AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋದ ಛಾವಣಿ ಮೇಲೆ ಮಿನಿ ಗಾರ್ಡನ್​ ಬೆಳೆಸಿದ ಚಾಲಕ; ಕೂಲ್ ಕೂಲ್ ಎಂದ ನೆಟ್ಟಿಗರು

ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ 20,000 ಕ್ಕೂ ಹೆಚ್ಚು ಲೈಕ್ಸ್​ ಸಂಗ್ರಹಿಸಿದ್ದು, ಇನ್ನೂ ಹೆಚ್ಚುತ್ತಿದೆ. ಈ ಹಂಚಿಕೆಯು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ.

ಆಟೋದ ಛಾವಣಿ ಮೇಲೆ ಮಿನಿ ಗಾರ್ಡನ್​ ಬೆಳೆಸಿದ ಚಾಲಕ; ಕೂಲ್ ಕೂಲ್ ಎಂದ ನೆಟ್ಟಿಗರು
ಆಟೋ ಮೇಲೆ ಮಿನಿ ಗಾರ್ಡನ್​
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Apr 08, 2022 | 9:05 PM

Share

ತಾಪಮಾನವು ಹೆಚ್ಚುತ್ತಿರುವ ಕಾರಣ, ದೇಶಾದ್ಯಂತ ಜನರು ತಮ್ಮನ್ನು ಮತ್ತು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ತಂಪಾಗಿರಿಸಲು ವಿವಿಧ ಮಾರ್ಗಗಳನ್ನು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ (Social Media) ದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪೋಸ್ಟ್‌ಗಳು ಸಹ ನಮಗೆ ಕಾಣಲು ಸಿಗುತ್ತವೆ. ಅವುಗಳ ಮಧ್ಯೆ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿರುವ ಚಿತ್ರವೊಂದು ಈಗ ಜನರ ಗಮನ ಸೆಳೆದಿದೆ. ಫೋಟೋದಲ್ಲಿ ರಿಕ್ಷಾದ ಮೇಲ್ಭಾಗದಲ್ಲಿ ಮಿನಿ ಉದ್ಯಾನವನ್ನು ಕಾಣಬಹುದಾಗಿದೆ. ನಾರ್ವೆಯ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಭಾರತೀಯ ವ್ಯಕ್ತಿ ತನ್ನ ರಿಕ್ಷಾದಲ್ಲಿ ಬಿಸಿಲಲ್ಲಿಯೂ ತಂಪಾಗಿರಲು ಹುಲ್ಲು ಬೆಳೆಸಿದ್ದಾನೆ. ನಿಜವಾಗಿಯೂ ಇದು ಕೂಲ್ ಐಡಿಯಾ! ಎಂದು ಚಿತ್ರವನ್ನು ಪೋಸ್ಟ್ ಮಾಡುವಾಗ ಅವರು ಬರೆದಿದ್ದಾರೆ.

ಚಿತ್ರದಲ್ಲಿ ತನ್ನ ವಾಹನದಲ್ಲಿ ಕುಳಿತಿರುವ ರಿಕ್ಷಾ ಚಾಲಕನನ್ನು ಕಾಣಬಹುದು. ಅದರ ಛಾವಣಿಯು ಚೆನ್ನಾಗಿ ಕತ್ತರಿಸಿದ ಹುಲ್ಲಿನಿಂದ ಆವೃತವಾಗಿದೆ. ಅಷ್ಟೇ ಅಲ್ಲ, ವಾಹನದ ಬದಿಯಲ್ಲಿ ಕೆಲವು ಕುಂಡಗಳಲ್ಲಿ ಗಿಡಗಳನ್ನೂ ಇಡಲಾಗಿದೆ. ಚಿತ್ರವನ್ನು ಯಾವಾಗ ಸೆರೆಹಿಡಿಯಲಾಗಿದೆ, ಅದು ಎಲ್ಲಿಂದ ಬಂದಿದೆ ಅಥವಾ ಆನ್‌ಲೈನ್‌ನಲ್ಲಿ ಯಾವಾಗ ಹಂಚಿಕೊಳ್ಳಲಾಗಿದೆ ಎಂಬುದು ತಿಳಿದಿಲ್ಲವಾದರೂ, ಅದೇ ಚಿತ್ರವನ್ನು ಹೊಂದಿರುವ ಪೋಸ್ಟ್​ನ್ನು 2021 ರಲ್ಲಿ ಅಸ್ಸಾಂ ಅಲರ್ಟ್ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಇನ್ನೋವೇಶನ್,  ಈ ಮನುಷ್ಯ ತನ್ನ ರೈಡ್​ನ್ನು ಶಾಖದಿಂದ ತಪ್ಪಿಸಿಕೊಳ್ಳಲು ತನ್ನ ರಿಕ್ಷಾದಲ್ಲಿ ಹುಲ್ಲು ಬೆಳೆದಿದ್ದಾನೆ ಎಂದು ಅವರು ಚಿತ್ರವನ್ನು ಪೋಸ್ಟ್ ಮಾಡುವಾಗ ಬರೆದಿದ್ದಾರೆ.

ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ 20,000 ಕ್ಕೂ ಹೆಚ್ಚು ಲೈಕ್ಸ್​ ಸಂಗ್ರಹಿಸಿದ್ದು, ಇನ್ನೂ ಹೆಚ್ಚುತ್ತಿದೆ. ಈ ಹಂಚಿಕೆಯು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ. ಅದ್ಭುತ ನಿಮ್ಮ ಆವಿಷ್ಕಾರ ಮತ್ತು ಅಂತಹ ಆರೋಗ್ಯಕರ ಸಸ್ಯಗಳನ್ನು ಬೆಳೆಸುವ ನಿಮ್ಮ ಕೌಶಲ್ಯಕ್ಕೆ ಸೆಲ್ಯೂಟ್ ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಇದು ವಾಸ್ತವವಾಗಿ ಬಹಳ ನವೀನವಾಗಿದೆ, ಇತರ ರಿಕ್ಷಾ ಚಾಲಕರು ಸಹ ಈ ತರ ಮಾಡಲಿ. ತಾಪಮಾನವು ಈಗಾಗಲೇ 42 ಡಿಗ್ರಿಗಿಂತ ಹೆಚ್ಚಾಗಿದೆ ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ಬೇಸಿಗೆಯಲ್ಲಿ ತಂಪಾಗಿರಲು ಒಂದು ಹೊಸ ಕಲ್ಪನೆ. ಆ ಸಾಲುಗಳಲ್ಲಿ ಯೋಚಿಸಿದ್ದಕ್ಕಾಗಿ ನಿಮಗೆ ಶ್ಲಾಘನೆ. ಗ್ರಾಹಕರನ್ನು ಆಕರ್ಷಿಸಲು ಉತ್ತಮ ಮಾರ್ಗವಾಗಿದೆ, ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ;

Viral Video: ಚುರಾಕೆ ದಿಲ್​ ಮೆರಾ ಹಾಡಿಗೆ ಖ್ಯಾತ ಹಾಲಿವುಡ್ ನಟಿ ಡ್ರ್ಯೂ ಬ್ಯಾರಿಮೋರ್ ಏನು ಮಾಡಿದಳು ನೋಡಿ

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ; ಜಾಗರೂಕರಾಗಿರಿ ಎಂದ ಕೇಂದ್ರ

ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ