ಡಾ.ಜಿ ಪರಮೇಶ್ವರ ಬರ್ತ್ಡೇ ಆಚರಣೆ ವೇಳೆ ಉರುಳಿದ ತೆಂಗಿನಮರ; ತಪ್ಪಿದ ಅನಾಹುತ
ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಇಂದು ತಮ್ಮ 73 ನೇ ಹುಟ್ಟು ಹಬ್ಬವನ್ನು ತುಮಕೂರಿನಲ್ಲಿ ಆಚರಿಸಿಕೊಂಡಿದ್ದಾರೆ. ಅದರಂತೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹಸಚಿವರ ಸರ್ಕಾರಿ ನಿವಾಸದಲ್ಲಿ ಡಾ.ಪರಮೇಶ್ವರ ಅವರ ಸ್ವಾಗತಕ್ಕಾಗಿ ನೂರಾರು ಅಭಿಮಾನಿಗಳು ಕಾದುಕೊಂಡಿದ್ದರು. ಈ ವೇಳೆ ಮಳೆ, ಗಾಳಿಗೆ ಬುಡ ಸಮೇತ ತೆಂಗಿನಮರ ಟೆಂಟ್ ಮೇಲೆ ಉರುಳಿದೆ.
ಬೆಂಗಳೂರು, ಆ.06: ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ತಮ್ಮ 73 ನೇ ಹುಟ್ಟು ಹಬ್ಬವನ್ನು ತುಮಕೂರಿನಲ್ಲಿ ಆಚರಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹಸಚಿವ ಡಾ.ಜಿ.ಪರಮೇಶ್ವರ(DR. G Parameshwara) ಅವರ ಸರ್ಕಾರಿ ನಿವಾಸದಲ್ಲಿ ಅನಾಹುತವೊಂದು ತಪ್ಪಿದೆ. ಹೌದು, ಡಾ.ಪರಮೇಶ್ವರ ಅವರ ಹುಟ್ಟುಹಬ್ಬ ಆಚರಣೆ ವೇಳೆ ಮಳೆ, ಗಾಳಿಗೆ ಬುಡ ಸಮೇತ ತೆಂಗಿನಮರ ಟೆಂಟ್ ಮೇಲೆ ಉರುಳಿದೆ. ಡಾ.ಪರಮೇಶ್ವರ್ ಸ್ವಾಗತಕ್ಕಾಗಿ ನೂರಾರು ಅಭಿಮಾನಿಗಳು ಕಾದುಕೊಂಡಿದ್ದರು. ಈ ವೇಳೆ ಜರ್ಮನ್ ಟೆಂಟ್ ಮೇಲೆ ತೆಂಗಿನ ಮರ ಬಿದ್ದಿದ್ದು, ಅಭಿಮಾನಿಗಳು, ಪೊಲೀಸ್ ಸಿಬ್ಬಂದಿ ಕೆಲಕಾಲ ಆತಂಕಕ್ಕೊಳಗಾಗಿದ್ದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್ನಲ್ಲೇ ಹೇರ್ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್

