Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವನೇನೂ ಬೇರೆ ಗ್ರಹದಿಂದ ಯುಎಫ್ಒನಲ್ಲಿ ಬಂದವನಲ್ಲ, ತಾನೇ ನಿರ್ಮಿಸಿದ ಡ್ರೋನ್ ಮೇಲೆ ನಿಂತು ನ್ಯೂ ಯಾರ್ಕ್​ ನಗರದ ಮೇಲೆ ಹಾರಾಡುತ್ತಿದ್ದಾನೆ!!

ಈ ವಿಡಿಯೋವನ್ನು ಮೊದಲ ಬಾರಿಗೆ ಮೊರ್ಗನ್ ನೆವಿನ್ಸ್ ಎನ್ನುವವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದರು. ಅದಾದ ಮೇಲೆ ರೆಕ್ಸ್ ಚಾಪ್​ಮನ್​ ಎನ್ನುವ ವ್ಯಕ್ತಿ ಟ್ವಿಟ್ಟರ್ ಪ್ಲಾಟ್​ಫಾರ್ಮ್​ನಲ್ಲಿ ಶೇರ್ ಮಾಡಿದರು. ತಮ್ಮ 10 ಸೆಕೆಂಡುಗಳ ವಿಡಿಯೊಗೆ ಅವರು, ‘ಓಹ್ ಏನಿಲ್ಲ- ಒಬ್ಬ ವ್ಯಕ್ತಿ ನ್ಯೂ ಯಾರ್ಕ್ ನಗರದ ಮೇಲೆ ಹಾರಾಡುತ್ತಿದ್ದಾನೆ’ ಎಂಬ ಶೀರ್ಷಿಕೆ ನೀಡಿದ್ದರು

ಅವನೇನೂ ಬೇರೆ ಗ್ರಹದಿಂದ ಯುಎಫ್ಒನಲ್ಲಿ ಬಂದವನಲ್ಲ, ತಾನೇ ನಿರ್ಮಿಸಿದ ಡ್ರೋನ್ ಮೇಲೆ ನಿಂತು ನ್ಯೂ ಯಾರ್ಕ್​ ನಗರದ ಮೇಲೆ ಹಾರಾಡುತ್ತಿದ್ದಾನೆ!!
ಹಂಟರ್ ಕೊವಾಲ್ಡ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 24, 2021 | 9:13 PM

ನಾವೆಲ್ಲ ಡ್ರೋನ್​​ಗಳು ಹಾರುವುದನ್ನು ನೋಡಿದ್ದೇವೆ. ಈಗ ಅದು ಸಾಮಾನ್ಯವಾಗಿದೆ ಆದರಲ್ಲೇನೂ ವಿಶೇಷವಿಲ್ಲ. ಆದರೆ ಡ್ರೋನ್ ಒಂದರ ಮೇಲೆ ನಿಂತ ಒಬ್ಬ ವ್ಯಕ್ತಿ ಯಾವುದೋ ಒಂದು ನಗರದ ಬೀದಿಗಳ ಮೇಲೆ, ಇಲ್ಲವೇ ಒಂದು ದೊಡ್ಡ ಮೈದಾನದ ಮೇಲೆ ಹಾರಾಡುವುದನ್ನು ನೋಡಿದ್ದೀರಾ? ಇಲ್ಲ, ಇದು ಭಾರತದಲ್ಲಿ ಆಗಿಲ್ಲ ಬಿಡಿ, ಆದರೆ, ಅಮೇರಿಕದ ನ್ಯೂ ಯಾರ್ಕ್​ ನಗರದ ಟೈಮ್ಸ್ ಚೌಕದ ಮೇಲೆ ಹಾಗೆ ಹಾರಾಡುವ ವ್ಯಕ್ತಿಯನ್ನು ಜನ ನೋಡಿದ್ದಾರೆ. ಅನೇಕರು ಆ ಅಪರೂಪ ಮತ್ತು ಅಭೂತಪೂರ್ವ ಸನ್ನಿವೇಶವನ್ನು ತಮ್ಮ ಮೊಬೈಲ್​ಗಳಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದು ಅದೀಗ ವೈರಲ್ ಆಗಿಬಿಟ್ಟಿದೆ. ಹಾಗೆ ಹಾರಾಡಿದ ವ್ಯಕ್ತಿಯನ್ನು ಹಂಟರ್ ಕೊವಾಲ್ಡ್ ಹೆಸರಿನ ಯೂಟ್ಯೂಬರ್ ಎಂದು ಗುರುತಿಸಲಾಗಿದ್ದು ಅವನಿಗೆ 23,400 ಪಾಲೋಯರ್ಸ್​ ಇದ್ದಾರೆ.

ಈ ವಿಡಿಯೋವನ್ನು ಮೊದಲ ಬಾರಿಗೆ ಮೊರ್ಗನ್ ನೆವಿನ್ಸ್ ಎನ್ನುವವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದರು. ಅದಾದ ಮೇಲೆ ರೆಕ್ಸ್ ಚಾಪ್​ಮನ್​ ಎನ್ನುವ ವ್ಯಕ್ತಿ ಟ್ವಿಟ್ಟರ್ ಪ್ಲಾಟ್​ಫಾರ್ಮ್​ನಲ್ಲಿ ಶೇರ್ ಮಾಡಿದರು. ತಮ್ಮ 10 ಸೆಕೆಂಡುಗಳ ವಿಡಿಯೊಗೆ ಅವರು, ‘ಓಹ್ ಏನಿಲ್ಲ- ಒಬ್ಬ ವ್ಯಕ್ತಿ ನ್ಯೂ ಯಾರ್ಕ್ ನಗರದ ಮೇಲೆ ಹಾರಾಡುತ್ತಿದ್ದಾನೆ’ ಎಂಬ ಶೀರ್ಷಿಕೆ ನೀಡಿದ್ದರು. ಅವರ ವಿಡಿಯೊನಲ್ಲಿ ಕೆಮೆರಾ ಸುತ್ತಿರುವ ಹೆಲ್ಮೆಟ್ ಒಂದನ್ನು ಧರಿಸಿದ ವ್ಯಕ್ತಿ ಭೂಮಿಗಿಂತ 10 ಅಡಿ ಮೇಲೆ ಹಾರಾಡುತ್ತಿರುವುದನ್ನು ನೋಡಬಹುದಾಗಿದೆ.

ನಗರದ ಬೀದಿಗಳಲ್ಲಿರುವ ಜನ ಅವನನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದಾರೆ. ಸದರಿ ವಿಡಿಯೊವನ್ನು ಜೂನ್ 19 ರಂದು ಶೂಟ್​ ಮಾಡಲಾಗಿದೆ. ಚಾಪ್​ಮನ್ ಶೇರ್ ಮಾಡಿರುವ ವಿಡಿಯೋಗೆ 70 ಲಕ್ಷ ವ್ಯೂಗಳು ಬಂದಿವೆ.

ಇನ್​ಸೈಡ್​ ಹೆಸರಿನ ಪತ್ರಿಕೆಯೊಂದರ ಜತೆ ಮಾತಾಡಿರುವ ಹಂಟರ್ ಕೊವಾಲ್ಡ್, ಹಾಗೆ ಹಾರುವುದನ್ನು ಸಾಧ್ಯವಾಗಿಸಲು ತನಗೆ ಹಲವಾರು ವರ್ಷ ಬೇಕಾದವು ಎಂದು ಹೇಳಿದ್ದಾನೆ. ‘ಉತ್ಕೃಷ್ಟ ಮಟ್ಟದ ಇಂಜಿನೀಯರಿಂಗ್ ತಂತ್ರಜ್ಞಾನದ ಮೂಲಕ ಈ ಉಪಕರಣವನ್ನು ತಯಾರಿಸಲಾಗಿದೆ. ಅದನ್ನು ಸೂಕ್ತ ಮತ್ತು ಸುರಕ್ಷಿತವಾಗಿ ಹಾರಿಸಲು ನಾನು ಹಲವಾರು ವರ್ಷಗಳ ಕಾಲ ಪ್ರಯತ್ನಪಟ್ಟಿದ್ದೇನೆ. ಡ್ರೋನ್ ತಯಾರಿಸುವಾಗ ಅದರ ಸುರಕ್ಷತೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಒಂದು ಪಕ್ಷ ಅದರ ಎರಡು ಮೋಟಾರ್​ಗಳು ವಿಫಲಗೊಂಡರೂ ನಾನು ಸುರಕ್ಷಿತವಾಗಿ ಲ್ಯಾಂಡ್​ ಆಗಬಲ್ಲೆ, ಎಂದು ಕೊವಾಲ್ಡ್ ಹೇಳಿದ್ದಾನೆ. ತನ್ನ ಸಾಹಸದ ವಿಡಿಯೊಗಳನ್ನು ಕೊವಾಲ್ಡ್ ಆಗಾಗ ಯೂಟ್ಯೂಬ್​ನಲ್ಲಿ ಪೋಸ್ಟ್​ ಮಾಡುತ್ತಿರುತ್ತಾನೆ.

ಈ ಸ್ಟಂಟ್​ಗೆ ಕೈ ಹಾಕುವ ಮೊದಲು ಅಗತ್ಯವಿದ್ದ ಸಕಲ ಅನುಮತಿಗಳನ್ನು ಪಡೆದುಕೊಳ್ಳಲಾಯಿತು ಎಂದು ಕೊವಾಲ್ಡ್​ ಹೇಳಿದ್ದಾನೆ. ‘ಸಾಕಷ್ಟು ಮೊದಲೇ ಕೇಳಿ ಪಡೆದ ಅನುಮತಿ ನಮಗಿತ್ತು. ಈ ಸಾಹಸ ಸುರಕ್ಷಿತವಾಗಿ ನೇರವೇರಲಿ ಅಂತ ಎಲ್ಲರೂ ನಮಗೆ ಸಹಾಯ ಮಾಡಿದರು,’ ಎಂದು ಅವನು ಹೇಳಿದ್ದಾನೆ ಆದರೆ, ನ್ಯೂ ಯಾರ್ಕ್ ಪೊಲೀಸ್ ಇಲಾಖೆ (ಎನ್ ವೈ ಪಿ ಡಿ) ಸದರಿ ವಿಡಿಯೋವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದೆ.

ನೆಟ್ಟಿಗರು ಕೊವಾಲ್ಡ್​ ಸಾಹಸವನ್ನು ಸ್ಪೈಡರ್​ಮ್ಯಾನ್ ಚಿತ್ರದಲ್ಲಿ ಗ್ರೀನ್​ ಗೋಬ್ಲಿನ್ ಮಾಡಿದ ಸ್ಟಂಟ್​ಗಳಿಗೆ ಹೋಲಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಇಲ್ಲದವರಿಗೆ ಗ್ರೀನ್​ ಗೋಬ್ಲಿನ್ ಆ ಚಿತ್ರದಲ್ಲಿ ಖಳನಾಯಕನಾಗಿದ್ದಾನೆ. ಚಿತ್ರದಲ್ಲಿ ವಿಲ್ಲೆಮ್ ಡಾಫೆಯ ಗ್ರೀನ್​ ಗೋಬ್ಲಿನ್ ತನ್ನ ಹೋವರ್​​ಬೋರ್ಡ್​ ಮೇಲೆ ನಗರದ ಮೇಲೆಲ್ಲ ಹಾರಾಡಿ ಸ್ಫೋಟಕಗಳನ್ನು ಡ್ರಾಪ್ ಮಾಡುವ ಸನ್ನಿವೇಶ ನೆಟ್ಟಿಗರಿಗೆ ನೆನಪಾಗುತ್ತಿದೆ.

ಇದನ್ನೂ ಓದಿ: Viral Video: ಈ ಡ್ರೋನ್​ನಲ್ಲಿ ಮನುಷ್ಯರೂ ಕೂತು ಹಾರಬಹುದು! ವಿಡಿಯೋ ನೋಡಿ

ಇದನ್ನೂ ಓದಿ: Drones in Agriculture: ಭತ್ತದ ಕಣಜದಲ್ಲಿ ಕ್ರೀಮಿನಾಶಕ ಸಿಂಪಡಣೆಗಾಗಿ ಡ್ರೋನ್​ಗೆ ಮೊರೆ ಹೋದ ರೈತರು

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್