Sign In

By signing in or creating an account, you agree with Associated Broadcasting Company's Terms & Conditions and Privacy Policy.

Long Nosed Snake: ಉದ್ದ ಮೂಗು ಹೊಂದಿರುವ ಹೊಸ ಜಾತಿಯ ಹಾವು ಪತ್ತೆ

ಸಂಶೋಧಕರ ತಂಡ ನೀಡಿರುವ ವಿವರಗಳ ಪ್ರಕಾರ ಇದುವರೆಗೆ ಈ ಹಾವು ಬಿಹಾರ ಮತ್ತು ಮೇಘಾಲಯದಲ್ಲಿ ಎರಡು ಕಡೆ ಮಾತ್ರ ಕಾಣಿಸಿಕೊಂಡಿದೆ. ಈ ಹಾವಿನ ಉದ್ದ 4 ಅಡಿಗಳವರೆಗೆ ಇರುತ್ತದೆ. ಇದರ ತಲೆ ತ್ರಿಕೋನ ಆಕಾರ ಮತ್ತು ಮೂಗು ತುಂಬಾ ಉದ್ದವಾಗಿದ್ದು, ಇದು ಸಂಪೂರ್ಣವಾಗಿ ಹೊಸ ಜಾತಿಯ ಹಾವು ಎಂದು ಘೋಷಿಸಿದ್ದಾರೆ.

Long Nosed Snake: ಉದ್ದ ಮೂಗು ಹೊಂದಿರುವ ಹೊಸ ಜಾತಿಯ ಹಾವು ಪತ್ತೆ
Long Nosed Snake
Follow us
ಅಕ್ಷತಾ ವರ್ಕಾಡಿ
|

Updated on:Sep 12, 2024 | 6:21 PM

ಬಿಹಾರದ ಪಶ್ಚಿಮ ಚಂಪಾರಣ್‌ನ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಬಳಿ ಸಂಶೋಧಕರು ಹೊಸ ಜಾತಿಯ ಹಾವನ್ನು ಗುರುತಿಸಿದ್ದಾರೆ. ಈ ಹಾವಿನ ವಿಶಿಷ್ಟತೆಯೆಂದರೆ, ಈ ಹಾವು ಉದ್ದವಾದ ಮೂಗನ್ನು ಹೊಂದಿದ್ದು, ಇದಕ್ಕೆ ಅಹತುಲ್ಲಾ ಲಾಂಗಿರೋಸ್ಟ್ರಿಸ್ ಎಂದು ಹೆಸರಿಟ್ಟಿದ್ದಾರೆ. ಇದರ ಅರ್ಥ ಉದ್ದ ಮೂಗಿನ ಹಾವು. ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಬಳಿ ಹಾವು ಸಾವನ್ನಪ್ಪಿದೆ. ಈ ಹಾವಿನ ಜಾತಿಯನ್ನು ನಿರ್ಧರಿಸಲು ಡಿಎನ್‌ಎ ಪರೀಕ್ಷೆಯನ್ನು ಮಾಡಲಾಯಿತು, ಆದರೆ ಡಿಎನ್‌ಎ ಪರೀಕ್ಷೆಯಲ್ಲಿ ಇದು ಸಂಪೂರ್ಣವಾಗಿ ಹೊಸ ಜಾತಿಯ ಹಾವು ಎಂದು ತಿಳಿದುಬಂದಿದೆ. ಆವಿಷ್ಕಾರವನ್ನು ‘ಜರ್ನಲ್ ಆಫ್ ಏಷ್ಯಾ-ಪೆಸಿಫಿಕ್ ಬಯೋಡೈವರ್ಸಿಟಿ’ ನಲ್ಲಿ ಪ್ರಕಟಿಸಲಾಗಿದೆ.

‘ಜರ್ನಲ್ ಆಫ್ ಏಷ್ಯಾ-ಪೆಸಿಫಿಕ್ ಬಯೋಡೈವರ್ಸಿಟಿ’ ಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಡಿಸೆಂಬರ್ 2021 ರಲ್ಲಿ, ವಿಜ್ಞಾನಿಗಳಾದ ಸೌರಭ್ ವರ್ಮಾ ಮತ್ತು ಸೋಹಂ ಪಟೇಕರ್ ಅವರು ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಬಳಿ ತನಿಖೆ ನಡೆಸುತ್ತಿದ್ದಾಗ ಸತ್ತ ಹಾವೊಂದು ಪತ್ತೆಯಾಗಿದೆ. ಈ ಹಾವಿನ ಮೂಗು ಅಸಾಮಾನ್ಯವಾಗಿ ಉದ್ದವಾಗಿರುವುದನ್ನು ಗಮನಿಸಿದ್ದು, ಈ ಹಾವು ಅವರ ಗಮನ ಸೆಳೆದಿದೆ. ಅವರು ಹಾವಿನ ಮಾದರಿಗಳನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆಯನ್ನು ಪ್ರಾರಂಭಿಸಿ, ಇದು ಸಂಪೂರ್ಣ ಹೊಸ ಜಾತಿಯ ಹಾವು ಎಂಬುದು ದೃಢಪಟ್ಟಿಸಿದ್ದಾರೆ.

ಇದನ್ನೂ ಓದಿ: ಕೇಕ್​​ ಕಟ್​​​ ಮಾಡಿ ಬೈಕ್ ಬರ್ತ್‌ಡೇ ಆಚರಿಸಿದ ವ್ಯಕ್ತಿ; ವಿಡಿಯೋ ವೈರಲ್​​

ಸಂಶೋಧಕರ ತಂಡ ನೀಡಿರುವ ವಿವರಗಳ ಪ್ರಕಾರ.. ಇದುವರೆಗೆ ಈ ಹಾವು ಬಿಹಾರ ಮತ್ತು ಮೇಘಾಲಯದಲ್ಲಿ ಎರಡು ಕಡೆ ಮಾತ್ರ ಕಾಣಿಸಿಕೊಂಡಿದೆ. ಈ ಹಾವಿನ ಉದ್ದ 4 ಅಡಿಗಳವರೆಗೆ ಇರುತ್ತದೆ. ಇದರ ತಲೆ ತ್ರಿಕೋನ ಆಕಾರದಲ್ಲಿದೆ. ಇದರ ಮೂಗು ತುಂಬಾ ಉದ್ದವಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Thu, 12 September 24

ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?