ಬೆಂಗಳೂರು: ನಗರದ ಲಾಯರ್ ಕೆಎನ್ ಜಗದೀಶ್ ಬಿಗ್ ಬಾಸ್ ಕನ್ನಡ ಶೋ ನಿಂದ ಹೊರಬಿದ್ದ ನಂತರವೂ ಸುದ್ದಿಯಲ್ಲಿದ್ದಾರೆ. ಸುದ್ದಿಯಲ್ಲಿದ್ದಾರೋ ಅಥವಾ ಅವರಿಂದ ಅಂಥ ಪ್ರಯತ್ನ ನಡೆದಿದೆಯೋ ಅಂತ ಕನ್ನಡಿಗರು ನಿರ್ಧರಿಸಬೇಕು. ಇವತ್ತಿನ ತಾಜಾ ಸುದ್ದಿಯೇನೆಂದರೆ, ಬಿಗ್ ಬಾಸ್ ನಿಂದ ಆಚೆ ಬಂದ ಬಳಿಕ ಯಾರೋ ಇಬ್ಬರು ಜಗದೀಶ್ ರನ್ನು ಬಾಂಬ್ ಹಾಕಿ ಸಾಯಿಸಿ ಇಲ್ಲವೇ ಗುಂಡಿಟ್ಟು ಕೊಲ್ಲಿ ಎಂಬ ಸಂದೇಶದ ವಿಡಿಯೋವೊಂದನ್ನು ಕಳಿಸಿದ್ದಾರಂತೆ. ಪೊಲೀಸರಿಗೆ ದೂರಲ್ಲ ಮಾಹಿತಿ ನೀಡಲು ಬಂದಿದ್ದೆ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಸೃಷ್ಟಿಸುತ್ತಿರುವ ಅನಾಹುತಗಳ ಮೇಲೆ ಬೆಳಕು ಚೆಲ್ಲಿದ ಖ್ಯಾತ ವಕೀಲ ಜಗದೀಶ್