ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?

ರೆಸ್ಟೋರೆಂಟ್​ ಹೊರಾಂಗಣ ಮತ್ತು ಒಳಾಂಗಣವನ್ನು ಜೈಲಿನ ಹಾಗೆ ನಿರ್ಮಿಸಲಾಗಿದೆ. ರೆಸ್ಟೋರೆಂಟ್​ ಒಳಗಡೆ ಪ್ರವೇಶ ಪಡೆಯುವ ಮುನ್ನ ದೊಡ್ಡದಾಗಿ "ಸೆಂಟ್ರಲ್​ ಜೈಲ್ "​ ರೆಸ್ಟೋರೆಂಟ್ ಬೋರ್ಡ್​ ಕಾಣುತ್ತದೆ. ಒಳಗಡೆ ಹೋಗಿ ಕೂಡುತ್ತಿದ್ದಂತೆ ಪೊಲೀಸ್​ರ​ ಮತ್ತು ಅಪರಾಧಿಗಳ ವೇಶ ಧರಿಸಿರುವ ವೇಟರ್​​ಗಳು ಬರುತ್ತಾರೆ. ಮತ್ತೆ ಊಟವನ್ನು ಜೈಲಿನ ತಟ್ಟೆಯಲ್ಲೇ ನೀಡುತ್ತಾರೆ ಯಾವುದು ಆ ರೆಸ್ಟೋರೆಂಟ್​ ಇಲ್ಲಿದೆ.

ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?
ಸೆಂಟ್ರಲ್​ ಜೈಲ್​ ರೆಸ್ಟೋರೆಂಟ್​​
Follow us
|

Updated on:Apr 10, 2023 | 3:19 PM

ಬೆಂಗಳೂರು: ರೆಸ್ಟೋರೆಂಟ್​​ಗಳೆಂದರೇ (Restaurant) ಮೊದಲಿಗೆ ನಮ್ಮ ಕಣ್ಮುಂದೆ ಬರೋದು ಜಗಮಗಿಸುವ ಲೈಟು, ಅಲ್ಲಿ ಓಡಾಡುವ ವೇಟರ್​ಗಳು, ಹಾಗೇ ವೆಚ್ಚದಾಯಕವಾದ, ರುಚಿಕರವಾದ ಆಹಾರ ಪದಾರ್ಥಗಳು. ಆದರೆ ಈ ಒಂದು ಹೋಟೇಲ್​ಗೆ ಹೋದರೆ ನಿಮಗೆ ಜೈಲಿನ ಒಳಗಡೆ ಹೋದ ಹಾಗೆ ಅನಿಸುತ್ತದೆ. ಊಟ ಜೈಲಿನ ಊಟದ ತರಹ ಭಾಸವಾಗುತ್ತದೆ. ಹೌದು “ಬೆಂಗಳೂರಿನ (Bengaluru) ಹೆಚ್​ ಎಸ್​ ಆರ್​ ಲೇಔಟ್​ನಲ್ಲಿದೆ ಸೆಂಟ್ರಲ್​​ ಜೈಲ್​ ರೆಸ್ಟೋರೆಂಟ್” ನ (HSR Layout Central Jail Restaurant)​​​. ವಿಡಿಯೋ ವೈರಲ್​ ಆಗಿದೆ.

ರೆಸ್ಟೋರೆಂಟ್​ ಹೊರಾಂಗಣ ಮತ್ತು ಒಳಾಂಗಣವನ್ನು ಜೈಲಿನ ಹಾಗೆ ನಿರ್ಮಿಸಲಾಗಿದೆ. ರೆಸ್ಟೋರೆಂಟ್​ ಒಳಗಡೆ ಪ್ರವೇಶ ಪಡೆಯುವ ಮುನ್ನ ದೊಡ್ಡದಾಗಿ “ಸೆಂಟ್ರಲ್​ ಜೈಲ್​ ರೆಸ್ಟೋರೆಂಟ್​ ಬೋರ್ಡ್”​ ಕಾಣುತ್ತದೆ. ಒಳಗಡೆ ಹೋಗಿ ಕೂಡುತ್ತಿದ್ದಂತೆ ಪೊಲೀಸ್​ ಮತ್ತು ಅಪರಾಧಿಗಳ ವೇಶ ಧರಿಸಿರುವ ವೇಟರ್​​ಗಳು ಬರುತ್ತಾರೆ. ಮತ್ತೆ ಊಟವನ್ನು ಜೈಲಿನ ತಟ್ಟೆಯಲ್ಲೇ ನೀಡುತ್ತಾರೆ.

ಇದನ್ನೂ ಓದಿ: ಹಾವು ಕಚ್ಚಿತೆಂದು, ಹಾವನ್ನೇ ಕಚ್ಚಿ ಕೊಂದ ವ್ಯಕ್ತಿ; ವಿಡಿಯೋ ವೈರಲ್​​

ರೆಸ್ಟೋರೆಂಟ್​ ಒಳಗಡೆ ಜೈಲು ಕಂಬಿಗಳಿದ್ದು, ಕಂಬಿ ಒಳಗಡೆ ಹೋಗಿ ಊಟ ಮಾಡಬೇಕು. ಇದು ನಿಮಗೆ ಜೈಲಿನ ಒಳಗಡೆ ಇದ್ದ ಅನುಭವ ಕೊಡುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದೆ. ಉದ್ಯಮಿ ಹರ್ಷ್ ಗೋಯೆಂಕಾ ಎಂಬವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲಲ್ಲಿ ಹಂಚಿಕೊಂಡಿದ್ದು, ಜೈಲ್​ ಕೆ ಮಜಾ ಖಾವೋ ಎಂದು ಶಿರ್ಷಿಕೆ ನೀಡಿದ್ದಾರೆ. ಪೋಸ್ಟ್ ಮಾಡಿದ ನಂತರ, ವೀಡಿಯೊವನ್ನು ಟ್ವಿಟರ್​​ನಲ್ಲಿ 33,000 ಜನರು ವೀಕ್ಷಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Mon, 10 April 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ