AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣವನ್ನು ಲೆಕ್ಕಿಸದೆ ರೈಲ್ವೇ ಹಳಿಗಳ ಮಧ್ಯೆ ಮಲಗಿದ ಮಹಿಳೆ; ಹುಚ್ಚು ಸಾಹಸವೆಂದ ನೆಟ್ಟಿಗರು

ಏಪ್ರಿಲ್ 12 ರಂದು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಸುಮಾರು 94,000 ವೀಕ್ಷಣೆ ಪಡೆದಿದ್ದು, ಸುಮಾರು 3,300 ಲೈಕ್‌ಗಳೊಂದಿಗೆ ವೈರಲ್ ಆಗುತ್ತಿದೆ.

ಪ್ರಾಣವನ್ನು ಲೆಕ್ಕಿಸದೆ ರೈಲ್ವೇ ಹಳಿಗಳ ಮಧ್ಯೆ ಮಲಗಿದ ಮಹಿಳೆ; ಹುಚ್ಚು ಸಾಹಸವೆಂದ ನೆಟ್ಟಿಗರು
ರೈಲ್ವೇ ಹಳಿಗಳ ಮಧ್ಯೆ ಮಲಗಿದ ಮಹಿಳೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 14, 2022 | 8:38 PM

ಹರಿಯಾಣ: ನಾವು ನೀವು ರೈಲ್ವೆ ಹಳಿಯನ್ನು ದಾಟುತ್ತಿರುವಾಗ ಒಂದು ವೇಳೆ ಅದೇ ಮಾರ್ಗದಲ್ಲಿ ರೈಲು (Train) ಬಂದರೇ ನಾವೇನು ಮಾಡುತ್ತೇವೆ? ಸುರಕ್ಷಿತವಾಗಿ ಬದಿಗೆ ಓಡಿ ಹೋಗಿ ನಮ್ಮ ಪ್ರಾಣವನ್ನು ಉಳಿಸಿಕೊಳ್ಳುತ್ತೇವೆ. ಆದರೆ ಇಲ್ಲೊಬ್ಬಳು ಮಹಿಳೆ ರೈಲು ಬರುತ್ತಿರುವುದು ಗೊತ್ತಿದ್ದರೂ ರೈಲಿನ ಕೆಳಗೆ ಮಲಗಿರುವಂತಹ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋವನ್ನು ನೋಡಿದ ನೆಟ್ಟಿಗರು ಇದು ಹುಚ್ಚು ಸಾಹಸವೆನ್ನುತ್ತಿದ್ದಾರೆ. ಇದು ಹರಿಯಾಣದ ರೋಹ್ಟಕ್‌ ವಿಡಿಯೋ ಎನ್ನಲಾಗುತ್ತಿದ್ದು, ಏಪ್ರಿಲ್ 12 ರಂದು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಸುಮಾರು 94,000 ವೀಕ್ಷಣೆ ಪಡೆದಿದ್ದು, ಸುಮಾರು 3,300 ಲೈಕ್‌ಗಳೊಂದಿಗೆ ವೈರಲ್ ಆಗುತ್ತಿದೆ.

ಮಹಿಳೆಯೊಂದಿಗೆ ಮಾತನಾಡುತ್ತಿರುವುದನ್ನು ಆಲಿಸಿದ ಪುರುಷನೊಬ್ಬ ನಿಲ್ದಾಣದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವಂತೆ ಕಾಣುತ್ತದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ, ಗೂಡ್ಸ್ ರೈಲು ವೇಗದಲ್ಲಿ ಹಾದುಹೋಗುವುದನ್ನು ನಾವು ನೋಡುತ್ತೇವೆ. ರೈಲು ಹೋದ ನಂತರ, ಕೆಂಪು ಕುರ್ತಾ ಮತ್ತು ಮುಖಕ್ಕೆ ಸ್ಕಾರ್ಫ್ ಧರಿಸಿರುವ ಮಹಿಳೆಯನ್ನು ನಾವು ನೋಡುತ್ತೇವೆ. ರೈಲು ತನ್ನ ಮೇಲೆ ಹಾದು ಹೋಗುತ್ತಿರುವುದನ್ನು ಕಂಡು ಯಾವುದೇ ಭಯವಿಲ್ಲದೆ ಮಹಿಳೆ ರೈಲ್ವೆ ಹಳಿಗಳ ಮೇಲೆ ಮಲಗಿದ್ದಾಳೆ. ರೈಲು ಹೊರಟ ತಕ್ಷಣ, ಮಹಿಳೆ ಹಳಿಗಳ ಮೇಲೆ ಎದ್ದು ಕುಳಿತುಕೊಳ್ಳುತ್ತಾಳೆ. ಸಾಮಾನ್ಯವಾಗಿ ಏನೂ ಆಗಿಲ್ಲ ಎಂಬಂತೆ ಯಾರೊಂದಿಗೊ ಫೋನ್​ನಲ್ಲಿ ಮಾತನಾಡುತ್ತ ಟ್ರ್ಯಾಕ್‌ಗಳಿಂದ ನಡೆದು ಪ್ಲಾಟ್‌ಫಾರ್ಮ್‌ಗೆ ಬರುತ್ತಾಳೆ.

ಫೋನ್​ನಲ್ಲಿ ಹರಟೆ ಹೊಡೆಯುವುದು ಹೆಚ್ಚು ಮುಖ್ಯ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ. ಇದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಅವರಲ್ಲಿ ಹಲವರು ವಿಡಿಯೋವನ್ನು ಉಲ್ಲಾಸಕರವಾಗಿ ನೋಡಿದರೆ, ಮತ್ತೆ ಕೆಲ ಟ್ವಿಟ್ಟರ್ ಬಳಕೆದಾರರು ಮಹಿಳೆ ಪ್ರತಿದಿನ ಹೀಗೆಯೇ ವರ್ತಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

Viral Video: ವಧುವಿನ ವೇಷದಲ್ಲಿ ಕಚಾ ಬಾದಮ್ ಹಾಡು ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾಣು ಮಂಡಲ್

ಮಿಯಾಮಿಯಲ್ಲಿ ಅಕ್ವೇರಿಯಂ ಪ್ರದರ್ಶನದ ವೇಳೆ ತರಬೇತುದಾರನ ಮೇಲೆ ದಾಳಿ ಮಾಡಿದ ಡಾಲ್ಫಿನ್; ಇಲ್ಲಿದೆ ವೈರಲ್ ವಿಡಿಯೋ

ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!