AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂವುಗಳಿಂದ ತುಂಬಿದ ಗಾಡಿಯಲ್ಲಿ ಗ್ರ್ಯಾಂಡ್​ ಎಂಟ್ರಿ ಪಡೆದ ವಧು: ವಿಡಿಯೋ ವೈರಲ್​

ಕೆಂಪು ಲೆಹಂಗಾ ಧರಿಸಿರುವ ವಧು ಸಂಪೂರ್ಣ ಹೂವಿನಿಂದ ಅಲಂಕೃತವಾದ ಬಿಳಿಯ ಗಾಡಿಯಲ್ಲಿ ಅದ್ದೂರಿಯಾಗಿ ಬರುತ್ತಿರುವುದನ್ನು ಕಾಣಬಹುದು. ಈ ವೇಳೆ ವಧು ಕುಳಿತಲ್ಲೇ ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ಧಾರೆ.

ಹೂವುಗಳಿಂದ ತುಂಬಿದ ಗಾಡಿಯಲ್ಲಿ ಗ್ರ್ಯಾಂಡ್​ ಎಂಟ್ರಿ ಪಡೆದ ವಧು: ವಿಡಿಯೋ ವೈರಲ್​
ವಧು
TV9 Web
| Edited By: |

Updated on:Mar 03, 2022 | 1:26 PM

Share

ಮದುವೆ (Wedding) ಪ್ರತೀ ಹುಡುಗಿಯ ಕನಸು ನನಸಾಗುವ ದಿನ. ಮೆಚ್ಚಿದ ಹುಡಗನನ್ನು ವರಿಸಿ ಹೊಸ ಜೀವನಕ್ಕೆ ತೆರೆದುಕೊಳ್ಳುವ ಸಂದರ್ಭ. ಭಾರತಿಯ ಮದುವೆಗಳು ಸದಾ ಹೊಸತನದಿಂದ ಕೂಡಿರುತ್ತದೆ. ವಿಭಿನ್ನ ಕಲ್ಪನೆಗಳ ಮೂಲಕ ವಧು ವರರನ್ನು ಮದುವೆಯ ಮಂಟಪಕ್ಕೆ ಕರೆತರುವುದು ಈಗಿನ ಟ್ರೆಂಡ್​ ಆಗಿದೆ, ಈ ಹಿಂದೆ ಅದ್ದೂರಿ ಪಲ್ಲಕ್ಕಿಯ ಮೇಲೆ ವಧುವನ್ನು ಕರೆದುಕೊಂಡು ಬಂದಿರುವ ವಿಡಿಯೋ ವೈರಲ್​ ಆಗಿತ್ತು. ಇದೀಗ ಹೂವಿನಿಂದ ತುಂಬಿದ ಗಾಡಿಯಲ್ಲಿ ವಧುವನ್ನು ಕೂರಿಸಿಕೊಂಡು ಬರುತ್ತಿದ್ದು, ಖುಷಿಯಿಂದ ವಧು ಕುಳಿತಲ್ಲೇ ಡ್ಯಾನ್ಸ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಧುವಿನ ಡ್ಯಾನ್ಸ್​ ವಿಡಿಯೋ ವೈರಲ್​ ಆಗಿದೆ. weddingsfever ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ.

ವಿಡಿಯೋದಲ್ಲಿ ಕೆಂಪು ಲೆಹೆಂಗಾ ಧರಿಸಿರುವ ವಧು ಸಂಪೂರ್ಣ ಹೂವಿನಿಂದ ಅಲಂಕೃತವಾದ ಬಿಳಿಯ ಗಾಡಿಯಲ್ಲಿ ಅದ್ದೂರಿಯಾಗಿ ಬರುತ್ತಿರುವುದನ್ನು ಕಾಣಬಹುದು. ಈ ವೇಳೆ ವಧು ಕುಳಿತಲ್ಲೇ ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ಧಾರೆ. ಇದು ನೋಡುಗರನ್ನು ಸೆಳೆದಿದ್ದು ವಿಡಿಯೋ ಸಖತ್​ ವೈರಲ್​ ಆಗಿದೆ. ಬಾಲಿವುಡ್​ನ​ ಆಜ್​ಕಲ್​ ಚಿತ್ರದ ಥೋಡಾ ಥೋಡಾ ಪ್ಯಾರ್​ ಹಾಡಿಗೆ ಸ್ಟೆಪ್​ ಹಾಕಿದ್ದಾಳೆ.  ಆಜ್​ಕಲ್​ ಚಿತ್ರದಲ್ಲಿ ಸಲ್ಮಾನ್​ ಖಾನ್​ ಮತ್ತು ಜಿಸೆಲ್ಲಿ ಮೊಂಟೆರೊ ಕಾಣಿಸಕೊಂಡಿದ್ದಾರೆ. ಹಾಡನ್ನು  ಸುನಿಧಿ ಚೌವಾಣ್​ ಹಾಡಿದ್ದಾರೆ.

ಸದ್ಯ ವಧುವಿನ ಬಿಂದಾಸ್​ ಡ್ಯಾನ್ಸ್​​ ನೆಟ್ಟಿಗರ ಮನ ಸೆಳೆದಿದೆ.  ವಧುವಿನ ಗ್ರ್ಯಾಂಡ್​ ಎಂಟ್ರಿ ನೋಡಿ ಎಲ್ಲರೂ ದಂಗಾಗಿದ್ದಾರೆ. ವಿಡಿಯೋದಲ್ಲಿ ವಧುವಿನ ಜತೆಗೆ ಆಕೆಯ ಸ್ನೇಹಿತರು, ಸಂಬಂಧಿಗಳೂ ಕೂಡ ಡ್ಯಾನ್ಸ್​ ಮಾಡುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ:

90ನೇ ವರ್ಷದ ಬರ್ತಡೇ ದಿನ ಬೆಸ್ಟ್​ ಫ್ರೆಂಡ್​ ನೋಡಿ ಅಚ್ಚರಿಗೊಂಡ ವೃದ್ಧೆ: ವಿಡಿಯೋ ವೈರಲ್​

Published On - 1:24 pm, Thu, 3 March 22

Follow Us
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’