AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇದು ಹುಲಿ ಕುಣಿತವಲ್ಲ, ಜಿಗಿತ; ಬೋಟ್​​​ನಿಂದ ನೀರಿಗೆ ಜಂಪ್​ ಮಾಡಿ, ತಿರುಗಿಯೂ ನೋಡದೆ ಹೋದ ಟೈಗರ್​ !

ಇದೊಂದು ಹಳೇ ವಿಡಿಯೋ ಎಂಬುದನ್ನು ಶೇರ್ ಮಾಡಿಕೊಂಡಿರುವ ಐಎಫ್​ಎಸ್​ ಅಧಿಕಾರಿ ಪರ್ವೀನ್ ಕಸ್ವಾನ್​ ಅವರೇ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸುಂದರ್​ಬನ್ಸ್​​ ರಾಷ್ಟ್ರೀಯ ಉದ್ಯಾನವನದ್ದು

Video: ಇದು ಹುಲಿ ಕುಣಿತವಲ್ಲ, ಜಿಗಿತ; ಬೋಟ್​​​ನಿಂದ ನೀರಿಗೆ ಜಂಪ್​ ಮಾಡಿ, ತಿರುಗಿಯೂ ನೋಡದೆ ಹೋದ ಟೈಗರ್​ !
ನೀರಿಗೆ ಹಾರಿದ ಹುಲಿ
TV9 Web
| Edited By: |

Updated on:Apr 17, 2022 | 9:49 PM

Share

ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಪಟ್ಟ, ಕ್ಯೂಟ್​-ಭಯಾನಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳ ಚೇಷ್ಟೆ, ಕಾಳಗ, ಅಟ್ಯಾಕ್​ ಹೀಗೆ ವಿಧವಿಧದ ದೃಶ್ಯಗಳು ತುಂಬ ಖುಷಿ ಕೊಡುತ್ತವೆ..ಅಬ್ಬಾ, ಭಯಾನಕ ಎನ್ನಿಸುತ್ತವೆ. ಆದರೆ ನಾವಿಲ್ಲಿ ತೋರಿಸಿರುವ ವಿಡಿಯೋ ನೋಡಿ, ನಿಮಗೆ ರೋಮಾಂಚನ ಆಗದೆ ಇದ್ದರೆ ಹೇಳಿ ! ಇದು ಹುಲಿಯ ಕುಣಿತವಲ್ಲ..ಜಿಗಿತದ ದೃಶ್ಯ. ಒಂದು ಬೋಟ್​​ನಿಂದ ನೀರಿಗೆ ಹುಲಿರಾಯ ಜಂಪ್​ ಮಾಡಿದ ಚೆಂದ, ಆ ಗತ್ತು ಇದೆಯಲ್ಲ ಮೈ ಜುಂ ಎನ್ನಿಸದೆ ಇರದು.

ಇದೊಂದು ಹಳೇ ವಿಡಿಯೋ ಎಂಬುದನ್ನು ಶೇರ್ ಮಾಡಿಕೊಂಡಿರುವ ಐಎಫ್​ಎಸ್​ ಅಧಿಕಾರಿ ಪರ್ವೀನ್ ಕಸ್ವಾನ್​ ಅವರೇ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸುಂದರ್​ಬನ್ಸ್​​ ರಾಷ್ಟ್ರೀಯ ಉದ್ಯಾನವನದ್ದು. ಇದೀಗ ಮತ್ತೊಮ್ಮೆ ಸಿಕ್ಕಾಪಟೆ ವೈರಲ್ ಆಗುತ್ತಿದೆ.  ಯಾವುದೋ ಝೂದಲ್ಲಿ ಇದ್ದ ಹುಲಿಯನ್ನು ಅಲ್ಲಿಂದ ಕಾಡಿಗೆ ಬಿಡಲೆಂದು ಬೋಟ್​​​​ನಲ್ಲಿ ನದಿ ಮೂಲಕ ಕರೆದುಕೊಂಡು ಹೋಗುತ್ತಿರುವ ದೃಶ್ಯ. ಬೋಟ್​​​​ನಿಂದ ಈ ಹುಲಿ ನದಿಗೆ ಧುಮುಕಿದೆ. ನಂತರ ಅಲ್ಲಿಂದ ಈಜಿಕೊಂಡು ಹೋಗಿ ಅಲ್ಲಿಯೇ ದಡದಲ್ಲಿರುವ ಕಾಡು ಸೇರಿಕೊಂಡಿದೆ.  ಆ ಹುಲಿಯ ಹೆಸರು ರಿಚರ್ಡ್​ ಪಾರ್ಕರ್​ ಎಂದು ಹೇಳಲಾಗಿದ್ದು, ಬೋಟ್​​ನಿಂದ ಜಿಗಿದ ಮೇಲೆ ಒಂದು ಸಲವೂ ತಿರುಗಿ ನೋಡದೆ ಈಜುಕೊಂಡು ಹೋಗಿದ್ದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ವಿಡಿಯೋ ನೋಡಿದ ಜನರೆಂತೂ ಭರ್ಜರಿ ಖುಷಿಪಟ್ಟಿದ್ದಾರೆ. ಹುಲಿಯ ಗತ್ತು ನೋಡಿ ಸಿಕ್ಕಾಪಟೆ ಹೊಗಳಿದ್ದಾರೆ. ಹೊರಟಮೇಲೆ ತಿರುಗಿ ನೋಡಬಾರದು ಎಂಬ ಪಾಠವನ್ನು ಈ ಟೈಗರ್​ನಿಂದ ಕಲಿತೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದರೆ, ಏನು ಹೇಳಲೂ ತಿಳಿಯುತ್ತಿಲ್ಲವೆಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ಶಿಕ್ಷಣ ಮುಂದುವರಿಸಲು ದಾರಿ ಮಾಡಿಕೊಡಿ; ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಆಗ್ರಹ, ಪ್ರತಿಭಟನೆ

Published On - 9:48 pm, Sun, 17 April 22

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ