AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Success Story: 3 ಲಕ್ಷ ರೂ.ನಲ್ಲಿ ಶುರುವಾದ ಟೀ ಶಾಪ್​ನ ಆದಾಯವೀಗ ವರ್ಷಕ್ಕೆ 100 ಕೋಟಿ!

Chai Sutta Bar Story | 2016ರಲ್ಲಿ ಆನಂದ ನಾಯಕ್, ಅನುಭವ್, ರಾಹುಲ್ ತಲಾ ಒಂದೊಂದು ಲಕ್ಷ ರೂ. ಹಾಕಿ ಇಂದೋರ್​ನಲ್ಲಿ ಚಾಯ್ ಸುಟ್ಟಾ ಬಾರ್ ಎಂಬ ಟೀ ಶಾಪ್ ಓಪನ್ ಮಾಡಿದರು. ಈಗ ಈ ಟೀ ಸ್ಟಾಲ್ ಆದಾಯ ವರ್ಷಕ್ಕೆ 100 ಕೋಟಿ! ವಿದೇಶದಲ್ಲೂ ಇದರ ಬ್ರಾಂಚ್​​ಗಳಿವೆ.

ಸುಷ್ಮಾ ಚಕ್ರೆ
|

Updated on:Aug 07, 2021 | 10:23 PM

Share

ಇಂದೋರ್: ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಅತ್ಯಂತ ಕೆಟ್ಟ ನಿರ್ಧಾರಗಳೇ ನಮ್ಮ ಜೀವನದ ಅತ್ಯಂತ ಉತ್ತಮ ನಿರ್ಧಾರಗಳಾಗಿ ಬದಲಾಗುವ ಸಾಧ್ಯತೆಗಳಿರುತ್ತವೆ. ನಾವು ಯಾವುದನ್ನು ತುಂಬ ಪ್ಲಾನ್ ಮಾಡಿ ಮಾಡುತ್ತೇವೋ ಅದು ಪ್ಲಾಪ್ ಆದಾಗ ಅದನ್ನು ಸಹಿಸಿಕೊಳ್ಳುವುದು ಕೂಡ ಬಹಳ ಕಷ್ಟ. ಆದರೆ, ನಾವು ಯಾವುದರ ಬಗ್ಗೆ ತೀರಾ ಭರವಸೆಯಿಟ್ಟುಕೊಂಡಿರುವುದಿಲ್ಲವೋ ಅದರಿಂದಲೇ ಜೀವನದ ಅತ್ಯಂತ ಯಶಸ್ಸು ಸಿಕ್ಕಾಗ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿರಲಾರದು. ಹಾಗಂತ ಯಾವುದನ್ನೇ ಮಾಡುವ ಮೊದಲು ಸವಾಲುಗಳನ್ನು ಸ್ವೀಕರಿಸಲು ನಾವು ಸಿದ್ಧರಾಗಿರಬೇಕು. ಏನಾದರೂ ಹೊಸದು ಮಾಡುವಾಗ ನಾವು ಅದನ್ನು ಮಾಡಲೇಬೇಕೆಂಬ ನಿರ್ಧಾರ ತೆಗೆದುಕೊಂಡಾಗಲೇ ಆ ಹೊಸ ಪ್ರಯೋಗದಲ್ಲಿ ನಾವು ಶೇ. 50ರಷ್ಟು ಗೆದ್ದಿರುತ್ತೇವೆ. ಹೀಗಾಗಿ, ಪ್ರಯತ್ನಗಳಿಗೆ ಧುಮುಕುವುದು ಬಹಳ ಮುಖ್ಯ. ಇಷ್ಟೆಲ್ಲ ಪೀಠಿಕೆ ಯಾಕೆ ಗೊತ್ತಾ? ಮಧ್ಯಪ್ರದೇಶದ ಮೂವರು ಸ್ನೇಹಿತರು ಮಾಡಿದ ಆ ಒಂದು ‘ತಪ್ಪು’ ನಿರ್ಧಾರದಿಂದ ಈಗ ಅವರು ಒಂದು ವರ್ಷಕ್ಕೆ ಬರೋಬ್ಬರಿ 100 ಕೋಟಿ ಆದಾಯ ಗಳಿಸುತ್ತಿದ್ದಾರೆ!

ನಾವು ಐಎಎಸ್ ಮಾಡಬೇಕು, ಐಪಿಎಸ್ ಮಾಡಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ… ಆದರೆ, ಆ ಮೂವರು ನಾಗರಿಕ ಸೇವೆಗೆ ಸೇರುವ ಅವಕಾಶವನ್ನು ಬಿಟ್ಟು ಟೀ ಸ್ಟಾಲ್ ತೆರೆಯಬೇಕೆಂದು ನಿರ್ಧಾರ ಮಾಡಿದರು. ಇದೆಂಥಾ ಹುಚ್ಚು ನಿರ್ಧಾರ ಎಂದು ಎಲ್ಲರೂ ಹೀಗಳೆದಿದ್ದರು. ಆದರೆ, ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಮಧ್ಯಪ್ರದೇಶದ ಇಂದೋರ್​ನಲ್ಲಿ ಟೀ ಸ್ಟಾಲ್ ತೆರೆಯಲು ಸಾಲ ಮಾಡಿ ಮೂವರೂ 3 ಲಕ್ಷ ರೂ. ದುಡ್ಡು ಕೂಡಿಸಿದರು. ನಾವು ಯಾರದೋ ಕೈ ಕೆಳಗೆ ದುಡಿಯುವ ಬದಲು ಸಣ್ಣದಾದರೂ ಪರವಾಗಿಲ್ಲ ಸ್ವಂತದ್ದೊಂದು ಉದ್ಯಮ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತು.

ಇಂದೋರ್​ನಲ್ಲಿ ಅವರು ಮೂವರೂ ಸ್ನೇಹಿತರು ಸೇರಿ ಚಾಯ್ ಸುಟ್ಟಾ ಬಾರ್ ತೆರೆದರು. ಆಗ 3 ಲಕ್ಷ ರೂ. ಹಾಕಿ ತೆರೆದಿದ್ದ ಟೀ ಸ್ಟಾಲ್​ನಿಂದ ಅವರಿಗೆ ಈಗ ವರ್ಷಕ್ಕೆ 100 ಕೋಟಿ ರೂ. ಆದಾಯ ಬರುತ್ತಿದೆ ಎಂದರೆ ನಿಮಗೆ ಶಾಕ್ ಆಗದಿರಲು ಸಾಧ್ಯವೇ? ಆ ಟೀ ಸ್ಟಾಲ್​ನ 165 ಬ್ರಾಂಚ್​ಗಳು ಈಗ ದೇಶಾದ್ಯಂತ ಹರಡಿಕೊಂಡಿವೆ. ಅಲ್ಲದೆ, ಕೇವಲ ಐದೇ ವರ್ಷದಲ್ಲಿ ದುಬೈ, ಓಮನ್, ಕೆನಡಾ, ಲಂಡನ್ ಸೇರಿದಂತೆ ಹಲವು ದೇಶಗಳಲ್ಲೂ ಇದರ ಬ್ರಾಂಚ್ ಶುರುವಾಗಿದೆ.

ಚಾಯ್ ಸುಟ್ಟಾ ಬಾರ್ ಶಾಪ್​ ಹೆಸರು ಕೇಳಿದರೆ ಇದರಲ್ಲಿ ಸಿಗರೇಟ್ ಸಿಗಬಹುದು ಎಂಬ ಅನುಮಾನ ಮೂಡಬಹುದು. ಆದರೆ, ಇದರಲ್ಲಿ ಕೇವಲ ಚಹಾ ಮಾತ್ರ ಸಿಗುತ್ತದೆ. ಸಿಗರೇಟ್ ಸೇದಲು ಇಲ್ಲಿ ಅವಕಾಶವಿಲ್ಲ. ಸಾಕಷ್ಟು ಫ್ಲೇವರ್​ಗಳಲ್ಲಿ ಇಲ್ಲಿ ಚಹಾ ಸಿಗುತ್ತದೆ. ಈ ಚಹಾಗೆ ಕೇವಲ 10 ರೂ. ಎಂಬುದು ವಿಶೇಷ. ಚಹಾ ಮಾತ್ರವಲ್ಲದೆ ಸ್ಯಾಂಡ್​ವಿಚ್, ಪಾಸ್ತಾ, ಮ್ಯಾಗಿ ಕೂಡ ಸಿಗುತ್ತದೆ.

2016ರಲ್ಲಿ ಆನಂದ ನಾಯಕ್, ಅನುಭವ್, ರಾಹುಲ್ ಎಂಬ ಈ ಮೂವರು ಸ್ನೇಹಿತರು ತಲಾ ಒಂದೊಂದು ಲಕ್ಷ ರೂ. ಹಾಕಿ ಟೀ ಶಾಪ್ ಓಪನ್ ಮಾಡಿದರು. ಅದು ಈಗ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಬದಲಾಗಿದೆ. ವಿದೇಶದಲ್ಲಿ ಕೂಡ ಇದರ ಫ್ರಾಂಚೈಸಿಗಳಿವೆ. 3 ಲಕ್ಷ ರೂ.ನಲ್ಲಿ ಶುರು ಮಾಡಿದ ಈ ಟೀ ಸ್ಟಾಲ್​ನಿಂದ ಈಗ ವರ್ಷಕ್ಕೆ 100 ಕೋಟಿ ರೂ. ಆದಾಯ ಬರುತ್ತಿದೆ. ಹೀಗಾಗಿ, ಯಾವ ಕನಸೂ ಸಣ್ಣದಲ್ಲ ಎಂಬುದನ್ನು ಮರೆಯಬೇಡಿ.

ಇಂದೋರ್​ ಒಂದರಲ್ಲೇ ಈ ಟೀ ಶಾಪ್​ನ 13 ಬ್ರಾಂಚ್​ಗಳಿವೆ. ದೇಶಾದ್ಯಂತ 165 ಔಟ್​ಲೆಟ್​ಗಳಿವೆ. ಇವರು ತಯಾರಿಸುವ ಟೀಯಲ್ಲಿ ಸಾಕಷ್ಟು ವೆರೈಟಿಗಳೂ ಇವೆ. ರೈತರ ಮಕ್ಕಳಾದ ಈ ಮೂವರಿಗೆ ತಾವು ಸ್ವಂತ ಉದ್ಯಮ ಮಾಡಬೇಕೆಂಬ ಕನಸಿತ್ತು. ಅವರಲ್ಲಿ ಅನುಭವ್ ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ, ಆ ಕನಸನ್ನು ಅರ್ಧಕ್ಕೇ ಬಿಟ್ಟು ಟೀ ಶಾಪ್ ತೆರೆಯಲು ಕೈ ಜೋಡಿಸಿದರು. ಆಗ ಇವರ ಸಾಹಸ ನೋಡಿ ಗೇಲಿ ಮಾಡಿದವರು ಈಗ ಇವರ ಆದಾಯ ನೋಡಿ ಶಾಕ್ ಆಗಿದ್ದಾರೆ.

ಇದನ್ನೂ ಓದಿ: Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

(Success Story: 3 Indore Friends Started a Tea Stall With Rs 3 Lakh Now They are Earning 100 Crore Profit a Year)

Published On - 10:18 pm, Sat, 7 August 21

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ