Royal Challengers Bengaluru
Royal Challengers Bengaluru
ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ಥಲಾ ಲಭ್ಯ? ಧೋನಿ ಫ್ಯಾನ್ಸ್ಗೆ ಖುಷಿ ಸುದ್ದಿ
MS Dhoni: ಚಿನ್ನಸ್ವಾಮಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಅಖಾಡ ಸಿದ್ಧವಾಗಿದೆ. ಸ್ನಾಯು ಸೆಳೆತದಿಂದ ಬಳಲುತ್ತಿದ್ದ ಧೋನಿ ಅವರು ಈ ಮಹತ್ವದ ಪಂದ್ಯಕ್ಕೆ ಲಭ್ಯರಾಗುತ್ತಾರಾ ಎಂಬ ಕುತೂಹಲವಿದೆ. ಇತ್ತೀಚೆಗೆ ಧೋನಿ ಅಭ್ಯಾಸದಲ್ಲಿ ಭಾಗವಹಿಸಿದ್ದು, ಅಭಿಮಾನಿಗಳಿಗೆ ಆಶಾಕಿರಣ ಮೂಡಿದೆ.
- Rajesh Duggumane
- Updated on: Apr 3, 2026
- 1:28 pm
IPL Match: ಐಪಿಎಲ್ ಪಂದ್ಯದ ನಿಮಿತ್ತ ಮೆಟ್ರೋ ಸಂಚಾರ ವಿಸ್ತರಣೆ; ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿಶೇಷ ಬಸ್ ಸೇವೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಏಪ್ರಿಲ್ 5ರ ಐಪಿಎಲ್ ಪಂದ್ಯಕ್ಕಾಗಿ ಬೆಂಗಳೂರು ಮೆಟ್ರೋ (Namma Metro) ಸೇವೆಗಳನ್ನು ವಿಸ್ತರಿಸಿದೆ. ರಾತ್ರಿ 11 ಗಂಟೆಯ ನಂತರವೂ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸಲಿವೆ. ಡಿಜಿಟಲ್ ಪಂದ್ಯದ ಟಿಕೆಟ್ಗಳು ನಮ್ಮ ಮೆಟ್ರೋ QR ಕೋಡ್ಗಳನ್ನು ಒಳಗೊಂಡಿರುತ್ತವೆ. 43 ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯವೂ ಲಭ್ಯವಿದೆ.
- Bhavana Hegde
- Updated on: Apr 3, 2026
- 10:09 am
ಗುಡ್ ನ್ಯೂಸ್: ಏ.5ರಂದು ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಮಧ್ಯರಾತ್ರಿ ವರೆಗೂ ವಿಸ್ತರಣೆ
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಮೈಸೂರು ರಸ್ತೆ ನಮ್ಮ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್ 5ರಂದು ಅಂದರೆ ಭಾನುವಾರ ಬೆಳಿಗ್ಗೆ 07ರಿಂದ 09 ಗಂಟೆಯವರೆಗೆ 2 ಗಂಟೆ ನೆರಳೆ ಮಾರ್ಗದಲ್ಲಿ ಮೆಟ್ರೋ ಸೇವೆ (Namma Metro) ತಾತ್ಕಾಲಿಕ ಸ್ಥಗಿತವಾಗಲಿದೆ. ಇದರ ನಡುವೆ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಸಿಹಿಸುದ್ದಿಯನ್ನು ನೀಡಿದೆ.
- Ramesh B Jawalagera
- Updated on: Apr 2, 2026
- 8:16 pm
IPL 2026: ಆರ್ಸಿಬಿ ಪರ ಆಡಲು ಬಿಡದ ಕ್ರಿಕೆಟ್ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ
IPL 2026: ಐಪಿಎಲ್ 2026 ಮೊದಲ ಹಂತ ಮುಗಿದಿದೆ. ಆರ್ಸಿಬಿ ತಂಡದ ನುವಾನ್ ತುಷಾರಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಎನ್ಒಸಿ ನಿರಾಕರಿಸಿದೆ. ಇದರಿಂದ 1.6 ಕೋಟಿ ರೂ. ಕಳೆದುಕೊಂಡಿರುವ ತುಷಾರ, ಮಂಡಳಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನ್ನ ಕೇಂದ್ರ ಒಪ್ಪಂದ ಮುಗಿದಿದ್ದರೂ ಎನ್ಒಸಿ ನೀಡದಿರುವುದು ಅನ್ಯಾಯ ಎಂದು ತುಷಾರ ಆರೋಪಿಸಿದ್ದು, ಇದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
- pruthvi Shankar
- Updated on: Apr 2, 2026
- 5:00 pm
ಐಪಿಎಲ್ ಉದ್ಘಾಟನಾ ಪಂದ್ಯ: ‘ಬೆಂಗಳೂರು ಮಾಡೆಲ್’ ಯಶಸ್ಸಿಗೆ ಮುಂಬೈ-ಕೋಲ್ಕತ್ತಾ ಫಿದಾ!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಟ್ರಾಫಿಕ್ ಮತ್ತು ಜನಸಂದಣಿ ನಿರ್ವಹಿಸಿದ ರೀತಿ ಈಗ ದೇಶಕ್ಕೆ ಮಾದರಿಯಾಗಿದೆ. ಟಿಕೆಟ್ ಜೊತೆ ಮೆಟ್ರೋ ಸೌಲಭ್ಯ ನೀಡಿದ ಬೆಂಗಳೂರು ಪೊಲೀಸರ ಮತ್ತು ಕೆಎಸ್ಸಿಎ ಕಾರ್ಯವೈಖರಿಯನ್ನು ಮುಂಬೈ ಹಾಗೂ ಕೋಲ್ಕತ್ತಾ ಕ್ರಿಕೆಟ್ ಮಂಡಳಿಗಳು ಮೆಚ್ಚಿಕೊಂಡಿದ್ದು, ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿವೆ.
- Pradeep Chikkati
- Updated on: Apr 2, 2026
- 8:57 am
IPL 2026: 4 ಪಂದ್ಯಗಳ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಯಾರಿಗೆ ಅಗ್ರಸ್ಥಾನ? ಆರ್ಸಿಬಿಗೆ ಯಾವ ಸ್ಥಾನ?
IPL 2026 Points Table: ಐಪಿಎಲ್ 2026 ರಲ್ಲಿ ನಾಲ್ಕು ಪಂದ್ಯಗಳು ಮುಗಿದಿದ್ದು, ರಾಜಸ್ಥಾನ್, ಆರ್ಸಿಬಿ, ಮುಂಬೈ ಮತ್ತು ಪಂಜಾಬ್ ತಂಡಗಳು ಗೆಲುವು ಸಾಧಿಸಿವೆ. ಉತ್ತಮ ನೆಟ್ ರನ್ ರೇಟ್ನಿಂದ ರಾಜಸ್ಥಾನ್ ರಾಯಲ್ಸ್ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದು LSG-ಡೆಲ್ಲಿ ಪಂದ್ಯದ ನಂತರ ಎಲ್ಲಾ ತಂಡಗಳು ತಮ್ಮ ಮೊದಲ ಪಂದ್ಯವನ್ನು ಆಡಿ ಮುಗಿಸುತ್ತವೆ, ನಂತರ ಅಂಕಪಟ್ಟಿಯ ಸ್ಪಷ್ಟ ಚಿತ್ರಣ ಸಿಗುತ್ತದೆ.
- pruthvi Shankar
- Updated on: Apr 1, 2026
- 3:37 pm
IPL 2026: RCB ತಂಡದ ಏಪ್ರಿಲ್ ತಿಂಗಳ ವೇಳಾಪಟ್ಟಿ ಇಲ್ಲಿದೆ
RCB vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗೆ 35 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಆರ್ಸಿಬಿ ತಂಡವು 13 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಸಿಎಸ್ಕೆ 21 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರದಿಂದ ರದ್ದಾಗಿದೆ.
- Zahir Yusuf
- Updated on: Apr 1, 2026
- 1:58 pm
IPL 2026: ಆರ್ಸಿಬಿ ಪರ ಆಡಲು ರಾಷ್ಟ್ರೀಯ ತಂಡ ತೊರೆಯಲು ನಿರ್ಧರಿಸಿದ ಸ್ಟಾರ್ ವೇಗಿ
Nuwan Thushara IPL: ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿರುವ ಶ್ರೀಲಂಕಾದ ವೇಗಿ ನುವಾನ್ ತುಷಾರ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿ ಐಪಿಎಲ್ಗೆ ಸೇರಲಾಗದೆ ತೊಂದರೆ ಎದುರಿಸುತ್ತಿದ್ದಾರೆ. ವಿದೇಶಿ ಲೀಗ್ಗಳಲ್ಲಿ ಆಡಲು ಫಿಟ್ನೆಸ್ ಪಾಸ್ ಆಗುವುದು ಕಡ್ಡಾಯ ಎಂಬ ಲಂಕಾ ಕ್ರಿಕೆಟ್ ನೀತಿಯಿಂದಾಗಿ ಅವರಿಗೆ NOC ಸಿಕ್ಕಿಲ್ಲ. ಇದೀಗ ತುಷಾರ ಐಪಿಎಲ್ ಆಡಲು ಲಂಕಾ ಕ್ರಿಕೆಟ್ ಕೇಂದ್ರ ಒಪ್ಪಂದದಿಂದ ಹೊರಬರಲು ನಿರ್ಧರಿಸಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.
- pruthvi Shankar
- Updated on: Mar 30, 2026
- 6:32 pm
ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ
ಈಗಾಗಲೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟೂರ್ನಿ 2026ಕ್ಕೆ ಚಾಲನೆ ಸಿಕ್ಕಿದೆ. ಆರ್ಸಿಬಿ ಹಾಗೂ ಸನ್ ರೈಸರ್ಸ್ ಉದ್ಘಾಟನಾ ಪಂದ್ಯವಾಡಿದ್ದು, ತವರಿನ ಅಂಗಳದಲ್ಲಿ ಆರ್ಸಿಬಿ ಶುಭಾರಂಭ ಮಾಡಿದೆ. ಇನ್ನು ಕಾಲ್ತುಳಿತ ದುರಂತ ಸಂಬಂಧ ಪೊಲೀಸರು ಹಾಗೂ ಕೆಎಸ್ಸಿಯಿಂದ ಯಾವುದೇ ಗೊಂದಲಗಳು ಆಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪ್ರೇಕ್ಷಕರಿಗೆ ಆಗಮನ ಮತ್ತು ನಿರ್ಗಮನದಲ್ಲಿ ಯಾವುದೇ ನೂಕುನುಗ್ಗಲು ಆಗಿಲ್ಲ. ಆದ್ರೆ, ಕಳ್ಳರು ಮಾತ್ರ ತಮ್ಮ ಕೈಚಳ ತೋರಿಸಿದ್ದಾರೆ.
- Ramesh B Jawalagera
- Updated on: Mar 30, 2026
- 6:17 pm
KSCA, DNA, RCB ಪದಾಧಿಕಾರಿಗಳ ಸಭೆ ಅಂತ್ಯ: ಶಾಸಕರಿಗೆ 1+1 ಜೊತೆಗೆ ಮತ್ತೊಂದು IPL ಟಿಕೆಟ್ ನೀಡಲು ತೀರ್ಮಾನ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 26) ಹಬ್ಬ ಶುರುವಾಗಿದೆ. ಇನ್ನೊಂದೆಡೆ ಕರ್ನಾಟಕದ ಶಾಸಕರು ಬಜೆಟ್ ಅಧಿವೇಶನದಲ್ಲಿ ಐಪಿಎಲ್ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಐಪಿಎಲ್ ಟಿಕೆಟ್ ನೀಡುವ ಬಗ್ಗೆ ಧ್ವನಿ ಎತ್ತಿದ್ದು, ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಧ್ವನಿಗೂಡಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಮಧ್ಯೆ ಇದೀಗ KSCA, DNA, RCB ಪದಾಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ಹಾಗಾದ್ರೆ, ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು ವಿವರ ಈ ಕೆಳಗಿನಂತಿದೆ.
- Ramesh B Jawalagera
- Updated on: Mar 30, 2026
- 6:03 pm
ಮೊದಲ ಗೆಲುವನ್ನು 11 ಮಂದಿಗೆ ಅರ್ಪಿಸಿದ RCB
IPL 2026 RCB vs SRH: ಐಪಿಎಲ್ನ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 201 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ಆರ್ಸಿಬಿ ತಂಡ ಕೇವಲ 15.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
- Zahir Yusuf
- Updated on: Mar 30, 2026
- 9:11 am
IPL 2026: ಹೀನಾಯ ಸೋಲಿನ ನಡುವೆಯೂ ದಾಖಲೆ ಬರೆದ ಇಶಾನ್ ಕಿಶನ್
Ishan Kishan IPL 3000 Runs: ಆರ್ಸಿಬಿ ವಿರುದ್ಧ 80 ರನ್ ಗಳಿಸಿ ಮಿಂಚಿದ ಇಶಾನ್ ಕಿಶನ್ ಐಪಿಎಲ್ನಲ್ಲಿ 3000 ರನ್ ಪೂರೈಸಿದ್ದಾರೆ. ಕೇವಲ 2180 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಕಿಶನ್, ಕೆಎಲ್ ರಾಹುಲ್ರನ್ನು ಹಿಂದಿಕ್ಕಿ ಆರನೇ ಭಾರತೀಯ ಹಾಗೂ ನಾಲ್ಕನೇ ವಿಕೆಟ್ಕೀಪರ್ ಎನಿಸಿದ್ದಾರೆ. ಅದ್ಭುತ ಫಾರ್ಮ್ ಮುಂದುವರಿಸಿದ ಕಿಶನ್, ತಮ್ಮ ಬ್ಯಾಟಿಂಗ್ ಮೂಲಕ ಐಪಿಎಲ್ನಲ್ಲಿ ಪ್ರಮುಖ ದಾಖಲೆ ಬರೆದಿದ್ದಾರೆ.
- pruthvi Shankar
- Updated on: Mar 29, 2026
- 4:55 pm