ಕೀಬೋರ್ಡ್‌ನಲ್ಲಿ ಎಫ್ ಮತ್ತು ಜೆ ಅಕ್ಷರಗಳ ಕೆಳಗೆ ಗೆರೆ ಏಕೆ ಇರುತ್ತದೆ ಎಂದು ತಿಳಿದಿದೆಯೇ?

ಲ್ಯಾಪ್ ಟಾಪ್​ ಅಥವಾ ಕಂಪ್ಯೂಟರ್ ಬಳಸುವ ಕೀಬೋರ್ಡ್‌ನಲ್ಲಿ F ಮತ್ತು J ಅಕ್ಷರಗಳ ಕೆಳಗೆ ಸಣ್ಣ ಗೆರೆಗಳನ್ನು ಗಮನಿಸಿರಬಹುದು? ಆದರೆ ಯಾಕೆ ಅದನ್ನು ಆ ರೀತಿ ವಿನ್ಯಾಸ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ? ತಿಳಿದಿಲ್ಲದಿದ್ದರೆ ಇಲ್ಲಿ ತಿಳಿದುಕೊಳ್ಳಿ.

ಕೀಬೋರ್ಡ್‌ನಲ್ಲಿ ಎಫ್ ಮತ್ತು ಜೆ ಅಕ್ಷರಗಳ ಕೆಳಗೆ ಗೆರೆ ಏಕೆ ಇರುತ್ತದೆ ಎಂದು ತಿಳಿದಿದೆಯೇ?
F and J
Follow us
|

Updated on: Oct 17, 2024 | 3:06 PM

ವಿದ್ಯಾರ್ಥಿಯಾಗಿರಲಿ ಅಥವಾ ಉದ್ಯೋಗಿಯಾಗಿರಲಿ ಇತ್ತೀಚಿನ ದಿನಗಳಲ್ಲಿ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್​ಗಳನ್ನು ಬಹುತೇಕ ಎಲ್ಲೆಡೆ ಬಳಸಲಾಗುತ್ತಿದೆ. ಅದರೆ ಎಂದಾದರೂ ಕೀಬೋರ್ಡ್‌ನಲ್ಲಿ F ಮತ್ತು J ಅಕ್ಷರಗಳ ಕೆಳಗೆ ಸಣ್ಣ ಗೆರೆಗಳನ್ನು ಗಮನಿಸಿದ್ದೀರಾ? ಗಮನಿಸಿದ್ದರೆ ಯಾಕೆ ಅದನ್ನು ಆ ರೀತಿ ವಿನ್ಯಾಸ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ? ತಿಳಿದಿಲ್ಲದಿದ್ದರೆ ಈ ಲೇಖನದಲ್ಲಿ ಉತ್ತರ ಕಂಡುಕೊಳ್ಳಿ.

ಎಫ್ ಮತ್ತು ಜೆ ಬಟನ್‌ಗಳಲ್ಲಿ ಏಕೆ ಗುರುತುಗಳಿವೆ ?

ಎಫ್ ಮತ್ತು ಜೆ ಬಟನ್‌ಗಳಲ್ಲಿನ ಈ ಸಣ್ಣ ಗುರುತುಗಳು ಟೈಪಿಂಗ್ ಜಗತ್ತಿನಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ವಾಸ್ತವವಾಗಿ, ಟೈಪಿಂಗ್ ವೇಗವನ್ನು ಹೆಚ್ಚಿಸುವುದು ಮತ್ತು ಕೀಬೋರ್ಡ್ ಅನ್ನು ನೋಡದೆ ವೇಗವಾಗಿ ಟೈಪ್ ಮಾಡಲು ಸಹಾಯ ಮಾಡುವುದು ಈ ಗೆರೆಗಳ ಮುಖ್ಯ ಉದ್ದೇಶವಾಗಿದೆ .

ಟೈಪಿಂಗ್‌ನಲ್ಲಿ ಈ ಗುರುತುಗಳು ಸಹಾಯ ಮಾಡುತ್ತವೆ . ಎಡಗೈಯ ತೋರು ಬೆರಳನ್ನು F ಬಟನ್ ಮೇಲೆ ಮತ್ತು ಬಲಗೈಯ ತೋರು ಬೆರಳನ್ನು J ಬಟನ್ ಮೇಲೆ ಇರಿಸಿದರೆ, ಉಳಿದ ಬೆರಳುಗಳು ಸ್ವಯಂಚಾಲಿತವಾಗಿ ಸರಿಯಾದ ಸ್ಥಳಕ್ಕೆ ಹೋಗುತ್ತವೆ. ಇದು ಟೈಪಿಂಗ್‌ನ ವೇಗ ಮತ್ತು ಸರಿಯಾದ ವಿಧಾನವನ್ನು ಹೆಚ್ಚಿಸುತ್ತದೆ . ಇದಲ್ಲದೇ, ಟೈಪ್ ಮಾಡುವುದನ್ನು ಪ್ರಾರಂಭಿಸಲು ಕೀಬೋರ್ಡ್‌ನಲ್ಲಿರುವ ಬೆರಳುಗಳ ಸರಿಯಾದ ಸ್ಥಳವನ್ನು ಟೈಪ್ ಮಾಡುವವರಿಗೆ ತಿಳಿಸಲು ಈ ಗುರುತುಗಳು ಸಹಾಯಕವಾಗಿವೆ.

ಇದನ್ನೂ ಓದಿ: ಮೊಸಳೆ ಮಾಂಸ ಕೆಜಿಗೆ 570 ರೂ.,ಚರ್ಮದಿಂದ ತಯಾರಿಸಿದ ಬ್ಯಾಗ್​ಗಳಿಗೆ 1.5 ಲಕ್ಷ ರೂ.; ಯಾವ ದೇಶದಲ್ಲಿ ಗೊತ್ತಾ?

ಎಫ್ ಮತ್ತು ಜೆ ಬಟನ್‌ಗಳನ್ನು ಏಕೆ ಆಯ್ಕೆ ಮಾಡಲಾಗಿದೆ ?

ಕೇವಲ ಎಫ್ ಮತ್ತು ಜೆ ಬಟನ್‌ಗಳನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ . ಆದ್ದರಿಂದ ಈ ಬಟನ್​ಗಳ ಸ್ಥಾನವೇ ಇದಕ್ಕೆ ಕಾರಣ. ವಾಸ್ತವವಾಗಿ, ಈ ಎರಡು ಬಟನ್‌ಗಳು ನಿಖರವಾಗಿ ಕೀಬೋರ್ಡ್‌ನ ಮಧ್ಯದಲ್ಲಿವೆ ಮತ್ತು ಅವುಗಳ ಸುತ್ತಲಿನ ಬಟನ್‌ಗಳನ್ನು ಹೆಚ್ಚು ಬಳಸಲಾಗುತ್ತದೆ . ಆದ್ದರಿಂದ, ಈ ಬಟನ್​​ ಗುರುತಿಸುವ ಮೂಲಕ, ಟೈಪರ್‌ಗೆ ಇತರ ಬಟನ್‌ಗಳನ್ನು ತಲುಪಲು ಸುಲಭವಾಗುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’