AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘನ್​ನಿಂದ ಪಾರಾಗಿ ಬೆಲ್ಜಿಯಂನ ವಿಮಾನ ನಿಲ್ದಾಣದಲ್ಲಿ ಇಳಿದಾಗ ಪುಟ್ಟ ಬಾಲಕಿಯ ಸಂಭ್ರಮ ನೋಡಿ

ಬೆಲ್ಜಿಯಂನ ವಿಮಾನ ನಿಲ್ದಾಣವೊಂದರಲ್ಲಿ ಅಫ್ಘಾನಿಸ್ತಾನದಿಂದ ಪಾರಾಗಿ ಬಂದ ಪುಟ್ಟ ಬಾಲಕಿಯೊಬ್ಬಳು ನಗುತ್ತಾ, ಕುಣಿಯುತ್ತಾ ಕುಟುಂಬದೊಂದಿಗೆ ಹೆಜ್ಜೆ ಹಾಕಿರುವುದು ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಬೆಲ್ಜಿಯಂನ ಮಾಜಿ ಪ್ರಧಾನಿ ಸೇರಿದಂತೆ ಹಲವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಫ್ಘನ್​ನಿಂದ ಪಾರಾಗಿ ಬೆಲ್ಜಿಯಂನ ವಿಮಾನ ನಿಲ್ದಾಣದಲ್ಲಿ ಇಳಿದಾಗ ಪುಟ್ಟ ಬಾಲಕಿಯ ಸಂಭ್ರಮ ನೋಡಿ
ಸಂತಸದಿಂದ ತೆರಳುತ್ತಿರುವ ಪುಟ್ಟ ಬಾಲಕಿ (Credits: Reuters)
Follow us
TV9 Web
| Updated By: shivaprasad.hs

Updated on:Aug 28, 2021 | 1:03 PM

ಅಫ್ಘಾನಿಸ್ತಾನದ ಭೀಕರ ದೃಶ್ಯಗಳು ವಿಶ್ವದಾದ್ಯಂತ ಎಲ್ಲರ ಮನಕಲಕಿವೆ. ಜೀವವೊಂದು ಉಳಿದರೆ ಸಾಕು, ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ಕಾರಣದಿಂದ ಬಹಳಷ್ಟು ಅಫ್ಘನ್ ನಾಗರಿಕರು ದೇಶವನ್ನು ತೊರೆದಿದ್ದಾರೆ. ಬಹಳಷ್ಟು ದೇಶಗಳು ಅವರನ್ನು ಸ್ವಾಗತಿಸಿವೆ. ಬೆಲ್ಜಿಯಂ ಕೂಡಾ ಅಫ್ಘನ್ ನಾಗರಿಕರನ್ ಸ್ವಾಗತಿಸಿದ್ದು, ಬೆಲ್ಜಿಯಂ ಏರ್​ಪೋರ್ಟ್​ನಲ್ಲಿ ಇಳಿದ ಅಫ್ಘನ್ ಕುಟುಂಬವೊದರ ಚಿತ್ರ ಈಗ ವೈರಲ್ ಅಗಿದೆ. ಇಬ್ಬರು ಮಕ್ಕಳು ಹಾಗೂ ಪೋಷಕರನ್ನೊಳಗೊಂಡ ಈ ಚಿತ್ರದಲ್ಲಿ, ಹೊಸ ನೆಲಕ್ಕೆ ಕಾಲಿಟ್ಟ ಖುಷಿಯಲ್ಲಿ ಮಗುವೊಂದು ಕುಣಿಯುತ್ತಾ ಸಾಗುತ್ತಿರುವ ಚಿತ್ರ ಬೆಲ್ಜಿಯಂ ರಾಜಕಾರಣಿಗಳಾದಿಯಾಗಿ ಎಲ್ಲರ ಮನಗೆದ್ದಿದ್ದು, ವೈರಲ್ ಆಗಿದೆ.

ರಾಯ್​ಟರ್ಸ್ ಸಂಸ್ಥೆಯ ಛಾಯಾಗ್ರಾಹಕ ಜೋಹಾನ್ನ ಗೆರೋನ್ ಈ ಚಿತ್ರವನ್ನು ಮೆಲ್ಸ್​ಬ್ರೊಯೇಕ್ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿದ್ದಾರೆ. ಬೆಲ್ಜಿಯಂನ ಮಾಜಿ ಪ್ರಧಾನಿ ಗಾಯ್ ವರ್ಹೊಸ್ಟಾದತ್ ಈ ಚಿತ್ರವನ್ನು ಹಂಚಿಕೊಂಡಿದ್ದು, ‘ನಿರಾಶ್ರಿತರನ್ನು ಸಂರಕ್ಷಿಸಿದಾಗ ಕಾಣಸಿಗುವ ಚಿತ್ರವಿದು. ಪುಟ್ಟ ಬಾಲೆಗೆ ಬೆಲ್ಜಿಯಂಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ.

ಪ್ರಸ್ತುತ ಈ ಚಿತ್ರ ಟ್ವಿಟರ್​ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಭವಿಷ್ಯದ ಕುರಿತು ಆಶಾವಾದವನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿತ್ರವನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕ ಜೋಹಾನ್ನ ಅವರನ್ನು ಶ್ಲಾಘಿಸಿರುವ ನೆಟ್ಟಿಗರು, ಇದು ವರ್ಷದ ಚಿತ್ರ ಎಂದು ಕೊಂಡಾಡಿದ್ದಾರೆ.

ಅಫ್ಘನ್ನರನ್ನು ನಿರಾಶ್ರಿತರು ಎಂದು ಕರೆಯುವುದಕ್ಕಿಂತ ನಮ್ಮ ಸಹವರ್ತಿಗಳೆಂದು ಕರೆಯುವುದು ಸೂಕ್ತಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅಮೇರಿಕಾದ ನ್ಯಾಟೋ ಹೋರಾಟಕ್ಕೆ ಅಫ್ಘನ್ ನಾಗರಿಕರೂ ಬೆಂಬಲ ಸೂಚಿಸಿದ್ದರು. ಆದ್ದರಿಂದ ಈ ಸಂದರ್ಭದಲ್ಲಿ ಅವರನ್ನು ರಕ್ಷಿಸುವುದು ಎಲ್ಲರ ಕರ್ತವ್ಯ ಎಂದು ಟ್ವಿಟಟರ್​ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಬೆಲ್ಜಿಯಂ ಇದುವರೆಗೆ ಒಟ್ಟು 1,400 ಜನರನ್ನು ಕಾಬೂಲ್​ನಿಂದ ಸ್ಥಳಾಂತರಿಸಿದೆ. ಬುಧವಾರದಂದು ಐದು ವಿಮಾನಗಳು ಕಾಬೂಲ್​ ಹಾಗೂ ಇಸ್ಲಮಾಬಾದ್​ನಿಂದ ಸಂಚರಿಸಿದ್ದವು. ಪ್ರಸ್ತುತ ತಾಲಿಬಾನಿಗಳು ದೇಶದ ಜನರಿಗೆ ವಿಮಾನ ನಿಲ್ದಾಣಕ್ಕೆ ತೆರಳಲು ನಿರ್ಬಂಧ ವಿಧಿಸುತ್ತಿರುವುದರಿಂದ ಕಾರ್ಯಾಚರಣೆಗೆ ಹಿನ್ನೆಡೆಯಾಗಿದೆ ಎಂದು ಮೂಲಗಳು ತಿಳಿಸಿದೆ.

ಇದನ್ನೂ ಓದಿ:

ಶಸ್ತ್ರಾಸ್ತ್ರ, ಮದ್ದುಗುಂಡು, ಸೇನಾ ವಾಹನವನ್ನು ಹಸ್ತಾಂತರಿಸದಿದ್ದರೆ ಕಠಿಣ ಶಿಕ್ಷೆ ಕೊಡುತ್ತೇವೆ: ಆಫ್ಘನ್​ ಸೇನೆಗೆ ತಾಲಿಬಾನ್​ ಎಚ್ಚರಿಕೆ

ಐಎಸ್​ಕೆಪಿ ಜತೆ ನಂಟು ಹೊಂದಿರುವ 14 ಕೇರಳಿಗರು ತುರ್ಕಮೆನಿಸ್ತಾನ್ ರಾಯಭಾರ ಕಚೇರಿ ಹೊರಗೆ ನಡೆಸಲುದ್ದೇಶಿಸಿದ ಬಾಂಬ್ ಸ್ಫೋಟ ಸಂಚು ವಿಫಲ

(A happy Afghan girl in Belgium airport tarmac gets netizens attention)

Published On - 1:02 pm, Sat, 28 August 21

ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ