Royal Challengers Bengaluru
Royal Challengers Bengaluru
ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಆರ್ಯಮನ್ ಬಿರ್ಲಾ
"ಈ ಸಲ ಕಪ್ ನಮ್ದೇ" ಎಂಬ ಭಾವುಕ ಘೋಷಣೆಯೊಂದಿಗೆ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಬರೋಬ್ಬರಿ ₹16,706 ಕೋಟಿ ಮೊತ್ತಕ್ಕೆ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಖರೀದಿಸಿದೆ. ಈ ಖರೀದಿ ಬೆನ್ನಲ್ಲೇ ಆರ್ಸಿಬಿ"ತಂಡದ ಹೆಸರು ಬದಲಾಗಲಿದೆ" ಎಂಬ ವದಂತಿಗಳು ಕಾಳ್ಗಿಚ್ಚಿನಂತೆ ಹರಡಿದ್ದವು.
- Zahir Yusuf
- Updated on: Sep 6, 2026
- 1:09 pm
‘ಯಾರೂ ಅವರಂತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ’; ವೈಭವ್ರನ್ನು ಹೊಗಳಿದ ಆರ್ಸಿಬಿ ನಾಯಕ
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೇವಲ 14 ನೇ ವಯಸ್ಸಿನಲ್ಲಿ ಐಪಿಎಲ್ನಲ್ಲಿ ಶತಕ ಸಿಡಿಸಿ ಸಂಚಲನ ಮೂಡಿಸಿದ್ದಾರೆ. ಆರ್ಸಿಬಿ ನಾಯಕ ರಜತ್ ಪಾಟಿದರ್ ಅವರ ವಿಶಿಷ್ಟ ಬ್ಯಾಟಿಂಗ್ ಶೈಲಿ ಮತ್ತು ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯವನ್ನು ಹೊಗಳಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ವೈಭವ್, ಭವಿಷ್ಯದ ತಾರೆಯಾಗಿ ಹೊರಹೊಮ್ಮುತ್ತಿದ್ದಾರೆ.
- pruthvi Shankar
- Updated on: Sep 4, 2026
- 10:38 pm
5 ವರ್ಷಗಳ ಬಳಿಕ ಕೃನಾಲ್ ಪಾಂಡ್ಯಗೆ ಟೀಂ ಇಂಡಿಯಾದಲ್ಲಿ ಸ್ಥಾನ
Krunal Pandya's T20 Comeback: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಕೃನಾಲ್ ಪಾಂಡ್ಯ ಟೀಂ ಇಂಡಿಯಾಗೆ ಮರಳುವ ಸಾಧ್ಯತೆ ಇದೆ. 2021 ರಿಂದ ಹೊರಗುಳಿದಿದ್ದ ಕೃನಾಲ್, ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಕ್ಷರ್ ಪಟೇಲ್ ಬದಲಿಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಅವರ ಮರುಪ್ರವೇಶ ತಂಡಕ್ಕೆ ಬಲ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
- pruthvi Shankar
- Updated on: Aug 31, 2026
- 4:12 pm
ಐಪಿಎಲ್ನ ಸಾರ್ವಕಾಲಿಕ ಪ್ಲೇಯಿಂಗ್ 11 ಹೆಸರಿಸಿದ ಆರ್ಸಿಬಿ ನಾಯಕ
Rajat Patidar All-Time IPL XI: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ರಜತ್ ಪಾಟಿದಾರ್ ತಮ್ಮ ಸಾರ್ವಕಾಲಿಕ ಐಪಿಎಲ್ ಪ್ಲೇಯಿಂಗ್ 11 ಅನ್ನು ಹೆಸರಿಸಿದ್ದಾರೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಯುಜ್ವೇಂದ್ರ ಚಾಹಲ್ ಮತ್ತು ಡೇಲ್ ಸ್ಟೇಯ್ನ್ ಸೇರಿದಂತೆ ಐವರು ಆರ್ಸಿಬಿ ಆಟಗಾರರು ಸೇರಿದ್ದಾರೆ. ಎಂಎಸ್ ಧೋನಿ, ಸೂರ್ಯಕುಮಾರ್, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಸುನಿಲ್ ನರೈನ್ ಅವರಂತಹ ಸ್ಟಾರ್ ಆಟಗಾರರಿಗೂ ಸ್ಥಾನ ನೀಡಲಾಗಿದೆ.
- pruthvi Shankar
- Updated on: Aug 25, 2026
- 9:45 pm
IPL 2027: ಆರ್ಸಿಬಿಗೆ ಇಶಾನ್ ಕಿಶನ್, ಸನ್ರೈಸರ್ಸ್ಗೆ ಜಿತೇಶ್ ಶರ್ಮಾ..!
IPL 2027 Trade Rumor: ಐಪಿಎಲ್ 2027 ಗಾಗಿ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ಬಹುದೊಡ್ಡ ಆಟಗಾರ ವಿನಿಮಯ ನಡೆಯುವ ಸಾಧ್ಯತೆಯಿದೆ. SRH ಭಾರತೀಯ ಫಿನಿಷರ್ ಜಿತೇಶ್ ಶರ್ಮಾ ಮೇಲೆ ಕಣ್ಣಿಟ್ಟಿದ್ದು, RCB ಪ್ರತಿಯಾಗಿ ಇಶಾನ್ ಕಿಶನ್ಗೆ ಬೇಡಿಕೆಯಿಟ್ಟಿದೆ. ಇಶಾನ್ ಕಿಶನ್ ಭವಿಷ್ಯದ ನಾಯಕನಾಗುವ ಸಾಧ್ಯತೆಗಳಿರುವುದರಿಂದ SRH ನಿರ್ಧಾರ ಕಷ್ಟಕರವಾಗಿದೆ. ಈ ಮೆಗಾ ಡೀಲ್ ಕುರಿತು ಚರ್ಚೆಗಳು ನಡೆಯುತ್ತಿವೆ.
- pruthvi Shankar
- Updated on: Aug 13, 2026
- 6:06 pm
RCB ಮಾಸ್ಟರ್ಮೈಂಡ್ಗಳ ರಣತಂತ್ರ ಉಲ್ಟಾ ಪಲ್ಟಾ!
ಐಪಿಎಲ್ನಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಆರ್ಸಿಬಿ (RCB) ಕೋಚಿಂಗ್ ಮೂವರ ಕೂಟ, ಇದೀಗ 'ದಿ ಹಂಡ್ರೆಡ್' ಟೂರ್ನಿಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಹೆಡ್ ಕೋಚ್ ಆ್ಯಂಡಿ ಫ್ಲವರ್, ಮೆಂಟರ್ ದಿನೇಶ್ ಕಾರ್ತಿಕ್ ಹಾಗೂ ಟೀಮ್ ಡೈರೆಕ್ಟರ್ ಮೋ ಬೋಬಾಟ್ ಅವರ ತಂತ್ರಗಾರಿಕೆಗಳು ಲಂಡನ್ ಸ್ಪಿರಿಟ್ ತಂಡವನ್ನು ಕನಿಷ್ಠ ಮುಂದಿನ ಹಂತಕ್ಕೇರಿಸುವಲ್ಲಿಯೂ ಸಂಪೂರ್ಣ ವಿಫಲವಾಗಿವೆ.
- Zahir Yusuf
- Updated on: Aug 10, 2026
- 9:51 am
IPL: ಅತ್ಯಧಿಕ ಬ್ರಾಂಡ್ ಮೌಲ್ಯ ಹೊಂದಿರುವ ತಂಡ ಆರ್ಸಿಬಿ; ಸಿಎಸ್ಕೆಗೆ ಯಾವ ಸ್ಥಾನ?
IPL brand valuation 2026: ಹೌಲಿಹಾನ್ ಲೋಕೆ 2026ರ ಐಪಿಎಲ್ ಬ್ರಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಐಪಿಎಲ್ ವ್ಯವಹಾರ ಮೌಲ್ಯ 2 ಲಕ್ಷ ಕೋಟಿ ರೂ. ತಲುಪಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು $312 ಮಿಲಿಯನ್ ಬ್ರಾಂಡ್ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದೆ, $300 ಮಿಲಿಯನ್ ದಾಟಿದ ಮೊದಲ ಐಪಿಎಲ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್, ಕೆಕೆಆರ್, ಮತ್ತು ಸಿಎಸ್ಕೆ ಕೂಡ ಗಮನಾರ್ಹ ಬ್ರಾಂಡ್ ಮೌಲ್ಯಗಳನ್ನು ಹೊಂದಿವೆ. ಐಪಿಎಲ್ ಜಾಗತಿಕವಾಗಿ ಕ್ರೀಡಾ ಕ್ಷೇತ್ರದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ.
- pruthvi Shankar
- Updated on: Jul 29, 2026
- 7:52 pm
ಆರ್ಸಿಬಿ ವೇಗಿ ಯಶ್ ದಯಾಳ್ಗೆ ಬಿಗ್ ರಿಲೀಫ್ ನೀಡಿದ ಅಲಹಾಬಾದ್ ಹೈಕೋರ್ಟ್
Cricketer Yash Dayal: ಮದುವೆಯ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಯಶ್ ದಯಾಳ್ಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದ್ದು, ಯಶ್ ದಯಾಳ್ ತಮ್ಮ ಸಂಬಂಧವು ಸಮ್ಮತಿದಾಯಕವಾಗಿತ್ತು ಮತ್ತು ಯಾವುದೇ ಮದುವೆಯ ಭರವಸೆ ಇರಲಿಲ್ಲ ಎಂದು ವಾದಿಸಿದ್ದಾರೆ. ಪ್ರಸಿದ್ಧಿ ಪಡೆದ ನಂತರ ಹಣಕ್ಕಾಗಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
- pruthvi Shankar
- Updated on: Jul 29, 2026
- 6:11 pm
ಇದ್ದಕ್ಕಿದ್ದಂತೆ ತಂಡ ಬದಲಾಯಿಸಿದ ಆರ್ಸಿಬಿ ವೇಗಿ ಯಶ್ ದಯಾಳ್
Yash Dayal team change: ಆರ್ಸಿಬಿ ಬೌಲರ್ ಯಶ್ ದಯಾಳ್ ತಮ್ಮ ದೇಶೀಯ ಕ್ರಿಕೆಟ್ ತಂಡವನ್ನು ಉತ್ತರ ಪ್ರದೇಶದಿಂದ ಛತ್ತೀಸ್ಗಢಕ್ಕೆ ಬದಲಾಯಿಸಿದ್ದಾರೆ. ಎನ್ಒಸಿ ಕೋರಿ ಅರ್ಜಿ ಸಲ್ಲಿಸಿರುವ ದಯಾಳ್, ಈಗಾಗಲೇ ಛತ್ತೀಸ್ಗಢದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಐಪಿಎಲ್ 2026ರ ಆವೃತ್ತಿಯಲ್ಲಿ ಆಡದೇ ಇರುವುದು ಮತ್ತು ಯುಪಿ ಟಿ20 ಲೀಗ್ನಲ್ಲಿ ಎದುರಾದ ಸಮಸ್ಯೆಗಳು ಈ ನಿರ್ಧಾರಕ್ಕೆ ಕಾರಣವಾಗಿವೆ ಎನ್ನಲಾಗಿದೆ.
- pruthvi Shankar
- Updated on: Jul 26, 2026
- 10:45 pm
RCB ಆಟಗಾರರಿಗೆ ಅನ್ಯಾಯ: ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ
ಸಡಗೋಪನ್ ರಮೇಶ್ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್. ತಮಿಳುನಾಡಿನ ಚೆನ್ನೈ ಮೂಲದ ಇವರು 1999 ರಿಂದ 2001 ರ ಅವಧಿಯಲ್ಲಿ ಭಾರತ ತಂಡದ 19 ಟೆಸ್ಟ್ ಹಾಗೂ 24 ಏಕದಿನ ಪಂದ್ಯಗಳನ್ನಾಡಿದ್ದರು. ಈ ವೇಳೆ ಟೆಸ್ಟ್ನಲ್ಲಿ 2 ಶತಕ ಸೇರಿದಂತೆ 1367 ಹಾಗೂ ಏಕದಿನ ಕ್ರಿಕೆಟ್ನಲ್ಲಿ 646 ರನ್ ಕಲೆಹಾಕಿದ್ದರು.
- Zahir Yusuf
- Updated on: Jul 23, 2026
- 12:40 pm
RCB ಎಡಿಷನ್ ಫೋನ್: ಏನಿದರ ವಿಶೇಷತೆ?
ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪ್ರಸ್ತುತ ತಂತ್ರಜ್ಞಾನ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಲಂಡನ್ ಮೂಲದ 'ನಥಿಂಗ್' (Nothing) ಕಂಪೆನಿ ಪರಸ್ಪರ ಕೈಜೋಡಿಸಿವೆ. 2026ರ ಐಪಿಎಲ್ ಸೀಸನ್ನಲ್ಲಿ RCB ತಂಡದ ಮುಖ್ಯ ಪ್ರಾಯೋಜಕರಾಗಿ ಕಾಣಿಸಿಕೊಂಡಿದ್ದ ನಥಿಂಗ್ ಕಂಪೆನಿ ಇದೀಗ ಆರ್ಸಿಬಿ ಅಭಿಮಾನಿಗಳಿಗಾಗಿ ವಿಶೇಷ ಎಡಿಷನ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.
- Zahir Yusuf
- Updated on: Jul 5, 2026
- 1:43 pm
RCB ಫ್ರಾಂಚೈಸಿ ಮಾರಾಟ: ಇನ್ಮುಂದೆ 2 ತಂಡಗಳಿಗೆ ಹೊಸ ಮಾಲೀಕರು!
IPL 2027, RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈ ಹಿಂದೆ ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿತ್ತು. ಬ್ರಿಟನ್ ಮೂಲದ ಡಿಯಾಜಿಯೋ ತನ್ನ ಭಾರತೀಯ ಘಟಕವಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್ಸಿಬಿ ಫ್ರಾಂಚೈಸಿಯನ್ನು ಹೊಂದಿತ್ತು. ಇದೀಗ ಡಿಯಾಜಿಯೋ ಕಂಪೆನಿಯು ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಿ, ಮದ್ಯದ ಉದ್ಯಮದ ಮೇಲೆ ಗಮನ ಹರಿಸಲು ನಿರ್ಧರಿಸಿದೆ.
- Zahir Yusuf
- Updated on: Jul 1, 2026
- 12:28 pm