AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಳೆಯನ್ನು ಲೆಕ್ಕಿಸದೇ ದೇಶಕ್ಕಾಗಿ 5,000 ಮೀಟರ್ ಓಟ ಪೂರ್ಣಗೊಳಿಸಿದ ಗಟ್ಟಿಗಿತ್ತಿ

ಓಟಗಾರ್ತಿ ಸುರಿಯುತ್ತಿರುವ ಮಳೆಯಲ್ಲಿ 5 ಸಾವಿರ ಮೀಟರ್​​ ದೂರ ಓಡಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊ ಅನೇಕರ ಗಮನ ಸೆಳೆದಿದೆ.

Viral Video: ಮಳೆಯನ್ನು ಲೆಕ್ಕಿಸದೇ ದೇಶಕ್ಕಾಗಿ 5,000 ಮೀಟರ್ ಓಟ ಪೂರ್ಣಗೊಳಿಸಿದ ಗಟ್ಟಿಗಿತ್ತಿ
ವೈರಲ್​​ ವೀಡಿಯೊ
ಅಕ್ಷಯ್​ ಪಲ್ಲಮಜಲು​​
|

Updated on:May 18, 2023 | 3:37 PM

Share

ಕ್ರೀಡೆ ಎನ್ನುವುದು ಒಂದು ತಪಸ್ಸು, ಅದನ್ನು ಸಾಧಿಸುವುದು ಸುಲಭದ ಮಾತಲ್ಲ. ಅದಕ್ಕೆ ಅಷ್ಟೇ ಪರಿಶ್ರಮ ಬೇಕು. ಅದನ್ನು ಛಲದಿಂದ ಸಾಧಿಸಬೇಕು ಎಂಬುದಕ್ಕೆ ಈ ವೀಡಿಯೊ ಸಾಕ್ಷಿ ನೋಡಿ. ಹೌದು ಕಾಂಬೋಡಿಯಾದ ಓಟಗಾರ್ತಿಯೊಬ್ಬರು ಮಳೆಯನ್ನು ಲೆಕ್ಕಿಸದೇ ಹಠವನ್ನು ಸಾಧಿಸಿರುವ ವೀಡಿಯೊ ವೈರಲ್​ ಆಗಿದೆ. ಈ ಓಟಗಾರ್ತಿ ಸುರಿಯುತ್ತಿರುವ ಮಳೆಯಲ್ಲಿ 5 ಸಾವಿರ ಮೀಟರ್​​ ದೂರ ಓಡುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊ ಅನೇಕರ ಗಮನ ಸೆಳೆದಿದೆ. ಈ ಓಟಗಾರ್ತಿಯನ್ನು ಬೌ ಸಮ್ನಾಂಗ್ ಎಂದು ಹೇಳಲಾಗಿದೆ. ಇವರ ಈ ಕಠಿಣ ಪರಿಶ್ರಮ ಎಲ್ಲ ಪ್ರಶಂಸೆಗೆ ಕಾರಣವಾಗಿದೆ. ಈ ವೀಡಿಯೊವನ್ನು ಅನೇಕ ಸ್ಪೋರ್ಟ್​​ ಅಕಾಡೆಮಿಗಳು ಟ್ವಿಟರ್​​ನಲ್ಲಿ ಹಂಚಿಕೊಂಡಿದೆ, ಇದು ಈ ವರೆಗೆ ಈ ವೀಡಿಯೊ 700,000 ವೀಕ್ಷಣೆಯನ್ನು ಪಡೆದುಕೊಂಡಿದೆ. ನಿಮ್ಮ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡಬೇಡಿ ಸಹೋದರಿ ಎಂದು ಹೇಳಿದ್ದಾರೆ. ಆಗ್ನೇಯ ಏಷ್ಯನ್ ಗೇಮ್ಸ್​​ನಲ್ಲಿ ನಡೆದಿರುವ ದೃಶ್ಯ.

ಮಾಧ್ಯಮಗಳೊಂದಿಗೆ ಮಾತನಾಡಿದ ಓಟಗಾರ್ತಿ ಬೌ ಸಮ್ನಾಂಗ್, ಮಳೆ ಆಗುತ್ತದೆ ಎಂದು ಗೊತ್ತಿತ್ತು, ಆದರೆ ಹೆಚ್ಚು ಮಳೆಯಾಗುತ್ತದೆ ಎಂದು ತಿಳಿದಿರಲಿಲ್ಲ. ಮೇ 8ರಂದು ಭಾರೀ ಮಳೆ, ಗಾಳಿ, ಗುಡುಗು ಇತ್ತು, ಇದೀಗ ಈ ವೀಡಿಯೊ ತುಂಬಾ ವೇಗವಾಗಿ ವೈರಲ್​​ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Viral Video: ಟ್ರ್ಯಾಕ್ಟರ್​ನಲ್ಲಿ ಅಪಾಯಕಾರಿ ಸ್ಟಂಟ್, ಸ್ವಲ್ಪ ಹೆಚ್ಚು, ಕಡಿಮೆಯಾದ್ರೂ ಜೀವವೇ ಹೋಗ್ತಿತ್ತು

ಓಟವನ್ನು ಮುಗಿಸಿದ ನಂತರ ಬೌ ಸಮ್ನಾಂಗ್ ಅವರು ತುಂಬಾ ಬಾವುಕರಾದರೂ. ಆದರೆ ಮತ್ತೊಬ್ಬ ಓಟಗಾರ್ತಿ ವಿಯೆಟ್ನಾಂನ ಥಿ ಓನ್ಹ್ ಅವರು ಆರು ನಿಮಿಷಗಳ ಮೊದಲು ಫೈನಲ್​​ ಹಂತಕ್ಕೆ ಬಂದು ತಲುಪಿದ್ದಾರೆ. ನನಗೆ ಕಾಂಬೋಡಿಯಾದಲ್ಲಿದ್ದ ಪ್ರೇಕ್ಷಕರ ಬೆಂಬಲ ನನ್ನನ್ನೂ ಯಾವುದೇ ಕಾರಣಕ್ಕೆ ಹಿಂದೆ ಸರಿಯಲು ಬಿಡಲಿಲ್ಲ ಎಂದು ಹೇಳಿದರು.

ಇನ್ನೊಂದು ಮನಕಲಕುವ ವಿಚಾರವೆಂದರೆ ಈ ಅಥ್ಲೀಟ್ ರಕ್ತಹೀನತೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ನಾನು ಈ ಸಮಸ್ಯೆಯಿಂದ ಬಳಲುತ್ತಿದ್ದರು, ನನಗೆ ಈ ಬಗ್ಗೆ ಯಾವುದೇ ಬೇಜಾರು ಇಲ್ಲಿ. ನನ್ನ ಕಣ್ಮುಂದೆ ಬಂದಿದ್ದು ನನ್ನ ಕಾಂಬೋಡಿಯಾ, ಏಕೆಂದರೆ ನಾನು ಕಾಂಬೋಡಿಯಾದಿಂದ ಪ್ರತಿನಿಧಿಸುತ್ತಿದ್ದೇನೆ ಎಂದು ಹೇಳಿದರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:41 pm, Thu, 18 May 23

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ