AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

Pisner Beer: ಈ ಪ್ರಯೋಗ ಕೊಂಚ ಹಳೆಯದೇ ಆದರೂ ಬಹಳಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಪಿಸ್ನೆರ್ ಬಿಯರ್​ಗೂ ಬೇಡಿಕೆಯಿದ್ದು, ಇದನ್ನು 50,000 ಲೀಟರ್ ಮೂತ್ರದಿಂದ ತಯಾರಿಸಲಾಗಿದೆ.

Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?
ಪಿಸ್ನೆರ್ ಬಿಯರ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 13, 2021 | 3:03 PM

ಈ ಜಗತ್ತಿನಲ್ಲಿ ಮದ್ಯಪ್ರಿಯರಿಗೇನೂ ಬರವಿಲ್ಲ. ಅವರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬ್ರ್ಯಾಂಡ್ ಇಷ್ಟ. ಮದ್ಯಪ್ರಿಯರ ಪೈಕಿ ಬಿಯರ್ ಇಷ್ಟಪಡದಿರುವವರೇ ಕಡಿಮೆ. ಈ ಬಿಯರ್ ಅನ್ನು ಮನುಷ್ಯನ ಮೂತ್ರದಿಂದಲೂ ಮಾಡಬಹುದು ಎಂಬ ವಿಷಯ ನಿಮಗೆ ಗೊತ್ತಾ? ಮೂತ್ರದಿಂದ ಬಿಯರ್ ತಯಾರಿಸುತ್ತಾರಾ? ಎಂದು ಮೂಗು ಮುರಿಯಬೇಡಿ. ಅಂಥದ್ದೊಂದು ಪ್ರಯೋಗ ಈಗಾಗಲೇ ನಡೆದಿದ್ದು, ಹೊಸ ಬಗೆಯ ಬಿಯರ್ ಟ್ರೈ ಮಾಡಬೇಕು ಎಂದು ಬಯಸುವವರು ಈ ಬಿಯರ್ ಟೇಸ್ಟ್ ಮಾಡಬಹುದು!

ನೊರಬ್ರೋ ಕಂಪನಿ ಮನುಷ್ಯರ ಮೂತ್ರದಿಂದ ಬಿಯರ್​ ತಯಾರಿಸಿದೆ. ನೀವೇನಾದರೂ ಪಿಸ್ನೆರ್ ಬಿಯರ್ ಕುಡಿದಿದ್ದರೆ ನೀವು ಮನುಷ್ಯರ ಮೂತ್ರವನ್ನು ಕುಡಿದಿದ್ದೀರಿ ಎಂದೇ ಅರ್ಥ. ಈ ಪ್ರಯೋಗ ಕೊಂಚ ಹಳೆಯದೇ ಆದರೂ ಬಹಳಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಪಿಸ್ನೆರ್ ಬಿಯರ್​ಗೂ ಬೇಡಿಕೆಯಿದ್ದು, ಇದನ್ನು 50,000 ಲೀಟರ್ ಮೂತ್ರದಿಂದ ತಯಾರಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ನೊರಬ್ರೋ ಕಂಪನಿ ಸಂಗೀತ ಕಾರ್ಯಕ್ರಮದಲ್ಲಿ 50,000 ಲೀಟರ್ ಮನುಷ್ಯರ ಮೂತ್ರವನ್ನು ಸಂಗ್ರಹ ಮಾಡಿತ್ತು. ನಂತರವೇ ಅವರು ಪಿಸ್ನೆರ್ ಬಿಯರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದರು. ಈ ಬಿಯರ್ ಅನ್ನು ನಾವು ಮಾರ್ಕೆಟ್​ಗೆ ತಂದಾಗ ಅನೇಕರು ನಾವು ಮನುಷ್ಯರ ಮೂತ್ರವನ್ನೇ ಬಾಟಲಿಗೆ ತುಂಬಿ ಬಿಯರ್ ಎಂದು ಮಾರಾಟ ಮಾಡುತ್ತಿದ್ದೇವೆ ಎಂದು ಭಾವಿಸಿದ್ದರು. ಆದರೆ, ಅದು ತಪ್ಪು ಕಲ್ಪನೆ. ನಾವು ಈ ಹೊಸ ಬಗೆಯ ಬಿಯರ್​ಗಾಗಿ ಮೂತ್ರವನ್ನು ಬಳಸುತ್ತೇವೆ ಎಂಬುದು ಸತ್ಯ. ಆದರೆ, ಅದಕ್ಕೂ ಮೊದಲು ಸಾಕಷ್ಟು ಹಂತಗಳನ್ನು ಅನುಸರಿಸುತ್ತೇವೆ ಎಂದು ಕಂಪನಿ ತಿಳಿಸಿದೆ.

ಮೂತ್ರವನ್ನು ಪರಿಷ್ಕರಿಸಿ ಮಾಡಲಾಗುವ ಬಿಯರ್​ನಲ್ಲಿ ಸ್ವಲ್ಪವೇ ಸ್ವಲ್ಪ ಅದರ ಟೇಸ್ಟ್​ ಬಂದರೂ ನಾವು ಆ ಉತ್ಪನ್ನವನ್ನು ಮತ್ತೆ ಬಳಸುವುದಿಲ್ಲ. ನಾವು ಹೇಳದೆ ಹಾಗೇ ನೀಡಿದರೆ ಅದು ಮೂತ್ರದಿಂದ ಮಾಡಿದ ಬಿಯರ್ ಎಂದು ಯಾರಿಗೂ ಗೊತ್ತಾಗುವುದೇ ಇಲ್ಲ. ಮನುಷ್ಯನ ದೇಹದಿಂದ ಹೊರಹೋಗುವ ರಾಸಾಯನಿಕಯುಕ್ತ ಮೂತ್ರವನ್ನು ಮರುಬಳಕೆ ಮಾಡಿ, ಬಿಯರ್​ಗೆ ಬಳಸಲಾಗುತ್ತದೆ. ಇದಕ್ಕೆ ಬೀರ್​ಸೈಕ್ಲಿಂಗ್ ಎಂದು ಹೆಸರಿಡಲಾಗಿದೆ ಎಂದು ಪಿಸ್ನೆರ್ ಬಿಯರ್ ಕಂಪನಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಬಿಯರ್​ ಬಾಟಲ್​ ಸಾಗಿಸುತ್ತಿದ್ದ ಲಾರಿ ಪಲ್ಟಿ, ಕೊರೊನಾ ನಡುವೆ ಭಯವಿಲ್ಲದೆ ಬಿಯರ್​ಗಾಗಿ ಮುಗಿಬಿದ್ದ ಜನ .!

ಇದನ್ನೂ ಓದಿ: Viral Video: ಇದಪ್ಪಾ ಬ್ಯಾಲೆನ್ಸಿಂಗ್​​ ಅಂದ್ರೆ! ಈ ’ಬಾಟಲಿಪುತ್ರಿ‘ಯ ಸಾಹಸವನ್ನು ನೋಡಿದರೆ ಮೈ ಜುಂ ಎನ್ನದೇ ಇರದು

ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ