AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳನ್ನು ಸವಾರಿಗೆ ಕರೆದೊಯ್ಯುತ್ತಿರುವ ತಾಯಿ ಮುಳ್ಳುಹಂದಿ; ಮುದ್ದಾದ ವಿಡಿಯೊ ನೋಡಿ

ತಾಯಿ ಮುಳ್ಳು ಹಂದಿಯೊಂದು ತನ್ನ ಎರಡು ಮರಿಗಳನ್ನು ಕರೆದುಕೊಂಡು ಸುತ್ತಾಟಕ್ಕೆ ಹೊರಟಿರುವ ವಿಡಿಯೊ ನೆಟ್ಟಿಗರ ಮನ ಗೆದ್ದಿದೆ. ಆ ವಿಡಿಯೊ ಇಲ್ಲಿದೆ.

ಮಕ್ಕಳನ್ನು ಸವಾರಿಗೆ ಕರೆದೊಯ್ಯುತ್ತಿರುವ ತಾಯಿ ಮುಳ್ಳುಹಂದಿ; ಮುದ್ದಾದ ವಿಡಿಯೊ ನೋಡಿ
ತನ್ನ ಮರಿಯೊಂದಿಗೆ ಮುಳ್ಳುಹಂದಿ (ಸಾಂದರ್ಭಿಕ ಚಿತ್ರ/ Credits: Nat Geo Kids)
TV9 Web
| Edited By: |

Updated on: Aug 28, 2021 | 2:48 PM

Share

ಅಂತರ್ಜಾಲದಲ್ಲಿ ಪ್ರಾಣಿ ಪ್ರಪಂಚದ ಮುದ್ದಾದ ವಿಡಿಯೊಗಳು ಸಾಕಷ್ಟು ಕಾಣಲು ಸಿಗುತ್ತವೆ. ನೋಡಲು, ಕೇಳಲು ಭಯವಾಗುವ ಪ್ರಾಣಿಗಳು ತಮ್ಮ ಮರಿಗಳೊಂದಿಗೆ ಆಟವಾಡುತ್ತಿರುವ ದೃಶ್ಯಗಳನ್ನು ನೋಡಿದಾಗ ಎಂಥವರಿಗಾದರೂ ಮುದ್ದು ಮಾಡೋಣ ಅಂತನ್ನಿಸುತ್ತದೆ. ಅಂಥದ್ದೇ ಒಂದು ವಿಡಿಯೊದಲ್ಲಿ, ಮುಳ್ಳು ಹಂದಿಯು ತನ್ನ ಎರಡು ಮರಿಗಳೊಂದಿಗೆ ಸವಾರಿ ಹೊರಟಿದೆ. ಎರಡು ಮುದ್ದಾದ ಮರಿಗಳು ಲಗುಬಗೆಯಿಂದ ಅಮ್ಮನನ್ನು ಹಿಂಬಾಲಿಸುತ್ತಾ, ಅಮ್ಮ ನಿಂತಾಗ ಹಾಲು ಕುಡಿಯುತ್ತಾ ತೆರಳುತ್ತಿರುವ ದೃಶ್ಯ ವೈರಲ್ ಆಗಿದ್ದು ನೆಟ್ಟಿಗರ ಮನಗೆದ್ದಿದೆ.

‘ತಾಯಿ ಮುಳ್ಳು ಹಂದಿಯು ತನ್ನ ಮರಿಗಳನ್ನು ಹೊಸ ಯಾತ್ರೆಗೆ ಕರೆದೊಯ್ಯುತ್ತಿರುವುದು’ ಎಂಬರ್ಥದಲ್ಲಿ ಕ್ಯಾಪ್ಶನ್ ನೀಡಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ತಾಯಿ- ಮಕ್ಕಳ ಈ ದೃಶ್ಯ ಪುಟ್ಟದಾಗಿದ್ದರೂ ಕೂಡಾ, ಮತ್ತೆ ಮತ್ತೆ ನೋಡುವಂತಿದೆ.

ತಾಯಿ ಮುಳ್ಳುಹಂದಿ ಹಾಗೂ ಅದರ ಎರಡು ಮರಿಗಳ ಸವಾರಿ:

ಎರಡು ದಿನಗಳ ಕೆಳಗೆ ಹಂಚಿಕೊಳ್ಳಲಾದ ಈ ವಿಡಿಯೊ ನೆಟ್ಟಿಗರ ಮನಗೆದ್ದಿದ್ದು, ಒಳ್ಳೆಯ ವೀಕ್ಷಣೆ ಗಳಿಸುತ್ತಿದೆ. ವಿಧವಿಧವಾದ ಕಾಮೆಂಟ್​ಗಳಿಂದ ನೆಟ್ಟಿಗರು ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ‘ಇದುವರೆಗೆ ಮುಳ್ಳುಹಂದಿಯ ಮರಿಗಳನ್ನು ನೋಡೇ ಇರಲಿಲ್ಲ. ಎಷ್ಟು ಮುದ್ದಾಗಿವೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, ‘ಎಂತಹಾ ಅದ್ಭುತವಾದ ದೃಶ್ಯವಿದು’ ಎಂದು ಕಾಮೆಂಟ್ ಮಾಡಿದ್ದಾರೆ.

ಅಂಥದ್ದೇ ಮತ್ತೊಂದು ಮುದ್ದಾದ ವಿಡಿಯೊ ಇಲ್ಲಿದೆ:

ಮುಳ್ಳುಹಂದಿಗಳಲ್ಲೂ ಹಲವಾರು ವಿಧಗಳಿದ್ದು, ಅವುಗಳ ಬೆನ್ನಿನ ಭಾಗದಲ್ಲಿ ಮುಳ್ಳಿನ ರಚನೆಯಿರುವುದರಿಂದ ಮುಳ್ಳು ಹಂದಿ ಎಂದು ಕರೆಯುತ್ತಾರೆ.

ಇದನ್ನೂ ಓದಿ:

ಯಾರಿಗೂ ತಲೆಕೆಡಿಸಿಕೊಳ್ಳದೆ ವಿಮಾನದೊಳಗೆ ಸಿಗರೇಟು ಸೇದಿದ ಮಹಿಳೆ; ಗಾಬರಿ ಬಿದ್ದ ಸಹ ಪ್ರಯಾಣಿಕರು ಮಾಡಿದ್ದೇನು?

ಜಲ್​​ಗಾಂವ್​​ನಲ್ಲಿರುವ ಬಿಜೆಪಿ ಕಚೇರಿಯೊಳಗೆ ಕೋಳಿಗಳನ್ನು ಬಿಟ್ಟ ಶಿವಸೇನಾ; ಬಿಜೆಪಿ ಕಾರ್ಯಕರ್ತರಿಂದ ಶುದ್ಧೀಕರಣ

(Porcupine Mommy takes Her two Babies Out on an Adventure watch video)

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ