AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಈ ನವವಧುವನ್ನು ಭರ್ಜರಿ ಹೊಗಳುತ್ತಿದ್ದಾರೆ ನೆಟ್ಟಿಗರು; ಪತಿಯ ಬಳಿ ಇಟ್ಟ ಆ ಒಂದು ಬೇಡಿಕೆಯಿಂದ ಸ್ಟಾರ್​ ಆಗ್ಬಿಟ್ರು ಮಹಿಳೆ

ಇಸ್ಲಾಮಿಕ್​ ಕಾನೂನಿನ ಪ್ರಕಾರ ಮದುವೆ ಸಂದರ್ಭದಲ್ಲಿ ಹಕ್ ಮೆಹರ್ ಎಂಬ ಆಚರಣೆ ಮಾಡಲಾಗುತ್ತದೆ. ಈ ಪದ್ಧತಿ ಅನ್ವಯ, ವರ- ವಧುವಿನ ಕೈಹಿಡಿದ ಸಂದರ್ಭದಲ್ಲಿ ಅವಳಿಗೆ ಹಣ, ಒಡವೆ, ಪೀಠೋಪಕರಣಗಳು ಅಥವಾ ಅಗತ್ಯ ಇರುವ ಯಾವುದೇ ಬೆಲೆಬಾಳುವ ಸಾಮಗ್ರಿಯನ್ನು ಉಡುಗೊರೆ ಕೊಡಬೇಕು.

ಪಾಕಿಸ್ತಾನದ ಈ ನವವಧುವನ್ನು ಭರ್ಜರಿ ಹೊಗಳುತ್ತಿದ್ದಾರೆ ನೆಟ್ಟಿಗರು; ಪತಿಯ ಬಳಿ ಇಟ್ಟ ಆ ಒಂದು ಬೇಡಿಕೆಯಿಂದ ಸ್ಟಾರ್​ ಆಗ್ಬಿಟ್ರು ಮಹಿಳೆ
ನೈಲಾ ಶಮಲ್
Lakshmi Hegde
|

Updated on: Mar 18, 2021 | 4:28 PM

Share

ಲಾಹೋರ್​: ಪಾಕಿಸ್ತಾನದ ನವವಧುವೊಬ್ಬಳನ್ನು ಸೋಷಿಯಲ್​ ಮೀಡಿಯಾದಲ್ಲಿ ಜನರು ತುಂಬ ಹೊಗಳುತ್ತಿದ್ದಾರೆ. ಈಕೆಯ ಹೆಸರು ನೈಲಾ ಶಮಲ್​. ಪಾಕ್​ನ ಮರ್ದಾನ್​​ನವರು. ನೈಲಾರನ್ನು ನೆಟ್ಟಿಗರು ಅಷ್ಟೊಂದು ಹೊಗಳಲು ಮುಖ್ಯ ಕಾರಣ ಅವರು ಮದುವೆ ಸಂದರ್ಭದಲ್ಲಿ ಪತಿಯಿಂದ ಪಡೆದ ಉಡುಗೊರೆ. ಇಸ್ಲಾಮಿಕ್​ ಕಾನೂನಿನ ಪ್ರಕಾರ ಮದುವೆ ಸಂದರ್ಭದಲ್ಲಿ ಹಕ್ ಮೆಹರ್ ಎಂಬ ಆಚರಣೆ ಮಾಡಲಾಗುತ್ತದೆ. ಈ ಪದ್ಧತಿ ಅನ್ವಯ, ವರ- ವಧುವಿನ ಕೈಹಿಡಿದ ಸಂದರ್ಭದಲ್ಲಿ ಅವಳಿಗೆ ಹಣ, ಒಡವೆ, ಪೀಠೋಪಕರಣಗಳು ಅಥವಾ ಅಗತ್ಯ ಇರುವ ಯಾವುದೇ ಬೆಲೆಬಾಳುವ ಸಾಮಗ್ರಿಯನ್ನು ಉಡುಗೊರೆ ರೂಪದಲ್ಲಿ ಕೊಡಬೇಕು.

ಆದರೆ ನೈಲಾ ತನ್ನ ಪತಿಯ ಬಳಿ ಇಟ್ಟ ಬೇಡಿಕೆಯೇ ಬೇರೆ. ನನಗೆ ಹಣ, ಒಡವೆ ಯಾವುದೂ ಬೇಡ.. ಹಕ್​ ಮೆಹರ್​ ರೂಪದಲ್ಲಿ 1,00,000 ರೂ.ಮೌಲ್ಯದ ಪುಸ್ತಕವನ್ನು ಕೊಡು ಎಂದು ಕೇಳಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ನೈಲಾರನ್ನು ಶ್ಲಾಘಿಸಿದ್ದಾರೆ. ನೈಲಾ ಒಬ್ಬ ಬರಹಗಾರ್ತಿ. ಮದುವೆ ಉಡುಪು ಧರಿಸಿಯೇ, ಪುಸ್ತಕಗಳಿದ್ದ ಶೆಲ್ಫ್​ ಬಳಿ ಕುಳಿತು ವಿಡಿಯೋವೊಂದನ್ನು ಮಾಡಿದ್ದಾರೆ. ಸಮಾಜದಲ್ಲಿ ಇರುವ ಕೆಲವು ತಪ್ಪು ಸಂಪ್ರದಾಯಗಳನ್ನು ತೊಡೆದು ಹಾಕಬೇಕು ಎಂದು ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ನಮ್ಮ ಪಾಕ್​ ದೇಶದಲ್ಲಿ ಹಣದುಬ್ಬರ ಜಾಸ್ತಿಯಾಗುತ್ತಿದೆ. ಹಾಗಾಗಿ ದುಬಾರಿ ವಸ್ತುಗಳನ್ನು ಕೊಳ್ಳುವುದು ಅಷ್ಟು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ನೈಲಾ ಹೇಳಿಕೊಂಡಿದ್ದಾರೆ.

ಹಕ್​ ಮೆಹರ್​ನಲ್ಲಿ ಅನೇಕ ಮಹಿಳೆಯರು ಒಡವೆ, ಹಣಕ್ಕೆ ಬೇಡಿಕೆ ಇಡುತ್ತಾರೆ. ಆದರೆ ನಾನೊಬ್ಬ ಬರಹಗಾರ್ತಿಯಾಗಿ ನನಗೆ ಪುಸ್ತಕಗಳೆಂದರೆ ಪ್ರೀತಿ. ಬರಹಗಾರ್ತಿಯಾದ ನಾನು ಪುಸ್ತಕಗಳ ಬಗ್ಗೆ ಒಲವು ತೋರದಿದ್ದರೆ, ಸಾಮಾನ್ಯ ಜನರು ಹೇಗೆ ತೋರುತ್ತಾರೆ. ಅವರಿಗೆ ಪುಸ್ತಕಗಳ ಮಹತ್ವ ಗೊತ್ತಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಎಲ್ಲರಲ್ಲೂ ಪುಸ್ತಕದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಾನು ಹಕ್​ ಮೆಹರ್​​ನಲ್ಲಿ ಪತಿಯಿಂದ 1 ಲಕ್ಷ ರೂ.ಮೌಲ್ಯದ ಪುಸ್ತಕಗಳನ್ನು ಪಡೆದೆ ಎಂದು ತಿಳಿಸಿದ್ದಾರೆ. ಇನ್ನು ನೈಲಾ ಪತಿ ಕೂಡ ಬರಹಗಾರರೇ ಆಗಿದ್ದಾರೆ.

ಇದನ್ನೂ ಓದಿ: ಮೊಬೈಲ್​ ಬೆಳಕಲ್ಲಿ ಸರ್ಜರಿ ಮಾಡಿದ ಬನಾರಸ್​ ಹಿಂದೂ ವಿವಿ ಆಸ್ಪತ್ರೆ ವೈದ್ಯರು; ವೈರಲ್​ ಆದ ಫೋಟೋ ನೋಡಿ ಡೀನ್​ ಕೆಂಡಾಮಂಡಲ

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?