Viral Video: ಮಲಗಿದ್ದ ನಾಯಿಯನ್ನು ರಾತ್ರೋರಾತ್ರಿ ಹಿಡಿದೆಳೆದೊಯ್ದ ಚಿರತೆ

Leopard Attack : ಮಹಾರಾಷ್ಟ್ರದ ಕಬ್ಬಿನ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಆ ಮನುಷ್ಯನ ಪಕ್ಕದಲ್ಲಿ ನಾಯಿ ಇರದಿದ್ದರೆ ಮುಂದೇನಾಗುತ್ತಿತ್ತು ಊಹಿಸಿ! ನೆಟ್ಟಿಗರು ಭಯಂಕರ ಗಾಬರಿಗೆ ಬಿದ್ದಿದ್ದಾರೆ.

Viral Video: ಮಲಗಿದ್ದ ನಾಯಿಯನ್ನು ರಾತ್ರೋರಾತ್ರಿ ಹಿಡಿದೆಳೆದೊಯ್ದ ಚಿರತೆ
ಮಲಗಿದ್ದ ನಾಯಿಯನ್ನು ಬೇಟೆಯಾಡಿ ಎಳೆದೊಯ್ದ ಚಿರತೆ
Follow us
| Updated By: ಶ್ರೀದೇವಿ ಕಳಸದ

Updated on: May 18, 2023 | 11:06 AM

Leopard : ಕಾಡುಪ್ರಾಣಿಗಳು ಯಾಕೆ ನಾಡಿಗೆ ಬರುತ್ತವೆ? ಆಹಾರದ ಕೊರತೆಯಾದಾಗಲೇ ಅಲ್ಲವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ರಾತ್ರಿಯಾಗಿದೆ. ಕಬ್ಬು, ಬಾಳೆ ಮುಂತಾದ ಹಣ್ಣುಗಳನ್ನು ಬೆಳೆಯುವ ತೋಟದ ಬಳಿ ಹಾಕಲಾದ ಶೆಡ್​. ದಿನವಿಡೀ ಕೆಲಸ ಮಾಡಿ ಹೈರಾಣಾದ ಮನುಷ್ಯರು ಗಾಡಿಗಳು ವಿಶ್ರಾಂತಿಯಲ್ಲಿ. ಒಂದು ಮಂಚದ ಮೇಲೆ ಒಬ್ಬ ಮನುಷ್ಯ ಗಾಢನಿದ್ರೆಯಲ್ಲಿದ್ದಾನೆ. ಪಕ್ಕದಲ್ಲಿ ನಾಯಿಯೊಂದು ಮಲಗಿದೆ. ಆಗ ನೋಡಿ ಮುಂದೇನಾಗುತ್ತದೆ ಎಂದು.  ​

ಸ್ವಲ್ಪ ಹೊತ್ತಿಗೆ ಚಿರತೆಯೊಂದು ಮನುಷ್ಯ ಮಲಗಿದಲ್ಲಿ ಬರುತ್ತದೆ. ಪಕ್ಕದಲ್ಲಿ ಮಲಗಿದ್ದ ನಾಯಿಯು ಎಚ್ಚೆತ್ತು ಒಂದೇ ಸಮನೇ ಬೊಗಳಲು ಆರಂಭಿಸುತ್ತದೆ. ಆದರೆ ಚಿರತೆ ಒಂದೇ ಏಟಿಗೆ ಅದನ್ನು ಬೇಟೆಯಾಡಿ ಎಳೆದುಕೊಂಡು ಹೋಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಯಂಕರ ಹೌಹಾರಿದ್ದಾರೆ. ಇನ್ನು ಪಕ್ಕದಲ್ಲಿ ಮಲಗಿದ್ದ ಆ ಮನುಷ್ಯನಿಗೆ ಏನು ನಡೆಯುತ್ತಿದೆ ತನ್ನ ಸುತ್ತ ಎಂದು ಅರಗಿಸಿಕೊಳ್ಳಲು ಎಷ್ಟು ಸಮಯ ಬೇಕಾಯಿತೋ ಏನೋ.

ಇದನ್ನೂ ಓದಿ : Viral: ಪೊಲೀಸರಿಗೆ ತುಂಬಾ ಆಟವಾಡಿಸಿಬಿಟ್ಟಿಯಂತೆ , ಹೌದೇನು ಹ್ಯೂಡಿನಿ?

ಈ ವಿಡಿಯೋ ಅನ್ನು ಮೇ 16ರಂದು ಹಂಚಿಕೊಳ್ಳಲಾಗಿದೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ತಾನು ಮಲಗಿಕೊಂಡಾಗ ಏನಾಯಿತು ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಆ ಮನುಷ್ಯನ್ ಫ್ಯೂಸ್ ಆಫ್​ ಆಗಿರಲು ಸಾಕು ಎಂದು ಹೇಳಿದ್ದಾರೆ ಒಬ್ಬರು. ಅಯ್ಯೋ, ನಾನು ಬಾಲ್ಯದಲ್ಲಿ ಇಂಥ ದೃಶ್ಯಗಳನ್ನು ಕಣ್ಣಾರೆ ನೋಡಿದ್ದೇನೆ. ಆಗ ಮೇಕೆಗಳನ್ನು ಚಿರತೆಗಳು ಹೀಗೇ ಎಳೆದುಕೊಂಡು ಹೋಗುತ್ತಿದ್ದವು. ಈಗಿಲ್ಲಿ ನಾಯಿಯಷ್ಟೇ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral: ಈ ಫೋಟೋದಲ್ಲಿರುವ ಖ್ಯಾತ ಹಿನ್ನೆಲೆ ಗಾಯಕಿ ಯಾರು?

ಅಕಸ್ಮಾತ್​ ಇಲ್ಲಿ ನಾಯಿ ಇರದಿದ್ದಲ್ಲಿ ಮಲಗಿಕೊಂಡ ಮನುಷ್ಯನ ಬಲಿ ಗ್ಯಾರಂಟಿ! ಎಂದು ಮತ್ತೊಬ್ಬರು ಹೇಳಿದ್ದಾರೆ. ಚಿರತೆಗಳು ಬುದ್ಧಿವಂತ ಜೀವಿಗಳು. ಜಿಮ್ ಕಾರ್ಬೆಟ್​ನ ಪುಸ್ತಕದಲ್ಲಿ ಚಿರತೆಗಳ ನಡೆವಳಿಕೆಯ ಬಗ್ಗೆ ಸಾಕಷ್ಟು ಒಳ್ಳೆಯ ಮಾಹಿತಿ ಇದೆ. ಅವು ಬದುಕುವ ಬಗೆಯನ್ನು ಹೇಗೆ ಕಂಡುಕೊಂಡಿವೆ ಎನ್ನುವುದನ್ನು ಈ ಪುಸ್ತಕ ಓದಿ ತಿಳಿದುಕೊಳ್ಳಬಹುದು ಎಂದು ಇನ್ನೊಬ್ಬರು ಹೇಳಿದ್ದಾರೆ.

ನೀವೇನಂತೀರಿ ಈ ವಿಡಿಯೋ ನೋಡಿದ ಮೇಲೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ