AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಟ್ಟಿನ ರಕ್ತವನ್ನು ಫೇಸ್ ಮಾಸ್ಕ್ ಆಗಿ ಬಳಸುತ್ತಾಳೆ ಈ ಯುವತಿ; ಈ ಕುರಿತು ತಜ್ಞರು ಹೇಳುವುದೇನು?

ಅಮೆರಿಕಾದ ಲಾಸ್ ವೇಗಾಸ್​​ನ 31 ವರ್ಷ ವಯಸ್ಸಿನ ಯುವತಿ ತನ್ನ ಮುಟ್ಟಿನ ರಕ್ತವನ್ನು ಸಂಗ್ರಹಿಸಿ ಮುಖಕ್ಕೆ ಹಚ್ಚುತ್ತಾಳಂತೆ. ಈ ಮೂಲಕ ತನ್ನ ತ್ವಚೆಯ ಆರೈಕೆ ಮಾಡುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಆದರೆ ಈ ರಕ್ತವನ್ನು ಮುಖಕ್ಕೆ ಬಳಸುಬಹುದೇ? ತಜ್ಞರು ನೀಡಿರುವ ಸಲಹೆ ಇಲ್ಲಿದೆ.

ಮುಟ್ಟಿನ ರಕ್ತವನ್ನು ಫೇಸ್ ಮಾಸ್ಕ್ ಆಗಿ ಬಳಸುತ್ತಾಳೆ ಈ ಯುವತಿ; ಈ ಕುರಿತು ತಜ್ಞರು ಹೇಳುವುದೇನು?
Period Blood Face Masks
ಅಕ್ಷತಾ ವರ್ಕಾಡಿ
|

Updated on: Apr 02, 2024 | 5:14 PM

Share

ಮುಖದ ಸೌಂದರ್ಯವನ್ನು ಹೆಚ್ಚಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುವವರು ಸಾಕಷ್ಟಿದ್ದಾರೆ. ಕೆಲವೊಮ್ಮೆ ಜಾಹೀರಾತುಗಳಿಗೆ ಮರುಳಾಗಿ ದುಬಾರಿ ಬೆಲೆಯ ಉತ್ಪನ್ನಗಳನ್ನು ಖರೀದಿಸುವವರು ಇದ್ದಾರೆ. ಆದರೆ ಇಲ್ಲೊಬ್ಬಳು ಯುವತಿ ತನ್ನ ವಿಚಿತ್ರ ಅಭ್ಯಾಸದಿಂದಲೇ ಸೋಶಿಯಲ್​​ ಮೀಡಿಯಾಗಳಲ್ಲಿ ಸುದ್ದಿಯಲ್ಲಿದ್ದಾಳೆ. ಈಕೆಯ ಮುಖದ ಸೌಂದರ್ಯವನ್ನು ಹೆಚ್ಚಿಸಲು ಬಳಸುವ ಉತ್ಪನ್ನ ಕೇಳಿದರೆ ಒಂದು ಕ್ಷಣಕ್ಕೆ ಶಾಕ್​​ ಆಗುವುದಂತೂ ಖಂಡಿತಾ.

ಅಮೆರಿಕಾದ ಲಾಸ್ ವೇಗಾಸ್​​ನ 31 ವರ್ಷ ವಯಸ್ಸಿನ ಯುವತಿ ತನ್ನ ಮುಟ್ಟಿನ ಸಮಯದ ರಕ್ತವನ್ನು ಸಂಗ್ರಹಿಸಿ ಮುಖಕ್ಕೆ ಹಚ್ಚುತ್ತಾಳಂತೆ. ಈ ಮೂಲಕ ತನ್ನ ತ್ವಚೆಯ ಆರೈಕೆ ಮಾಡುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ವರದಿಗಳ ಪ್ರಕಾರ, ಹುಡುಗಿ ತನ್ನ ಮುಟ್ಟಿನ ರಕ್ತವನ್ನು ಕಂಟೇನರ್‌ಗಳಲ್ಲಿ ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದಾಳೆ. ಇದಕ್ಕೆ ಜನರಲ್ಲಿ ಬೇಡಿಕೆ ಇದೆ, ಹೀಗಾಗಿ ರಕ್ತಕ್ಕೆ ಬೇರೆ ಕೆಲವು ಸೌಂದರ್ಯವರ್ಧಕಗಳನ್ನು ಬೆರೆಸಿ ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದಾಳೆ. ಈ ವಿಚಿತ್ರ ಸೌಂದರ್ಯ ಉತ್ಪನ್ನವನ್ನು ಪರಿಸರ ಸ್ನೇಹಿ ವಿಧಾನ ಎಂದು ಅವರು ವಿವರಿಸುತ್ತಾರೆ.

ಇದನನ್ನೂ ಓದಿ: ಬಾರ್ಬಿ ಡಾಲ್ ತರ ಕಾಣಲು 43 ಶಸ್ತ್ರಚಿಕಿತ್ಸೆಗೆ ಒಳಗಾದ ಯುವತಿ

ಮುಟ್ಟಿನ ರಕ್ತ ಮುಖಕ್ಕೆ ಬಳಸುವುದು ಎಷ್ಟು ಸುರಕ್ಷಿತ? ತಜ್ಞರು ಹೇಳುವುದೇನು?

ಹರಿಯಾಣದ ಗುರುಗ್ರಾಮ್ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್​​ನ ಚರ್ಮರೋಗ ತಜ್ಞರಾದ ಡಾ. ಸೋನಲ್ ಬನ್ಸಾಲ್ ಅವರು ಹೇಳುವಂತೆ “ಮುಟ್ಟಿನ ರಕ್ತವನ್ನು ಫೇಸ್ ಮಾಸ್ಕ್ ಆಗಿ ಬಳಸುವುದು ಸುರಕ್ಷಿತವಲ್ಲ. ವಾಸ್ತವವಾಗಿ, ಇದು ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು, ವಿಶೇಷವಾಗಿ ನೀವು ಈಗಾಗಲೇ ಯೋನಿ ಅಥವಾ ಗರ್ಭಕಂಠದ ಸೋಂಕನ್ನು ಹೊಂದಿದ್ದರೆ ಅದು ಅಪಾಯಕಾರಿ” ಎಂದು ಅವರು ಎಚ್ಚರಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ