Stag Beetle: ವಿಶ್ವದ ಅತ್ಯಂತ ದುಬಾರಿ ಕೀಟ; ಇದರ ಬೆಲೆ Audi carಗಿಂತಲೂ ಹೆಚ್ಚು

ನೀವು ಈ ಕೀಟವನ್ನು ಖರೀದಿಸುವ ಹಣದಲ್ಲಿ BMW ಅಥವಾ Audiಗಳಂತಹ ದುಬಾರಿ ಕಾರುಗಳನ್ನು ಖರೀದಿಸಬಹುದು. ಆದರೆ ಈ ಕೀಟ ಯಾಕಿಷ್ಟು ದುಬಾರಿ? ಏನಿದರ ವಿಶೇಷತೆ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

Stag Beetle: ವಿಶ್ವದ ಅತ್ಯಂತ ದುಬಾರಿ ಕೀಟ; ಇದರ ಬೆಲೆ Audi carಗಿಂತಲೂ ಹೆಚ್ಚು
Stag beetles
Follow us
|

Updated on: Jul 10, 2024 | 11:14 AM

ಸ್ಟ್ಯಾಗ್ ಬೀಟಲ್​​ ಎಂಬ ಕೀಟವು ವಿಶ್ವದ ಅತ್ಯಂತ ದುಬಾರಿ ಕೀಟ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಒಂದು ಕೀಟದ ಬೆಲೆ ಕೇಳಿದರೆ ನೀವು ಶಾಕ್​​ ಆಗುವುದಂತೂ ಖಂಡಿತಾ. ಈ ಕೀಟವನ್ನು ಖರೀದಿಸುವ ಹಣದಲ್ಲಿ ನೀವು BMW ಮತ್ತು Audiಗಳಂತಹ ದುಬಾರಿ ಕಾರುಗಳನ್ನು ಖರೀದಿಸಬಹುದಾಗಿದೆ. ಆದರೆ ಈ ಕೀಟ ಯಾಕಿಷ್ಟು ದುಬಾರಿ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಅದೃಷ್ಟದ ಸಂಕೇತ:

ಮಾಧ್ಯಮ ವರದಿಗಳ ಪ್ರಕಾರ, ಸ್ಟ್ಯಾಗ್ ಬೀಟಲ್ ವಿಶ್ವದ ಅತ್ಯಂತ ದುಬಾರಿ ಕೀಟಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯು ಒಂದು ಕೀಟವನ್ನು ಖರೀದಿಸಲು 75 ಲಕ್ಷದಷ್ಟು ಹಣ ಖರ್ಚು ಮಾಡಬೇಕು. ಈ ಕೀಟವನ್ನು ಅಪರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಈ ಕೀಟವನ್ನು ಮನೆಯಲ್ಲಿ ಇರಿಸುವುದರಿಂದ ಹಠಾತ್ ಸಂಪತ್ತನ್ನು ತರುತ್ತದೆ ನೀವು ಆರ್ಥಿಕವಾಗಿ ಲಾಭವನ್ನು ಪಡೆಯುತ್ತೀರಿ ಎಂದು ಅನೇಕ ಜನರು ನಂಬುತ್ತಾರೆ.

ಔಷಧೀಯ ಬಳಕೆ:

ಈ ಕೀಟ ದುಬಾರಿಯಾಗಲು ಮತ್ತೊಂದು ಕಾರಣವೆಂದರೆ ಔಷಧಿ ತಯಾರಿಕೆಯಲ್ಲಿ ಬಳಕೆ. ಸ್ಟ್ಯಾಗ್ ಬೀಟಲ್​ಗಳನ್ನು ಔಷಧೀಯ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಅವುಗಳ ಔಷಧೀಯ ಬಳಕೆ ಹೊರತುಪಡಿಸಿ, ಈ ಕೀಟಗಳು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಸ್ಟ್ಯಾಗ್ ಬೀಟಲ್​​ನ ವಿಶಿಷ್ಟ ಗುಣಲಕ್ಷಣಗಳು:

ಈ ಕೀಟದ ವಿಶಿಷ್ಟ ಲಕ್ಷಣವೆಂದರೆ ಅವುಗಳ ವಿಶಿಷ್ಟ ನೋಟ. ಕೀಟವು ದೊಡ್ಡ ದವಡೆಗಳನ್ನು ಹೊಂದಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಗಂಡು ಕೀಟದ ದವಡೆಗಳು ಕೊಂಬುಗಳನ್ನು ಹೋಲುತ್ತವೆ. ತಮ್ಮ ಸಂತಾನವೃದ್ಧಿ ಕಾಲದಲ್ಲಿ ಸಂಯೋಗದ ಅವಕಾಶಗಳಿಗಾಗಿ ಹೋರಾಡಿದಾಗ ಈ ದವಡೆಗಳು ಸಹಾಯಕವಾಗಿವೆ.

ಇದನ್ನೂ ಓದಿ: 20 ಪ್ರಿಯಕರರಿಂದ 20 ಐಫೋನ್​​​ ಗಿಫ್ಟ್​​​​​, ಕೊನೆಗೆ ಎಲ್ಲ ಫೋನ್​​ ಮಾರಿ ಹೊಸ ಮನೆ ಖರೀದಿಸಿದ ಯುವತಿ

ಸ್ಟ್ಯಾಗ್ ಬೀಟಲ್​​ನ ಜೀವಿತಾವಧಿ:

ಯುರೋಪಿಯನ್ ಸ್ಟಾಗ್ ಬೀಟಲ್ ಮಾನಿಟರಿಂಗ್ ನೆಟ್‌ವರ್ಕ್ ಪ್ರಕಾರ, ಗಂಡು ಕೀಟದ ಉದ್ದವು 4 ಸೆಂ.ಮೀ ನಿಂದ 9 ಸೆಂ.ಮೀ ವರೆಗೆ ಇರುತ್ತದೆ. ಆದರೆ ಹೆಣ್ಣು ಕೀಟದ ಉದ್ದವು 3 cm ನಿಂದ 4 cm ವರೆಗೆ ಇರುತ್ತದೆ. ಈ ಕೀಟಗಳ ಜೀವಿತಾವಧಿ ಮೂರರಿಂದ ಏಳು ವರ್ಷಗಳವರೆಗೆ ಇರುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ