AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ದೆಯಲ್ಲಿ ಆನ್​ಲೈನ್​ ಶಾಪಿಂಗ್​ ಮಾಡಿ 3 ಲಕ್ಷ ರೂ. ಸಾಲದಲ್ಲಿ ಸಿಲುಕಿದ ಮಹಿಳೆ

ಮಹಿಳೆಯೊಬ್ಬರು ನಿದ್ರೆಯಲ್ಲಿರುವಾಗ ಆನ್​ಲೈನ್​ ಶಾಪಿಂಗ್​ ಮಾಡಿ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಆಕೆ ಒಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ವೈದ್ಯರಿಂದ ತಿಳಿದುಬಂದಿದೆ.

ನಿದ್ದೆಯಲ್ಲಿ ಆನ್​ಲೈನ್​ ಶಾಪಿಂಗ್​ ಮಾಡಿ 3 ಲಕ್ಷ ರೂ. ಸಾಲದಲ್ಲಿ ಸಿಲುಕಿದ ಮಹಿಳೆ
ನಯನಾ ರಾಜೀವ್
|

Updated on: May 30, 2024 | 10:05 AM

Share

ಶಾಪಿಂಗ್​ ಎಂದರೆ ಹೆಣ್ಣುಮಕ್ಕಳು ನಿದ್ದೆಗಣ್ಣಲ್ಲೂ ಎದ್ದು ಬರ್ತಾರೆ ಎಂಬ ಮಾತು ಸುಮ್ಮನೆ ಹೇಳಿಲ್ಲ, ಮಹಿಳೆಯೊಬ್ಬರು ನಿದ್ದೆಯಲ್ಲೇ ಆನ್​ಲೈನ್ ಶಾಪಿಂಗ್ ಮಾಡಿ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.

ಬ್ರಿಟನ್​ನಲ್ಲಿ ಈ ಘಟನೆ ನಡೆದಿದೆ, ಆಕೆ ನಿದ್ದೆಗಣ್ಣಲ್ಲಿ ಅಲ್ಲ ಬದಲಾಗಿ ನಿದ್ರೆಯಲ್ಲೇ ಕಳೆದುಕೊಂಡಿದ್ದಾರೆ, ನಿದ್ದೆಗಣ್ಣು ಎಂದರೆ ಅರೆಪ್ರಜ್ಞಾವಸ್ಥೆ ಇರುತ್ತದೆ, ಆದರೆ ಈಕೆಗೆ ಪ್ರಜ್ಞೆ ಇಲ್ಲದಿದ್ದರೂ ಹಣ ಕಳೆದುಕೊಂಡಿದ್ದಾಳೆ.

ಮಹಿಳೆಯೊಬ್ಬಳು ರಾತ್ರಿ ಮಲಗಿದ್ದಾಗ 3 ಲಕ್ಷ ರೂ. ಮೌಲ್ಯದ ಆನ್​ಲೈನ್ ಶಾಪಿಂಗ್ ಮಾಡಿದ್ದಾರೆ. ಬೆಳಗ್ಗೆ ಈ ವಿಚಾರ ತಿಳಿದ ಆಕೆ ತಕ್ಷಣವೇ ವೈದ್ಯರ ಬಳಿ ಹೋಗಿದ್ದಾಳೆ. ಆದರೆ ಆಕೆಗಿದ್ದಿದ್ದು ಪ್ಯಾರಾಸೋಮ್ನಿಯಾ ಎಂಬ ಅಪರೂಪದ ಕಾಯಿಲೆ. ಇಬೇನಿಂದ ಬಾಸ್ಕೆಟ್​ ಬಾಲ್​ ಬೇಕಾದ ವಸ್ತುಗಳು, ಸಿಹಿ ತಿಂಡಿಗಳು, ಪುಸ್ತಕಗಳು, ಮನೆಗೆ ಬೇಕಾದ ಸಾಕಷ್ಟು ವಸ್ತುಗಳನ್ನು ತನಗರಿವಿಲ್ಲದಂತೆಯೇ ಖರೀದಿಸಿದ್ದಳು.

ಆದರೆ ಅದನ್ನು ಹಿಂದಿರುಗಿಸುವಂತಿರಲಿಲ್ಲ ಯಾಕೆಂದರೆ ಮಕ್ಕಳು ಅದನ್ನು ತೆಗೆದುಕೊಂಡು ಆಗಲೇ ಆಟ ಶುರು ಮಾಡಿದ್ದರು. ಅವೆಲ್ಲವೂ ಮಕ್ಕಳ ಮಹುದಿನಗಳ ಬೇಡಿಕೆಯೂ ಆಗಿತ್ತು.

ಮತ್ತಷ್ಟು ಓದಿ: Video: ಅಯ್ಯೋ ಗರ್ಲ್‌ಫ್ರೆಂಡ್‌ ಅಲ್ಲ ಕ್ರಶ್‌ ಅಷ್ಟೆ; ತನ್ನ ಅಜ್ಜಿಗೆ ಕ್ರಶ್‌ ಪದದ ಅರ್ಥದ ಬಗ್ಗೆ ಮುದ್ದಾಗಿ ವಿವರಿಸಿದ ಬಾಲಕ

ಇದಿಷ್ಟಕ್ಕೇ ಮುಗಿದಿಲ್ಲ, ಮಹಿಳೆ ಕೆಲ್ಲಿ ಒಂದು ದಿನ ಸ್ಪ್ಯಾಮ್​ ಸಂದೇಶವನ್ನು ಸ್ವೀಕರಿಸಿದ್ದರು, ಈ ಫಾರ್ಮ್​ ಭರ್ತಿ ಮಾಡಿ ಕಳುಹಿಸಿದರೆ ಸರ್ಕಾರ ನಿಮಗೆ 40 ಸಾವಿರ ರೂ. ಕೊಡುತ್ತೆ ಎಂದು ಅದರಲ್ಲಿ ಬರೆದಿತ್ತು, ಆಕೆ ಬೇರೇನೂ ಯೋಚನೆ ಮಾಡದೆ ಅದನ್ನು ಫಿಲ್ ಮಾಡಿ ಕಳುಹಿಸಿದ ಕೂಡಲೇ ಸೈಬರ್ ಕ್ರಿಮಿನಲ್​ಗಳು ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಖಾಲಿ ಮಾಡಿದ್ದರು. ಇದೆಲ್ಲವೂ ಆಕೆ ಮಲಗಿರುವ ಸಮಯದಲ್ಲೇ ಆಗಿತ್ತು.

ತಕ್ಷಣವೇ ಸೈಬರ್​ ಕ್ರೈಂ ಅಧಿಕಾರಿಗಳನ್ನು ಭೇಟಿಯಾಗಿ ಅಂತೂ ಆಕೆಯ ಹಣ ಮರಳಿ ಬಂದಿತ್ತು. ಆಕೆಗಿರುವುದು ಪ್ಯಾರಾಸೋಮ್ನಿಯಾ ಕಾಯಿಲೆ, ಆಕೆಯ ಮಲಗಿರುವಾಗಲೂ ಮೆದುಳು ಭಾಗಶಃ ಎಚ್ಚರದಲ್ಲೇ ಇರುತ್ತದೆ. ಆಕೆಗೆ ಹೆರಿಗೆಯಾದ ಸ್ವಲ್ಪ ಸಮಯದ ಬಳಿಕ ಆಕೆ ನಿದ್ದೆಗಣ್ಣಲ್ಲಿ ಓಡಾಡಲು ಆರಂಭಿಸಿದ್ದಳು ಇದು ಸಾಮಾನ್ಯವೆಂದುಕೊಂಡರು ಆದರೆ ದಿನದಿಂದ ದಿನಕ್ಕೆ ಕಾಯಿಲೆ ಹೆಚ್ಚಾಗಿ ಈಗ ಈ ಹಂತಕ್ಕೆ ಬಂದು ತಲುಪಿದೆ. ಮಹಿಳೆ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ