Sign In

By signing in or creating an account, you agree with Associated Broadcasting Company's Terms & Conditions and Privacy Policy.

Shettar Vs BSY; ಯಾವುದೇ ಹೊಸ ಸರ್ಕಾರಕ್ಕೆ ಜನತೆಗೆ ನೀಡಿದ ಭರವಸೆಗಳನ್ನು ಜಾರಿಗೊಳಿಸಲು ಕನಿಷ್ಠ 6 ತಿಂಗಳು ಬೇಕು: ಜಗದೀಶ್ ಶೆಟ್ಟರ್

Shettar Vs BSY; ಯಾವುದೇ ಹೊಸ ಸರ್ಕಾರಕ್ಕೆ ಜನತೆಗೆ ನೀಡಿದ ಭರವಸೆಗಳನ್ನು ಜಾರಿಗೊಳಿಸಲು ಕನಿಷ್ಠ 6 ತಿಂಗಳು ಬೇಕು: ಜಗದೀಶ್ ಶೆಟ್ಟರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2023 | 7:28 PM

ಕೇಂದ್ರದ ಏಜೆನ್ಸಿಗಳು ಅಕ್ಕಿ ಪೂರೈಸುವ ಕೆಲಸ ಮಾಡಿದ್ದರೆ ಅನ್ನಭಾಗ್ಯ ಯೋಜನೆ ಜುಲೈ ತಿಂಗಳಲ್ಲೇ ಜಾರಿಗೊಳ್ಳುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.   

ಬೆಂಗಳೂರು: ಅನ್ನಬಾಗ್ಯ ಯೋಜನೆ (Anna Bhagya Scheme) ಜಾರಿಮಾಡದಿದ್ದರೆ ವಿಧಾನ ಸೌಧದ ಮುಂದೆ ಧರಣಿ ಮಾಡುವುದಾಗಿ ಹೇಳಿರುವ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪರನ್ನು  (BS Yediyurappa) ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ (Jagadish Shettar) ಟೀಕಿಸಿದ್ದಾರೆ. ಬೆಂಗಳೂರಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು ಯಾವುದೇ ಸರಕಾರ ಅಧಿಕಾರಕ್ಕೆ ಬಂದಾಗ, ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಅಥವಾ ಕಾರ್ಯರೂಪಕ್ಕೆ ತರಲು ಕನಿಷ್ 6 ತಿಂಗಳು ಬೇಕಾಗುತ್ತದೆ ಎಂದರು. ಒಂದೇ ದಿನದಲ್ಲಿ ಈಡೇರಿಸಬೇಕು ಅಂತ ಆಗ್ರಹಿಸಿದರೆ ಅದು ಕೆಟ್ಟ ರಾಜಕಾರಣ ಅನಿಸಿಕೊಳ್ಳುತ್ತದೆ ಎಂದು ಶೆಟ್ಟರ್ ಪರೋಕ್ಷವಾಗಿ ಯಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡರು. ಒಂದು ಪಕ್ಷ ಕೇಂದ್ರದ ಏಜೆನ್ಸಿಗಳು ಅಕ್ಕಿ ಪೂರೈಸುವ ಕೆಲಸ ಮಾಡಿದ್ದರೆ ಅನ್ನಭಾಗ್ಯ ಯೋಜನೆ ಜುಲೈ ತಿಂಗಳಲ್ಲೇ ಜಾರಿಗೊಳ್ಳುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ