ನನ್ನನ್ನು ಬಾಂಬ್ ಹಾಕಿ ಸಾಯಿಸಬೇಕೆಂದು ಯಾರೋ ವಿಡಿಯೋ ಕಳಿಸಿದ್ದಾರೆ: ಜಗದೀಶ್, ವಕೀಲ

|

Updated on: Oct 25, 2024 | 3:55 PM

ಕೊಡಿಗೇಹಳ್ಳಿ ಪೊಲೀಸರಿಗೆ ಒಂದು ಲಿಖಿತ ದೂರು ಸಲ್ಲಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಜಗದೀಶ್ ಹೇಳುತ್ತಾರೆ. ಅವರಿಗೆ ಥ್ರೆಟ್ ಇರುವ ಸಂಗತಿ ಪೊಲೀಸರಿಗೆ ಮತ್ತು ಗುಪ್ತಚರ ವಿಭಾಗಕ್ಕೆ ಗೊತ್ತಿಲ್ಲ ಅಂತೇನಿಲ್ಲ, ಗೊತ್ತಿದ್ದರೂ ಯಾಕೆ ಸುಮ್ಮನಿದ್ದಾರೆ ಅನ್ನೋದು ತನ್ನ ತಕರಾರು ಎಂದು ಅವರು ಹೇಳುತ್ತಾರೆ.

ಬೆಂಗಳೂರು: ನಗರದ ಲಾಯರ್ ಕೆಎನ್ ಜಗದೀಶ್ ಬಿಗ್ ಬಾಸ್ ಕನ್ನಡ ಶೋ ನಿಂದ ಹೊರಬಿದ್ದ ನಂತರವೂ ಸುದ್ದಿಯಲ್ಲಿದ್ದಾರೆ. ಸುದ್ದಿಯಲ್ಲಿದ್ದಾರೋ ಅಥವಾ ಅವರಿಂದ ಅಂಥ ಪ್ರಯತ್ನ ನಡೆದಿದೆಯೋ ಅಂತ ಕನ್ನಡಿಗರು ನಿರ್ಧರಿಸಬೇಕು. ಇವತ್ತಿನ ತಾಜಾ ಸುದ್ದಿಯೇನೆಂದರೆ, ಬಿಗ್ ಬಾಸ್ ನಿಂದ ಆಚೆ ಬಂದ ಬಳಿಕ ಯಾರೋ ಇಬ್ಬರು ಜಗದೀಶ್ ರನ್ನು ಬಾಂಬ್ ಹಾಕಿ ಸಾಯಿಸಿ ಇಲ್ಲವೇ ಗುಂಡಿಟ್ಟು ಕೊಲ್ಲಿ ಎಂಬ ಸಂದೇಶದ ವಿಡಿಯೋವೊಂದನ್ನು ಕಳಿಸಿದ್ದಾರಂತೆ. ಪೊಲೀಸರಿಗೆ ದೂರಲ್ಲ ಮಾಹಿತಿ ನೀಡಲು ಬಂದಿದ್ದೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರಲ್ಲಿ ಮಳೆ ಸೃಷ್ಟಿಸುತ್ತಿರುವ ಅನಾಹುತಗಳ ಮೇಲೆ ಬೆಳಕು ಚೆಲ್ಲಿದ ಖ್ಯಾತ ವಕೀಲ ಜಗದೀಶ್

Follow us on