Sign In

By signing in or creating an account, you agree with Associated Broadcasting Company's Terms & Conditions and Privacy Policy.

viral: ಒಂದೇ ದಿನ ಪದವಿ ಪ್ರಮಾಣಪತ್ರ ಪಡೆದ ಅಜ್ಜ-ಮೊಮ್ಮಗಳು

87 ವರ್ಷದ ವೃದ್ಧರೊಬ್ಬರು ಮೊಮ್ಮಗಳ ಜತೆಯೇ ಪದವಿಯನ್ನು ಪಡೆದ ಅಪರೂಪದ ಘಟನೆ ನಡೆದಿದೆ. ರೆನೇ ನೀರಾ ಎನ್ನುವ 87 ವರ್ಷದ ವೃದ್ಧ  ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

viral: ಒಂದೇ ದಿನ ಪದವಿ ಪ್ರಮಾಣಪತ್ರ ಪಡೆದ ಅಜ್ಜ-ಮೊಮ್ಮಗಳು
ಒಂದೇ ದಿನ ಪದವಿ ಪಡೆದ ಅಜ್ಜ, ಮೊಮ್ಮಗಳು
Follow us
TV9 Web
| Updated By: Pavitra Bhat Jigalemane

Updated on: Dec 22, 2021 | 1:27 PM

ಕಲಿಕೆಗೆ ವಯಸ್ಸಿನ ಹಂಗಿಲ್ಲ ಎನ್ನುವುಕ್ಕೆ ಹಲವು ಉದಾಹರಣೆಗಳನ್ನು ಕೇಳಿದ್ದೇವೆ. ಅಂಥಹದ್ದೆ ಒಂದು ಘಟನೆ ಯುಎಸ್​ನಲ್ಲಿ ನಡೆದಿದೆ. 87 ವರ್ಷದ ವೃದ್ಧರೊಬ್ಬರು ಮೊಮ್ಮಗಳ ಜತೆಯೇ ಪದವಿಯನ್ನು ಪಡೆದ ಅಪರೂಪದ ಘಟನೆ ನಡೆದಿದೆ. ರೆನೇ ನೀರಾ ಎನ್ನುವ 87 ವರ್ಷದ ವೃದ್ಧ  ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಮೊಮ್ಮಗಳು ಮೆಲಾನಿ ಸಲಾಜರ್​ ಸಂವಹನ ವಿಷಯದಲ್ಲಿ ಪದವಿ ಪಡೆದಿದ್ದಾಳೆ. ಪದವಿ ಪ್ರದಾನ ಸಮಾರಂಭದಲ್ಲಿ  ರೆನೇ ನೀರಾ ಗಾಲಿ ಕುರ್ಚಿಯಲ್ಲಿ ಕುಳಿತು  ಪದವಿ ಪ್ರಮಾಣಪತ್ರ ಪಡೆದಿದ್ದಾರೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಓದುವ ಹಂಬಲದಿಂದ 2016ರಲ್ಲಿ ಕಾಲೇಜು ಸೇರಿದ್ದ ರೆನೇ ನೀರಾ ಅವರಿಗೆ ಓದುವ ಹಂಬಲ ಹೆಚ್ಚಾಗಿಯೇ ಇತ್ತು. 

ಅಜ್ಜ ಮೊಮ್ಮಗಳು ಒಂದೇ ಸಮಯದಲ್ಲಿ ಪದವಿ ಪ್ರಮಾಣ ಪತ್ರ ಪಡೆದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜಗತ್ತಿನ ಹಲವೆಡಯಿಂದ ವೃದ್ಧನ ಇಚ್ಛಾ ಶಕ್ತಿಗೆ ಮೆಚ್ಚುಗೆ ವ್ಯಕ್ತವಾಗಿದೆ.  ಯುಟಿಎಸ್​ಎ ಲಿಬರಲ್​ ಮತ್ತು ಫೈನ್​ ಆರ್ಟ್​ ಕಾಲೇಜಿನಿಂದ ರೆನೇ ನೀರಾ ಪದವಿ ಪಡೆದಿದ್ದಾರೆ. ಈ ಬಗ್ಗೆ ಕಾಲೇಜ್​ ತನ್ನ ಫೇಸ್ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದು ಜಗತ್ತಿನ ಹಲವೆಡೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬಗ್ಗೆ ಅವರ ಮೊಮ್ಮಗಳು ಮಾತನಾಡಿ ರೆನೇ ನೀರಾ ಅವರು 1950ರಲ್ಲಿ ವಿಶ್ವವಿದ್ಯಾಲಯದಲ್ಲಿ ಓದುವನ್ನು ನಿಲ್ಲಿಸಿದ್ದರು. ಪತ್ನಿಯ ಮರಣದ ನಂತರ 2016ರಲ್ಲಿ  ಯುಟಿಎಸ್​ಎ ಲಿಬರಲ್​ ಮತ್ತು ಫೈನ್​ ಆರ್ಟ್​ ಕಾಲೇಜಿಗೆ ಸೇರಿಕೊಂಡರು ಆಗ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಓದುವ ಆಸಕ್ತಿ ನಮಗೂ ಸ್ಪೂರ್ತಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ:

ಪುಟ್ಟ ಬಾಲಕಿಯೊಂದಿಗೆ ವ್ಯಾಯಾಮ ಮಾಡಿದ ನಾಯಿ; ವಿಡಿಯೋ ವೈರಲ್

ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ