ಪಾರಿವಾಳಗಳಿಗೆ ಆಹಾರ ನೀಡಿದಕ್ಕೆ 97 ವರ್ಷದ ವೃದ್ಧೆಯ ಮೇಲೆ 2.5 ಲಕ್ಷ ರೂ ದಂಡ

ಸಾಕಷ್ಟು ಪಾರಿವಾಳ, ಬೆಳ್ಳಕ್ಕಿಗಳು ಬರುತ್ತಿದ್ದು, ಇಡೀ ಪ್ರದೇಶ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ದೂರಿದ್ದಾರೆ. ಪ್ರಾರಂಭದಲ್ಲಿ ನಗರಸಭೆ ಈ ವೃದ್ಧೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು, ಆದರೆ ಈ ನೋಟಿಸನ್ನು ನಿರ್ಲಕ್ಷ್ಯಿಸಿದ್ದರಿಂದ ಇತ್ತೀಚಿಗಷ್ಟೇ 2,500 ಪೌಂಡ್‌ಗಳಿಗೆ ಅಂದರೆ 2.5 ಲಕ್ಷ ರೂ.ದಂಡ ವಿಧಿಸಿದೆ. ಇದಲ್ಲದೆ ಮುಂದೆ ಹೀಗೆ ಮುಂದುವರಿದರೆ ಸ್ವಂತ ಮನೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಪಾರಿವಾಳಗಳಿಗೆ ಆಹಾರ ನೀಡಿದಕ್ಕೆ 97 ವರ್ಷದ  ವೃದ್ಧೆಯ ಮೇಲೆ 2.5 ಲಕ್ಷ ರೂ ದಂಡ
Feeding pigeons
Image Credit source: Pinterest

Updated on: Apr 02, 2024 | 2:17 PM

ಯುನೈಟೆಡ್ ಕಿಂಗ್‌ಡಮ್​​​ನ  97 ವರ್ಷದ ವೃದ್ಧೆಯೊಬ್ಬರು ಪ್ರತೀ ದಿನ ತನ್ನ ಮನೆಯ ಅಂಗಳದಲ್ಲಿ ಪಾರಿವಾಳಗಳಿಗೆ ಆಹಾರ ನೀಡುತ್ತಿರುವುದನ್ನು ಕಂಡು ಸ್ಥಳೀಯರು ನಗರಸಭೆಗೆ ದೂರು ನೀಡಿದ್ದಾರೆ. ಪರಿಣಾಮ ಪಾರಿವಾಳಗಳಿಗೆ ಆಹಾರ ನೀಡದಂತೆ ನೋಟಿಸ್​​ ಬಂದಿದೆ. 2.5 ಲಕ್ಷ ರೂ. ದಂಡ, ಅಷ್ಟೇ ಅಲ್ಲದೆ, ಮುಂದೆ ಹೀಗೆ ಮುಂದುವರಿದರೆ ಸ್ವಂತ ಮನೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.

ಮಿರರ್ ವರದಿಯ ಪ್ರಕಾರ, ಸಂಗೀತ ಶಿಕ್ಷಕರಾಗಿರುವ ಅನ್ನೆ ಸಿಗೋ(97) ಅವರಿಗೆ ಪಕ್ಷಿಗಳೆಂದರೆ ತುಂಬಾ ಇಷ್ಟ. ಅವರು ತಮ್ಮ ಮನೆಯಲ್ಲಿ ಕೆಲವು ಪಕ್ಷಿಗಳನ್ನು ಸಹ ಸಾಕಿದ್ದಾರೆ. ಆದರೆ ಕಳೆದ ಹಲವು ತಿಂಗಳುಗಳಿಂದ ಇವರ ಅಂಗಳಕ್ಕೆ ಗುಬ್ಬಚ್ಚಿ, ಪಾರಿವಾಳ ಬರಲಾರಂಭಿಸಿದ್ದವು. ಅನ್ನಿ ಅವುಗಳಿಗೆ ಕೂಡ ಆಹಾರ ನೀಡುತ್ತಿದ್ದರು. ಇದರಿಂದಾಗಿ ಅನೇಕ ಪಕ್ಷಿಗಳು ಪ್ರತೀ ದಿನ ಮನೆಗೆ ಬರಲಾರಂಭಿಸಿದವು. ಇದರಿಂದಾಗಿ ನಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶ ಕೊಳಕಾಗಿದೆ ಎಂದು ಸ್ಥಳೀಯರು ಅನ್ನೆ ಮೇಲೆ ನಗರಸಭೆಯಲ್ಲಿ ದೂರು ನೀಡಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ:

ಆಹಾರ ಧಾನ್ಯ ವಿತರಣೆಯಿಂದ ಸಾಕಷ್ಟು ಪಾರಿವಾಳ, ಬೆಳ್ಳಕ್ಕಿಗಳು ಬರುತ್ತಿದ್ದು, ಇಡೀ ಪ್ರದೇಶ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ದೂರಿದ್ದಾರೆ. ಪ್ರಾರಂಭದಲ್ಲಿ ನಗರಸಭೆ ಈ ವೃದ್ಧೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು, ಆದರೆ ಈ ನೋಟಿಸನ್ನು ನಿರ್ಲಕ್ಷ್ಯಿಸಿದ್ದರಿಂದ ಇತ್ತೀಚಿಗಷ್ಟೇ 2,500 ಪೌಂಡ್‌ಗಳಿಗೆ ಅಂದರೆ 2.5 ಲಕ್ಷ ರೂ.ದಂಡ ವಿಧಿಸಿದೆ. ಇದಲ್ಲದೆ ಮುಂದೆ ಹೀಗೆ ಮುಂದುವರಿದರೆ ಸ್ವಂತ ಮನೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಪಾರಿವಾಳಗಳಿಗೆ ಆಹಾರ ನೀಡುವುದು ಹಲವು ದೇಶಗಳಲ್ಲಿ ಅಪರಾಧ:

ಇಂಗ್ಲೆಂಡ್, ಥೈಲ್ಯಾಂಡ್, ಕೊಲಂಬಿಯಾ, ಕೆನಡಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ಅಪರಾಧವಾಗಿದೆ. ಹೆಚ್ಚು ಪಾರಿವಾಳಗಳು ಬರುವುದರಿಂದ ಪ್ರದೇಶಗಳಲ್ಲಿ ಕೊಳಕು ಉಂಟಾಗುತ್ತದೆ. ಇದರಿಂದಾಗಿ ಸೋಂಕು ಹರಡುವ ಅಪಾಯವಿದೆ. ಇದು ಸ್ವಚ್ಛತೆಯ ಮೇಲೂ ಪರಿಣಾಮ ಬೀರುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Tue, 2 April 24

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us