AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀಬೋರ್ಡ್‌ನಲ್ಲಿ ಎಫ್ ಮತ್ತು ಜೆ ಅಕ್ಷರಗಳ ಕೆಳಗೆ ಗೆರೆ ಏಕೆ ಇರುತ್ತದೆ ಎಂದು ತಿಳಿದಿದೆಯೇ?

ಲ್ಯಾಪ್ ಟಾಪ್​ ಅಥವಾ ಕಂಪ್ಯೂಟರ್ ಬಳಸುವ ಕೀಬೋರ್ಡ್‌ನಲ್ಲಿ F ಮತ್ತು J ಅಕ್ಷರಗಳ ಕೆಳಗೆ ಸಣ್ಣ ಗೆರೆಗಳನ್ನು ಗಮನಿಸಿರಬಹುದು? ಆದರೆ ಯಾಕೆ ಅದನ್ನು ಆ ರೀತಿ ವಿನ್ಯಾಸ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ? ತಿಳಿದಿಲ್ಲದಿದ್ದರೆ ಇಲ್ಲಿ ತಿಳಿದುಕೊಳ್ಳಿ.

ಕೀಬೋರ್ಡ್‌ನಲ್ಲಿ ಎಫ್ ಮತ್ತು ಜೆ ಅಕ್ಷರಗಳ ಕೆಳಗೆ ಗೆರೆ ಏಕೆ ಇರುತ್ತದೆ ಎಂದು ತಿಳಿದಿದೆಯೇ?
F and J
ಅಕ್ಷತಾ ವರ್ಕಾಡಿ
|

Updated on: Oct 17, 2024 | 3:06 PM

Share

ವಿದ್ಯಾರ್ಥಿಯಾಗಿರಲಿ ಅಥವಾ ಉದ್ಯೋಗಿಯಾಗಿರಲಿ ಇತ್ತೀಚಿನ ದಿನಗಳಲ್ಲಿ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್​ಗಳನ್ನು ಬಹುತೇಕ ಎಲ್ಲೆಡೆ ಬಳಸಲಾಗುತ್ತಿದೆ. ಅದರೆ ಎಂದಾದರೂ ಕೀಬೋರ್ಡ್‌ನಲ್ಲಿ F ಮತ್ತು J ಅಕ್ಷರಗಳ ಕೆಳಗೆ ಸಣ್ಣ ಗೆರೆಗಳನ್ನು ಗಮನಿಸಿದ್ದೀರಾ? ಗಮನಿಸಿದ್ದರೆ ಯಾಕೆ ಅದನ್ನು ಆ ರೀತಿ ವಿನ್ಯಾಸ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ? ತಿಳಿದಿಲ್ಲದಿದ್ದರೆ ಈ ಲೇಖನದಲ್ಲಿ ಉತ್ತರ ಕಂಡುಕೊಳ್ಳಿ.

ಎಫ್ ಮತ್ತು ಜೆ ಬಟನ್‌ಗಳಲ್ಲಿ ಏಕೆ ಗುರುತುಗಳಿವೆ ?

ಎಫ್ ಮತ್ತು ಜೆ ಬಟನ್‌ಗಳಲ್ಲಿನ ಈ ಸಣ್ಣ ಗುರುತುಗಳು ಟೈಪಿಂಗ್ ಜಗತ್ತಿನಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ವಾಸ್ತವವಾಗಿ, ಟೈಪಿಂಗ್ ವೇಗವನ್ನು ಹೆಚ್ಚಿಸುವುದು ಮತ್ತು ಕೀಬೋರ್ಡ್ ಅನ್ನು ನೋಡದೆ ವೇಗವಾಗಿ ಟೈಪ್ ಮಾಡಲು ಸಹಾಯ ಮಾಡುವುದು ಈ ಗೆರೆಗಳ ಮುಖ್ಯ ಉದ್ದೇಶವಾಗಿದೆ .

ಟೈಪಿಂಗ್‌ನಲ್ಲಿ ಈ ಗುರುತುಗಳು ಸಹಾಯ ಮಾಡುತ್ತವೆ . ಎಡಗೈಯ ತೋರು ಬೆರಳನ್ನು F ಬಟನ್ ಮೇಲೆ ಮತ್ತು ಬಲಗೈಯ ತೋರು ಬೆರಳನ್ನು J ಬಟನ್ ಮೇಲೆ ಇರಿಸಿದರೆ, ಉಳಿದ ಬೆರಳುಗಳು ಸ್ವಯಂಚಾಲಿತವಾಗಿ ಸರಿಯಾದ ಸ್ಥಳಕ್ಕೆ ಹೋಗುತ್ತವೆ. ಇದು ಟೈಪಿಂಗ್‌ನ ವೇಗ ಮತ್ತು ಸರಿಯಾದ ವಿಧಾನವನ್ನು ಹೆಚ್ಚಿಸುತ್ತದೆ . ಇದಲ್ಲದೇ, ಟೈಪ್ ಮಾಡುವುದನ್ನು ಪ್ರಾರಂಭಿಸಲು ಕೀಬೋರ್ಡ್‌ನಲ್ಲಿರುವ ಬೆರಳುಗಳ ಸರಿಯಾದ ಸ್ಥಳವನ್ನು ಟೈಪ್ ಮಾಡುವವರಿಗೆ ತಿಳಿಸಲು ಈ ಗುರುತುಗಳು ಸಹಾಯಕವಾಗಿವೆ.

ಇದನ್ನೂ ಓದಿ: ಮೊಸಳೆ ಮಾಂಸ ಕೆಜಿಗೆ 570 ರೂ.,ಚರ್ಮದಿಂದ ತಯಾರಿಸಿದ ಬ್ಯಾಗ್​ಗಳಿಗೆ 1.5 ಲಕ್ಷ ರೂ.; ಯಾವ ದೇಶದಲ್ಲಿ ಗೊತ್ತಾ?

ಎಫ್ ಮತ್ತು ಜೆ ಬಟನ್‌ಗಳನ್ನು ಏಕೆ ಆಯ್ಕೆ ಮಾಡಲಾಗಿದೆ ?

ಕೇವಲ ಎಫ್ ಮತ್ತು ಜೆ ಬಟನ್‌ಗಳನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ . ಆದ್ದರಿಂದ ಈ ಬಟನ್​ಗಳ ಸ್ಥಾನವೇ ಇದಕ್ಕೆ ಕಾರಣ. ವಾಸ್ತವವಾಗಿ, ಈ ಎರಡು ಬಟನ್‌ಗಳು ನಿಖರವಾಗಿ ಕೀಬೋರ್ಡ್‌ನ ಮಧ್ಯದಲ್ಲಿವೆ ಮತ್ತು ಅವುಗಳ ಸುತ್ತಲಿನ ಬಟನ್‌ಗಳನ್ನು ಹೆಚ್ಚು ಬಳಸಲಾಗುತ್ತದೆ . ಆದ್ದರಿಂದ, ಈ ಬಟನ್​​ ಗುರುತಿಸುವ ಮೂಲಕ, ಟೈಪರ್‌ಗೆ ಇತರ ಬಟನ್‌ಗಳನ್ನು ತಲುಪಲು ಸುಲಭವಾಗುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ