AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇದು ಹುಲಿ ಕುಣಿತವಲ್ಲ, ಜಿಗಿತ; ಬೋಟ್​​​ನಿಂದ ನೀರಿಗೆ ಜಂಪ್​ ಮಾಡಿ, ತಿರುಗಿಯೂ ನೋಡದೆ ಹೋದ ಟೈಗರ್​ !

ಇದೊಂದು ಹಳೇ ವಿಡಿಯೋ ಎಂಬುದನ್ನು ಶೇರ್ ಮಾಡಿಕೊಂಡಿರುವ ಐಎಫ್​ಎಸ್​ ಅಧಿಕಾರಿ ಪರ್ವೀನ್ ಕಸ್ವಾನ್​ ಅವರೇ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸುಂದರ್​ಬನ್ಸ್​​ ರಾಷ್ಟ್ರೀಯ ಉದ್ಯಾನವನದ್ದು

Video: ಇದು ಹುಲಿ ಕುಣಿತವಲ್ಲ, ಜಿಗಿತ; ಬೋಟ್​​​ನಿಂದ ನೀರಿಗೆ ಜಂಪ್​ ಮಾಡಿ, ತಿರುಗಿಯೂ ನೋಡದೆ ಹೋದ ಟೈಗರ್​ !
ನೀರಿಗೆ ಹಾರಿದ ಹುಲಿ
TV9 Web
| Updated By: Lakshmi Hegde|

Updated on:Apr 17, 2022 | 9:49 PM

Share

ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಪಟ್ಟ, ಕ್ಯೂಟ್​-ಭಯಾನಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳ ಚೇಷ್ಟೆ, ಕಾಳಗ, ಅಟ್ಯಾಕ್​ ಹೀಗೆ ವಿಧವಿಧದ ದೃಶ್ಯಗಳು ತುಂಬ ಖುಷಿ ಕೊಡುತ್ತವೆ..ಅಬ್ಬಾ, ಭಯಾನಕ ಎನ್ನಿಸುತ್ತವೆ. ಆದರೆ ನಾವಿಲ್ಲಿ ತೋರಿಸಿರುವ ವಿಡಿಯೋ ನೋಡಿ, ನಿಮಗೆ ರೋಮಾಂಚನ ಆಗದೆ ಇದ್ದರೆ ಹೇಳಿ ! ಇದು ಹುಲಿಯ ಕುಣಿತವಲ್ಲ..ಜಿಗಿತದ ದೃಶ್ಯ. ಒಂದು ಬೋಟ್​​ನಿಂದ ನೀರಿಗೆ ಹುಲಿರಾಯ ಜಂಪ್​ ಮಾಡಿದ ಚೆಂದ, ಆ ಗತ್ತು ಇದೆಯಲ್ಲ ಮೈ ಜುಂ ಎನ್ನಿಸದೆ ಇರದು.

ಇದೊಂದು ಹಳೇ ವಿಡಿಯೋ ಎಂಬುದನ್ನು ಶೇರ್ ಮಾಡಿಕೊಂಡಿರುವ ಐಎಫ್​ಎಸ್​ ಅಧಿಕಾರಿ ಪರ್ವೀನ್ ಕಸ್ವಾನ್​ ಅವರೇ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸುಂದರ್​ಬನ್ಸ್​​ ರಾಷ್ಟ್ರೀಯ ಉದ್ಯಾನವನದ್ದು. ಇದೀಗ ಮತ್ತೊಮ್ಮೆ ಸಿಕ್ಕಾಪಟೆ ವೈರಲ್ ಆಗುತ್ತಿದೆ.  ಯಾವುದೋ ಝೂದಲ್ಲಿ ಇದ್ದ ಹುಲಿಯನ್ನು ಅಲ್ಲಿಂದ ಕಾಡಿಗೆ ಬಿಡಲೆಂದು ಬೋಟ್​​​​ನಲ್ಲಿ ನದಿ ಮೂಲಕ ಕರೆದುಕೊಂಡು ಹೋಗುತ್ತಿರುವ ದೃಶ್ಯ. ಬೋಟ್​​​​ನಿಂದ ಈ ಹುಲಿ ನದಿಗೆ ಧುಮುಕಿದೆ. ನಂತರ ಅಲ್ಲಿಂದ ಈಜಿಕೊಂಡು ಹೋಗಿ ಅಲ್ಲಿಯೇ ದಡದಲ್ಲಿರುವ ಕಾಡು ಸೇರಿಕೊಂಡಿದೆ.  ಆ ಹುಲಿಯ ಹೆಸರು ರಿಚರ್ಡ್​ ಪಾರ್ಕರ್​ ಎಂದು ಹೇಳಲಾಗಿದ್ದು, ಬೋಟ್​​ನಿಂದ ಜಿಗಿದ ಮೇಲೆ ಒಂದು ಸಲವೂ ತಿರುಗಿ ನೋಡದೆ ಈಜುಕೊಂಡು ಹೋಗಿದ್ದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ವಿಡಿಯೋ ನೋಡಿದ ಜನರೆಂತೂ ಭರ್ಜರಿ ಖುಷಿಪಟ್ಟಿದ್ದಾರೆ. ಹುಲಿಯ ಗತ್ತು ನೋಡಿ ಸಿಕ್ಕಾಪಟೆ ಹೊಗಳಿದ್ದಾರೆ. ಹೊರಟಮೇಲೆ ತಿರುಗಿ ನೋಡಬಾರದು ಎಂಬ ಪಾಠವನ್ನು ಈ ಟೈಗರ್​ನಿಂದ ಕಲಿತೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದರೆ, ಏನು ಹೇಳಲೂ ತಿಳಿಯುತ್ತಿಲ್ಲವೆಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ಶಿಕ್ಷಣ ಮುಂದುವರಿಸಲು ದಾರಿ ಮಾಡಿಕೊಡಿ; ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಆಗ್ರಹ, ಪ್ರತಿಭಟನೆ

Published On - 9:48 pm, Sun, 17 April 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್