AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಳೆಯನ್ನು ಲೆಕ್ಕಿಸದೇ ದೇಶಕ್ಕಾಗಿ 5,000 ಮೀಟರ್ ಓಟ ಪೂರ್ಣಗೊಳಿಸಿದ ಗಟ್ಟಿಗಿತ್ತಿ

ಓಟಗಾರ್ತಿ ಸುರಿಯುತ್ತಿರುವ ಮಳೆಯಲ್ಲಿ 5 ಸಾವಿರ ಮೀಟರ್​​ ದೂರ ಓಡಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊ ಅನೇಕರ ಗಮನ ಸೆಳೆದಿದೆ.

Viral Video: ಮಳೆಯನ್ನು ಲೆಕ್ಕಿಸದೇ ದೇಶಕ್ಕಾಗಿ 5,000 ಮೀಟರ್ ಓಟ ಪೂರ್ಣಗೊಳಿಸಿದ ಗಟ್ಟಿಗಿತ್ತಿ
ವೈರಲ್​​ ವೀಡಿಯೊ
ಅಕ್ಷಯ್​ ಪಲ್ಲಮಜಲು​​
|

Updated on:May 18, 2023 | 3:37 PM

Share

ಕ್ರೀಡೆ ಎನ್ನುವುದು ಒಂದು ತಪಸ್ಸು, ಅದನ್ನು ಸಾಧಿಸುವುದು ಸುಲಭದ ಮಾತಲ್ಲ. ಅದಕ್ಕೆ ಅಷ್ಟೇ ಪರಿಶ್ರಮ ಬೇಕು. ಅದನ್ನು ಛಲದಿಂದ ಸಾಧಿಸಬೇಕು ಎಂಬುದಕ್ಕೆ ಈ ವೀಡಿಯೊ ಸಾಕ್ಷಿ ನೋಡಿ. ಹೌದು ಕಾಂಬೋಡಿಯಾದ ಓಟಗಾರ್ತಿಯೊಬ್ಬರು ಮಳೆಯನ್ನು ಲೆಕ್ಕಿಸದೇ ಹಠವನ್ನು ಸಾಧಿಸಿರುವ ವೀಡಿಯೊ ವೈರಲ್​ ಆಗಿದೆ. ಈ ಓಟಗಾರ್ತಿ ಸುರಿಯುತ್ತಿರುವ ಮಳೆಯಲ್ಲಿ 5 ಸಾವಿರ ಮೀಟರ್​​ ದೂರ ಓಡುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊ ಅನೇಕರ ಗಮನ ಸೆಳೆದಿದೆ. ಈ ಓಟಗಾರ್ತಿಯನ್ನು ಬೌ ಸಮ್ನಾಂಗ್ ಎಂದು ಹೇಳಲಾಗಿದೆ. ಇವರ ಈ ಕಠಿಣ ಪರಿಶ್ರಮ ಎಲ್ಲ ಪ್ರಶಂಸೆಗೆ ಕಾರಣವಾಗಿದೆ. ಈ ವೀಡಿಯೊವನ್ನು ಅನೇಕ ಸ್ಪೋರ್ಟ್​​ ಅಕಾಡೆಮಿಗಳು ಟ್ವಿಟರ್​​ನಲ್ಲಿ ಹಂಚಿಕೊಂಡಿದೆ, ಇದು ಈ ವರೆಗೆ ಈ ವೀಡಿಯೊ 700,000 ವೀಕ್ಷಣೆಯನ್ನು ಪಡೆದುಕೊಂಡಿದೆ. ನಿಮ್ಮ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡಬೇಡಿ ಸಹೋದರಿ ಎಂದು ಹೇಳಿದ್ದಾರೆ. ಆಗ್ನೇಯ ಏಷ್ಯನ್ ಗೇಮ್ಸ್​​ನಲ್ಲಿ ನಡೆದಿರುವ ದೃಶ್ಯ.

ಮಾಧ್ಯಮಗಳೊಂದಿಗೆ ಮಾತನಾಡಿದ ಓಟಗಾರ್ತಿ ಬೌ ಸಮ್ನಾಂಗ್, ಮಳೆ ಆಗುತ್ತದೆ ಎಂದು ಗೊತ್ತಿತ್ತು, ಆದರೆ ಹೆಚ್ಚು ಮಳೆಯಾಗುತ್ತದೆ ಎಂದು ತಿಳಿದಿರಲಿಲ್ಲ. ಮೇ 8ರಂದು ಭಾರೀ ಮಳೆ, ಗಾಳಿ, ಗುಡುಗು ಇತ್ತು, ಇದೀಗ ಈ ವೀಡಿಯೊ ತುಂಬಾ ವೇಗವಾಗಿ ವೈರಲ್​​ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Viral Video: ಟ್ರ್ಯಾಕ್ಟರ್​ನಲ್ಲಿ ಅಪಾಯಕಾರಿ ಸ್ಟಂಟ್, ಸ್ವಲ್ಪ ಹೆಚ್ಚು, ಕಡಿಮೆಯಾದ್ರೂ ಜೀವವೇ ಹೋಗ್ತಿತ್ತು

ಓಟವನ್ನು ಮುಗಿಸಿದ ನಂತರ ಬೌ ಸಮ್ನಾಂಗ್ ಅವರು ತುಂಬಾ ಬಾವುಕರಾದರೂ. ಆದರೆ ಮತ್ತೊಬ್ಬ ಓಟಗಾರ್ತಿ ವಿಯೆಟ್ನಾಂನ ಥಿ ಓನ್ಹ್ ಅವರು ಆರು ನಿಮಿಷಗಳ ಮೊದಲು ಫೈನಲ್​​ ಹಂತಕ್ಕೆ ಬಂದು ತಲುಪಿದ್ದಾರೆ. ನನಗೆ ಕಾಂಬೋಡಿಯಾದಲ್ಲಿದ್ದ ಪ್ರೇಕ್ಷಕರ ಬೆಂಬಲ ನನ್ನನ್ನೂ ಯಾವುದೇ ಕಾರಣಕ್ಕೆ ಹಿಂದೆ ಸರಿಯಲು ಬಿಡಲಿಲ್ಲ ಎಂದು ಹೇಳಿದರು.

ಇನ್ನೊಂದು ಮನಕಲಕುವ ವಿಚಾರವೆಂದರೆ ಈ ಅಥ್ಲೀಟ್ ರಕ್ತಹೀನತೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ನಾನು ಈ ಸಮಸ್ಯೆಯಿಂದ ಬಳಲುತ್ತಿದ್ದರು, ನನಗೆ ಈ ಬಗ್ಗೆ ಯಾವುದೇ ಬೇಜಾರು ಇಲ್ಲಿ. ನನ್ನ ಕಣ್ಮುಂದೆ ಬಂದಿದ್ದು ನನ್ನ ಕಾಂಬೋಡಿಯಾ, ಏಕೆಂದರೆ ನಾನು ಕಾಂಬೋಡಿಯಾದಿಂದ ಪ್ರತಿನಿಧಿಸುತ್ತಿದ್ದೇನೆ ಎಂದು ಹೇಳಿದರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:41 pm, Thu, 18 May 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ