AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸಿಟಿಯೇ ನೆಗೆದುಬಿತ್ತು- ಲಕ್ಷುರಿ ಫ್ಲಾಟ್ ಸೇಲ್ ಆಗಲಿಲ್ಲ ಅಂತ ಶಾಪ ಹಾಕಿದ ಕುಳ

Penthouse For Rs 285 Crore: ತಮ್ಮ ಪೆಂಟ್​ಹೌಸ್ ಫ್ಲ್ಯಾಟ್ ಮಾರಾಟ ಆಗಲಿಲ್ಲ ಎಂಬ ಹತಾಶೆಯಲ್ಲಿ ದುಬೈ ನಿವಾಸಿ ಕೋಟ್ಯಾಧಿಪತಿಯೊಬ್ಬರು ಲಂಡನ್ ನಗರದ ಕಥೆಯೇ ಮುಗೀತು ಎಂದು ಉದ್ಗರಿಸಿದ್ದಾರೆ.

ಈ ಸಿಟಿಯೇ ನೆಗೆದುಬಿತ್ತು- ಲಕ್ಷುರಿ ಫ್ಲಾಟ್ ಸೇಲ್ ಆಗಲಿಲ್ಲ ಅಂತ ಶಾಪ ಹಾಕಿದ ಕುಳ
ಲಂಡನ್​ನ ಬೆಲ್​ಗ್ರೇವಿಯಾದ ಒಂದು ಜಾಗ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 09, 2023 | 6:35 PM

Share

ಲಂಡನ್: ಇವರು ದುಬೈನಲ್ಲಿರುವ ಬ್ರಿಟನ್ ಸಾಹುಕಾರ. ಲಂಡನ್ ನಗರದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಬೆಲ್​ಗ್ರೇವಿಯಾದಲ್ಲಿ (Belgravia) ಇವರು ಐಷಾರಾಮಿ ಪೆಂಟ್​ಹೌಸ್​ವೊಂದನ್ನು (Penthouse) ಹೊಂದಿದ್ದಾರೆ. ಬೆಲ್​ಗ್ರೇವಿಯಾದಲ್ಲಿ ಹಲವು ಐಷಾರಾಮಿ ಅಪಾರ್ಟ್ಮೆಂಟ್​ಗಳಿದ್ದು, ಲಂಡನ್​ನ ಹಾಟ್ ರಿಯಲ್ ಎಸ್ಟೇಟ್ ಮಾರುಕಟ್ಟೆ ಎಂದೇ ಪರಿಗಣಿತವಾಗಿದೆ. ಇಂಥ ಪ್ರದೇಶದಲ್ಲಿ ಲಕ್ಷುರಿ ಪೆಂಟ್​ಹೌಸ್ ಹೊಂದಿರುವ ಈ ವ್ಯಕ್ತಿ, ಅದನ್ನು ಮಾರಲು ಹರಸಾಹಸ ನಡೆಸಿದ್ದಾರೆ. 285 ಕೋಟಿ ರುಪಾಯಿಗೆ ತಮ್ಮ ಪ್ಲಾಟ್ ಅನ್ನು ಮಾರುವ ಅವರ ಯತ್ನ ವಿಫಲವಾಗಿಲ್ಲ. ಇವರ ಏಜೆಂಟ್ ಕೂಡ ಪೆಂಟ್ ಹೌಸ್ ಮಾರುವುದು ಹೇಗೆಂದು ತಲೆ ಮೇಲೆ ಹಚ್ಚಿ ಕೂತಿದ್ದಾರೆ. ಅಂದಹಾಗೆ, ತಮ್ಮ ಲಂಡನ್ ನಗರಿಯ ಪೆಂಟ್​ಹೌಸ್ ಲಕ್ಷುರಿ ಮನೆಯು ಮಾರಾಟ ಕಾಣದ ಹತಾಶೆಯಲ್ಲಿ ಈ ಕೋಟ್ಯಾಧಿಪತಿಯು ‘ಲಂಡನ್ ಕಥೆ ಮುಗೀತುಅದಕ್ಕೇ ನನ್ನ ಫ್ಲಾಟ್ ಮಾರಾಟ ಆಗುತ್ತಿಲ್ಲ’ ಎಂದು ತಮ್ಮ ರಿಯಲ್ ಎಸ್ಟೇಟ್ ಏಜೆಂಟ್ ಬಳಿ ಉದ್ಗರಿಸಿದ್ದಾರಂತೆ.

ಅಂದಹಾಗೆ, ಈ ಕೋಟ್ಯಾಧಿಪತಿ ಈ ಹಿಂದೆ ಲಂಡನ್​ನಲ್ಲೇ ಇದ್ದವರಾದರೂ ನಾನ್ ಡಾಮಿಸೈಲ್ ಸೌಲಭ್ಯ ರದ್ದಾದ ಬಳಿಕ ಈಗ ದುಬೈನಲ್ಲಿ ನೆಲಸಿದ್ದಾರೆ. ನಾನ್ ಡಾಮಿಸೈಲ್ ಸ್ಟೇಟಸ್ ಇದ್ದರೆ ವಿದೇಶೀ ಆದಾಯಕ್ಕೆ ಈ ದೇಶದಲ್ಲಿ ತೆರಿಗೆ ಕಟ್ಟುವ ಅಗತ್ಯ ಇರುವುದಿಲ್ಲ. ಹಿಂದೆ ಇನ್ಫೋಸಿಸ್ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರೂ ಕೂಡ ನಾನ್ ಡಾಮಿಸೈಲ್ ಸ್ಟೇಟಸ್ ಹೊಂದಿದ್ದು, ಭಾರತದಲ್ಲಿರುವ ತಮ್ಮ ಆದಾಯಕ್ಕೆ ಬ್ರಿಟನ್​ನಲ್ಲಿ ತೆರಿಗೆ ಕಟ್ಟುವುದರಿಂದ ವಿನಾಯಿತಿ ಪಡೆದಿದ್ದರು. ಈ ವಿಚಾರ ವಿವಾದಕ್ಕೂ ಕಾರಣವಾಗಿತ್ತು. ಅದು ಬೇರೆ ಸಂಗತಿ. ಈಗ ನಾನ್ ಡಾಮಿಸೈಲ್ ಸ್ಟೇಟಸ್ ಇಲ್ಲದೇ ಲಂಡನ್​ನಿಂದ ದುಬೈಗೆ ಶಿಫ್ಟ್ ಆಗಿರುವ ಕೋಟ್ಯಾಧಿಪತಿಯು ಲಂಡನ್​ನಲ್ಲಿರುವ ತಮ್ಮ ಈ ದುಬಾರಿ ಆಸ್ತಿಯನ್ನು ಮಾರುವ ಗಡಿಬಿಡಿಯಲ್ಲಿದ್ದಾರೆ.

ಪೆಂಟ್​ಹೌಸ್ ಎಂದರೇನು? ಲಂಡನ್​ನಲ್ಲಿರುವ ಈ ಲಕ್ಷುರಿ ಮನೆ ಯಾಕೆ ಮಾರಾಟವಾಗಿಲ್ಲ?

ಪೆಂಟ್​ಹೌಸ್ ಎಂದರೆ ಒಂದು ಐಷಾರಾಮಿ ಕಟ್ಟಡದ ಟಾಪ್ ಫ್ಲೋರ್​ನಲ್ಲಿ ನಿರ್ಮಿಸಲಾಗಿರುವ ಐಷಾರಾಮಿ ಫ್ಲಾಟ್ ಎನ್ನಬಹುದು. ಸರೋವರ, ಪಾರ್ಕ್, ಬೀಚ್ ಇತ್ಯಾದಿಗೆ ಮುಖ ಮಾಡಿರುವ ಅಪಾರ್ಟ್ಮೆಂಟ್​ಗಳಿಗೆ ಬೇಡಿಕೆ ಹೇಗೆ ಹೆಚ್ಚು ಇರುತ್ತದೋ ಹಾಗೇ ಪೆಂಟ್​ಹೌಸ್​ಗಳಿಗೂ ಒಳ್ಳೆಯ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಾಟ್ ರಿಯಲ್ ಎಷ್ಟೇಟ್ ಜಾಗವಾದ ಬೆಲ್​ಗ್ರೇವಿಯಾದಲ್ಲಿರುವ ತಮ್ಮ ಪೆಂಟ್​ಹೌಸ್​ನ ಸೆಲಿಂಗ್ ಪ್ರೈಸ್ ಆಗಿ 28 ಮಿಲಿಯನ್ ಪೌಂಡ್ (ಸುಮಾರು 285 ಕೋಟಿ ರೂ) ಇಟ್ಟಿದ್ದರು ಈ ಸಾಹುಕಾರ. ಆದರೆ, ಈ ಬೆಲೆಗೆ ಪೆಂಟ್​ಹೌಸ್ ಕೊಳ್ಳುವವರೇ ಲಂಡನ್​ನಲ್ಲಿ ಯಾರೂ ಇಲ್ಲ.

ಇದನ್ನೂ ಓದಿCashKaro: ಹನಿಮೂನ್ ವೇಳೆ ಬಂದ ಐಡಿಯಾ: ಸ್ವಾತಿ ಭಾರ್ಗವರ ಕ್ಯಾಷ್​ಕರೋ ಕಂಪನಿಗೆ ಇವತ್ತು ಭರ್ಜರಿ ಆದಾಯ

ಲಂಡನ್​ಗೆ ಬಂದಿರುವ ಈ ದುಬೈ ನಿವಾಸಿ ಒಮ್ಮೆ ತಮ್ಮ ಏಜೆಂಟ್ ಬಳಿ ಈ ಫ್ಲಾಟ್ ಮಾರಾಟವಾಗದೇ ಇರುವುದಕ್ಕೆ ಕಾರಣ ಕೇಳಿದ್ದಾರೆ. ‘ನಾವು ದುಬೈನಲ್ಲಿಲ್ಲ. ಇದು ಲಂಡನ್. ಇಲ್ಲಿ ಈ ಫ್ಲಾಟ್​ನ ಮಾರಾಟ ದರ ತೀರಾ ಜಾಸ್ತಿ ಆಯಿತು. ಇದಕ್ಕೆ 20 ಮಿಲಿಯನ್ ಪೌಂಡ್ ಹಣವೇ ಹೆಚ್ಚಾಗುತ್ತದೆ. ಇಷ್ಟು ಬೆಲೆಗೆ ಇಳಿಸಿದರೆ ಯಾರಾದರೂ ಕೊಳ್ಳಲು ಬರಬಹುದು’ ಎಂದು ಈ ಏಜೆಂಟ್ ಸಲಹೆ ನೀಡಿದ್ದಾರೆ.

ಏಜೆಂಟ್ ಆಡಿದ ಮಾತು ಈ ದುಬೈ ನಿವಾಸಿಗೆ ಸರಿ ಎನಿಸಿದೆ. ಸರಿ ನೋಡೋಣ ಎಂದು ಪರೋಕ್ಷವಾಗಿ ಬೆಲೆ ಇಳಿಕೆಗೆ ಸಮ್ಮತಿಸಿದ್ದಾರೆ. ಈ ಹೊಸ ಬೆಲೆಗಾದರೂ ಬೆಲ್​ಗ್ರೇವಿಯಾದಲ್ಲಿರುವ ಪೆಂಟ್​ಹೌಸ್ ಮಾರಾಟ ಕಾಣುಬಹುದು ಎಂಬ ಆಸೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಇದ್ದಾರೆ. ದುಬೈನಲ್ಲಿ ನಮ್ಮ ಹಣಕ್ಕೆ ಹಲವು ಆಯ್ಕೆಗಳು ಸಿಗುತ್ತವೆ. ತಾವು ತೆರಿಗೆ ಕಟ್ಟದ ಲಂಡನ್​ನಲ್ಲಿ ಅದೇ ಲಕ್ಷುರಿಯನ್ನು ಅಪೇಕ್ಷಿಸುವುದು ಎಷ್ಟು ಸರಿ ಎಂದೂ ಈ ಏಜೆಂಟ್ ಪರೋಕ್ಷವಾಗಿ ದುಬೈ ನಿವಾಸಿಗೆ ಕುಟುಕಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Sun, 9 April 23

ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ