Viral: ದೇವರಂತೆ ಬಂದು ಹಾವಿನ ಪ್ರಾಣ ಉಳಿಸಿದ ಯುವಕ; ವಿಡಿಯೋ ವೈರಲ್‌

ಹಾವುಗಳನ್ನು ಕಂಡರೆ ಭಯದಿಂದ ಮಾರು ದೂರ ಓಡಿ ಹೋಗುವವರೇ ಹೆಚ್ಚು. ಅಂತವರ ಮಧ್ಯೆ ಇಲ್ಲೊಬ್ಬ ಯುವಕ ಭಯವನ್ನೆಲ್ಲಾ ಪಕ್ಕಕ್ಕಿಟ್ಟು, ತನ್ನ ಪ್ರಾಣವನ್ನೂ ಲೆಕ್ಕಿಸದೆ ಮಾನವೀಯತೆಯೇ ಮುಖ್ಯ ಎನ್ನುತ್ತಾ ಪ್ರಜ್ಞೆ ತಪ್ಪಿದ ಹಾವಿಗೆ ಸಿಪಿಆರ್‌ ನೀಡುವ ಮೂಲಕ ಒಂದು ಅಮೂಲ್ಯ ಜೀವವನ್ನು ಕಾಪಾಡಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Follow us
| Updated By: ಅಕ್ಷತಾ ವರ್ಕಾಡಿ

Updated on: Oct 17, 2024 | 11:53 AM

ಹಾವುಗಳನ್ನು ಕಂಡರೆ ಮಾರು ದೂರ ಹೋಗುವವರೇ ಹೆಚ್ಚು. ಹಾಗಿರುವಾಗ ಯಾರಾದ್ರೂ ಹುಷಾರು ತಪ್ಪಿದ ಹಾವುಗಳಿಗೆ ಚಿಕಿತ್ಸೆ ನೀಡುತ್ತಾರೆಯೇ? ಖಂಡಿತವಾಗಿಯೂ ಇಲ್ಲ. ಆದ್ರೆ ಇಲ್ಲೊಬ್ಬ ಯುವಕ ಮಾತ್ರ ಮಾನವೀಯತೆಯೇ ಮುಖ್ಯ ಎನ್ನುತ್ತಾ ಪ್ರಜ್ಞೆ ತಪ್ಪಿದ ಹಾವಿಗೆ ಸಿಪಿಆರ್‌ ನೀಡುವ ಮೂಲಕ ಒಂದು ಅಮೂಲ್ಯ ಜೀವವನ್ನು ಉಳಿಸಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗಿದ್ದು, ಯುವಕನ ಈ ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಈ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದ್ದು, ಯುವಕನೊಬ್ಬ ಸಿಪಿಆರ್‌ ಚಿಕಿತ್ಸೆ ನೀಡುವ ಮೂಲಕ ಹಾವಿನ ಪ್ರಾಣವನ್ನು ರಕ್ಷಣೆ ಮಾಡಿದ್ದಾನೆ. ಇಲ್ಲಿನ ವೃಂದಾವನ್‌ ಚಾರ್‌ ರಸ್ತೆ ಪಕ್ಕದಲ್ಲಿ ಸಣ್ಣ ಗಾತ್ರದ ಹಾವೊಂದು ಪ್ರಜ್ಞೆ ತಪ್ಪಿ ಮಲಗಿರುವುದನ್ನು ಕಂಡ ಯುವಕ ತನ್ನ ಪ್ರಾಣವನ್ನೂ ಕೂಡಾ ಲೆಕ್ಕಿಸದೆ ಬಾಯಿಗೆ ಬಾಯಿಟ್ಟು ಸಿಪಿಆರ್‌ ನೀಡುವ ಮೂಲಕ ಹಾವಿನ ಪ್ರಾಣವನ್ನು ರಕ್ಷಿಸಿದ್ದಾನೆ.

ಮಾಹಿತಿಗಳ ಪ್ರಕಾರ ಹಾವು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಯಾರೋ ಸ್ಥಳೀಯರು ಪೊಲೀಸರು ಮತ್ತು ಪ್ರಾಣಿಗಳ ಎನ್‌ಜಿಒಗೆ ಮಾಹಿತಿಯನ್ನು ತಿಳಿಸಿದ್ದಾರೆ. ಆ ತಕ್ಷಣ ಸ್ಥಳಕ್ಕಾಗಮಿಸಿದ ಯಶ್‌ ತದ್ವಿ ಎಂಬ ಯುವಕ ಬಹಳ ಜೋಪಾನವಾಗಿ ಸಿಪಿಆರ್‌ ನೀಡುವ ಮೂಲಕ ಹಾವಿನ ಪ್ರಾಣವನ್ನು ರಕ್ಷಿಸಿದ್ದಾರೆ.

ಮತ್ತಷ್ಟು ಓದಿ: ಈ ಕಟ್ಟಡದಲ್ಲಿ ಅಟ್ಯಾಚ್ಡ್​ ಬಾತ್​ರೂಂ ಇರುವ ಒಂದು ಕೋಣೆಗೆ ಕೇವಲ 15 ರೂ. ಬಾಡಿಗೆ

ಅಮಿತ್‌ ಕಸನ (amitkasana6666) ಎಂಬವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಹಾವನ್ನು ನಿಧಾನವಾಗಿ ಕೈಯಲ್ಲಿ ಎತ್ತಿಕೊಂಡು ಅದರ ಬಾಯಿಗೆ ಬಾಯಿಟ್ಟು ಉಸಿರು ನೀಡುವ ದೃಶ್ಯವನ್ನು ಕಾಣಬಹುದು. ಹೀಗೆ ಸಿಪಿಆರ್‌ ಚಿಕಿತ್ಸೆ ನೀಡುತ್ತಿದ್ದಂತೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹಾವು ಉಸಿರಾಡಲು ಆರಂಭಿಸಿದೆ. ತನ್ನ ಪ್ರಾಣವನ್ನೂ ಲೆಕ್ಕಿಸದೆ ಒಂದು ಅಮೂಲ್ಯ ಜೀವವನ್ನು ಕಾಪಾಡಿದ ಯುವಕನ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ