Hukkunda Falls: ಜಲಪಾತ ವೀಕ್ಷಿಸಲು ಹೋಗುವ ಕೆಲವರಲ್ಲಿ ಅಪಾಯಕಾರಿ ಹುಚ್ಚಾಟಗಳ ಬಯಕೆ ಯಾಕೆ?

ಜಲಪಾತದ ಬಳಿ ಇಬ್ಬರು ಯುವಕರು ಬಂಡೆಯ ತೀರ ಅಂಚಿಗೆ ನಿಂತು ಸೆಲ್ಫೀ ಎಲ್ಲಿಂದ ಮತ್ತು ಹೇಗೆ ತೆಗೆದುಕೊಳ್ಳುವುದು ಅಂತ ಗಹನವಾದ ಚರ್ಚೆ ನಡೆಸಿರುವಂತಿದೆ. ಇವರಿಗೆಲ್ಲ ತಮ್ಮ ಹೀರೋಗಿರಿ ಪ್ರದರ್ಶಿಸಲು ಇಂಥ ಅಪಾಯಕಾರಿ ಸ್ಥಳಗಳೇ ಆಗಬೇಕೇ? ಇನ್ಯಾವಾಗ ಇವರಿಗೆ ಬುದ್ಧಿ ಬಂದೀತು?

Hukkunda Falls: ಜಲಪಾತ ವೀಕ್ಷಿಸಲು ಹೋಗುವ ಕೆಲವರಲ್ಲಿ ಅಪಾಯಕಾರಿ ಹುಚ್ಚಾಟಗಳ ಬಯಕೆ ಯಾಕೆ?
|

Updated on: Aug 12, 2024 | 12:59 PM

ಚಿಕ್ಕಮಗಳೂರು: ಕೆಲ ಜನರಿಗೆ ಬ್ರಹ್ಮನೇ ಧರೆಗಿಳಿದು ಬಂದು ಬುದ್ಧಿ ಹೇಳಿದರೂ ಎಚ್ಚೆತ್ತುಕೊಳ್ಳಲಾರರು. ನಾಯಿ ಬಾಲ ಯಾವತ್ತಿಗೂ ಡೊಂಕು ಅನ್ನುತ್ತಾರಲ್ಲ ಹಾಗೆ. ವಿಡಿಯೋದಲ್ಲಿ ನೀವು ಗಮನಿಸುವ ಹಾಗೆ ಕೆಲ ಯುವಕ ಯುವತಿಯರು ಜಿಲ್ಲೆಯಲ್ಲಿರುವ ಹುಕ್ಕುಂದ ಜಲಪಾತ ವೀಕ್ಷಣೆಗೆ ಬಂದಿದ್ದಾರೆ. ಎಲ್ಲರ ಹಾಗೆ ಇವರು ಸಹ ಒಂದು ಸುರಕ್ಷಿತವಾದ ಸ್ಥಳ ಮತ್ತು ಅಂತರದಿಂದ ಜಲಪಾತ ನೋಡಿ ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಹಿಂತಿರುಗಿದ್ದರೆ ಇದನ್ನು ಬರೆಯುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ. ಆದರೆ, ಈ ಯುವತಿಯನ್ನು ನೋಡಿ, ತನ್ನಿಂದಾಗದ ದುಸ್ಸಾಹಸಕ್ಕಿಳಿದಿದ್ದಾಳೆ . ಮರ ಹತ್ತುವುದು ಬೇರೆ ಪ್ರಾಣಿಗಳ ಕೆಲಸ, ಮಾನವರದ್ದಲ್ಲ. ಇದು ಬಳ್ಳಿಯ ಹಾಗೆ ಕಾಣುವ ಚಿಕ್ಕ ಟೊಂಗೆಗಳ ಮರ. ಮಳೆಯಿಂದಾಗಿ ಟೊಂಗೆ ಒದ್ದೆಯಾಗಿರುವ ಕಾರಣ ಕಾಲು ಜಾರುತ್ತಿದೆ. ಆದರೂ ಹತ್ತುವ ಪ್ರಯತ್ನ! ಕೆಳಗೆ ನಿಂತಿರುವ ಕೆಲ ಮೂರ್ಖರು ಯುವತಿಯನ್ನು ಹುರಿದುಂಬಿಸುತ್ತಿದ್ದಾರೆ. ಅನಾಹುತವೇನಾದರೂ ಜರುಗಿದರೆ ಅದಕ್ಕೆ ಕಾರಣ ಯಾರು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Viral Video: ರೀಲ್ಸ್‌ ಮಾಡಲು ಹೋದ ಯುವಕ, ಜಲಪಾತದಿಂದ 150 ಅಡಿ ಆಳಕ್ಕೆ ಬಿದ್ದು ಸಾವು

Follow us
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು