AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eastern Brown Snake: ಹಾವಿನೊಂದಿಗೆ ರಾತ್ರಿ ಕಳೆದಿದ್ದ ಮಹಿಳೆ: ಹಾಸಿಗೆಯೊಳಗಿತ್ತು 6 ಅಡಿ ಉದ್ದದ ವಿಷಪೂರಿತ ಹಾವು

ನೀವು ರಾತ್ರಿ ಉತ್ತಮ ನಿದ್ರೆ ಮಾಡಿ ಬೆಳಗ್ಗೆ ಚಾದರ ತೆಗೆದಾಗ ಒಮ್ಮೆ ಹಾವು ಕಾಣಿಸಿಕೊಂಡರೆ ಏನಾಗುತ್ತೆ ಹೇಳಿ.ಇಂಥದ್ದೇ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ, ಮಹಿಳೆಯೊಬ್ಬಳು ಬೆಳಗ್ಗೆ ಏಳುವಾಗ ಹಾಸಿಗೆಯಲ್ಲಿ 6 ಅಡಿ ಉದ್ದದ ವಿಷಪೂರಿತ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ

Eastern Brown Snake: ಹಾವಿನೊಂದಿಗೆ ರಾತ್ರಿ ಕಳೆದಿದ್ದ ಮಹಿಳೆ: ಹಾಸಿಗೆಯೊಳಗಿತ್ತು 6 ಅಡಿ ಉದ್ದದ ವಿಷಪೂರಿತ ಹಾವು
ಈಸ್ಟರ್ನ್​ ಬ್ರೌನ್ ಸ್ನೇಕ್
ನಯನಾ ರಾಜೀವ್
|

Updated on: Mar 23, 2023 | 3:12 PM

Share

ನೀವು ರಾತ್ರಿ ಉತ್ತಮ ನಿದ್ರೆ ಮಾಡಿ ಬೆಳಗ್ಗೆ ಚಾದರ ತೆಗೆದಾಗ ಒಮ್ಮೆಲೆ ಹಾವು ಕಾಣಿಸಿಕೊಂಡರೆ ಏನಾಗುತ್ತೆ ಹೇಳಿ ಪರಿಸ್ಥಿತಿ. ಇಂಥದ್ದೇ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ, ಮಹಿಳೆಯೊಬ್ಬಳು ಬೆಳಗ್ಗೆ ಏಳುವಾಗ ಹಾಸಿಗೆಯಲ್ಲಿ 6 ಅಡಿ ಉದ್ದದ ವಿಷಪೂರಿತ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ರಾತ್ರಿ ಇಡೀ ಹಾವು ಅಲ್ಲಿಯೇ ಇತ್ತಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹಾವು ಕಾಣಿಸಿಕೊಳ್ಳುತ್ತಿದ್ದಂತೆಯೇ ಕಿರುಚಿಕೊಂಡು ಕೋಣೆಯಿಂದ ಹೊರಹೋಗಿದ್ದಾರೆ. ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಕ್ವೀನ್ಸ್‌ಲ್ಯಾಂಡ್‌ನ ಮಹಿಳೆಯೊಬ್ಬರು ತಮ್ಮ ಹಾಸಿಗೆಯಲ್ಲಿ ಆರು ಅಡಿ ಉದ್ದದ ವಿಷಕಾರಿ ಹಾವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಘಟನೆ ಕಳೆದ ಸೋಮವಾರ ನಡೆದಿದೆ, ಮಹಿಳೆ ಹಾಸಿಗೆಯಿಂದ ಬೆಡ್​ಶೀಟ್​ ಅನ್ನು ಪಕ್ಕಕ್ಕೆ ಸರಿಸುವಾಗ ಕಂದು ಹಾವು  ಕಾಣಿಸಿಕೊಂಡಿತ್ತು.

ಏನಾದರೂ ಶಬ್ದ ಮಾಡಿದರೆ ಹಾವು ಓಡಿ ಹೋಗಬಹುದೆಂದು ಟವೆಲ್​ ಅನ್ನು ನೆಲಕ್ಕೆ ಹಾಕಿದರು, ಯಾವುದಕ್ಕೂ ಬಗ್ಗದೆ ಅದು ಮಲಗಿದಲ್ಲಿಯೇ ಮಲಗಿತ್ತು, ಬಳಿಕ ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಅಲ್ಲಿಂದ ತೆರವುಗೊಳಿಸಲಾಯಿತು.

ಸ್ನ್ಯಾಕ್ ಕ್ಯಾಚರ್ ಜಚೇರಿ ರಿಚರ್ಡ್ ಅವರು ಕೋಣೆಗೆ ತಲುಪಿದಾಗ ಹಾವು ಅಲ್ಲಿಯೇ ಇತ್ತು, ಶಾಖದಿಂದ ಪಾರಾಗಲು ಹಾವು ಬಾಗಿಲಿನ ಮೂಲಕ ಕೋಣೆಗೆ ಪ್ರವೇಶಿಸಿರಬಹುದು ಎಂದು ರಿಚರ್ಡ್ ಹೇಳಿದರು.

ಹಾವನ್ನು ಹಿಡಿದ ನಂತರ, ರಿಚರ್ಡ್ ಅದನ್ನು ಇತರ ಮನೆಗಳಿಂದ ಸುರಕ್ಷಿತ ದೂರದಲ್ಲಿರುವ ಪೊದೆಯೊಳಗೆ ಬಿಟ್ಟಿದ್ದಾರೆ. ಈಸ್ಟರ್ನ್ ಬ್ರೌನ್ ವಿಶ್ವದ ಎರಡನೇ ಅತ್ಯಂತ ವಿಷಕಾರಿ ಹಾವು. ಅದರ ವಿಷವು ಪ್ರಬಲವಾದ ನ್ಯೂರೋಟಾಕ್ಸಿನ್ ಅನ್ನು ಹೊಂದಿರುತ್ತದೆ.

ಈ ಹಾವು ಯಾರಿಗಾದರೂ ಕಚ್ಚಿದರೆ, ಅದರ ವಿಷವು ಹೃದಯ ಮತ್ತು ಶ್ವಾಸಕೋಶವನ್ನು ನಿಷ್ಕ್ರಿಯಗೊಳಿಸುತ್ತದೆ. ಆಗ ವ್ಯಕ್ತಿ ಉಸಿರುಗಟ್ಟಿ ವ್ಯಕ್ತಿ ಸಾಯುತ್ತಾನೆ. ಆಸ್ಟ್ರೇಲಿಯಾದಲ್ಲಿ ಈ ಹಾವಿನ ಕಡಿತದಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ