AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dzuleke: ಈ ಅಂಗಡಿಯಲ್ಲಿ ಯಾವುದೇ ವ್ಯಾಪಾರಿ, ಕ್ಯಾಮರಾ, ಸೆಕ್ಯುರಿಟಿಗಳಿಲ್ಲ.. ಆದರೆ ನಂಬಿಕೆ ಮಾತ್ರ ಇದೆ!

ಇಲ್ಲೊಂದು ಆಶ್ಚರ್ಯಕರ ಮತ್ತು ವಿಶೇಷವಾದ ಅಂಗಡಿಯೊಂದಿದೆ. ನೋಡಲು ಸಾಮಾನ್ಯವಾಗಿ ಒಂದು ದಿನಸಿ ಅಂಗಡಿಯಂತೆ ಕಂಡರೂ, ಇದು ಸಾಮಾನ್ಯ ದಿನಸಿ ಅಂಗಡಿಯಲ್ಲ. ಏಕೆಂದರೆ ಈ ಅಂಗಡಿಯಲ್ಲಿ ಯಾವುದೇ ಮಾಲೀಕರು ಅಥವಾ ವ್ಯಾಪಾರಿಗಳಿಲ್ಲ

Dzuleke: ಈ ಅಂಗಡಿಯಲ್ಲಿ ಯಾವುದೇ ವ್ಯಾಪಾರಿ, ಕ್ಯಾಮರಾ, ಸೆಕ್ಯುರಿಟಿಗಳಿಲ್ಲ.. ಆದರೆ ನಂಬಿಕೆ ಮಾತ್ರ ಇದೆ!
ಸಾಂದರ್ಭಿಕ ಚಿತ್ರ Image Credit source: JK Photos Nagaland
Follow us
ನಯನಾ ಎಸ್​ಪಿ
|

Updated on: Feb 22, 2023 | 4:27 PM

ನಾಗಾಲ್ಯಾಂಡ್: ಮಹಾರಾಷ್ಟ್ರದ ಶನಿ ಶಿಂಗನಾಪುರದ ಗ್ರಾಮದಲ್ಲಿನ ಮನೆ ಮತ್ತು ಅಂಗಡಿಗಳಿಗೆ ಯಾರೂ ಬಾಗಿಲು ಹಾಕೋದಿಲ್ಲ ಎನ್ನುವಂತಹ ಸುದ್ದಿಯನ್ನು ಓದಿದ್ದೇವೆ. ಆದರೆ, ಈಶಾನ್ಯ ರಾಜ್ಯ ನಾಗಾಲ್ಯಾಂಡ್​ನ ಈ ಒಂದು ಗ್ರಾಮದ ಅಂಗಡಿಯಲ್ಲಿ ಸಾಮಾನುಗಳಿವೆ, ಆದರೆ, ಮಾರಲು ವ್ಯಾಪಾರಿಗಳಿಲ್ಲ.  ದಿನಂಪ್ರತಿ ಎಲ್ಲೆಂದರಲ್ಲಿ ಕಳ್ಳತನ, ಸುಲಿಗೆ ಪ್ರಕರಣಗಳನ್ನು ನೋಡುವ ಈ ಕಾಲದಲ್ಲಿ ಇದು ಅಚ್ಚರಿ ಎನಿಸಬಹುದು. ಬೆಟ್ಟದ ತಪ್ಪಲಿನಲ್ಲಿರುವ ಈ ಅಂಗಡಿಯಿಂದ ನಿಮಗಿಷ್ಟ ಬಂದಂತೆ ತರಕಾರಿ, ಸಾಮಾನುಗಳನ್ನು ತಗೆದುಕೊಂಡು, ಬೋರ್ಡ್ ಅಲ್ಲಿ ಹಾಕಿರುವಷ್ಟು ದುಡ್ಡನ್ನು ಪೆಟ್ಟಿಗೆಯೊಳಗೆ ಹಾಕಿ ಹೋಗಬಹುದು. ಹಾಗಾದರೆ ಈ ಊರಿನ ಜನರಿಗೆ ಕಳ್ಳ-ಕಾಕರ ಭಯವಿಲ್ಲವೇ? ಅಥವಾ ಈ ಊರಿನಲ್ಲಿ ಕಳ್ಳರೇ ಇಲ್ಲವೇ? ಇದೆಂತಹ ಜಾಗ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ನಂಬಿಕೆಯನ್ನೇ ಅಡಿಪಾಯವಾಗಿಟ್ಟುಕೊಂಡ ಇಂತಹ ಒಂದು ಅಂಗಡಿ ನಮ್ಮ ಭಾರತದ ಪರ್ವತ ರಾಜ್ಯ ಎಂದೇ ಪ್ರಸಿದ್ದವಾಗಿರುವ ನಾಗಾಲ್ಯಾಂಡ್​ನ (Nagaland) ಜುಲೇಕೆಯಲ್ಲಿ (Dzuleke)  ಕಾಣಸಿಗುತ್ತದೆ. ಖೊನೊಮಾದಿಂದ (ಭಾರತದ ಮೊದಲ ‘ಹಸಿರು ಗ್ರಾಮ’) ಕೇವಲ 10 ಕಿ.ಮೀ ಮತ್ತು ಕೊಹಿಮಾದಿಂದ (ನಾಗಲ್ಯಾಂಡ್‌ನ ರಾಜಧಾನಿ) ಸುಮಾರು 40 ಕಿ.ಮೀ ದೂರದಲ್ಲಿರುವ ಜುಲೇಕೆಯು ಪ್ರವಾಸಿಗರ ಕಣ್ಣಿಗೆ ಮುದ ನೀಡುತ್ತದೆ.

ಜುಲೇಕೆ ನಾಗಾಲ್ಯಾಂಡ್‌ನ ಜನಪ್ರಿಯ ಪ್ರವಾಸಿ ತಾಣವಲ್ಲದಿದ್ದರು ಇಲ್ಲಿನ ಪ್ರಕೃತಿ ಹಸಿರು ಜುಲೆಕೆಯನ್ನು ಅತಿ ಸುಂದರ ಪ್ರವಾಸಿತಾಣವನ್ನಾಗಿ ಮಾಡಿದೆ. ಈ ಪ್ರದೇಶವು ಸುಮಾರು 200 ಮನೆಗಳ ವಿರಳ ಜನಸಂಖ್ಯೆಯನ್ನು ಹೊಂದಿದೆ, ಹೆಚ್ಚಾಗಿ ಅಂಗಮಿಗಳು ಇಲ್ಲಿ ವಾಸಿಸುತ್ತಾರೆ. ಇದು ರಾಜ್ಯದ ಪ್ರಮುಖ ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶದಲ್ಲಿ ಒಂದಾಗಿದೆ.

ಬರಿ ಪ್ರಕೃತಿ ಸೌಂದರ್ಯಕ್ಕಷ್ಟೇ ಈ ಪ್ರದೇಶ ಪ್ರಸಿದ್ದಿ ಪಡೆದಿಲ್ಲ. ಇಲ್ಲೊಂದು ಆಶ್ಚರ್ಯಕರ ಮತ್ತು ವಿಶೇಷವಾದ ಅಂಗಡಿಯಿದೆ. ನೋಡಲು ಒಂದು ತರಕಾರಿ ಅಂಗಡಿಯಂತೆ ಕಂಡರೂ, ಇದು ಸಾಮಾನ್ಯ ಅಂಗಡಿಯಲ್ಲ. ಏಕೆಂದರೆ ಸಾಮಾನ್ಯವಾಗಿ ಅಂಗಡಿ ಎಂದರೆ ಅಲ್ಲಿ ಮಾಲೀಕರು ಅಥವಾ ವ್ಯಾಪಾರಿಗಳು ಇರುತ್ತಾರೆ. ಜನರು ಬೇಕಾದ ದಿನಸಿ, ಸಾಮಾನುಗಳನ್ನು ತೆಗೆದುಕೊಂಡು ವ್ಯಾಪಾರಿಗಳಿಗೆ ಹಣವನ್ನು ನೀಡುತ್ತಾರೆ. ಆದರೆ ಈ ಪುಟ್ಟ ಸಾವಯವ ಕಿರಾಣಿ ಅಂಗಡಿಯು ಹಣ್ಣುಗಳು ಮತ್ತು ತರಕಾರಿಗಳನ್ನು ಮಾರುತ್ತದೆ. ಇಲ್ಲಿ ಯಾವುದಕ್ಕೆ ಎಷ್ಟು ರೂಪಾಯಿ ಎಂಬ ಬೋರ್ಡ್ ಕೂಡ ಇದೆ, ಆದರೆ ಮಾಲೀಕರು ಮಾತ್ರ ಇಲ್ಲ. ಇಲ್ಲಿಗೆ ಬಂದ ಜನ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಬೋರ್ಡ್​ನಲ್ಲಿ ಬರೆದಷ್ಟು ಹಣವನ್ನು ಅಲ್ಲಿ ಇಟ್ಟ ಪೆಟ್ಟಿಗೆಯೊಳಗೆ ಹಾಕಿ ಹೋಗುತ್ತಾರೆ.

ಇದನ್ನೂ ಓದಿ: ಮೇಘಾಲಯದ ಈ ಪುಟ್ಟ ಹಳ್ಳಿಯಲ್ಲಿ ಮಗುವಿಗೆ ನಮ್ಮಂತೆಯೇ ಹೆಸರಿಡ್ತಾರೆ, ಜತೆಗೆ ಹಾಡೂ ಕೂಡ, ಇಲ್ಲಿಯ ವೈಶಿಷ್ಟ್ಯ ತಿಳಿಯಿರಿ

ಈ ಅಂಗಡಿಯಲ್ಲಿ ಯಾವುದೇ ವ್ಯಾಪಾರಿ, ಕ್ಯಾಮೆರಾ, ಸೆಕ್ಯೂರಿಟಿ ಇಲ್ಲ ಆದರೆ ಬಹಳಷ್ಟು ನಂಬಿಕೆ ಇದೆ. ಇಲ್ಲಿಯ ಜನ ಗ್ರಾಮದ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಅವರು ತೆಗೆದುಕೊಳ್ಳುವ ವಸ್ತುಗಳಿಗೆ ಸರಿಯಾದ ಮೊತ್ತವನ್ನು ಪಾವತಿಸುತ್ತಾರೆ ಎಂದು ನಂಬುತ್ತಾರೆ. ಹಾಗಂತ ಇಲ್ಲಿ ಕಳ್ಳತನ ಆಗುವಿದೇ ಇಲ್ಲ ಎಂದೇನಿಲ್ಲ ಆದರೆ ಇಂತಹ ಪ್ರಕರಣಗಳು ಬಹಳ ವಿರಳ ಎಂದು ಗ್ರಾಮಸ್ಥರು ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ