AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲ್​​ಗಾಂವ್​​ನಲ್ಲಿರುವ ಬಿಜೆಪಿ ಕಚೇರಿಯೊಳಗೆ ಕೋಳಿಗಳನ್ನು ಬಿಟ್ಟ ಶಿವಸೇನಾ; ಬಿಜೆಪಿ ಕಾರ್ಯಕರ್ತರಿಂದ ಶುದ್ಧೀಕರಣ

ಎಂಎಸ್‌ಎಂಇಗಳ ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬುಧವಾರ ಬಂಧಿಸಿದ ನಂತರ ಶಿವಸೇನಾ ಮತ್ತು ಬಿಜೆಪಿ ಕಾರ್ಯಕರ್ತರು ರಾಜ್ಯದಾದ್ಯಂತ ಹಲವು ಕಡೆ ಸಂಘರ್ಷವುಂಟಾಗಿದೆ. ಪ್ರತಿಭಟನೆಗಳನ್ನು ನಡೆದಿದ್ದು ಉಭಯಪಕ್ಷಗಳು ಪರಸ್ಪರ ಲೇವಡಿಯ ಪೋಸ್ಟರ್ ಹಾಕಿದ್ದರು.

ಜಲ್​​ಗಾಂವ್​​ನಲ್ಲಿರುವ ಬಿಜೆಪಿ ಕಚೇರಿಯೊಳಗೆ ಕೋಳಿಗಳನ್ನು ಬಿಟ್ಟ ಶಿವಸೇನಾ; ಬಿಜೆಪಿ ಕಾರ್ಯಕರ್ತರಿಂದ ಶುದ್ಧೀಕರಣ
ಶಿವಸೇನಾ ರಾಣೆ ವಿರುದ್ಧ ಹಾಕಿದ ಪೋಸ್ಟರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 28, 2021 | 1:45 PM

ಮುಂಬೈ: ಶಿವಸೇನಾ ಕಾರ್ಯಕರ್ತರು ಜಲ್​​ಗಾಂವ್ ಜಿಲ್ಲೆಯಲ್ಲಿರುವ ಬಿಜೆಪಿ ಕಚೇರಿಯೊಳಗೆ ಕೋಳಿಗಳನ್ನು ಬಿಟ್ಟ ನಂತರ ಬಿಜೆಪಿ ಕಾರ್ಯಕರ್ತರ ಗುಂಪೊಂದು ಅರ್ಚಕರನ್ನು ಕರೆಸಿ ಕಚೇರಿಯಲ್ಲಿ ಶನಿವಾರ “ಶುದ್ಧೀಕರಣ” ಸಮಾರಂಭವನ್ನು ನಡೆಸಿತು. ಶಿವಸೇನಾದ ಕ್ರಮವು ಪಕ್ಷದ ಭಾವನೆಗಳನ್ನು ಘಾಸಿಗೊಳಿಸಿದೆ. ಶಿವಸೇನಾ ಸದಸ್ಯರು ನಮ್ಮ ಪವಿತ್ರ ಶ್ರಾವಣ ಮಾಸದಲ್ಲಿ ನಮ್ಮ ಕೋಳಿಗಳನ್ನು ಬಿಟ್ಟಿದ್ದು ಇದು ಆವರಣವನ್ನು ಕಲುಷಿತಗೊಳಿಸಿದೆ ಬಿಜೆಪಿ ಕಾರ್ಯಕರ್ತ ದೀಪಕ್ ಸೂರ್ಯವಂಶಿ ಹೇಳಿದ್ದಾರೆ. ಶುದ್ಧೀಕರಣ ಸಮಾರಂಭವು ಯಜ್ಞವನ್ನೊಳಗೊಂಡಿದೆ.

ಎಂಎಸ್‌ಎಂಇಗಳ ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬುಧವಾರ ಬಂಧಿಸಿದ ನಂತರ ಶಿವಸೇನಾ ಮತ್ತು ಬಿಜೆಪಿ ಕಾರ್ಯಕರ್ತರು ರಾಜ್ಯದಾದ್ಯಂತ ಹಲವು ಕಡೆ ಸಂಘರ್ಷವುಂಟಾಗಿದೆ. ಪ್ರತಿಭಟನೆಗಳನ್ನು ನಡೆದಿದ್ದು ಉಭಯಪಕ್ಷಗಳು ಪರಸ್ಪರ ಲೇವಡಿಯ ಪೋಸ್ಟರ್ ಹಾಕಿದ್ದರು. ಸೇನೆಯ ಕಾರ್ಯಕರ್ತರು ರಾಣೆಯನ್ನು “ಕೊಂಬ್ಡಿ ಚೋರ್” ಅಥವಾ ಕೋಳಿ ಕಳ್ಳ ಎಂದು ಕರೆಯುವ ಬ್ಯಾನರ್‌ಗಳನ್ನು ಹಾಕಿದ್ದು ಪುಣೆ ಮತ್ತು ಜಲಗಾಂವ್‌ನ ಬಿಜೆಪಿ ಕಚೇರಿಗಳಲ್ಲಿ ಕೋಳಿಗಳನ್ನು ಬಿಟ್ಟಿದ್ದರು.

ಈ ವಾರದ ಆರಂಭದಲ್ಲಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿರುವ ಬಾಲ್ ಠಾಕ್ರೆ ರಾಷ್ಟ್ರೀಯ ಸ್ಮಾರಕಕ್ಕೆ ಜನ್ ಆಶೀರ್ವಾದ ಯಾತ್ರೆಯಲ್ಲಿ ಗೌರವ ಸಲ್ಲಿಸಲು ರಾಣೆ ಭೇಟಿ ನೀಡಿದ ನಂತರ ಶಿವ ಸೈನಿಕರು ಅತೃಪ್ತರಾಗಿದ್ದರು. ಭೇಟಿಯ ಸ್ವಲ್ಪ ಸಮಯದ ನಂತರ, ಸೇನಾ ಸದಸ್ಯರು ಗೋಮೂತ್ರ ಬಳಸಿ ಆವರಣವನ್ನು ‘ಶುದ್ಧೀಕರಿಸಿದರು’. ಶಿವಸೇನೆಯಿಂದ ಹೊರಹಾಕಲ್ಪಟ್ಟ ರಾಣೆ ಪಕ್ಷಕ್ಕೆ ಮತ್ತು ಅದರ ಉಸ್ತುವಾರಿ ಬಾಲ್ ಠಾಕ್ರೆಗೆ ನೋವುಂಟು ಮಾಡಿದ್ದರಿಂದ ಸ್ಮಾರಕಕ್ಕೆ ಭೇಟಿ ನೀಡಲು ನೈತಿಕ ಹಕ್ಕಿಲ್ಲ ಎಂದು ಶಿವಸೇನಾ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಸಚಿವ ನಾರಾಯಣ್ ರಾಣೆ ಜವಾಬ್ದಾರಿಯುತವಾಗಿ ವರ್ತಿಸಬೇಕಿತ್ತು: ಅಜಿತ್ ಪವಾರ್

ಇದನ್ನೂ ಓದಿ: ‘ನಾನು ಉದ್ಧವ್​ ಠಾಕ್ರೆ ಬಗ್ಗೆ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ’-ತಮ್ಮ ಮಾತಿಗೆ ಬದ್ಧವಾಗಿ ನಿಂತ ನಾರಾಯಣ್ ರಾಣೆ​

(BJP workers performed a shuddikaran ceremony at the party office in Jalgaon after Shiv Sena activists released chickens there)

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ