರುವ ಸೀಸನ್ಗೆ ತಂಡದ ಗೆಲುವಿಗೆ ನಿರ್ಣಾಯಕವಾಗಬಲ್ಲದು.
- pruthvi Shankar
- Updated on: Nov 13, 2025
- 10:17 pm
IPL 2026 Trade: ಲಕ್ನೋ ತೊರೆದು ಮುಂಬೈ ಸೇರಿದ ಶಾರ್ದೂಲ್ ಠಾಕೂರ್; ಎಷ್ಟು ಮೊತ್ತಕ್ಕೆ ಗೊತ್ತಾ?
Shardul Thakur Traded to Mumbai Indians: ಅನುಭವಿ ಆಟಗಾರ ಶಾರ್ದೂಲ್ ಠಾಕೂರ್ ಮುಂಬರುವ ಐಪಿಎಲ್ನಲ್ಲಿ ಲಕ್ನೋ ಸೂಪರ್ಜೈಂಟ್ಸ್ನಿಂದ ಮುಂಬೈ ಇಂಡಿಯನ್ಸ್ಗೆ ₹2 ಕೋಟಿ ನಗದು ಒಪ್ಪಂದದಲ್ಲಿ ಸೇರಿಕೊಂಡಿದ್ದಾರೆ. ಇದು ಶಾರ್ದೂಲ್ ಅವರ ಮೂರನೇ ಐಪಿಎಲ್ ಟ್ರೇಡ್ ಆಗಿದ್ದು, ಹಿಂದೆ ನೆಟ್ಸ್ ಬೌಲರ್ ಆಗಿ ಮುಂಬೈ ಜೊತೆಗಿನ ನಂಟು ಹೊಂದಿದ್ದರು. ಅವರ ಈ ಸೇರ್ಪಡೆ ಮುಂಬೈ ತಂಡಕ್ಕೆ ಬಲ ತುಂಬಲಿದೆ.
- pruthvi Shankar
- Updated on: Nov 13, 2025
- 6:32 pm
IPL 2026: ಮುಂಬೈ ಇಂಡಿಯನ್ಸ್ ತೊರೆಯಲಿರುವ ಅರ್ಜುನ್ ತೆಂಡೂಲ್ಕರ್
IPL 2026 Trading Window: ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ವಿಂಡೋ ತೆರೆದಿದ್ದು, ಹಲವು ಆಟಗಾರರ ವಿನಿಮಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚೆನ್ನೈ ಮತ್ತು ರಾಜಸ್ಥಾನ ನಡುವೆ ಜಡೇಜಾ, ಸ್ಯಾಮ್ ಕರನ್, ಸಂಜು ಸ್ಯಾಮ್ಸನ್ ಟ್ರೇಡ್ ಬಹುತೇಕ ಅಂತಿಮವಾಗಿದೆ. ಮುಂಬೈ ಇಂಡಿಯನ್ಸ್ನಿಂದ ಅರ್ಜುನ್ ತೆಂಡೂಲ್ಕರ್ ಲಕ್ನೋ ಸೂಪರ್ ಜೈಂಟ್ಸ್ಗೆ ಹಾಗೂ ಶಾರ್ದೂಲ್ ಠಾಕೂರ್ ಮುಂಬೈಗೆ ನಗದು ವ್ಯವಹಾರದ ಮೂಲಕ ಸೇರುವ ಸಾಧ್ಯತೆ ಇದೆ. ಇದು ಅರ್ಜುನ್ಗೆ ಉತ್ತಮ ಅವಕಾಶ ನೀಡಲಿದೆ.
- pruthvi Shankar
- Updated on: Nov 12, 2025
- 10:19 pm
ವಿಶ್ವ ದಾಖಲೆ… ಮುಂಬೈ ಇಂಡಿಯನ್ಸ್ ಮುಡಿಗೆ 13ನೇ ಟ್ರೋಫಿ
MUMBAI INDIANS: ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಐಪಿಎಲ್, ಡಬ್ಲ್ಯೂಪಿಎಲ್, ಎಸ್ಎ20, ಐಎಲ್ಟಿ20, ಎಂಎಲ್ಸಿ ಹಾಗೂ ಸಿಎಲ್ಟಿ20 ಲೀಗ್ಗಳಲ್ಲಿ ತಂಡಗಳನ್ನು ಕಣಕ್ಕಿಳಿಸಿದೆ. ಈ ಆರು ಲೀಗ್ಗಳ ಮೂಲಕ ಮುಂಬೈ ಇಂಡಿಯನ್ಸ್ ಮುಡಿಗೇರಿಸಿಕೊಂಡಿರುವುದು ಬರೋಬ್ಬರಿ 13 ಟ್ರೋಫಿಗಳನ್ನು. ಈ ಮೂಲಕ ಟಿ20 ಇತಿಹಾಸದಲ್ಲೇ ಅತ್ಯಧಿಕ ಟ್ರೋಫಿ ಗೆದ್ದ ಫ್ರಾಂಚೈಸಿ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
- Zahir Yusuf
- Updated on: Jul 14, 2025
- 12:30 pm
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಪೂರನ್ಗೆ ಮುಂಬೈ ತಂಡದ ನಾಯಕತ್ವ
Nicholas Pooran Named MI New York Captain: ನಿಕೋಲಸ್ ಪೂರನ್ ಅವರು 2025ರ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡದ ನಾಯಕತ್ವ ವಹಿಸಲಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದಾಗಿ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ಪೂರನ್ ತಮ್ಮ ಆಟದಿಂದಾಗಿ ತಂಡವನ್ನು ಚಾಂಪಿಯನ್ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಅವರು ಆಟಗಾರ ಮತ್ತು ನಾಯಕ ಎರಡೂ ಪಾತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕಿದೆ.
- pruthvi Shankar
- Updated on: Jun 11, 2025
- 2:32 pm
ಸೂರ್ಯನ ಅಬ್ಬರಕ್ಕೆ ABDಯ ದಾಖಲೆಯೇ ಉಡೀಸ್
IPL 2025 MI vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 203 ರನ್ ಕಲೆಹಾಕಿದರೆ, ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ 19 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಸೋಲಿನ ನಡುವೆ ಮುಂಬೈ ಇಂಡಿಯನ್ಸ್ ದಾಂಡಿಗ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆ ಬರೆದಿದ್ದಾರೆ.
- Zahir Yusuf
- Updated on: Jun 2, 2025
- 11:10 am
Shreyas Iyer: ಮುಂಬೈ ಕೈಯಲ್ಲಿದ್ದ ಪಂದ್ಯವನ್ನು 3 ಎಸೆತಗಳಲ್ಲಿ ತಮ್ಮತ್ತ ತಿರುಗಿಸಿದ ಶ್ರೇಯಸ್ ಅಯ್ಯರ್: ವಿಡಿಯೋ ನೋಡಿ
PBKS vs MI, Qualifier 2 IPL 2025: ಮುಂಬೈ ಇಂಡಿಯನ್ಸ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲುವಿಗೆ 8 ಓವರ್ಗಳಲ್ಲಿ 95 ರನ್ಗಳ ಅಗತ್ಯವಿತ್ತು. ಪಂಜಾಬ್ ತಂಡದ ಇನ್ನಿಂಗ್ಸ್ನ 13ನೇ ಓವರ್ ಅನ್ನು ಮುಂಬೈ ಇಂಡಿಯನ್ಸ್ನ ರೀಸ್ ಟಾಪ್ಲಿ ಎಸೆದರು. ಈ ಓವರ್ ಪಂದ್ಯದಲ್ಲಿ ಮಹತ್ವದ ತಿರುವು ಪಡೆದುಕೊಂಡಿತು.
- Vinay Bhat
- Updated on: Jun 2, 2025
- 11:17 am
PBKS vs MI: ಕೋಪಗೊಂಡ ಪಾಂಡ್ಯ: ಪೋಸ್ಟ್ ಮ್ಯಾಚ್ನಲ್ಲಿ ಬುಮ್ರಾ ಬಗ್ಗೆ ಹಾರ್ದಿಕ್ ಶಾಕಿಂಗ್ ಹೇಳಿಕೆ
Hardik Pandya Post Match presentation: ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಮ್ಮ ತಂಡ ಬಯಸಿದ ರೀತಿಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಇದಕ್ಕಾಗಿ ಅವರು ವಿಕೆಟ್ ಅನ್ನು ದೂಷಿಸಿಲ್ಲ, ಬದಲಾಗಿ ಬೌಲರ್ಗಳನ್ನು ಹೊಣೆ ಮಾಡಿದರು.
- Vinay Bhat
- Updated on: Jun 2, 2025
- 9:07 am
ಮುಂಬೈ ಇಂಡಿಯನ್ಸ್ ತಂಡದ 17 ವರ್ಷಗಳ ದಾಖಲೆಗೆ ಬ್ರೇಕ್ ಹಾಕಿದ ಪಂಜಾಬ್ ಕಿಂಗ್ಸ್
IPL 2025 MI vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 203 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡವು 19 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
- Zahir Yusuf
- Updated on: Jun 2, 2025
- 8:31 am
PBKS vs MI: ಮುಂಬೈ ವಿರುದ್ಧ ಗೆದ್ದ ಬಳಿಕ ಆರ್ಸಿಬಿ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್: ಏನು ಹೇಳಿದ್ರು ನೋಡಿ
Shreyas Iyer Post Match presentation: ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡಕ್ಕೆ 204 ರನ್ಗಳ ಗುರಿ ನೀಡಿತ್ತು. ಇದಾದ ನಂತರವೂ, ಶ್ರೇಯಸ್ ಅಯ್ಯರ್ ರನ್ ಚೇಸ್ ಸಮಯದಲ್ಲಿ ಶಾಂತವಾಗಿದ್ದರು. ಇದರ ಬಗ್ಗೆ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಹೇಗೆ ಇಷ್ಟೊಂದು ಶಾಂತವಾಗಿರುತ್ತೇನೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
- Vinay Bhat
- Updated on: Jun 2, 2025
- 8:15 am