AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಲಗಿದ್ದ ನಾಯಿಯನ್ನು ರಾತ್ರೋರಾತ್ರಿ ಹಿಡಿದೆಳೆದೊಯ್ದ ಚಿರತೆ

Leopard Attack : ಮಹಾರಾಷ್ಟ್ರದ ಕಬ್ಬಿನ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಆ ಮನುಷ್ಯನ ಪಕ್ಕದಲ್ಲಿ ನಾಯಿ ಇರದಿದ್ದರೆ ಮುಂದೇನಾಗುತ್ತಿತ್ತು ಊಹಿಸಿ! ನೆಟ್ಟಿಗರು ಭಯಂಕರ ಗಾಬರಿಗೆ ಬಿದ್ದಿದ್ದಾರೆ.

Viral Video: ಮಲಗಿದ್ದ ನಾಯಿಯನ್ನು ರಾತ್ರೋರಾತ್ರಿ ಹಿಡಿದೆಳೆದೊಯ್ದ ಚಿರತೆ
ಮಲಗಿದ್ದ ನಾಯಿಯನ್ನು ಬೇಟೆಯಾಡಿ ಎಳೆದೊಯ್ದ ಚಿರತೆ
TV9 Web
| Edited By: ಶ್ರೀದೇವಿ ಕಳಸದ|

Updated on: May 18, 2023 | 11:06 AM

Share

Leopard : ಕಾಡುಪ್ರಾಣಿಗಳು ಯಾಕೆ ನಾಡಿಗೆ ಬರುತ್ತವೆ? ಆಹಾರದ ಕೊರತೆಯಾದಾಗಲೇ ಅಲ್ಲವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ರಾತ್ರಿಯಾಗಿದೆ. ಕಬ್ಬು, ಬಾಳೆ ಮುಂತಾದ ಹಣ್ಣುಗಳನ್ನು ಬೆಳೆಯುವ ತೋಟದ ಬಳಿ ಹಾಕಲಾದ ಶೆಡ್​. ದಿನವಿಡೀ ಕೆಲಸ ಮಾಡಿ ಹೈರಾಣಾದ ಮನುಷ್ಯರು ಗಾಡಿಗಳು ವಿಶ್ರಾಂತಿಯಲ್ಲಿ. ಒಂದು ಮಂಚದ ಮೇಲೆ ಒಬ್ಬ ಮನುಷ್ಯ ಗಾಢನಿದ್ರೆಯಲ್ಲಿದ್ದಾನೆ. ಪಕ್ಕದಲ್ಲಿ ನಾಯಿಯೊಂದು ಮಲಗಿದೆ. ಆಗ ನೋಡಿ ಮುಂದೇನಾಗುತ್ತದೆ ಎಂದು.  ​

ಸ್ವಲ್ಪ ಹೊತ್ತಿಗೆ ಚಿರತೆಯೊಂದು ಮನುಷ್ಯ ಮಲಗಿದಲ್ಲಿ ಬರುತ್ತದೆ. ಪಕ್ಕದಲ್ಲಿ ಮಲಗಿದ್ದ ನಾಯಿಯು ಎಚ್ಚೆತ್ತು ಒಂದೇ ಸಮನೇ ಬೊಗಳಲು ಆರಂಭಿಸುತ್ತದೆ. ಆದರೆ ಚಿರತೆ ಒಂದೇ ಏಟಿಗೆ ಅದನ್ನು ಬೇಟೆಯಾಡಿ ಎಳೆದುಕೊಂಡು ಹೋಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಯಂಕರ ಹೌಹಾರಿದ್ದಾರೆ. ಇನ್ನು ಪಕ್ಕದಲ್ಲಿ ಮಲಗಿದ್ದ ಆ ಮನುಷ್ಯನಿಗೆ ಏನು ನಡೆಯುತ್ತಿದೆ ತನ್ನ ಸುತ್ತ ಎಂದು ಅರಗಿಸಿಕೊಳ್ಳಲು ಎಷ್ಟು ಸಮಯ ಬೇಕಾಯಿತೋ ಏನೋ.

ಇದನ್ನೂ ಓದಿ : Viral: ಪೊಲೀಸರಿಗೆ ತುಂಬಾ ಆಟವಾಡಿಸಿಬಿಟ್ಟಿಯಂತೆ , ಹೌದೇನು ಹ್ಯೂಡಿನಿ?

ಈ ವಿಡಿಯೋ ಅನ್ನು ಮೇ 16ರಂದು ಹಂಚಿಕೊಳ್ಳಲಾಗಿದೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ತಾನು ಮಲಗಿಕೊಂಡಾಗ ಏನಾಯಿತು ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಆ ಮನುಷ್ಯನ್ ಫ್ಯೂಸ್ ಆಫ್​ ಆಗಿರಲು ಸಾಕು ಎಂದು ಹೇಳಿದ್ದಾರೆ ಒಬ್ಬರು. ಅಯ್ಯೋ, ನಾನು ಬಾಲ್ಯದಲ್ಲಿ ಇಂಥ ದೃಶ್ಯಗಳನ್ನು ಕಣ್ಣಾರೆ ನೋಡಿದ್ದೇನೆ. ಆಗ ಮೇಕೆಗಳನ್ನು ಚಿರತೆಗಳು ಹೀಗೇ ಎಳೆದುಕೊಂಡು ಹೋಗುತ್ತಿದ್ದವು. ಈಗಿಲ್ಲಿ ನಾಯಿಯಷ್ಟೇ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral: ಈ ಫೋಟೋದಲ್ಲಿರುವ ಖ್ಯಾತ ಹಿನ್ನೆಲೆ ಗಾಯಕಿ ಯಾರು?

ಅಕಸ್ಮಾತ್​ ಇಲ್ಲಿ ನಾಯಿ ಇರದಿದ್ದಲ್ಲಿ ಮಲಗಿಕೊಂಡ ಮನುಷ್ಯನ ಬಲಿ ಗ್ಯಾರಂಟಿ! ಎಂದು ಮತ್ತೊಬ್ಬರು ಹೇಳಿದ್ದಾರೆ. ಚಿರತೆಗಳು ಬುದ್ಧಿವಂತ ಜೀವಿಗಳು. ಜಿಮ್ ಕಾರ್ಬೆಟ್​ನ ಪುಸ್ತಕದಲ್ಲಿ ಚಿರತೆಗಳ ನಡೆವಳಿಕೆಯ ಬಗ್ಗೆ ಸಾಕಷ್ಟು ಒಳ್ಳೆಯ ಮಾಹಿತಿ ಇದೆ. ಅವು ಬದುಕುವ ಬಗೆಯನ್ನು ಹೇಗೆ ಕಂಡುಕೊಂಡಿವೆ ಎನ್ನುವುದನ್ನು ಈ ಪುಸ್ತಕ ಓದಿ ತಿಳಿದುಕೊಳ್ಳಬಹುದು ಎಂದು ಇನ್ನೊಬ್ಬರು ಹೇಳಿದ್ದಾರೆ.

ನೀವೇನಂತೀರಿ ಈ ವಿಡಿಯೋ ನೋಡಿದ ಮೇಲೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್