Video: ಫುಡ್ ಡೆಲಿವರಿ ಮಾಡ್ತಿದ್ದಂತೆ ಹೊರಟೇ ಬಿಡ್ತು ರೈಲು, ಕೂಡಲೇ ಕೆಳಗೆ ಹಾರಿದ ಡೆಲಿವರಿ ಏಜೆಂಟ್

ರೈಲಿನಲ್ಲಿರುವ ಪ್ರಯಾಣಿಕರಿಗೆ ಫುಡ್ ಡೆಲಿವರಿ ಮಾಡಲು ಬಂದು ಏಜೆಂಟ್ ಫಜೀತಿಗೆ ಸಿಲುಕಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಹಾರ ಕೊಟ್ಟು ಹಿಂದಿರುಗುವಷ್ಟರಲ್ಲಿ ರೈಲು ಹೊರಟೇ ಬಿಟ್ಟಿತ್ತು, ಬೇರೆ ದಾರಿ ತೋಷದೆ ಡೆಲಿವರಿ ಏಜೆಂಟ್ ರೈಲಿನಿಂದ ಕೆಳಗೆ ಹಾರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಡೆಲಿವರಿ ಏಜೆಂಟ್​​ಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ.

Video: ಫುಡ್ ಡೆಲಿವರಿ ಮಾಡ್ತಿದ್ದಂತೆ ಹೊರಟೇ ಬಿಡ್ತು ರೈಲು, ಕೂಡಲೇ ಕೆಳಗೆ ಹಾರಿದ ಡೆಲಿವರಿ ಏಜೆಂಟ್
ಡೆಲಿವರಿ ಏಜೆಂಟ್

Updated on: Jan 12, 2026 | 8:11 AM

ಅನಂತಪುರ, ಜನವರಿ 12: ಡೆಲಿವರಿ ಏಜೆಂಟ್(Delivery Agent) ಒಬ್ಬರು ಚಲಿಸುತ್ತಿರುವ ರೈಲಿನಿಂದ ಕೆಳಗೆ ಹಾರಿರುವ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಹಾರ ಡೆಲಿವರಿ ಮಾಡುತ್ತಿದ್ದಂತೆ ರೈಲು ಹೊರಟೇ ಬಿಟ್ಟಿತ್ತು. ಕೂಡಲೇ ಸ್ವಿಗ್ಗಿ ಡೆಲಿವರಿ ಬಾಯ್ ರೈಲಿನಿಂದ ಕೆಳಗೆ ಹಾರಿದ್ದಾರೆ.

ವೀಡಿಯೊದಲ್ಲಿ ಸೆರೆಯಾದ ಈ ಘಟನೆಯು ಗಿಗ್ ಕಾರ್ಮಿಕರ ಸುರಕ್ಷತೆಯ ಬಗ್ಗೆ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ. ರೈಲು ಚಲಿಸಲು ಪ್ರಾರಂಭಿಸಿದಾಗ 1 ನೇ ಎಸಿ ಕೋಚ್‌ನಲ್ಲಿರುವ ಪ್ರಯಾಣಿಕರಿಗೆ ಆಹಾರವನ್ನು ಕೊಟ್ಟು ನಂತರ ಏಜೆಂಟ್ ಪ್ರಶಾಂತಿ ಎಕ್ಸ್‌ಪ್ರೆಸ್ (18464)ಯಿಂದ ಇಳಿಯಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ರೈಲು ನಿಲ್ದಾಣದಲ್ಲಿ ಕೇವಲ 1-2 ನಿಮಿಷಗಳ ಕಾಲ ನಿಂತಿತ್ತು.

ಪ್ರಯಾಣಿಕರಿಗೆ ಆಹಾರ ಕೊಟ್ಟು ಹೊರಡಬೇಕು ಅನ್ನುವಷ್ಟರಲ್ಲಿ ರೈಲು ಹೊರಟೇ ಬಿಟ್ಟಿತ್ತು. ರೈಲಿನಿಂದ ಇಳಿಯಲು ಕೆಲವೇ ಕೆಲವು ಸಮಯ ಇತ್ತು. ಕೂಡಲೆ ರೈಲಿನಿಂದ ಹಾರಿ ಕೆಳಗೆ ಬಿದ್ದಿದ್ದಾರೆ. ಬಳಿಕ ಎದ್ದು ನಡೆದುಕೊಂಡು ಹೋಗಿದ್ದಾರೆ.ರೈಲುಗಳಲ್ಲಿ ವಿತರಣಾ ಏಜೆಂಟ್‌ಗಳಿಗೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಮತ್ತಷ್ಟು ಓದಿ: Video: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್

ಸ್ವಿಗ್ಗಿ ಕೂಡ ಪ್ರತಿಕ್ರಿಯಿಸಿ, ಏಜೆಂಟ್ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಗಾಯಗಳಾಗಿಲ್ಲ ಎಂದು ದೃಢಪಡಿಸಿದೆ, ಸುರಕ್ಷತೆಯು ಅವರ ಪ್ರಮುಖ ಆದ್ಯತೆಯಾಗಿದೆ ಮತ್ತು ಪ್ರೋಟೋಕಾಲ್‌ಗಳಲ್ಲಿ ಚಲಿಸುವ ರೈಲುಗಳನ್ನು ಹತ್ತುವುದು ಅಥವಾ ಇಳಿಯುವಂತಿಲ್ಲ ಎಂದು ಹೇಳಿದೆ.

ವಿಡಿಯೋ

ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ. ಗ್ರಾಹಕರು ತಮ್ಮ ಆಹಾರವನ್ನು ರೈಲಿನ ಬಾಗಿಲು, ಪ್ಲಾಟ್‌ಫಾರ್ಮ್‌ನಿಂದ ಪಡೆದುಕೊಳ್ಳಲು ಸ್ಪಷ್ಟವಾಗಿ ತಿಳಿಸಬೇಕು. ಡೆಲಿವರಿ ಏಜೆಂಟ್ ಚಲಿಸುವ ಅಥವಾ ಕಿಕ್ಕಿರಿದ ರೈಲುಗಳ ಒಳಗೆ ಪ್ರತ್ಯೇಕ ಆಸನಗಳಿಗೆ ಆಹಾರವನ್ನು ತಲುಪಿಸಲು ಒತ್ತಾಯಿಸಬಾರದು ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us