AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Whisky Bottle: ಈ ವಿಸ್ಕಿಗೆ ಸುಮಾರು 250 ವರ್ಷದ ಇತಿಹಾಸವಿದೆ. ಈ ಬಾಟಲಿಯನ್ನು ಈಗ 1,02,63,019 ರೂ.ಗೆ ಹರಾಜಿನಲ್ಲಿ ಖರೀದಿಸಲಾಗಿದೆ.

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!
ವಿಶ್ವದ ಹಳೆಯ ವಿಸ್ಕಿ ಬಾಟಲ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 17, 2021 | 7:29 PM

ಸಾವಿರಾರು ರೂ. ಹಣ ಕೊಟ್ಟು ಯಾವ್ಯಾವುದೋ ಬ್ರ್ಯಾಂಡ್​ನ ಆಲ್ಕೋಹಾಲ್ ಕುಡಿಯುವವರಿಗೇನೂ ನಮ್ಮಲ್ಲಿ ಕಡಿಮೆಯಿಲ್ಲ. ಕೆಲವೊಮ್ಮೆ ವಿದೇಶಗಳಿಂದ ಲಕ್ಷಾಂತರ ರೂ. ಮೌಲ್ಯದ ವೈನ್, ಬಿಯರ್, ವಿಸ್ಕಿಯನ್ನು ತರಿಸಿ ಕುಡಿಯುವವರೂ ಇದ್ದಾರೆ. ಆದರೆ, ಇಲ್ಲೊಂದು ವಿಸ್ಕಿ ಬಾಟಲಿಗೆ ಬರೋಬ್ಬರಿ 1 ಕೋಟಿ ರೂ. ನೀಡಲಾಗಿದೆಯಂತೆ. 1 ಕೋಟಿ ರೂ.ಗೆ ವಿಸ್ಕಿ ಬಾಟಲಿಯನ್ನು ಹರಾಜಿನಲ್ಲಿ ಪಡೆಯಲಾಗಿದ್ದು, ಈ ಸುದ್ದಿ ಕೇಳಿಯೇ ಮದ್ಯಪ್ರಿಯರಿಗೆ ಅಮಲು ಏರಿದೆಯಂತೆ. ಇನ್ನೇನಾದರೂ ಈ ವಿಶ್ವದ ದುಬಾರಿ ವಿಸ್ಕಿಯನ್ನು ಕುಡಿದರೆ ಅವರ ಗತಿ ಏನಾಗಬಹುದು!

ಅಷ್ಟಕ್ಕೂ 1 ಕೋಟಿ ರೂ. ಕೊಡುವಂಥದ್ದು ಈ ವಿಸ್ಕಿ ಬಾಟಲಿಯಲ್ಲೇನಿದೆ? ಎಂದು ನಿಮಗೆ ಪ್ರಶ್ನೆ ಕಾಡುತ್ತಿರಬಹುದು. ಇದು ಅಂತಿಂಥ ವಿಸ್ಕಿಯಲ್ಲಿ ಸ್ವಾಮಿ! ಈ ವಿಸ್ಕಿ ಬಾಟಲಿ ಇಡೀ ವಿಶ್ವದ ಅತಿ ಪುರಾತನ ವಿಸ್ಕಿಯಾಗಿದೆ. ಹಳೆಯದಾದಷ್ಟೂ ಅದಕ್ಕೆ ಬೆಲೆ ಜಾಸ್ತಿಯಾದ್ದರಿಂದ ಈ ವಿಸ್ಕಿ ಬಾಟಲಿಯನ್ನು 1 ಕೋಟಿ ರೂ. ಹರಾಜು ಹಾಕಲಾಗಿದೆ.

Whisky Bottle

ವಿಶ್ವದ ಹಳೆಯ ವಿಸ್ಕಿ ಬಾಟಲ್

ಈ ವಿಸ್ಕಿಗೆ ಸುಮಾರು 250 ವರ್ಷದ ಇತಿಹಾಸವಿದೆ. ಈ ಬಾಟಲಿಯನ್ನು ಈಗ 1,02,63,019 ರೂ.ಗೆ ಹರಾಜಿನಲ್ಲಿ ಖರೀದಿಸಲಾಗಿದೆ. 1860ರಲ್ಲಿ ಈ ವಿಸ್ಕಿಯನ್ನು ಬಾಟಲಿಗೆ ಹಾಕಲಾಗಿದ್ದು, ಆದರೆ, ಇದರೊಳಗಿನ ವಿಸ್ಕಿಯನ್ನು ಅದಕ್ಕಿಂತಲೂ ಶತಮಾನಗಳಷ್ಟು ಹಳೆಯದು ಎನ್ನಲಾಗಿದೆ. ಈ ವಿಸ್ಕಿ ಒಂದು ಕಾಲದಲ್ಲಿ ಜಾನ್ ಫೀರ್​ಪಾಯಿಂಟ್ ಮೊರ್ಗನ್ ಎಂಬ ಫೈನಾನ್ಷಿಯರ್ ಪಾಲಾಗಿತ್ತು. ಅವರ ಮರಣದ ನಂತರ ಅವರ ಎಸ್ಟೇಟ್​ನಿಂದ ಈ ವಿಸ್ಕಿ ಬಾಟಲಿಯನ್ನು ತೆಗೆದುಕೊಂಡು ಬರಲಾಗಿತ್ತು.

ಒಟ್ಟಾರೆ, ಜಗತ್ತಿನ ಅತಿ ಹಳೆಯ ವಿಸ್ಕಿ ಈಗ ಮತ್ತೆ ಸುದ್ದಿಯಾಗಿದ್ದು, ಈ ಬಾಟಲಿಯನ್ನು ಹರಾಜು ಹಿಡಿದವನ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:Viral Video: ಈ ಮಕ್ಕಳ ಫೈಟಿಂಗ್ ಮುಂದೆ WWE ಶೋ ಕೂಡ ವೇಸ್ಟ್; ಸುಳ್ಳೆನಿಸಿದರೆ ಈ ವಿಡಿಯೋ ನೋಡಿ…

ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

(This Whiskey Bottle Sold at Auction For Over Rs 1 Crore Do You Know the specialty)

ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ