AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

27 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದ ತನ್ನ ತಂದೆಗಾಗಿ 2 ಕೋಟಿ ರೂಪಾಯಿ ಸಂಗ್ರಹಿಸಿದ ಮಗಳು

27 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದ ಹಿನ್ನೆಲೆ ಕಂಪನಿ ನೀಡಿದ ಸಾಧಾರಣ ಉಡುಗೊರೆಯಿಂದಾಗಿ ವೈರಲ್ ಆಗಿದ್ದ ಬರ್ಗರ್ ಕಿಂಗ್ ಇದೀಗ ಮತ್ತೆ ಇಂಟರ್ನೆಟ್​ನಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಬರ್ಗರ್ ಕಿಂಗ್ ಮಗಳು ತಂದೆಗಾಗಿ 2ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾಳೆ.

27 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದ ತನ್ನ ತಂದೆಗಾಗಿ 2 ಕೋಟಿ ರೂಪಾಯಿ ಸಂಗ್ರಹಿಸಿದ ಮಗಳು
ಬರ್ಗರ್ ಕಿಂಗ್ ಕೆವಿನ್ ಫೋರ್ಡ್
TV9 Web
| Updated By: Rakesh Nayak Manchi|

Updated on: Jul 03, 2022 | 2:05 PM

Share

ಯುಎಸ್‌ನ ಲಾಸ್ ವೇಗಾಸ್‌ನ ನಿಷ್ಠಾವಂತ ಬರ್ಗರ್ ಕಿಂಗ್ (Burger King) ಇತ್ತೀಚೆಗೆ 27 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದ ಕಾರಣ ತನ್ನ ಕಂಪನಿಯಿಂದ ಉಡುಗೊರೆ(Gift)ಯನ್ನು ಪಡೆದಿದ್ದರು. ಇದರ ವಿಡಿಯೋ ವೈರಲ್ (Video Viral) ಆಗಿತ್ತು. ಅಲ್ಲದೆ ಕಂಪನಿಯ ಸಾಧಾರಣ ಉಡುಗೊರೆ ನೀಡಿದ್ದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದರು. ಆದರೀಗ ದೇಣಿಗೆ(Donation)ಯಾಗಿ ಕೋಟ್ಯಾಂತರ ರೂಪಾಯಿ ಸಂಗ್ರಹವಾಗುವ ಮೂಲಕ ಆ ವ್ಯಕ್ತಿ ಇಂಟರ್ನೆಟ್​ನಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. 

54 ವರ್ಷದ ಬರ್ಗರ್ ಕಿಂಗ್ ಕೆವಿನ್ ಫೋರ್ಡ್ ಅವರು ಕ್ಯಾಷಿಯರ್ ಆಗಿ ಮತ್ತು 1995 ರಿಂದ ಮ್ಯಾಕ್‌ಕಾರನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಡುಗೆ ಮಾಡುವವರಾಗಿ ಕೆಲಸ ಮಾಡುತ್ತಿದ್ದಾರೆ. ಅವರ 27ನೇ ವಾರ್ಷಿಕೋತ್ಸವದಂದು ಅವರ ಮೇಲಧಿಕಾರಿಗಳು ಅವರಿಗೆ ಚಲನಚಿತ್ರ ಟಿಕೆಟ್, ಚಾಕೊಲೇಟ್ ಸೇರಿದಂತೆ ಕೆಲವೊಂದನ್ನು ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ: Viral News: ದಂಬಾಲು ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ

ಕಂಪನಿ ನೀಡಿದ ಉಡುಗೊರೆಯನ್ನು ಸ್ವೀಕರಿಸಿ ತಮ್ಮ ಸಹೋದ್ಯೋಗಿಗಳಿಗೆ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದರು. ಈ ವಿಡಿಯೋ ವೈರಲ್ ಪಡೆಕೊಂಡಿತ್ತು. ಕಂಪನಿ ಮೇಲಿನ ಅವರ ನಿಷ್ಠೆಗೆ ಅಂತಹ ಉಡುಗೊರೆ ನೀಡಿರುವುದು ಆಘಾತವಾಗಿದೆ ಎಂದು ಅನೇಕ ಜನರು ಹೇಳಿದರು.

ಇದರ ನಂತರ, ಕೆವಿನ್ ಅವರ ಮಗಳು ಸೆರಿನಾ ತಮ್ಮ ತಂದೆಗಾಗಿ GoFundMe ಪುಟವನ್ನು ಸ್ಥಾಪಿಸಿ ಸುಮಾರು $200 (15,790 ರೂಪಾಯಿ) ಸಂಗ್ರಹಿಸಲು ಉದ್ದೇಶಿಸಿದರು. ಕೆವಿನ್ ನಿಷ್ಠೆಗೆ ಮನಸೋತ ಜನರು ದೇಣಿಗೆ ನೀಡಲು ಮುಂದಾದರು. ಅದರಂತೆ ಸುಮಾರು $300,000 ( 2.36 ಕೋಟಿಗೂ ಹೆಚ್ಚು) ದೇಣಿಗೆ ಸಂಗ್ರಹವಾಗಿದೆ.

ಕೆವಿನ್ ಫೋರ್ಡ್ ಅವರ ಮಗಳು ಸೆರಿನಾ ನಿಧಿಸಂಗ್ರಹಣೆ ವೇಳೆ “ಆ ವೀಡಿಯೊದಲ್ಲಿರುವ ವ್ಯಕ್ತಿ ನನ್ನ ತಂದೆ. ಅವರು 27 ವರ್ಷಗಳಿಂದ ತಮ್ಮ ಕೆಲಸದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರು ಎಂದಿಗೂ ಕೆಲಸವನ್ನು ತಪ್ಪಿಸಲಿಲ್ಲ. ಅವರು 27 ವರ್ಷಗಳ ಹಿಂದೆ ನನ್ನ ಮತ್ತು ನನ್ನ ಅಕ್ಕನ ಪಾಲನೆಯನ್ನು ಪಡೆದಾಗ ಅವರು ಈ ಕೆಲಸದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ನಮ್ಮ ಕುಟುಂಬವು ಬೆಳೆದಂತೆ ಮತ್ತು ಅವರು ಮರುಮದುವೆಯಾದಾಗ ಒದಗಿಸಿದ ಅದ್ಭುತವಾದ ಆರೋಗ್ಯ ವಿಮೆಯಿಂದಾಗಿ ಅವರು ಅಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು” ಎಂದಿದ್ದಾಳೆ. ಕುಟುಂಬವು ಯಾವುದೇ ರೀತಿಯಲ್ಲಿ ಹಣವನ್ನು ಕೇಳುತ್ತಿಲ್ಲ, ಯಾರಾದರು ಆಶೀರ್ವಾದಿಸಲು ಇಚ್ಚಿಸಿದರೆ ಅವರು ಮೊಮ್ಮಕ್ಕಳನ್ನು ನೋಡಲು ಇಚ್ಚಿಸುತ್ತಾರೆ ಎಂದಿದ್ದಳು.

ಇದನ್ನೂ ಓದಿ: Viral Video: ‘ಚೈಲ್ಡ್ಸ್ ಪ್ಲೇ’ ಚಲನಚಿತ್ರ ಸರಣಿಯ ಚುಕ್ಕಿ ವೇಷಧರಿಸಿದ ಕುಬ್ಜ ವ್ಯಕ್ತಿ ದರೋಡೆಗೆ ಯತ್ನಿಸುವ ವಿಡಿಯೋ ವೈರಲ್

ಮಂಗಳವಾರ, NBCಯ ಟುಡೆ ಶೋನಲ್ಲಿ ಕಾಣಿಸಿಕೊಳ್ಳಲು ನ್ಯೂಯಾರ್ಕ್ ನಗರಕ್ಕೆ ಹೋಗಿದ್ದಾಗ ತನಗಾಗಿ ಸಂಗ್ರಹಿಸಿದ ಹಣವನ್ನು ಏನು ಮಾಡಲು ಯೋಜಿಸಿದ್ದೀರಿ ಎಂದು ಪ್ರಶ್ನೆಯೊಂದನ್ನು ಕೇಳಲಾಯ್ತು. ಇದಕ್ಕೆ ಉತ್ತಿರಿಸಿದ ಫೋರ್ಡ್, ನಿವೃತ್ತಿಯ ಯಾವುದೇ ಯೋಜನೆಯನ್ನು ಹೊಂದಿಲ್ಲ. ನನ್ನ ಮೊಮ್ಮಕ್ಕಳನ್ನು ಸ್ವಲ್ಪ ಸಮಯದವರೆಗೆ ಭೇಟಿ ಮಾಡುವುದನ್ನು ಮತ್ತು ಅವರ ಕಾಲೇಜಿಗೆ ಸ್ವಲ್ಪ ಹಣವನ್ನು ಹಾಕುವುದನ್ನು ಹೊರತುಪಡಿಸಿ ಆ ಹಣದೊಂದಿಗೆ ನಾನು ಏನನ್ನೂ ಮಾಡಬೇಕೆಂದು ಯೋಚಿಸಲಿಲ್ಲ, ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ನಾನು ಕೆಲಸ ಮಾಡುತ್ತಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: Viral Video: ಅಲಿಗೇಟರ್ ಮೊಸಳೆಯನ್ನು ಮದುವೆಯಾದ ಮೆಕ್ಸಿಕೋ ಮೇಯರ್, ಡಾನ್ಸ್ ಮಾಡುತ್ತಾ ಮೊಸಳೆಗೆ ಕಿಸ್ ಕೊಟ್ಟ ಮೇಯರ್

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ