AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಯದಾನ ಮಾಡಬೇಕಿರುವ ನ್ಯಾಯಾಧೀಶರಿಗೇ ಗಲ್ಲು ಶಿಕ್ಷೆ ನೀಡಿದ್ದ ನ್ಯಾಯಾಲಯ, ಇದು 45 ವರ್ಷಗಳ ಹಿಂದಿನ ಘಟನೆ

ಸಾಮಾನ್ಯವಾಗಿ ನ್ಯಾಯಮೂರ್ತಿಗಳು ಅಥವಾ ನ್ಯಾಯಾಧೀಶರು ಎಂದರೆ ಎಲ್ಲರಿಗೂ ಗೌರವ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ, ತಪ್ಪಿಲ್ಲದವರನ್ನು ರಕ್ಷಿಸುವ ಅಧಿಕಾರ ಅವರಿಗೊಂದೇ ಇದೆ ಎಂಬುದು ನಂಬಿಕೆ. ಆದರೆ ಅವರೇ ತಪ್ಪು ಮಾಡಿದರೆ ಜನರು ಒಂದು ಸಲ ಕಸಿವಿಸಿಗೊಳ್ಳುವುದು ಸಹಜ. ಇದು ಸುಮಾರು 45 ವರ್ಷಗಳ ಹಿಂದಿನ ಕತೆ, ನ್ಯಾಯದಾನ ಮಾಡಬೇಕಾದ ನ್ಯಾಯಾಧೀಶರಿಗೆ ಗಲ್ಲು ಶಿಕ್ಷೆ ವಿಧಿಸಿದ ಸಮಯವದು.

ನ್ಯಾಯದಾನ ಮಾಡಬೇಕಿರುವ ನ್ಯಾಯಾಧೀಶರಿಗೇ ಗಲ್ಲು ಶಿಕ್ಷೆ ನೀಡಿದ್ದ ನ್ಯಾಯಾಲಯ, ಇದು 45 ವರ್ಷಗಳ ಹಿಂದಿನ ಘಟನೆ
ಗಲ್ಲು ಶಿಕ್ಷೆImage Credit source: Bar and Bench
Follow us
ನಯನಾ ರಾಜೀವ್
|

Updated on: Oct 20, 2023 | 6:41 PM

ಸಾಮಾನ್ಯವಾಗಿ ನ್ಯಾಯಮೂರ್ತಿಗಳು ಅಥವಾ ನ್ಯಾಯಾಧೀಶರು ಎಂದರೆ ಎಲ್ಲರಿಗೂ ಗೌರವ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ, ತಪ್ಪಿಲ್ಲದವರನ್ನು ರಕ್ಷಿಸುವ ಅಧಿಕಾರ ಅವರಿಗೊಂದೇ ಇದೆ ಎಂಬುದು ನಂಬಿಕೆ. ಆದರೆ ಅವರೇ ತಪ್ಪು ಮಾಡಿದರೆ ಜನರು ಒಂದು ಸಲ ಕಸಿವಿಸಿಗೊಳ್ಳುವುದು ಸಹಜ. ಇದು ಸುಮಾರು 45 ವರ್ಷಗಳ ಹಿಂದಿನ ಕತೆ, ನ್ಯಾಯದಾನ ಮಾಡಬೇಕಾದ ನ್ಯಾಯಾಧೀಶರಿಗೆ ಗಲ್ಲು ಶಿಕ್ಷೆ ವಿಧಿಸಿದ ಸಮಯವದು.

ಈ ನ್ಯಾಯಾಧೀಶರ ಹೆಸರು ಉಪೇಂದ್ರನಾಥ್ ರಾಜ್​ಖೋವಾ, ಅವರು ಅಸ್ಸಾಂನ ದುಬ್ರಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಎಲ್ಲಾ ನ್ಯಾಯಾಧೀಶರಂತೆ ಅವರಿಗೂ ಕೂಡ ಸರ್ಕಾರಿ ನಿವಾಸವಿತ್ತು. ರಾಜ್​ಖೋವಾ ಅವರು 1970ರಲ್ಲಿ ನಿವೃತ್ತರಾದರು. ಆದರೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿರಲಿಲ್ಲ. ಅದೇ ಬಂಗಲೆಯಲ್ಲಿ ಪತ್ನಿ ಹಾಗೂ ಮೂವರು ಪುತ್ರಿಯರೊಂದಿಗೆ ವಾಸವಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಹೆಂಡತಿ ಮಕ್ಕಳೆಲ್ಲಾ ಕಾಣೆಯಾದರು. ರಾಜ್​ಖೋವಾ ಅವರ ಕುಟುಂಬದ ಬಗ್ಗೆ ಸಂಬಂಧಿಕರು ಕೇಳಿದಾಗಲೆಲ್ಲಾ ಏನೋ ಒಂದು ಸಬೂಬು ನೀಡಿ ತಪ್ಪಿಸಿಕೊಳ್ಳುತ್ತಿದ್ದರು.

ಆದರೆ ಏಪ್ರಿಲ್​ನಲ್ಲಿ ಇದ್ದಕ್ಕಿಂದ್ದಂತೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದರು, ಅವರ ಬದಲು ಆ ಬಂಗಲೆಯಲ್ಲಿ ಬೇರೆ ನ್ಯಾಯಾಧೀಶರು ಬಂದು ಉಳಿದರು.

ಸಿಲಿಗುರಿಯ ಹೋಟೆಲ್​ನಲ್ಲಿ ತಂಗಿದ್ದ ನ್ಯಾಯಾಧೀಶರು ರಾಜ್​ಖೋವಾ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇರಲಿಲ್ಲ, ರಾಜ್​ಖೋವಾ ಅವರ ಭಾವ ಪೊಲೀಸ್​ ಇಲಾಖೆಯಲ್ಲಿ ಇದ್ದ ಕಾರಣ ತನ್ನ ಸಹೋದರಿ ಹಾಗೂ ಸೊಸೆಯಂದಿರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಹೋಟೆಲ್​ ಮೇಲೆ ದಾಳಿ ನಡೆಸಿದರು, ಆತ ಹೆಂಡತಿ ಹಾಗೂ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದರು. ರಾಜ್​ಖೋವಾರನ್ನು ಬಂಧಿಸಲಾಯಿತು.

ಮತ್ತಷ್ಟು ಓದಿ: ಎರಡು ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟ ಮಾಡಿದ ಚಿಕ್ಕೋಡಿ ನ್ಯಾಯಾಲಯ

ವಿಚಾರಣೆ ಸುಮಾರು ಒಂದು ವರ್ಷಗಳ ಕಾಲ ಮುಂದುವರೆಯಿತು, ಕೆಳ ನ್ಯಾಯಾಲಯ ರಾಜ್​ಖೋವಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಹೈಕೋರ್ಟ್​ ಕೂಡ ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿಯಿತು. ಬಳಿಕ ಸುಪ್ರೀಂಕೋರ್ಟ್​ಗೆ ಹೋದರೂ ಕೂಡ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. 1976ರ ಫೆಬ್ರವರಿ 14 ರಂದು ಜೋರ್ಹತ್ ಜೈಲಿನಲ್ಲಿ ರಾಜ್​ಖೋವಾ ಅವರನ್ನು ಗಲ್ಲಿಗೇರಿಸಲಾಯಿತು. ಆದರೆ ಆತ ಪತ್ನಿ ಹಾಗೂ ಪುತ್ರಿಯರನ್ನು ಕೊಂದಿದ್ದೇಕೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ಆರೋಪಿಗಳು ಓಡಿ ಹೋಗಲು ಅವಕಾಶ ಮಾಡಿಕೊಟ್ಟ ಇಬ್ಬರು ಪೊಲೀಸರ ಅಮಾನತು
ಆರೋಪಿಗಳು ಓಡಿ ಹೋಗಲು ಅವಕಾಶ ಮಾಡಿಕೊಟ್ಟ ಇಬ್ಬರು ಪೊಲೀಸರ ಅಮಾನತು